

ರೈತರು,ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲಸಮಾಡಲು ಸರ್ಕಾರಿ ನೌಕರರಿಗೆ ಸೂಚಿಸಿರುವ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಜನಸಾಮಾನ್ಯರಿಗೆ ಸರ್ಕಾರ, ಆಡಳಿತ ವ್ಯವಸ್ಥೆ ತಮ್ಮೊಂದಿಗಿದೆ ಎನ್ನುವ ಭರವಸೆ ಬರುವಂತೆ ಸರ್ಕಾರಿ ನೌಕರರು ಜನರ ಕೆಲಸಮಾಡಬೇಕು ಎಂದು ಸಲಹೆ ನೀಡಿದರು.



ಜಿಲ್ಲೆಯ ನಾಲ್ಕೈದು ತಾಲೂಕುಗಳ ಬೆಳೆಸಮೀಕ್ಷೆ, ಪ್ರಕೃತಿ ವಿಕೋಪ ವರದಿಗಳ ಪ್ರಗತಿಪರಿ ಶೀಲನೆ ನಡೆಸಿದ ಅವರು ಸಿದ್ಧಾಪುರದಲ್ಲಿ ಮಾತನಾಡಿ ಜನಸಾಮಾನ್ಯರು ಕೋವಿಡ್ ಪರೀಕ್ಷೆಗೆ ಒಳಪಡಬೇಕು, ರೋಗಪತ್ತೆ ಶೀಘ್ರವಾಗಿ ನಡೆದರೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಅದೇ ರೋಗಪತ್ತೆ ಕೆಲಸ ವಿಳಂಬವಾದರೆ ಅಪಾಯ ಹೆಚ್ಚು ಎಂದು ಸಮರ್ಥಿಸಿದರು.
ಕಂದಾಯ ಇಲಾಖೆಯ ಕೆಳ ಹಂತದ ನೌಕರರ ಜವಾಬ್ಧಾರಿ, ಹೊಣೆ ದೊಡ್ಡದು ಬೆಳೆ ದಾಖಲಾತಿಯಲ್ಲಿ ದೋಷವಾದರೆ ರೈತರಿಗೆ ತೊಂದರೆ ಹಾಗಾಗಿ ಬೆಳೆ, ಉಪಬೆಳೆ-ಪೂರಕ ಬೆಳೆಗಳ ಸಮಗ್ರ, ಸಂಪೂರ್ಣ ಮಾಹಿತಿ ಪಡೆದು ದಾಖಲಿಸಬೇಕು.
ಪ್ರಕೃತಿ ವಿಕೋಪ, ಜನರಿಗೆ ತೊಂದರೆಯಾದರೆ ತಕ್ಷಣ ಭೇಟಿ ನೀಡುವುದು, ಅಗತ್ಯ ವರದಿ ನೀಡುವುದು ಅನಿವಾರ್ಯತೆಯಲ್ಲಿ ಅವರಿಗೆ ನೆರವು ನೀಡುವ ಮೂಲಕ ಜನರಿಗೆ ಸ್ಫಂದಿಸಬೇಕು. ಈ ಕೆಲಸಗಳ ಬಗ್ಗೆ ಜಿಲ್ಲಾಧಿಕಾರಿ ಹರೀ ಶ್ ಕುಮಾರ ಕೆ. ಬದ್ಧತೆಯುಳ್ಳವರಾಗಿದ್ದು ಜನಪರ ಆಡಳಿತಕ್ಕೆ ಅವರು ಮಾದರಿ ಎನಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
