

ಉತ್ತರಕನ್ನಡದಲ್ಲಿ ಇಂದು ಮೊದಲ ಕರೋನಾ ಸಾವು ಸಂಭವಿಸಿದ್ದು ಮಹಾರಾಷ್ಟ್ರದಿಂದ ಮರಳಿದ್ದ ಮಹಿಳೆಯೊಬ್ಬರಲ್ಲಿ ಕರೋನಾ ಇರುವುದು ಮರಣದ ನಂತರ ದೃಢಪಟ್ಟಿದೆ.

ಹೊನ್ನಾವರದ ದಂಪತಿಗಳಿಬ್ಬರಲ್ಲಿ ಪತಿ ಮಹಾರಾಷ್ಟ್ರದಲ್ಲಿ ನಿಧನ ಹೊಂದಿದ್ದರು. ಪತಿಯ ಮರಣದ ನಂತರ ಹುಟ್ಟೂರಿಗೆ ಮರಳುತಿದ್ದ ಮಹಿಳೆಯನ್ನು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಲಾಗಿತ್ತು. ಈ ಮಹಿಳೆಯ ಗಂಟಲು ದ್ರವ ಪರೀಕ್ಷೆಯ ಮೊದಲ ಮಾದರಿಯಲ್ಲಿ ಕರೋನಾ ದೃಢಪಟ್ಟಿರಲಿಲ್ಲ. ಮಂಗಳವಾರ ನಿಧನರಾದ ಇವರ ಮರಣಾನಂತರದ ಮಾದರಿ ಪರೀಕ್ಷೆಯಲ್ಲಿ ಈ ಮಹಿಳೆಯಲ್ಲಿ ಕರೋನಾ ಸೋಂಕಿರುವುದು ದೃಢಪಟ್ಟಿದೆ.
ಶಿರಸಿ ಕಳ್ಳ ಮತ್ತೆ ಪರಾರಿಯಾಗಿ ಸಿಕ್ಕ-
ಶಿರಸಿಯಿಂದ ಕಾರವಾರಕ್ಕೆ ರವಾನೆಯಾಗಿದ್ದ ಕರೋನಾ ರೋಗಿ ಎರಡುದಿವಸಗಳ ಹಿಂದೆ ಪರಾರಿಯಾಗಿ ಸೆರೆಸಿಕ್ಕಂತೆ ಇಂದು ಮತ್ತೆ ತಲೆಮರೆಸಿಕೊಂಡು ಕಾರವಾರದ ಶಿರವಾಡದಲ್ಲಿ ಸೆರೆಸಿಕ್ಕಿದ್ದಾನೆ.
ಈ ಕರೋನಾ ರೋಗಿಯ ಹುಚ್ಚಾಟ ಮತ್ತು ಕರೋನಾದಿಂದಾದ ಮೊದಲ ಸಾವು ಇಂದಿನ ಬಹುಚರ್ಚೆಯ ವಿಷಯಗಳಾಗಿವೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
