![](https://i0.wp.com/samajamukhi.net/wp-content/uploads/2020/07/corona-kalla.jpg?resize=656%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಉತ್ತರಕನ್ನಡದಲ್ಲಿ ಇಂದು ಮೊದಲ ಕರೋನಾ ಸಾವು ಸಂಭವಿಸಿದ್ದು ಮಹಾರಾಷ್ಟ್ರದಿಂದ ಮರಳಿದ್ದ ಮಹಿಳೆಯೊಬ್ಬರಲ್ಲಿ ಕರೋನಾ ಇರುವುದು ಮರಣದ ನಂತರ ದೃಢಪಟ್ಟಿದೆ.
ಹೊನ್ನಾವರದ ದಂಪತಿಗಳಿಬ್ಬರಲ್ಲಿ ಪತಿ ಮಹಾರಾಷ್ಟ್ರದಲ್ಲಿ ನಿಧನ ಹೊಂದಿದ್ದರು. ಪತಿಯ ಮರಣದ ನಂತರ ಹುಟ್ಟೂರಿಗೆ ಮರಳುತಿದ್ದ ಮಹಿಳೆಯನ್ನು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಲಾಗಿತ್ತು. ಈ ಮಹಿಳೆಯ ಗಂಟಲು ದ್ರವ ಪರೀಕ್ಷೆಯ ಮೊದಲ ಮಾದರಿಯಲ್ಲಿ ಕರೋನಾ ದೃಢಪಟ್ಟಿರಲಿಲ್ಲ. ಮಂಗಳವಾರ ನಿಧನರಾದ ಇವರ ಮರಣಾನಂತರದ ಮಾದರಿ ಪರೀಕ್ಷೆಯಲ್ಲಿ ಈ ಮಹಿಳೆಯಲ್ಲಿ ಕರೋನಾ ಸೋಂಕಿರುವುದು ದೃಢಪಟ್ಟಿದೆ.
ಶಿರಸಿ ಕಳ್ಳ ಮತ್ತೆ ಪರಾರಿಯಾಗಿ ಸಿಕ್ಕ-
ಶಿರಸಿಯಿಂದ ಕಾರವಾರಕ್ಕೆ ರವಾನೆಯಾಗಿದ್ದ ಕರೋನಾ ರೋಗಿ ಎರಡುದಿವಸಗಳ ಹಿಂದೆ ಪರಾರಿಯಾಗಿ ಸೆರೆಸಿಕ್ಕಂತೆ ಇಂದು ಮತ್ತೆ ತಲೆಮರೆಸಿಕೊಂಡು ಕಾರವಾರದ ಶಿರವಾಡದಲ್ಲಿ ಸೆರೆಸಿಕ್ಕಿದ್ದಾನೆ.
ಈ ಕರೋನಾ ರೋಗಿಯ ಹುಚ್ಚಾಟ ಮತ್ತು ಕರೋನಾದಿಂದಾದ ಮೊದಲ ಸಾವು ಇಂದಿನ ಬಹುಚರ್ಚೆಯ ವಿಷಯಗಳಾಗಿವೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)