kaadupaapa-ಕಡು ಪಾಪದ ಪ್ರಾಣಿ ಕಾಡುಪಾಪ

ಬಲು ಅಪರೂಪದ ವಿರಳವಾಗಿ ಮನುಷ್ಯನಿಗೆ ಕಾಣಸಿಗುವ ಕಾಡುಪಾಪ ಶನಿವಾರ ಮುಠ್ಠಳ್ಳಿಯಲ್ಲಿ ಕಂಡು ಅದನ್ನು ಸ್ಥಳಿಯರು ಮರಳಿ ಕಾಡಿಗೆ ತಲುಪಿಸಿದ್ದಾರೆ. ಪಶ್ಚಿಮಘಟ್ಟ ಸೇರಿದಂತೆ ಅತಿ ಕಡಿಮೆ ಪ್ರದೇಶದಲ್ಲಿ ಬಹುವಿರಳವಾಗಿ ಕಾಣಸಿಗುವ ಈ ಕಾಡುಪಾಪದ kannda online ವರದಿಯೊಂದು ಇಲ್ಲಿದೆ.

ಶಾಲೆಗೆ ಬಂದ ಲಜ್ಜಾ ಸುಂದರಿ ಕಾಡುಪಾಪ ವೃತ್ತಾಂತ -By ಸ ರಘುನಾಥ, ಕೋಲಾರ |

ಒಂದು ದಿನ ಸಂಜೆ ಮಾವಿನ ಮರದಡಿ ಎಮ್ಮೆಯಿಂದ ಹಾಲು ಕರೆಯುತ್ತಿದ್ದಳು ಅಜ್ಜಿ. ನಾನು ಕರುವನ್ನು ಹಿಡಿದುಕೊಂಡು ನಿಂತಿದ್ದೆ. ಮರದ ಮೇಲೆ ಏನೋ ಸರಿದಂತಾಗಿ ಅಜ್ಜಿ ತಲೆ ಎತ್ತಿ ನೋಡಿ, ಗುಟ್ಟು ಹೇಳುವವಳಂತೆ ‘ನೋಡೊ ಅಲ್ಲಿ ಕಾಡುಪಾಪ’ ಎಂದು ಪಿಸುಗುಟ್ಟಿದಳು. ನೋಡಿದೆ. ಸಂಜೆಗತ್ತಲಿನಲ್ಲಿ ಎಲೆಗಳ ಮರೆಯಲ್ಲಿ ಎರಡು ಅಗಲವಾದ ಕಂಗಳು ಹೊಳೆಯುತ್ತಿದ್ದವು. ಅದರ ಕೂಗು ನೆನಪಾಗಿ ದಿಗಿಲಾಯಿತು.

ಆಗ ಎಮ್ಮೆ ವಂಯ್ ಎಂದು ಕೂಗಿತು. ಕೂಡಲೇ ಕಾಡುಪಾಪ ಮಾಯವಾಯಿತು. ತಾತ ಬೆಳೆಸಿದ ಮರಗಳು ಹೇಗೆ ವಿಸ್ತರಿಸಿಕೊಂಡಿದ್ದವೆಂದರೆ ಹಲಸು, ಮಾವು, ನೇರಳೆ, ಮಳೆ ಮರಗಳು ಒಂದಕ್ಕೊಂದು ಕಸಿ ಮಾಡಿ ಬೆಳೆಸಿದ್ದಂತೆ ಚಾಚಿಕೊಂಡಿದ್ದವು. ಇದರಿಂದ ಹಲಸಿನಲ್ಲಿ ಮಾವು, ಮಾವಿನಲ್ಲಿ ನೇರಳೆ ಹುಟ್ಟಿ ಬೆಳೆದಂತೆ ತೋರುತ್ತಿತ್ತು. ಒಂದು ಮರವೇರಿ ಕೊಂಚ ಧೈರ್ಯ ವಹಿಸುವ ಸಾಹಸ ಮಾಡಿದರೆ ನಾಕಾರು ಮರಗಳಲ್ಲಿ ಸಂಚರಿಸಬಹುದಿತ್ತು. ನದಿಯ ಒಂದು ದಡದಿಂದ ಈಜಿ ಇನ್ನೊಂದು ದಡ ತಲುಪುವಂತೆ.

ನಾನು ಹತ್ತಿದ ಮರದಿಂದ ಇಳಿದು ಇನ್ನೊಂದನ್ನು ಏರುತ್ತಿದ್ದುದು ವಿರಳ. ಇದನ್ನು ಬಲ್ಲ ಅಜ್ಜಿ ನನ್ನನ್ನು ಎರಡು ಕಾಲಿನ ಮಂಗ ಅನ್ನುತ್ತಿದ್ದಳು. ಕಾಡಿಗೆ ಹೋಗಿ ಸೌದೆ ತರಲು ಬಿಡುವಾಗದ ದಿನಗಳಲ್ಲಿ ಮರಗಳಲ್ಲಿ ಒಣಗಿದ ರೆಂಬೆಗಳನ್ನು ಮುರಿದು, ಸೌದೆ ಮಾಡುವುದು ನನ್ನ ಕೆಲಸವಾಗಿತ್ತು. ಇತರೆ ಮರಗಳಿಗಿಂತ ಹಲಸಿನ ಮರಗಳಲ್ಲಿನ ಕೊಂಬೆಗಳು ಒಣಗಿರುತ್ತಿದ್ದುದು ಹೆಚ್ಚು. ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು

ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು ಒಂದು ದಿವಸ ಸೌದೆಗಾಗಿ ಹಲಸಿನ ಮರವೇರಿದವನು ಅದರಲ್ಲಿನ ಒಣ ಕೊಂಬೆಗಳನ್ನು ಮುರಿದು ಮಾವಿನ ಮರಕ್ಕೆ ಹೋಗುವ ಸಾಹಸದ ಕೊನೇ ಹಂತದಲ್ಲಿದ್ದೆ. ಆಗಲೆ ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು. ಅದನ್ನು ನೋಡಿ ನಾನು ಅಲುಗದೆ ನಿಂತೆ. ನನ್ನನ್ನು ನೋಡಿ ಅದು ನಿಂತಿತು. ಇಬ್ಬರ ಕಣ್ಣುಗಳೂ ಸಂಧಿಸಿದವು. ಅದರ ಭಯ ನನಗಿದ್ದಂತೆ, ನನ್ನ ಭಯ ಅದಕ್ಕಿದ್ದಂತಿತ್ತು. ನನ್ನ ಕೈಕಾಲುಗಳು ನಡುಗಿ ಬಿಗಿ ತಪ್ಪಿತು. ನಾನು ಎಮ್ಮೆ ಕಟ್ಟಲು ಹಾಕಿದ್ದ ಇಳಿಜಾರು ಚಪ್ಪರದ ಮೇಲೆ ಬಿದ್ದೆ. ತರಚು ಗಾಯಗಳೊಂದಿಗೆ ಮನೆ ಸೇರಿ, ‘ಮರದ ಮೇಲಿದ್ದಾಗ ಕೋತಿ ಆಟ ಆಡಬೇಡವೆಂದರೆ ಕೇಳುತ್ತೀಯ’ ಎಂದು ಅಜ್ಜಿ ಕೈಲಿ ಗದರಿಸಿಕೊಂಡೆ. ಇದರಿಂದ ಕಾಡುಪಾಪದ ಬಗ್ಗೆ ಇದ್ದ ಭಯ ಮತ್ತೂ ಹೆಚ್ಚಿತು.

ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನ-

ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನ ಇದಾಗಿ ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನವಾಯಿತು. ನಾನು ಮೇಷ್ಟ್ರಾಗಿ ಗೌನಿಪಲ್ಲಿ ಶಾಲೆಯಲ್ಲಿದ್ದೆ. ಒಂದು ದಿನ ರೈತ ಮಹಿಳೆಯೊಬ್ಬಳು ಕಾಡುಪಾಪವನ್ನು ತಂದಳು. ಅದು ಗಾಯಗೊಂಡಿತ್ತು. ನನಗೆ ಮರದಿಂದ ಬಿದ್ದ ದಿನದ ನೆನಪಾಯಿತು. ಭಯವೂ ಮರುಕಳಿಸಿತು. ಅದರ ಸಹವಾಸ ಬೇಡ ಅನ್ನಿಸಿತು. ಆಕೆ ಅದರ ತಲೆಯ ಮೇಲಿನ ಚರ್ಮ ಹಿಡಿದೆತ್ತಿ, ‘ಹೀಗೆ ಹಿಡಿದರೆ ಕಚ್ಚುವುದಿಲ್ಲ’ ಎಂದು ತೋರಿಸಿ ಧೈರ್ಯ ಕೊಟ್ಟಳು. ಈ ದಿನಕ್ಕಾಗಲೇ ಗಾಯಗೊಂಡ ಇಂಥ ಪ್ರಾಣಿ, ಪಕ್ಷಿಗಳ ಆರೈಕೆಯಲ್ಲಿ ನಾನು ಪಳಗಿದ್ದೆ. ಹಾಗಾಗಿ ನಿರಾಕರಿಸದೆ ಸ್ವೀಕರಿಸಿ, ಮಕ್ಕಳಿಗೆ ಅದರ ಆರೈಕೆಯ ಮಾಹಿತಿ ಕೊಟ್ಟು, ಅಂಥವಕ್ಕೆಂದೇ ಮಾಡಿಸಿದ್ದ ದೊಡ್ಡ ಬೋನಿನಲ್ಲಿ ಬಿಟ್ಟೆ. ದಿನ ಕಳೆದು ಅದು ಗುಣಮುಖವಾಗುತ್ತಿದ್ದಂತೆ ನನ್ನಲ್ಲಿನ ಭಯವೂ ಹೋಯಿತು. ಅದಕ್ಕೆ ಕೊಂಚವಾದರೂ ಮರದಲ್ಲಿರುವ ಸ್ಪಂದನೆ ಉಂಟಾಗಲೆಂದು ಹಸಿರು ಕೊಂಬೆಗಳನ್ನು ಬೋನಿನೊಳಗೆ ಕಟ್ಟಿಸಿದೆ.

ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು

ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು ಹಸಿರು ಕೊಂಬೆಗಳನ್ನು ವಾರದಲ್ಲೆರಡು ಬಾರಿ ಬದಲಿಸುತ್ತಿದ್ದೆ. ಸೀಬೆ, ದ್ರಾಕ್ಷಿ, ಬಾಳೆ, ಹಲಸಿನ ತೊಳೆ, ಹಸಿರು ತರಕಾರಿ ಅದಕ್ಕೆ ಆಹಾರವಾಗಿ ಕೊಡುತ್ತಿದ್ದೆವು. ಅದಕ್ಕೆ ನಮ್ಮೊಂದಿಗೆ ಹೊಂದಿಕೊಳ್ಳಲು ಅದರ ಸಹಜ ಸ್ವಭಾವವಾದ ನಾಚಿಕೆ ಮತ್ತು ಭಯದಿಂದ ಸಾಧ್ಯವಾಗಿರಲಿಲ್ಲ. ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು.

ಅಂಥ ಮೂರು ಕಾಡುಪಾಪದ ಮರಿಗಳು ನಮ್ಮ ಮಡಿಲಿಗೆ ಬಂದವು ಗಂಡನ್ನು ತೋರಿಸುವಾಗ ಹತ್ತು ಜನ ಕೂಡಿ, ‘ಏನಮ್ಮ ಗಂಡನ್ನು ಸರಿಯಾಗಿ ನೋಡಿ, ಒಪ್ಪಿಗೆಯಾಯಿತೆ ತಿಳಿಸು’ ಎಂದಾಗ ನಾಚುವ ಹೆಣ್ಣಿನಂತೆ ಇರುತ್ತಿತ್ತು. ಅದು ಎಲೆಗಳ ಮರೆಯಲ್ಲಿ ಮದುಡಿಕೊಳ್ಳುತ್ತ, ದೊಡ್ಡ ಮರದಲ್ಲಿ ಕ್ಷೇಮದಿಂದ ಅವಿತಿರುವಂತೆ ಭಾವಿಸುತ್ತಿತ್ತು. ಇನ್ನು ಅದರ ಉಳಿವಿಗೆ ಭಯವಿಲ್ಲ ಅನ್ನಿಸಿದಾಗ ಊರಾಚೆಗಿದ್ದ ಎಲೆ (ವೀಳ್ಯದ) ತೋಟದ ಅಗಸೆ ಮರಗಳ ಗುಂಪಿನಲ್ಲಿ ಬಿಟ್ಟು ಬಂದೆವು. ಆ ನಂತರ ಅಂಥ ಮೂರು ಕಾಡುಪಾಪದ ಮರಿಗಳು ನಮ್ಮ ಮಡಿಲಿಗೆ ಬಂದು ಆರೈಕೆ ಪಡೆದವು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *