

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಷ್ಟ್ರದಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣ ಏರುತ್ತಿದೆ. ದೇಶದಲ್ಲಿ ಈವರೆಗೆ ಕರೋನಾ ಸೋಕಿತರ ಸಂಖ್ಯೆ ಹತ್ತು ಲಕ್ಷಗಳನ್ನು ದಾಟಿದೆ. ಕರೋನಾ ಸೋಂಕಿತರ ಸಾವಿನ ಪ್ರಮಾಣ 25 ಸಾವಿರ ಎನ್ನುವುದು ಆತಂಕದ ಸ್ಥಿತಿಗೆ ಹಿಡಿದ ಕೈಗನ್ನಡಿ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಈ ವಾರ ಹಿಂದಿನ ಪ್ರಕರಣಗಳಷ್ಟು ಅಂದರೆ ಈವಾರದ ಸೋಂಕಿತರ ಸಂಖ್ಯೆ ಈ ಹಿಂದಿನ ಕೋವಿಡ್ ಬಾಧಿತರ ಸಂಖ್ಯೆಗೆ ಸಮಾನ ಎನ್ನುವುದು ಕರೋನಾ ಭೀಕರತೆಯ ಧ್ಯೋತಕ. ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡಂಕಿ ಸಂಖ್ಯೆಯ ಜನರಲ್ಲಿ ಕರೋನಾ ದೃಢವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗುರುವಾರ ಸಿದ್ಧಾಪುರದ ಬೆಂಗಳೂರಿನಿಂದ ಮರಳಿದ್ದ ವ್ಯಕ್ತಿಯಲ್ಲಿ ಸೋಂಕು ದೃಢವಾಗಿ ಅವರ ಸಂಪರ್ಕದ ಬಿಳಗಿ ಜನರನ್ನು ಕಂಗಾಲು ಮಾಡಿತ್ತು. ಇಂದು ಕೂಡಾ ಬಿಳಗಿಗೆ ಹೊರದೇಶದಿಂದ ಮರಳಿದ್ದ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿದ್ದು ಈ ವ್ಯಕ್ತಿಗೂ ನಿನ್ನೆಯ ಸೋಂಕಿತರ ಸಂರ್ಕದ ವ್ಯಕ್ತಿಗೂ ಸಂಬಂಧ ಇಲ್ಲ ಎನ್ನಲಾಗಿದೆ.
ಇಂದು ಕರೋನಾ ದೃಢಪಟ್ಟ ವ್ಯಕ್ತಿ ವಿದೇಶದಿಂದ ಮರಳುತಿದ್ದಾಗ ಕುಮಟಾದಲ್ಲಿ ಸ್ವಾಬ್ ಮಾದರಿ ನೀಡಿ ಮನೆಗೆ ಮರಳಿದ್ದರು. ಹಾಗಾಗಿ ಈ ವ್ಯಕ್ತಿಯ ಕೋವಿಡ್ ದೃಢಪಟ್ಟ ದಾಖಲೆ ಕುಮಟಾ ತಾಲೂಕಿನ ಪಟ್ಟಿಸೇರಲಿದೆ. ಆದರೆ ಈ ಸೋಂಕಿತ ಚಿಕಿತ್ಸೆಗೆ ಸಿದ್ಧಾಪುರದ ಕೋವಿಡ್ ವಾರ್ಡ್ ಸೇರಿದ್ದು ಇವರ ಪ್ರಾಥಮಿಕ ಸಂಪರ್ಕದ ವ್ಯಕ್ತಿ ಮತ್ತು ಗುರುವಾರ ಸೋಂಕಿತನಾಗಿ ಬುಧವಾರ ಹುಟ್ಟುಹಬ್ ಾಆಚರಿಸಿಕೊಂಡ ವ್ಯಕ್ತಿಯ ಸಂಪರ್ಕದ ಜನರು
ಬಿಳಗಿ ಜನರಆಾತಂಕ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
