ವಾರದ ಬಳಿಕ ಚಿರು ಡ್ರೈವರ್ ಬಳಿ‌ ಮಾತನಾಡಿ ಮನಕಲಕುವ ಪ್ರಶ್ನೆ ಕೇಳಿದ ಮೇಘನಾ ರಾಜ್..

ಚಿರಂಜೀವಿ ಅವರಿಗೂ ನಮ್ಮಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ.. ಅವರ ಸಿನಿಮಾಗಳನ್ನು ಕಡ್ಡಾಯವಾಗಿ ಥಿಯೇಟರ್ ನಲ್ಲಿಯೇ ನೋಡುತ್ತಿದ್ದೆವು ಎನ್ನುವುದು ಖಂಡಿತ ಸತ್ಯವಲ್ಲ.. ಆದರೆ ಅದ್ಯಾಕೋ ಅತಿ ಹೆಚ್ಚು ಕಾಡಿದ ಸಂಬಂಧವಿಲ್ಲದ ಸಾವು ಎಂದರೆ ಅದು ಚಿರು ಸರ್ಜಾ ಅವರದ್ದೇ.. ಚಿಕ್ಕ ವಯಸ್ಸಿಗೆ ಹೋದರು ಎಂಬ ಕಾರಣಕ್ಕೋ.. ಅಥವಾ ಒಳ್ಳೆಯ ಮನುಷ್ಯ ಇಷ್ಟು ಬೇಗ ಹೋದರೆನ್ನುವ ಕಾರಣಕ್ಕೋ.. ಅಥವಾ ಮೇಘನಾರನ್ನು ನೋಡಿಯೋ.. ಅವರು ಹೆಂಡತಿಯನ್ನು ಕುಟುಂಬವನ್ನು ಅತಿಯಾಗಿ ಪ್ರೀತಿಸುತ್ತಿದ್ದ ರೀತಿಗೋ ಕಾರಣ ಮಾತ್ರ ತಿಳಿಯದು.. ದೂರದಲ್ಲಿ ಇರುವ.. ಒಮ್ಮೆಯೂ ಚಿರು ಅವರನ್ನು ಭೇಟಿಯಾಗದ ನಮಗೇ ಅವರ ಸಾವೇಕೊ ಬಹಳಷ್ಟು ಕಾಡುತ್ತಿದೆ ಎಂದರೆ ಆ ಕುಟುಂಬದ ನೋವು.. ನಿಜಕ್ಕೂ ಯಾರಿಗೂ ಬೇಡಪ್ಪಾ ದೇವರೆ..

ಅತ್ತ ಅಣ್ಣನನ್ನು ನೆನೆದು ಕೊರಗಿ ಊಟ ಬಿಟ್ಟಿರುವ ತಮ್ಮ.. ಇತ್ತ ಹುಟ್ಟುವ ಕಂದನನ್ನು ತನ್ನನ್ನು ಯಾಕೆ ಬಿಟ್ಟು ಹೋದಿರೆಂಬ ಪ್ರಶ್ನೆಯನ್ನು ದೇವರ ಮುಂದಿಟ್ಟಿರುವ ಮೇಘನಾ.. ಭಗವಂತ ಬಂದರೂ ಸರಿಪಡಿಸಲು ಸಾಧ್ಯವೇ ಆಗದ ಭಗವಂತನೇ ಮಾಡಿರುವ ತಪ್ಪಿದು..

ಇನ್ನು ಅಣ್ಣ ಹೋದ 5 ದಿನಗಳ ಬಳಿಕ ಧೃವ ಸಾಮಾಜಿಕ ಜಾಲತಾಣದಲ್ಲಿ ಅಣ್ಣನ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದರು..‌ ಅತ್ತ ಅಣ್ಣನ ಸಮಾಧಿ‌ ಮಳೆಯಲ್ಲಿ ನೆನೆಯುತ್ತಿದೆ ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಮರ ಹಾಗೂ ತಾರ್ಪಲ್ ಬಳಸಿ ಮಂಟಪ ನಿರ್ಮಿಸಲಾಗಿದೆ..

ಇದೀಗ ವಾರದ ಬಳಿಕ ಮೇಘನಾ ಅವರು ಚಿರಂಜೀವಿ ಅವರ ಡ್ರೈವರ್ ಬಳಿ ಮಾತನಾಡಿದ್ದಾರೆ.. ಹೌದು ಚಿರು ಅವರ ಬಳಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ಡ್ರೈವರ್ ಬಳಿ ಮೇಘನಾ ಅವರು ಕಣ್ಣೀರಿಟ್ಟು ಮಾತನಾಡಿದ್ದಾರೆ.. ಹೌದು “ಅವರಿಲ್ಲ ಅಂತ ನೀನು ಕೂಡ ನಮ್ಮನ್ನ ಬಿಟ್ಟು ಹೋಗ್ಬಿಡ್ತೀಯಾ ಅಲ್ವಾ.. ಕೆಲಸ ಬಿಟ್ಟು ಬಿಡ್ತೀಯಾ ಅಲ್ವಾ ಎಂದು ಕಣ್ಣೀರಿಡುತ್ತಾ ಕೇಳಿದರಂತೆ..”

ಅದಕ್ಕೆ “ಇಲ್ಲಾ ಅಕ್ಕಾ.. ಅಣ್ಣನ ಜೊತೆ ಹೇಗೆ ಇದ್ದನೋ ಅದೇ ರೀತಿ‌ ಇನ್ನು ಮುಂದೆಯೂ ಇಲ್ಲೆ ಇರ್ತೀನಿ.. ನಾನೆಲ್ಲಿಗೆ ಹೋಗ್ಲಿ? ನಾನ್ ಎಲ್ಲಾದರೂ ಹೋದರೆ ನನ್ನನ್ನ ಯಾರ್ ನೋಡ್ಕೋತಾರೆ.. ನಾನು ಎಲ್ಲೂ ಹೋಗಲ್ಲ.. ಇಲ್ಲೇ ಇರ್ತೀನಿ” ಎಂದು ಡ್ರೈವರ್ ಕೂಡ ಕಣ್ಣೀರಿಟ್ಟರಂತೆ..

ಈ ಮುನ್ನವೂ ಕೂಡ ಡ್ರೈವರ್ ರಜೆ ಕೇಳಿದರೆ.. ನಿನಗ್ಯಾಕೋ ರಜ? ನಾನೇನು ಊಟ ಕೊಡಲ್ವಾ? ನಿನ್ನ ಚನಾಗ್ ನೋಡ್ಕೋತಿಲ್ವಾ ಅಂತ ಚಿರು ಕೇಳುತ್ತಿದ್ದರಂತೆ.. ಅಷ್ಟೇ ಅಲ್ಲದೆ ಹೊರಗೆ ಹೋದಾಗ ಚಿರು ಅವರು ಒಂದು ಬಿರಿಯಾನಿ‌ ತಿಂದರೆ, ನನಗೆ ಎರಡು ಬಿರಿಯಾನಿ ಕೊಡಿಸಿ ಹೊಟ್ಟೆ ತುಂಬಾ ತಿನ್ನು‌ ಎನ್ನುತ್ತಿದ್ದರು.. ನಿಜಕ್ಕೂ ಒಳ್ಳೆಯ ಮನುಷ್ಯ ಅವರಿಗೆ ಹೀಗಾಗಬಾರದಿತ್ತು ಎಂದು ಡ್ರೈವರ್ ಕಣ್ಣೀರಿಟ್ಟರು.. ಡ್ರೈವರ್ ಅನ್ನೇ ಅಷ್ಟು ಪ್ರೀತಿಯಿಂದ ನೋಡಿಕೊಂಡಿರುವ ಚಿರು ಇನ್ನು ಪತ್ನಿಯನ್ನು ತನ್ನ ಕುಟುಂಬವನ್ನು‌ ಅದೆಷ್ಟು ಪ್ರೀತಿಸಿರಬೇಕು.. ಮತ್ತೆ ಮಗುವಾಗಿ ಬಂದು ಮೇಘನಾರಿಗೆ ಅದೇ ಪ್ರೀತಿ ನೀಡಿ ಚಿರು‌‌..cor- by Team Star News .in

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *