sigandooru temple issue-ಹಿಂದುಳಿದ ವರ್ಗಗಳ ಶೋಷಣೆ ವಿರುದ್ಧ ಧ್ವನಿ ಎತ್ತಿದ ಎಸ್.ಎನ್.ಡಿ.ಪಿ., ಸಿಗಂದೂರು ವಿಚಾರದಲ್ಲಿ ಸಂಘಟಿತ ಹೋರಾಟಕ್ಕೆ ಸಿದ್ಧತೆ

ಸಂಘಟನೆ, ಹೋರಾಟ,ಸಾಮಾಜಿಕ ಅಭಿವೃದ್ಧಿ ಧ್ಯೇಯದ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಸ್ಥೆ ಈಡಿಗರೊಟ್ಟಿಗೆ ಇತರ ಹಿಂದುಳಿದ ಸಮಾಜವನ್ನು ಸಂಘಟಿಸಿ,ಸಾಮಾಜಿಕ ಸುಧಾರಣೆಯ ಪ್ರಯತ್ನ ಮಾಡುತ್ತಿದೆ. ಈ ಕೆಲಸದ ಹಿನ್ನೆಲೆಯಲ್ಲಿ ಕಳೆದ ವಾರ ಸಾಗರದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಷಯವನ್ನು ಮುಂದಿಟ್ಟುಕೊಂಡು ಸಭೆ ನಡೆಸಿರುವ ಸಂಘ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ನಿರ್ವಹಣೆ, ಆಡಳಿತ ವಿಚಾರದಲ್ಲಿ ಮೂಗು ತೂರಿಸಿ ಹಿಂದುಳಿದ ವರ್ಗಗಳನ್ನು ರಾಜಕೀಯ,ಧಾರ್ಮಿಕ, ಆರ್ಥಿಕವಾಗಿ ಶೋಷಿಸುತ್ತಿರುವ ವೈದಿಕಶಾಹಿ ಪುರೋಹಿತಶಾಹಿ ತಂತ್ರಗಳ ವಿರುದ್ಧ ಹೋರಾಡಲು ನಿರ್ಣಯಿಸಿದೆ.

ಸೊರಬದ ಹೊಳೆಕೊಪ್ಪದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಮಾಡಿರುವ ಸಂಘ ಇಂಥ ಶೂದ್ರವಿರೋಧಿ ನಡವಳಿಕೆಗಳನ್ನು ವಿರೋಧಿಸುವ ಪುರೋಹಿತಶಾಹಿ ತಂತ್ರಗಾರಿಕೆಗೆ ಸರಿಯಾದ ಉತ್ತರ ನೀಡಲು ಬಿ.ಎಸ್,ಎನ್.ಡಿ.ಪಿ.ಯ 30 ಜಿಲ್ಲೆಗಳ ಪದಾಧಿಕಾರಿಗಳ ಪ್ರತಿನಿಧಿಗಳು ನಿರ್ಣಯ ಅಂಗೀಕರಿಸಿದ್ದಾರೆ.
ಸಾಗರದ ಸಿಗಂದೂರಿನಲ್ಲಿ ಕಳೆದ ಅನೇಕ ವರ್ಷಗಳ ಹಿಂದೆ ಅಲ್ಲಿಯ ಮೂಲದ ರಾಮಪ್ಪ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಅದರ ಮೂಲಕ ಸಾಮಾಜಿಕ,ಶೈಕ್ಷಣಿಕ, ಸಾಂಸ್ಕೃ ತಿಕ,ಧಾರ್ಮಿಕ ಕೆಲಸಗಳನ್ನು ಮಾಡುತಿದ್ದಾರೆ.ನಂತರ ಅಲ್ಲಿ ಪೂಜೆಯ ನೆಪದಲ್ಲಿ ಸೇರಿಕೊಂಡ ಪುರೋಹಿತರು ತಮ್ಮ ಲಾಗಾಯ್ತಿನ ಪುರೋಹಿತಶಾಹಿ, ವೈದಿಕ ಶಾಹಿ ಕುತಂತ್ರಗಳನ್ನು ಮಾಡುತ್ತಾ ಹಿಂದುಳಿದ ವರ್ಗಗಳ ಶೃದ್ಧಾ ಕೇಂದ್ರಕ್ಕೆ ಕಂಟಕವಾಗಿದ್ದಾರೆ. ಇಂಥ ವೈದಿಕರು, ಪುರೋಹಿತಶಾಹಿಗಳು ಮಾಡುವ ಉಪಾಯದ ಕೆಲಸಗಳೆಲ್ಲಾ ಸಮಾಜಕ್ಕೂ ಅರ್ಥವಾಗುತ್ತಿವೆ. ಎಂದು ದೂರಿರುವ ಕೆಲವರು ಈ ಬಗ್ಗೆ ಸಂಘಟಿತ ಹೋರಾಟಕ್ಕಾಗಿ ಬಿ.ಎಸ್.ಎನ್.ಡಿ.ಪಿ. ನೇತೃತ್ವ ವಹಿಸುವ ಬಗ್ಗೆ ಅಲ್ಲಿಯ ಸಭೆಯಲ್ಲಿ ನಿರ್ಣಯಿಸಿರುವುದಾಗಿ (ಸಂಘದ) ಕೆಲವರು ತಿಳಿಸಿದ್ದಾರೆ.

ಹೋರಾಟ ಅನಿವಾರ್ಯ- ಸಿಗಂದೂರಿನಲ್ಲಿ ಹಿಂದುಳಿದವರು ಅವರ ಪೂಜೆ, ನಂಬಿಕೆ,ಶೃದ್ಧೆಗಳ ಕಾರಣಕ್ಕೆ ಪ್ರಾರಂಭಿಸಿದ ದೇವಸ್ಥಾನದಲ್ಲಿ ಪುರೋಹಿತ ವರ್ಗ ಸೇರಿಕೊಂಡು ವರಲೆ ಹುತ್ತದಲ್ಲಿ ಹಾವು ಸೇರಿಕೊಂಡು ಸರ್ವಾಧಿಕಾರ ನಡೆಸಿದಂತಿದೆ. ಇಲ್ಲಿಯ ಪುರೋಹಿತಶಾಹಿ ನಡವಳಿಕೆಯನ್ನು ವಿರೋಧಿಸಲು ಎಸ್.ಎನ್.ಡಿ.ಪಿ. ನೇತೃತ್ವದಲ್ಲಿ ನಾಡಿನ ಹಿಂದುಳಿದ, ದಲಿತ, ಪ್ರಗತಿಪರರ ಒಕ್ಕೂಟಗಳೆಲ್ಲಾ ಸೇರುತ್ತಿವೆ. ತಂತ್ರ-ಕುತಂತ್ರ,ಮಂತ್ರ-ಷಡ್ಯಂತ್ರಗಳ ಮೂಲಕ ಬಹುಸಂಖ್ಯಾತರನ್ನು ವಂಚಿಸುತ್ತಿರುವ ಪುರೋಹಿತಶಾಹಿ ನಮ್ಮ ದೇವಾಲಯದಲ್ಲಿ ಯಜಮಾನಿಕೆಗೆ ಪ್ರಯತ್ನಿಸುತ್ತಿರುವುದು ದ್ರೋಹದ ಕೆಲಸ. ಅದಕ್ಕೆ ಸಂಘಟಿತ ಹೋರಾಟದ ಮೂಲಕ ವೈದಿಕ-ಪುರೋಹಿತಶಾಹಿ ಕುತಂತ್ರವನ್ನು ಎದುರಿಸಲು ಸಂಗಟಿತರಾಗುತಿದ್ದೇವೆ. ಇದು ವರ್ಗ ಸಂಘರ್ಷಕ್ಕೆ ಕಾರಣವಾದರೂ ಆಶ್ಚರ್ಯವಿಲ್ಲ. – ಲೋಹಿತ್ ನಾಯಕ ಈರಗೊಪ್ಪ, ಯುವಮುಖಂಡ ಬೆಂಗಳೂರು.

ವೈದಿಕಶಾಹಿ ಕುತಂತ್ರಕ್ಕೆ ತಕ್ಕ ಉತ್ತರ ನೀಡಲು ಬದ್ಧ- ನಾರಾಯಣಗುರುಗಳ ತತ್ವ ಆದರ್ಶದಂತೆ ನಮ್ಮ ಸಂಘಟನೆ ಬೆಳೆಯುತ್ತಿದೆ. ಸಿಗಂದೂರು ದೇವಿ ಹಿಂದುಳಿದವರ ಆರಾಧನೆಯ ದೇವತೆ, ಇಲ್ಲಿ ನುಸುಳಿರುವ ವೈದಿಕರು ತಮ್ಮ ಲಾಗಾಯ್ತಿನ ಕುತಂತ್ರಗಳಂತೆ ಅಲ್ಲಿಯ ವ್ಯವಸ್ಥೆಯ ಮೇಲೆ ಯಜಮಾನಿಕೆಗೆ ಪ್ರಯತ್ನಿಸುತ್ತಾ ಅಲ್ಲಿಯ ವ್ಯವಸ್ಥೆ, ಹಿಂದುಳಿದ ವರ್ಗಗಳ ಪ್ರಮುಖರಿಗೆ ಅಡ್ಡಿಯಾಗಿದ್ದಾರೆ. ಈ ವಿಚಾರದಲ್ಲಿ ನಾವು ತಾಳ್ಮೆಯಿಂದ ಕಾದು ನೋಡುವ ತಂತ್ರ ಅನುಸರಿಸಿ ಸಾಕಾಗಿದೆ. ಈ ಹಿಂದೆ ದೇವರು, ಧರ್ಮದ ಹೆಸರಿನಲ್ಲಿ ವಂಚಿಸಿರುವ ಪುರೋಹಿತರು ಈಗ ನಮ್ಮ ಸ್ವಾಭಿಮಾನ, ಅಭಿಮಾನಕ್ಕೆ ನೇರವಾಗಿ ಕೈ ಹಚ್ಚಿದಂತಾಗಿದೆ. ಸಿಗಂದೂರು ವಿಚಾರದಲ್ಲಿ ನಾವು ಹೋರಾಟಕ್ಕೂ ಸಿದ್ಧ, ದೇವಸ್ಥಾನಕ್ಕೇ ನುಗ್ಗಿ ವೈದಿಕ ಕುತಂತ್ರಿಗಳನ್ನು ಒದ್ದು ಹೊರಹಾಕಲೂ ಸಿದ್ಧರಾಗಿದ್ದೇವೆ. ಧರ್ಮ, ನಂಬಿಕೆ, ಕಾನೂನು, ಸರ್ಕಾರಗಳ ಯಜಮಾನಿಕೆ ವಹಿಸಿ ನಮ್ಮ ಸಮಾಜ, ನಾಯಕರಿಂದ ನಮ್ಮ ದೇವರು ಅಲ್ಲಿಯ ವ್ಯವಸ್ಥೆಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸಂಘರ್ಷವೋ,ಸಮರವೋ ಎಲ್ಲದಕ್ಕೂ ಸಿದ್ಧ. ವೈದಿಕಶಾಹಿಯ ಧಾರ್ಮಿಕ ರಾಜಕಾರಣ,ಲಾಭದ ಶೋಷಣೆಯ ರಾಜಕಾರಣ ಮಿತಿಮೀರಿದೆ. ಈ ದೇವಸ್ಥಾನದಿಂದಲೇ ಪುರೋಹಿತಶಾಹಿ ವಿರುದ್ಧದ ಸಂಘಟಿತ ಹೋರಾಟ ಸಾಧ್ಯವಾಗುವುದಿದ್ದರೆ ಅದಕ್ಕಿಂತ ಖುಷಿ ಬೇರೆನಿದೆ. ಬಹುಸಂಖ್ಯಾತರನ್ನು ನಂಬಿಕೆ, ಸರ್ಕಾರ, ಸುಳ್ಳು, ಯಜಮಾನಿಕೆಗಳಿಂದ ಹಿಂದೆ ಸರಿಸುತ್ತೇವೆಂಬ ಭ್ರಮೆಯಲ್ಲಿರುವ ವೈದಿಕಶಾಹಿ ಈ ವಿವಾದದಿಂದ ಪಾಠ ಕಲಿಯಲಿದೆ. – ಸೈದಪ್ಪ ಗುತ್ತೇದಾರ ಬಿ.ಎಸ್.ಎನ್.ಡಿ.ಪಿ. ರಾಜ್ಯಾಧ್ಯಕ್ಷ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *