samajamukhi news today-ಉ.ಕ. ಇಂದು- ಕರೋನಾ, ಸಾವು,ಸಂತಾಪ,ನೇಮಕ, ಮನವಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸೋಂಕುಮುಕ್ತರಾದ 7 ಜನ ಕೋವಿಡ್ ಪೀಡಿತರು ಸೇರಿ ಒಟ್ಟೂ 132 ಜನರಲ್ಲಿ 108 ಜನರು ಕರೋನಾ ಮುಕ್ತರಾದಂತಾಗಿದೆ.

ಭಟ್ಕಳದಿಂದ ಪ್ರಾರಂಭವಾದ ಕರೋನಾ ಪೀಡಿತರ ಪಟ್ಟಿ ಜಿಲ್ಲೆಯ ಎಲ್ಲಾ ತಾಲೂಕುಗಳೂ ಸೇರಿ ಒಟ್ಟೂ 132 ಜನರ ದೊಡ್ಡ ಲೀಸ್ಟ್ ಆಗಿತ್ತು. ಆದರೆ ಇಂದು ರೋಗಮುಕ್ತರಾದ 7 ಜನರು ಸೇರಿ ಒಟ್ಟೂ 108 ಜನರು ಈ ವರೆಗೆ ಉತ್ತರಕನ್ನಡದಲ್ಲಿ ಕರೋನಾ ದಿಂದ ಗುಣಮುಖರಾದಂತಾಗಿದೆ. 132 ರಲ್ಲಿ 25 ಜನರು ಮಾತ್ರ ಈಗ ಚಿಕಿತ್ಸೆ ಪಡೆಯುತಿದ್ದು 108 ಜನರು ರೋಗಮುಕ್ತರಾಗುವ ಮೂಲಕ ಜಿಲ್ಲೆ ಕರೋನಾ ಕ್ಕೆ ಸೆಡ್ಡು ಹೊಡೆದಂತಾಗಿದೆ.

ಕೃಷ್ಣಮೂರ್ತಿ ಹೆಗಡೆ ನಿಧನ-

ಸಿದ್ಧಾಪುರ ತಾಲೂಕಿನಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಾ, ಸರ್ಕಾರಿ ಪುರೋಹಿತರಂತಿದ್ದ ಕೃಷ್ಣಮೂರ್ತಿ ಹೆಗಡೆ ಇಂದು ಹೃದಯಾಘಾತದಿಂದ ಕೊನೆಯ ಉಸಿರೆಳೆದಿದ್ದಾರೆ. ಸಜ್ಜನರೂ, ಸಾತ್ವಿಕರೂ, ಶ್ರಮಜೀವಿಯೂ ಆಗಿದ್ದ ಈ ಕೆಳಹಂತದ ನೌಕರ ಕೃಷ್ಣಮೂರ್ತಿ ಸಾವಿಗೆ ಕಂದಾಯ ಇಲಾಖೆ, ಸಿದ್ಧಾಪುರದ ಜನತೆ ಮರುಗಿದ್ದಾರೆ.

ಸಿದ್ಧಾಪುರ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಪಗೋಡ್ ಕಲ್ಮನೆಯ ಸೀಮಾ ಹೆಗಡೆ ನೇಮಕವಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸುಜಾತಾ ಗಾಂವಕರ್ ಅಂಕೋಲಾ ಈ ನೇಮಕದ ಆದೇಶ ಮಾಡಿದ್ದಾರೆ.

ಕಾಡುಪಾಣಿಗಳ ಹಾವಳಿ ತಡೆಗೆ ಮನವಿ
ಸಿದ್ಧಾಪುರದ ಬಾಳೇಸರದ ಕೃಷಿ ವಿನಿಮಯ ಕೇಂದ್ರ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಲು ವಿಧಾನಸಭಾಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿದೆ. ಕಾಡುಕೋಣ, ಕಾಡುಹಂದಿ ಹಾಗೂ ಮಂಗಗಳ ಹಾವಳಿಯಿಂದ ರೈತರಿಗೆ ತೊಂದರೆಯಾಗಿದ್ದು ಇವುಗಳ ನಿಯಂತ್ರಣ, ಸಂತಾನ ಹರಣಕ್ಕೆ ಯೋಜನೆ ರೂಪಿಸಬೇಕು. ಈ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ನರೇಗಾ ಯೋಜನೆಯಲ್ಲಿ ಅವಕಾಶ ನೀಡಿ ಸಹಕರಿಸಬೇಕೆಂದು ಮನವಿ ನೀಡಿ ವಿನಂತಿಸಿದೆ.

ಸಂತಾಪ ಸಭೆ- ತಾಲೂಕಿನ ಹಸ್ವಂತೆಯ ಉಪನ್ಯಾಸಕ ಎಲ್.ಎಂ. ನಾಯ್ಕ ಅಕಾಲಿಕ ಮರಣ ಹೊಂದಿದ್ದು ಅವರ ಸಂತಾಪ ಸಭೆ ಸೋಮುವಾರ ಬೆಳಿಗ್ಗೆ 11 ಗಂಟೆಗೆ ಸಿದ್ಧಾಪುರ ಲಯನ್ಸ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹೋಮ್ ಗಾರ್ಡ್‍ರಿಂದ ಮನವಿ-

ಸಿದ್ಧಾಪುರದ ಪೊಲೀಸ್ ಸೇವೆಯಲ್ಲಿದ್ದ ಕೆಲವು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಸೇವೆಯಿಂದ ತೆಗೆದಿದ್ದು ಅವರನ್ನು ಮರುನೇಮಕ ಮಾಡಿಕೊಳ್ಳು ಒತ್ತಾಯಿಸುವ ಮನವಿಯೊಂದನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯಮಟ್ಟದ ವಿಚಾರವಿರುವುದರಿಂದ ಈ ಬಗ್ಗೆ ಪರಿಶೀಲಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಹರೀಶ್ ಕುಮಾರ ಕೆ. ತಿಳಿಸಿದ್ದಾರೆ.

(ನಿನ್ನೆ-ಮೊನ್ನೆ ಸುದ್ದಿ) ವಿ ಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ.
ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬ್ರಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.
ಕರೋನಾ ಲಾಕ್ ಔಟ್ ಹಿನ್ನೆಲೆ, ವಲಸೆ ಕಾರ್ಮಿಕರ ನೆಪದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ಈ ಅವ್ಯವಹಾರ, ಅಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ನೇರ ಕೈವಾಡವಿದ್ದರೆ,ಸಭ್ಯತೆ,ಸರಳತೆಗಳ ನಾಟಕದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಈ ಅವ್ಯವಹಾರದಲ್ಲಿ ಪಾಲುದಾರರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಕಲ್ಯಾಣ ಇಲಾಖೆಯ ಹಣದಲ್ಲಿ ತಮ್ಮ ಕ್ಷೇತ್ರದಲ್ಲಿ 5 ಸಾವಿರ ಆಹಾರ ಕಿಟ್ ವಿತರಿಸಿದ್ದು ಸುದ್ದಿಯಾಗಿತ್ತು. ಈ ಕಿಟ್ ಅವ್ಯವಹಾರದ ವಾಸನೆ ಹಿಡಿದ ವಕೀಲ, ಜಿಲ್ಲಾ ಅರಣ್ಯ ಹಕ್ಕು ಹೋರಾಟಸಮೀತಿ ಅಧ್ಯಕ್ಷ ಎ.ರವೀಂದ್ರ ಹೆಬ್ಬಾರರ ಕಿಟ್ ಹಣದ ಧನದ ಮೂಲ ತಿಳಿಸಿ ಎಂದು ಲೆಕ್ಕ ಕೇಳಿದ್ದರು.
ಇದಕ್ಕೂ ಮೊದಲೇ ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರೆಡ್ಡಿ ರಾಜ್ಯ ವಿಧಾನಸಭೆ ಅಧ್ಯಕ್ಷರು ಆರೋಗ್ಯ ಇಲಾಖೆಯ ಪರಿಕರಗಳ ಖರೀದಿಯ ಹಗರಣದ ತನಿಖೆಗೆ ತಡೆಯಾಜ್ಞೆ ನೀಡುವ ಮೂಲಕ ಬ್ರ ಷ್ಟಾಚಾರಕ್ಕೆ ಬೆಂಬಲಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವೇಶ್ವರ ಹೆಗಡೆ ಪ್ರಾಮಾಣಿಕರಾಗಿದ್ದರೆ ಅವರ ಊರ ಮಾರಿಕಾಂಬಾ ದೇವಿಯ ಎದುರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.
ಈ ಎರಡೂ ಪ್ರಕರಣಗಳೂ ಬಿಡಿಬಿಡಿ ಸನ್ನಿವೇಶಗಳಾದರೂ ಈ ಘಟನೆಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಮತ್ತು ವಿಧಾನಸಭಾ ಅಧ್ಯಕ್ಷ ಕಾಗೇರಿ ಹೆಗಡೆಯವರ ಕೈವಾಡವಿರುವುದು ಸ್ಫಷ್ಟ…………….. ಓದಿ-ವಿಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ. visit-samajamukhi.net

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *