

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಾಗಾಲೋಟ ಮುಂದುವರಿದಿದ್ದು ಇಂದು ಹಳಿಯಾಳದ 57 ಜನರು, ಭಟ್ಕಳ22, ಹೊನ್ನಾವರ 18, ಶಿರಸಿ16, ಕಾರವಾರ,ಯಲ್ಲಾಪುರಗಳಲ್ಲಿ ತಲಾ 12 ಸೇರಿ ಒಟ್ಟೂ 198 ಜನರಲ್ಲಿ ಕರೋನಾ ದೃಢಪಟ್ಟಿದೆ.

ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ, ವಿಧಾನಸಭಾ ಸದಸ್ಯ ಎಸ್.ಎಲ್. ಘೊಟ್ನೇಕರ್ ರಲ್ಲಿ ಕರೋನಾ ದೃಢಪಟ್ಟಿದೆ.
ಸಿದ್ಧಾಪುರ ವರದಿ-
ಸಿದ್ಧಾಪುರದಲ್ಲಿ ಇಂದುಮುಗದೂರಿನ 1, ನೇರಲಮನೆಯ 1, ವಂದಾನೆಯ 6, ಹಸರಗೋಡಿನ 5 ಜನರಲ್ಲಿ ಕರೋನಾ ದೃಢವಾಗಿದೆ. ಮುಗದೂರಿನ ವ್ಯಕ್ತಿ ಸಿದ್ಧಾಪುರ ಕೆ.ಡಿ.ಸಿ.ಸಿ. ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಇವರು ಕಳೆದ ಒಂದು ವಾರದಿಂದ ಬ್ಯಾಂಕಿನ ಕೆಲಸಕ್ಕೆ ಬಂದಿರದಿದ್ದರೂ ಶಿರಸಿ ಕೆ.ಡಿ.ಸಿ.ಸಿ. ಮುಖ್ಯ ಕಛೇರಿಯ ಆದೇಶದಂತೆ ಸಿದ್ಧಾಪುರ ನಗರ ಶಾಖೆಯ ಸಿಬ್ಬಂದಿಗಳಿಗೆ ಆ.29 ರ ವರೆಗೆ ರಜೆ ಘೋಶಿಸಿದ್ದಾರೆ.
ಕೆ.ಡಿ.ಸಿ.ಸಿ. ಬ್ಯಾಂಕಿನ ಎರಡು ಶಾಖೆಗಳು ಸಿದ್ಧಾಪುರದಲ್ಲಿದ್ದು ಹೆಚ್ಚಿನ ಸ್ಥಳೀಯರ ಖಾತೆಗಳು, ವ್ಯವಹಾರಗಳು ಈ ಬ್ಯಾಂಕ್ ಗಳಲ್ಲಿವೆ. ಈ ಬ್ಯಾಂಕಿನ ಹಣ ನಗರ, ಗ್ರಾಮೀಣ ಪ್ರದೇಶಗಳಲ್ಲೂ ಚಲಾವಣೆಯಾಗಿದ್ದು ಇಂದಿನ ಕೋವಿಡ್ ಪ್ರಕರಣಗಳು ತಾಲೂಕಿನ ಜನರ ಆತಂಕ ವೃ ದ್ಧಿಸಿವೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
