

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ,ಮಲೆನಾಡು ಭಾಗದಲ್ಲಿಕಳೆದ 40 ತಾಸುಗಳಲ್ಲಿ ಬಿದ್ದ ಮಳೆ,ಗಾಳಿ ರಭಸದಿಂದಾಗಿ ಮರ-ಮಟ್ಟುಗಳು ನೆಲಕ್ಕುರುಳಿ ನೂರಾರು ಮನೆಗಳಿಗೆ ಹಾನಿಯಾಗಿದೆ. ಮಳೆಗಾಳಿ ಪರಿಣಾಮ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ.





ಕರಾವಳಿ ಭಾಗದಲ್ಲಿ ಮಹಾಪೂರದಿಂದಾಗಿ ಅನೇಕ ಕಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಮಲೆನಾಡಿನ ನದಿಗಳೆಲ್ಲಾ ತುಂಬಿ ಹರಿಯುತಿದ್ದು ನದಿಪಾತ್ರದ ಕೆಲವು ಭಾಗಗಳಲ್ಲಿ ಜನರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ. ಶಿರಸಿಯ ಮೊಗವಳ್ಳಿ,ಸಿದ್ಧಾಪುರದ ಹೆಮ್ಮನಬೈಲ್, ಅಕ್ಕುಂಜಿ,ಕಲ್ಯಾಣಪುರಗಳಲ್ಲಿ ಹಿಂದಿನ ವರ್ಷದಂತೆ ನೆರೆಭೀತಿ ಆವರಿಸಿದ್ದು ಜಿಲ್ಲಾಡಳಿತ ಈ ಗ್ರಾಮಗಳ ಜನರ ರಕ್ಷಣೆ,ಪುನರ್ವಸತಿಗೆ ಮುಂದಾಗಿದೆ. ಸಿದ್ಧಾಪುರ ತಾಲೂಕಿನ ಹೊಸೂರು,ಹುಸೂರು, ಇಟಗಿ, ತ್ಯಾಗಲಿಗಳಲ್ಲಿ ವಾಸ್ತವ್ಯದ ಮನೆಗಳ ಮೇಲೆ ಮರಬಿದ್ದು ಲಕ್ಷಾಂತರ ಹಾನಿ ಸಂಭವಿಸರುವ ಬಗ್ಗೆ ಕಂದಾಯ ಇಲಾಖೆ ವರದಿ ನೀಡಿದೆ.
ವಾಸಸ್ಥಳ ಬದಲು-
ಸಿದ್ಧಾಪುರದ ಹೆಮ್ಮನಬೈಲಿನ ಹೊಳೆಗೆ ಬಂದ ಪ್ರವಾಹದಿಂದ ಅಲ್ಲಿಯ 6 ಕುಟುಂಬಗಳನ್ನು ಸ್ಥಳಾಂತರಿಸಿ ಬುಧವಾರ ಪುನರ್ವಸತಿ ಕಲ್ಫಸಲಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
