congress time-ಕಾಂಗ್ರೆಸ್ ಗೆ ವಸಂತ ಕಾಲ…..!

ಹಲವು ಮೇಲಾಟಗಳ ನಡುವೆ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಮೇಲೆ ಜಿಲ್ಲೆ, ತಾಲೂಕುವಾರು ಅಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆ ನಿಶ್ಚಿತ ಎನ್ನಲಾಗಿದ್ದ ನೀರೀಕ್ಷೆಯಂತೆ ಡಿ.ಕೆ.ಶಿವಕುಮಾರ ಆಪರೇಶನ್ ಕಾಂಗ್ರೆಸ್ ಗೆ ರಾಜ್ಯದ ಜಿಲ್ಲೆ,ತಾಲೂಕುಗಳ ಅಧ್ಯಕ್ಷತೆಗಳೆಲ್ಲಾ ಬದಲಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ಅವಧಿಗಳಿಂದ ಭೀಮಣ್ಣ ನಾಯ್ಕ ಡಿ.ಸಿ.ಸಿ. ಅಧ್ಯಕ್ಷರಾಗಿರುವ ಕಾಂಗ್ರೆಸ್ ಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಏಕಮೇವಾದ್ವಿತಿಯ ನಾಯಕ ಎನಿಸಿಕೊಂಡಿದ್ದರು.

ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕರ ಮೊದಲ ಮಾಧ್ಯಮ ಗೋಷ್ಠಿ

ಇವರ ಅವಧಿಯಲ್ಲಿ ಕಾಂಗ್ರೆಸ್ ಕದರು ಕರಗಿ ಉತ್ತರ ಕನ್ನಡ ಕೇಸರಿ ಜಿಲ್ಲೆಯಾಗಿರುವುದು ವಾಸ್ತವ. ಈ ಕಟುವಾಸ್ತವದ ನಡುವೆ ಕಾಂಗ್ರೆಸ್ ಸಂಘಟನೆ,ಗೆಲುವು ದೂರ ಸರಿದಿರುವುದಕ್ಕೆ ವಲಸೆ ನಾಯಕರ ಪ್ರತಿಷ್ಠೆ, ಮೇಲಾಟ ಕಾರಣ ಎನ್ನುವ ಚರ್ಚೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನ ವಿವಾದ.

ಈಗ ಶಿರಸಿ ಕ್ಷೇತ್ರಕ್ಕೆ ನಾಯಕರಾಗುವ ದೂರಾಲೋಚನೆಯ ಕೆಲವರಿಂದ ದೇಶಪಾಂಡೆ ಪಾರುಪತ್ಯಕ್ಕೆ ಸವಾಲು ಹಾಕಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ವಿಷಯ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಸಿದ್ಧಾಪುರ ತಾಲೂಕಾ ಕಾಂಗ್ರೆಸ್ ಅಧ್ಯಕ್ಷತೆಯ ಬದಲಾವಣೆ ವಿಚಾರ.

ಸಿದ್ಧಾಪುರದಲ್ಲಿ ಟಿ.ಕೆ. ಮಹಮದ್ ರ ಕಾಲದಿಂದ ಕಾಂಗ್ರೆಸ್ ಅಧ್ಯಕ್ಷತೆಯೆಂದರೆ ಅದು ನಾಯಕರ ಮೇಲಾಟ. ಈ ಬಾರಿ ನಿವೇದಿತ್ ಆಳ್ವ ಮತ್ತು ಸುಷ್ಮಾ ರಾಜ್ಗೋಪಾಲ್ ರೆಡ್ಡಿ ಎನ್ನುವವರ ಮೇಲಾಟದಲ್ಲಿ ತಾ.ಪಂ. ಮಾಜಿ ಸದಸ್ಯ ವಸಂತ ನಾಯ್ಕರನ್ನು ಬ್ಲಾಕ್ ಗೆ ಅಧ್ಯಕ್ಷರನ್ನಾಗಿಸಿರುವ ವಿಚಾರ ಈಗ ಸಿದ್ಧಾಪುರ ಉತ್ತರಕನ್ನಡದ ಮಟ್ಟಿಗೆ ಅಂತರಾಷ್ಟ್ರೀಯ ವಿಷಯ!
ವಸಂತ ನಾಯ್ಕ ಸಿದ್ಧಾಪುರದ ಷಣ್ಮುಖ ಗೌಡರಿಂದಾಗಿ ರಾಜಕಾರಣಕ್ಕೆ ಬಂದವರು. ಗೌಡರ ಪಾಳಯದಲ್ಲಿ ಗುರುತಿಸಿಕೊಂಡು ಒಂದು ಕಾಲದ ಹಳೆಕಾಂಗ್ರೆಸ್ಸಿಗರ ವಿರೋಧಕ್ಕೂ ಕಾರಣವಾದವರು. ಆದರೆ ಈಗ ಕಾಲ, ಪರಿಸ್ಥಿತಿ ಬದಲಾಗಿದೆ. ಹಳೆಹುಲಿ ಗೌಡರ ನೇತೃತ್ವದ ದೇಶಪಾಂಡೆ ಕಾಂಗ್ರೆಸ್ ಬಣ ನಿಧಾನವಾಗಿ ಹಿಂದೆ ಸರಿಯುತ್ತಿರುವಂತೆ ಭಾಸವಾಗುತ್ತಿದೆ. ಭೀಮಣ್ಣ ನಾಯ್ಕ, ಶಾಂತರಾಮ ಹೆಗಡೆ, ಷಣ್ಮುಖ ಹೆಗಡೆ, ಆರ್.ಎಂ. ಹೆಗಡೆ ಸೇರಿದ ಅನೇಕರ ಹಳೆ ತಂಡ ಮೊದಲಿನಷ್ಟು ಚುರುಕಾಗಿಲ್ಲ ಈ ಸಂದರ್ಭ ನೋಡಿ ಇವರ ವಿರೋಧಿ ಬಣ ವಸಂತ ನಾಯ್ಕರನ್ನು ತಾಲೂಕಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದೆ ಎನ್ನುವ ಬಹಿರಂಗ ಗುಟ್ಟಿನಲ್ಲಿ ಸುಳ್ಳಿಲ್ಲ.

ವಸಂತ ನಾಯ್ಕ ದೇಶಪಾಂಡೆ ಬಣದಿಂದ ಗುರುತಿಸಿಕೊಂಡು ಅವರಿಂದಲೇ ಅನ್ಯಾಯಕ್ಕೊಳಗಾದವರು. ಈಗ ದೇಶಪಾಂಡೆ ಬಣಕ್ಕೆ ಸೆಡ್ಡುಹೊಡೆಯುವಂತೆ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ವಸಂತ ನಾಯ್ಕ ಸಮನ್ವಯ,ಸಂಘಟನೆ, ಸಂಧಾನದ ಮಾತನಾಡಿದ್ದಾರೆ. ವಾಸ್ತವದಲ್ಲಿ ಸಿದ್ಧಾಪುರದಲ್ಲಿ ಹಳೆ ಕಾಂಗ್ರೆಸ್ ತಲೆಗಳೊಂದಿಗೆ ಸಂಧಾನ, ಸಮನ್ವಯ,ಸಹಕಾರದ ರಾಜಕಾರಣ ಮಾಡಿದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸಬಹುದು ಆದರೆ ದೇಶಪಾಂಡೆ ಬಣ ಈ ಹೊಸ ರಾಜಕೀಯ ಆಟಕ್ಕೆ ಬೆಂಬಲಿಸುವುದೆ? ಇದು ಯಕ್ಷಪ್ರಶ್ನೆ.
ಕಳೆದ ವಾರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ವಸಂತನಾಯ್ಕ ಎಲ್ಲರ ವಿಶ್ವಾಸದಿಂದ ಬೂತ್ ಮಟ್ಟದಿಂದ ಕಾಂಗ್ರೆಸ್ ಸಂಘಟಿಸುತ್ತೇನೆ ಎಂದಿದ್ದಾರೆ. ತಮ್ಮೊಂದಿಗಿದ್ದ ಹಲವು ಕಾರ್ಯಕರ್ತರೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಭರವಸೆಯ ಮಾತನಾಡಿದ್ದಾರೆ.

ಆದರೆ ಇದು ಅಷ್ಟು ಸುಲಭವಲ್ಲ ಉತ್ತರ ಕನ್ನಡ ಮತ್ತು ಸಿದ್ಧಾಪುರ ಕಾಂಗ್ರೆಸ್ ವಿಚಾರದಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗಿಳಿಯಿತು ಎನ್ನುವಂತೆ ಈಗಿರುವ ಎರಡ್ಮೂರು ಬಣಗಳಲ್ಲಿ ಒಬ್ಬರು ಅಧಿಕಾರ, ಪಕ್ಷದ ಹುದ್ದೆಗೆ ಬಂದರೆ ಇನ್ನೊಂದು ಬಣ ಬಿ.ಜೆ.ಪಿ. ಬಿ ಟೀಮ್ ಆಗುತ್ತದೆ ಎನ್ನುವ ಗುರುತರ ಆರೋಪಗಳಿವೆ. ಕಾಂಗ್ರೆಸ್ ನ ಈ ಒಡಕಿನಿಂದಲೇ ಉತ್ತರ ಕನ್ನಡದಲ್ಲಿ ಜನದ್ರೋಹಿಗಳೆಲ್ಲಾ ಕಾಲುಶತಮಾನ ಕಾಲ ಜನಪ್ರತಿನಿಧಿಗಳಾಗಿ ಮೆರೆದಿದ್ದಾರೆ.
ಈ ಎಲ್ಲಾ ಹಿನ್ನೆಲೆ, ಚರಿತ್ರೆಯ ಕಾರಣಕ್ಕೆ ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನ ಒಡಕು ಜಿಲ್ಲೆಗೆ ಹಾನಿ ಮಾಡಿದ್ದಂತೂ ಸತ್ಯ. ಈಗ ದೇಶಪಾಂಡೆ ಪಾರುಪತ್ಯದೆದುರು ವಸಂತ ನೇಮಕ ಹೊಸಹುರುಪಿಗೆ ಕಾರಣವಾಗಿದೆ. ವಸಂತ್ ನಾಯ್ಕ ಬಣಭೇದಮಾಡದೆ ಎಲ್ಲರನ್ನೂ ಸಂಪರ್ಕಿಸುತ್ತಾ ಆ.20 ಗುರುವಾರ ದೇವರಾಜ್ ಅರಸು ಮತ್ತು ರಾಜೀವ್ ಗಾಂಧಿಯವರ ಜನ್ಮದಿನ ಆಚರಣೆ ಅಂಗವಾಗಿ ಸಿದ್ಧಾಪುರದಲ್ಲಿ ಪ್ರತಿಭಟನೆ ಮಾಡಿ ರಾಜ್ಯಸರ್ಕಾರದ ವಿಫಲತೆಗಳ ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಪೀಸುವ ಕಾರ್ಯಕ್ರಮ ಆಯೋಜಿಸಿದ್ದಾರೆ.

ತಾಲೂಕಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣದ ಮೊದಲು ನೂತನ ಅಧ್ಯಕ್ಷರು ಸಂಘಟನೆ, ಪ್ರತಿಭಟನೆಗೆ ಮುಂದಾಗಿರುವುದು ಶುಭ ಸೂಚನೆ. ಸಿದ್ಧಾಪುರ ಉತ್ತರ ಕನ್ನಡದಲ್ಲಿ ಪಕ್ಷಭೇದವಿಲ್ಲದೆ, ಗುಂಪುಗಾರಿಗೆ, ಒಳವ್ಯವಹಾರ, ಻಻ಅಧಿಕಾರ,ಅನುಕೂಲಕ್ಕಾಗಿ ಧಾರ್ಮಿಕ ಮತಾಂಧತೆ,ಉಳ್ಳವರ ಹೊಂದಾಣಿಕೆ ರಾಜಕಾರಣಗಳ ಪರಿಣಾಮ ಇಲ್ಲದವರು,ಬಹುಸಂಖ್ಯಾತರು,ಒಳ್ಳೆಯವರಿಗೇ ತೊಂದರೆಯಾಗುತ್ತಿದೆ. ಈ ಸಂದರ್ಭದಲ್ಲಿ ಬಿ.ಜೆ.ಪಿ.ಗೆ ಪರ್ಯಾಯವಾಗಿ ಯಾವ ಶಕ್ತಿಗಳಿಗೂ ಬಾಲಬಿಚ್ಚಲಾಗುತ್ತಿಲ್ಲ. ಕಮ್ಯುನಿಷ್ಟರು ಪ್ರತಿಭಟನೆಗೆ, ಜನತಾದಳ ಚುನಾವಣೆಗಳಿಗೆ ಸೀಮಿತವಾಗಿರುವುದರಿಂದ ಜನ ಻ಅನಿವಾರ್ಯವಾಗಿ ಕಾಂಗ್ರೆಸ್ ನತ್ತ ನೋಡುವ ದುಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಕೆಲವು ವಲಸೆ ಪಟ್ಟಭದ್ರರ ಲಾಭದಾಟಕ್ಕೆ ವಸಂತ ನಾಯ್ಕ ಬಳಕೆಯಾಗದಿದ್ದರೆ ವಸಂತ ಬಿ.ಜೆ.ಪಿ. ಕಪಟ ನಾಟಕ ಎದುರಿಸಬಹುದಾದ ಹೊಸ ನಾಯಕ ಇಂಥ ಬರೆಯಬಹುದಾದ, ಬರೆಯಲಾರದ ಕೆಲವು ಕಾರಣಗಳ ಻ಅನಿವಾರ್ಯತೆಗೆ ವಸಂತ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಹೊಸತನ,ಹೊಸ ನಾಯಕತ್ವ ಬಯಸುವವರಿಗೆ ಖುಷಿಕೊಟ್ಟರೆ, ಕೆಲವು ಜೀಹುಜೂರ್ ಕೆಲಸದ ಲಾಭದ ರಾಜಕಾರಣ ಮಾಡುವ ಮರಿ ಪುಡಾರಿಗಳಿಗೆ ಸಹ್ಯ ಸುದ್ದಿಯಾಗದ ಸಾಧ್ಯತೆ ಹೆಚ್ಚು.

ಬ್ಲಾಕ್ ಅಧ್ಯಕ್ಷರ ಮೊದಲ ಮಾಧ್ಯಮಗೋಷ್ಠಿಯಲ್ಲಿ ಹಿರಿತಲೆಗಳ ಗೈರು

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಿಂದ ಪಾರಾಗಿದ್ದ ವೃದ್ಧ ವ್ಯಕ್ತಿಯೊಬ್ಬ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *