world environment day spl- ಪರಿಸರ ಪ್ರೀತಿಯ ಎಂ.ಬಿ.ನಾಯ್ಕ ಮತ್ತು ಕಾಡುಬೀಜ ಬಿತ್ತುವ ಗಣಪತಿ ವಡ್ನಗದ್ದೆ

ಪಶ್ಚಿಮಘಟ್ಟದ ಪರಿಸರ ವೈವಿಧ್ಯ ಇಲ್ಲಿಯ ಜನಜೀವನಕ್ಕೆ ವರ. ಈ ವರದ ಕಾರಣ ಅನೇಕರು ಈ ಪರಿಸರದ ಫಲಾನುಭವಿಗಳಾದರೆ ಕೆಲವರು ಈ ಪ್ರಕೃತಿಯ ಸಂರಕ್ಷಣೆ,ಪೋಷಣೆಗೆ ತಮ್ಮದೇ ಅಳಿಲು ಸೇವೆ ಸಲ್ಲಿಸುವ ಮೂಲಕ ಜೀವವೈವಿಧ್ಯ ರಕ್ಷಣೆಗೆ ಕೊಡುಗೆ ನೀಡುತಿದ್ದಾರೆ.ಇಂಥವರಲ್ಲಿ ಗಣಪತಿ ಹೆಗಡೆ ವಡ್ನಗದ್ದೆ ಮತ್ತು ಎಂ.ಬಿ.ನಾಯ್ಕ ಕಡಕೇರಿ ಪ್ರಮುಖರು.
ಎಂ.ಬಿ.ನಾ. ಮತ್ತು ಗಣಪತಿ ಹೆಗಡೆಯವರ ಸಾಮ್ಯತೆಗಳೆಂದರೆ….

ಇಬ್ಬರೂ ಪರಿಸರ ವಿಜ್ಞಾನ, ಬೈಯೋ ಟೆಕ್ನಾಲಜಿ, ಅರಣ್ಯಶಾಸ್ತ್ರ ಗಳನ್ನು ಶಾಸ್ತ್ರೀ ಯವಾಗಿ ಓದಿದವರಲ್ಲ.ಪದವಿಧರರಲ್ಲದ ಇಬ್ಬರೂ ಅರಣ್ಯ,ಸಸ್ಯಲೋಕದ ಬಗ್ಗೆ ಅಪಾರ ಪ್ರೀತಿ-ಕಾಳಜಿ ಹೊಂದಿದವರು.
ಎಂ.ಬಿ.ನಾಯ್ಕ ಕಷಿ ಕಟ್ಟುವ, ಸಸಿಗಳನ್ನು ಬೆಳೆಸುವ, ಸಂಶೋಧಕರಿಗೆ ಮಾರ್ಗದರ್ಶನ ಮಾಡುವ ಮೂಲಕರಾಜ್ಯ ಪರಿಸರ ಪ್ರಶಸ್ತಿ ಪಡೆದ ವಿರಳ ಸಾಧಕರಾದರೆ,

ಗಣಪತಿ ವಡ್ನಗದ್ದೆಯವರಿಗೆ ಕಾಡೇ ಅವರ ಆಸ್ತಿ! ಬೆಟ್ಟ-ಗುಡ್ಡ,ಕಣಿವೆಗಳಲ್ಲಿ ಕಾಡು ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಅವುಗಳ ಅನುಕೂಲಕರ ವಾತಾವರಣದಲ್ಲಿ ಬಿತ್ತುವ ಇವರಿಗೆ ಕಾಡು ನೆಡುವುದೇ ಹವ್ಯಾಸ.
ಸಮಾನ ಆಸಕ್ತರಾದ ಇಬ್ಬರೂ ಸೇರಿ ಕಾರ್ಯಕ್ರಮ ಮಾಡುವುದು, ಕಾರ್ಯಕ್ರಮಗಳಲ್ಲಿ ಕಾಡಿನ ಮಹತ್ವ ಸಾರುವುದು ಸೇರಿದಂತೆ ವರ್ಷವಿಡೀ ಪರಿಸರದ ಕೆಲಸ ಮಾಡುವುದೇ ಇವರ ಪ್ರವೃತ್ತಿ.

ಎಂ.ಬಿ.ನಾಯ್ಕ ಮಲೆನಾಡು ಪಶ್ಚಿಮಘಟ್ಟದ ಸಸ್ಯಪ್ರಭೇದಗಳನ್ನು ರಾಜ್ಯ, ರಾಷ್ಟ್ರದಾದ್ಯಂತ
ಉದ್ಯಾನವನಗಳಲ್ಲಿ ನೆಡಿಸುವ ಮೂಲಕ ಪಶಿಮಘಟ್ಟದ ಸಸ್ಯ ಪ್ರಭೇದಗಳನ್ನು ಬಯಲುನಾಡು, ಸೀಮೆಗಳಿಗೂ ಪರಿಚಯಿಸಿದ್ದಾರೆ. ಕಡಿಮೆ ಮಳೆ, ಒಣ ಹವೆಯಲ್ಲಿ ಮಳೆನಾಡಿನ ಗಿಡಗಳನ್ನು ಬೆಳೆಸುವ ವಿಧಾನವನ್ನು ಪರಿಚಯಿಸುತ್ತಿರುವ ಎಂ.ಬಿ.ನಾಯ್ಕ ನೂರಾರು ಅಳಿವಿನಂಚಿನ ಸಸ್ಯ ಪ್ರಭೇದಗಳನ್ನು ಉಳಿಸಿದ್ದಾರೆ.

ಇಂಥ ಕೆಲಸಗಳಿಗೆ ನೆರವಾಗುವ ಗಣಪತಿ ವಡ್ನಗದ್ದೆ ತಮ್ಮ ಪರಿಸರ, ಮಲೆನಾಡಿನ ಬೆಟ್ಟ-ಗುಡ್ಡಗಳಲ್ಲಿ ಈ ಭಾಗದ ಕಾಡು ಬೀಜಗಳನ್ನು ಬಿತ್ತಿ ನೈಸರ್ಗಿಕ ಕಾಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಸಿದ್ಧಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆಯಿಂದ ಪ್ರಾರಂಭಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವರೆಗೆ ಪ್ರಕೃತಿ, ಪರಿಸರಕ್ಕಾಗಿ ಪ್ರವಾಸ ಮಾಡುವ ಆಸಕ್ತಿಯ ಈ ಇಬ್ಬರೂ ಕೃಷಿಕರು ಎನ್ನುವುದು ವಿಶೇಶ.

ಅರಣ್ಯ ಇಲಾಖೆ, ಅರಣ್ಯ ಕಾಲೇಜುಗಳಿಗೆ ಸಂನ್ಮೂಲ ವ್ಯಕ್ತಿಗಳಾಗಿರುವ ಇವರು ಜೂನ್ 5 ರಂದು ಮಾತ್ರ ವಿಶ್ವ ಪರಿಸರ ದಿನ ಆಚರಿಸದೆ ಪ್ರತಿದಿನವನ್ನು ಪರಿಸರ ದಿನವನ್ನಾಗಿಸಿಕೊಂಡಿದ್ದಾರೆ. ಈ ಇಬ್ಬರ ಜ್ಞಾನ, ಆಸಕ್ತಿ, ಅಭಿರುಚಿ ಹೊಸ ಪೀಳಿಗೆಗೆ ಪರಿಚಯವಾಗಬೇಕಾಗಿದೆ.

(related-ಈ ಮರ ಸುತ್ತಿ ಬಂಜೆತನದಿಂದ ಮುಕ್ತರಾಗಿ)

(news today )ಶಿರಸಿಯಲ್ಲಿ ಸ್ತ್ರೀ ಪೀಡಕನ ಬಂಧನ,ಅತ್ಯಾಚಾರಿ ಪರಾರಿ
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಳ್ಳಾರಿ ಮೂಲದ ಸ್ತ್ರೀ ಪೀಡಕನೊಬ್ಬನನ್ನು ಬಂಧಿಸಿ,ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.ಈತ ತನ್ನ ಪರಿಚಯದ ಶಿಕ್ಷಕಿಯೊಬ್ಬರಿಗೆ ಹಣಕ್ಕಾಗಿ ಪೀಡಿಸುತಿದ್ದ ಎಂದು ಆರೋಪಿಸಲಾಗಿದೆ. ಬಳ್ಳಾರಿ ಬಳಿ ಶಾಲಾ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರ ಜೊತೆಗೆ ಸಲುಗೆಯಂದಿದ್ದುನಂತರ ತನ್ನ ಬಳಿ ಇದ್ದ ಚಿತ್ರಗಳನ್ನು ಬಳಸಿಕೊಂಡು ಹಣಕ್ಕಾಗಿ ಪೀಡಿಸುತಿದ್ದ ಎನ್ನಲಾಗಿದೆ. ಈತ ಶಿವಕುಮಾರ ಮುಳಸಾವಳಗಿ ಎನ್ನುವ ವ್ಯಕ್ತಿಯಾಗಿದ್ದು ಶಿರಸಿಗ್ರಾಮೀಣಭಾಗ ಬನವಾಸಿಹೋಬಳಿಯ ಶಿಕ್ಷಕಿಗೆ ಪೀಡಿಸುತಿದ್ದ ಎಂದು ಆರೋಪಿಸಲಾಗಿದೆ.
ಅತ್ಯಾಚಾರಿ ಪರಾರಿ-
ಶಿರಸಿ ನಗರಸಭೆಯ ಸದಸ್ಯ ಯಶವಂತ್ ಮರಾಠೆ ಮೇಲೆ ಅಪ್ರಾಪ್ತಬಾಲಕಿಯ ಅತ್ಯಾಚಾರದ ಕೇಳಿಬಂದಿದ್ದು ಶಿರಸಿ ಗ್ರಾಮೀಣಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ಗ್ರಾಮೀಣ ಭಾಗದ 16 ವರ್ಷದ ಬಾಲಕಿಗೆ ಅತ್ಯಾಚಾರವೆಸಗುವ ಉದ್ದೇಶದಿಂದ ನಂಬಿಸಿ,ಅಧಿಕಾರ ಬಳಸಿ ಬಚಾವಾಗಲು ಪ್ರಯತ್ನಿಸಿ ನಂತರ ನಾಪತ್ತೆಯಾಗಿದ್ದಾನೆ. ಅಪ್ರಾಪ್ತಬಾಲಕಿಯನ್ನು ನಂಬಿಸಿ ನಿರಂತರ ಅತ್ಯಾಚಾರ ಎಸಗಿದ ಆರೋಪಕ್ಕೆ ಯಶವಂತ್ ಮರಾಠೆ ಮೇಲೆ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *