ಕಾಗೋಡು ಹೋರಾಟಗಾರ ತಿಮ್ಮಪ್ಪ@ 89

ಇಂದು ಕಾಗೋಡು ತಿಮ್ಮಪ್ಪ ತಮ್ಮ 89 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ತಿಮ್ಮಪ್ಪ ಕಾಗೋಡು ತಿಮ್ಮಪ್ಪ ಎಂದು ಖ್ಯಾತರಾಗುವ ಮೊದಲು ನಮ್ಮಂತೆ ಹಳ್ಳಿಗಾಡ ಹುಡುಗ. ಛಲದಿಂದ ವಿದ್ಯೆ ಕಲಿಯುತ್ತಾ ವಕೀಲರಾಗುವವರೆಗೆ ತಿಮ್ಮಪ್ಪ ಸಮಾಜದ ಎಲ್ಲಾ ಸೊಗಸು ಅಪಸವ್ಯಗಳನ್ನು ನೋಡುತ್ತಾ ಬೆಳೆದವರು. ಇವರ ಗುರು ಎಚ್. ಗಣಪತಿಯಪ್ಪ ಗಾಂವಟಿಶಾಲೆ ಮಾಸ್ತರ್ ಆಗಿ ಹಿರೆನೆಲ್ಲೂರಿನಲ್ಲಿ ಮಕ್ಕಳಿಗೆ ಪಾಠ ಮಾಡುತಿದ್ದವರು. ಜಮೀನ್ಧಾರರ ದಬ್ಬಾಳಿಕೆ ಬಗ್ಗೆ ತನ್ನ ವಿದ್ಯಾರ್ಥಿಗಳಿಗೆ ಹೇಳುವುದು, ಕೇಳುವುದನ್ನು ಅರಿತ ಮೇಲ್ವರ್ಗದವರು ಗಣಪತಿಯಪ್ಪನವರಿಗೆ ಶಾಲೆಗೆ ಸ್ಥಳ ನಿರಾಕರಿಸುತ್ತಾರೆ. ವಾಸ್ತವದಲ್ಲಿ ಶಿಕ್ಷಕ ಹೋರಾಟಕ್ಕೆ ಬೀಜಬಿತ್ತುವುದನ್ನು ಒಪ್ಪದ ಜಮೀನ್ಧಾರರು ಗಣಪತಿಯಪ್ಪನವರಿಗೆ ಜಾಗ ಇಲ್ಲ ಎಂದಾಗ ಆ ಭಾಗದ ಜನ ಸಾಮಾನ್ಯ ಗೇಣಿದಾರರು ಗಣಪತಿಯಪ್ಪನವರನ್ನು ಶಿಕ್ಷಕ ಎಂದು ಒಪ್ಪಿಕೊಳ್ಳತ್ತಾರೆ. ಮತ್ತು ಹೊಸ ಜಾಗ ಮಾಡಿಕೊಡುತ್ತಾರೆ.

ಈ ಅವಧಿಯಲ್ಲಿ ವಿದ್ಯಾರ್ಥಿ, ಶ್ರೀಸಾಮಾನ್ಯನಾಗಿರಬಹುದಾದ ತಿಮ್ಮಪ್ಪ ನಂತರ ವಕೀಲಿಕೆ ಕಲಿತು ಮತ್ತೆ ಗಣಪತಿಯಪ್ಪ, ಗೋಪಾಲಗೌಡ, ಲೋಹಿಯಾರ ವಿದ್ಯಾರ್ಥಿಯಾಗುತ್ತಾರೆ. ಹೀಗೆ ಸಮಾಜವಾದ, ಹೋರಾಟವನ್ನು ಚಿಕ್ಕಂದಿನಿಂದಲೇ ನೋಡುತ್ತಾ, ಮಾಡುತ್ತಾ ಬೆಳೆದ ಕಾಗೋಡು ತಿಮ್ಮಪ್ಪ ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅವರು ಹಲವು ಬಾರಿ ಮಂತ್ರಿಯಾದರೂ ಮುಖ್ಯಮಂತ್ರಿಯಾಗಲೇ ಇಲ್ಲ. ಸಾಗರವನ್ನು ಸ್ವಾತಂತ್ರ್ಯ ನಂತರ ಅತಿ ಹೆಚ್ಚುಬಾರಿ ಪ್ರತಿನಿಧಿಸಿದ ಕಾಗೋಡು ಹುಡುಗ ಯಾನೆ ಕಾಗೋಡು ಅಜ್ಜ ತಿಮ್ಮಪ್ಪ ಸಮಾಜವಾದಿಯಾಗಿ ಕೂಟ ಕಟ್ಟಲಿಲ್ಲ. ತಮ್ಮ ಓರಗೆಯವರೆಲ್ಲಾ ರಾಜಕೀಯದ ಹೊಸ ಪಟ್ಟು,ರೀತಿ-ನೀತಿಗಳನ್ನು ಕಲಿತು ಏಣಿ ಹತ್ತುವ ಕಸರತ್ತು ಮಾಡುತಿದ್ದಾಗ ತಿಮ್ಮಪ್ಪ ಜನಪರವಾಗಿ ಯೋಚಿಸುತ್ತಾ ಸಮಾಜವಾದಕ್ಕೆ ಗೌರವ ಬರುವಂತೆ ನಡೆದುಕೊಂಡರು.

ಈಗ ರಾಜ್ಯದ ಹಿರಿಯ ರಾಜಕಾರಣಿಯಾಗಿ ಜನರ ನಡುವೆ ಇರುವ ಕಾಗೋಡು ತಿಮ್ಮಪ್ಪ ಕಾಂಗ್ರೆಸ್, ಪ್ರಜಾಸಮಾಜವಾದಿ ಪಕ್ಷ, ಜನತಾ ಪಕ್ಷ ಹೀಗೆ ತಮ್ಮ ಓಡಾಟ, ಒಡನಾಟವನ್ನು ಜನಪರ ಜಾತ್ಯಾತೀತರ ಜೊತೆ ಇಟ್ಟುಕೊಂಡರೇ ಹೊರತು ಎಲ್ಲಿಯೂ ಮತೀಯವಾದಿಗಳೊಂದಿಗೆ ಕೈ ಜೋಡಿಸಲಿಲ್ಲ. ಲೋಕೋಪಯೋಗಿ, ಸಮಾಜಕಲ್ಯಾಣ, ಕಂದಾಯಗಳಂಥ ಮಹತ್ವದ ಖಾತೆಗಳ ಸಚಿವರಾಗಿ ತಿಮ್ಮಪ್ಪ ಮಾಡಿದ ಕೆಲಸ ಇತರರಿಗೆ ಅನುಕರಣೀಯ. ಸಾಗರ-ಶಿವಮೊಗ್ಗ ಗಳಲ್ಲಿ ಸರ್ಕಾರಿ ಸಂರಚನೆ, ಜನರ ಕೆಲಸ, ಬಗರಹುಖುಂ. ಅಕ್ರಮ ಸಕ್ರಮ ಯಾವುದೇ ಕೆಲಸದ ಹಿಂದೆ ಅವರ ಬದ್ಧತೆ,ನಿಷ್ಠೂರತೆ ಕಣ್ಣಿಗೆ ರಾಚುವಷ್ಟು ಪ್ರಖರ.

ಪಂಚೆ ಉಡುವ ಜನಸಾಮಾನ್ಯ ಹಳ್ಳಿಗನಿಂದ ಹಿಡಿದು ಮಂತ್ರಿ ಮಹೋದಯರು, ಅಧಿಕಾರಿಗಳು ಎಲ್ಲರನ್ನೂ ಏಕವಚನದಲ್ಲೇ ಸಂಭೋದಿಸುವ ಕಾಗೋಡು ಅಜ್ಜ ಕೆಲಸ, ವೈಚಾರಿಕತೆಯ ವಿಚಾರದಲ್ಲಿ ಹಿರಿಯಜ್ಜ. ರಾಜ್ಯದ ಮೌಢ್ಯ ನಿಷೇಧ ಕಾಯಿದೆ ರಚನೆ ಇರಲಿ, ಸಿಗಂದೂರಿನ ವಿಚಾರವಿರಲಿ ಹೇಳಬೇಕಾದ್ದನ್ನು ನೇರವಾಗಿ ಹೇಳುವ ಛಾತಿಯ ಈ ಹೋರಾಟಗಾರ ಮತೀಯವಾದಿ ಮಾತಿನ ಅನಂತಕುಮಾರ ಹೆಗಡೆಯವರನ್ನು ಯಾವನ? ಎಂದು ಗತ್ತಿನಿಂದ ಛೇಡಿಸಿದಂತೆ ಶಾಸಕ ಕಾಗೇರಿಯವರನ್ನು ಏ ಕಾಗೇರಿ ನಂಗೊತ್ತಿಲ್ಲನ ನಿನ್ನ ಕ್ಷೇತ್ರದ್ ಕತೆ ಎನ್ನುವವರೆಗೆ. ದೇಶಪಾಂಡೆ, ಧರ್ಮಸಿಂಗ್, ಖರ್ಗೆಯವರಂಥ ಹಿರಿಯರಿಗೂ ಏಕವಚನದಲ್ಲೇ ಮಾತನಾಡಿಸಿ ತಿವಿಯುವ ಕಾಗೋಡು ಮಾತಿನಲ್ಲಿ, ನಡತೆಯಲ್ಲಿ, ನಡವಳಿಕೆಯಲ್ಲಿ ಎಲ್ಲೂ ರಾಜಿ ಇಲ್ಲದ ಧೀರ, ಇವರಲ್ಲಿ ನಾ ಟಕೀಯತೆ ಕಾಣಲೂ ಸಾಧ್ಯವಿಲ್ಲ. ಇಂಥ ಹಿರಿಯಜ್ಜ ತೀನಾ ಶ್ರೀನಿವಾಸರೊಂದಿಗೆ ನನ್ನ ಕಛೇರಿಯ ಎದುರು ಬಂದು ಏನಾದರೂ ಮಾಡುತಿರು ಮಂಕುತಿಮ್ಮ ಎಂದು ಆಶೀರ್ವದಿಸಿದ್ದು ಎಂದಿಗೂ ಮರೆಯದ ನೆನಪು.

ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಾಲದಿಂದ ಅರಸು, ಬಂಗಾರಪ್ಪ,ಎಸ್.ಎಂ.ಕೃಷ್ಣ, ಕುಮಾರಸ್ವಾಮಿಯವರವರೆಗೆ ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳು, ಪ್ರಭಾವಿಗಳು ಎಲ್ಲರೊಂದಿಗೆ ಕೆಲಸ ಮಾಡಿದರೂ ಯಾರೊಂದಿಗೂ ರಾಜಿ ಮಾಡಿಕೊಳ್ಳದ ತಿಮ್ಮಪ್ಪ 90 ದಶಕಗಳಲ್ಲಿ 70 ದಶಕಗಳನ್ನು ಹೋರಾಟ, ಅಧಿಕಾರ, ಜನನೇತೃತ್ವ, ಜನಹೋರಾಟ, ಜನಪರತೆಗಾಗಿ ಮುಡಿಪಾಗಿಟ್ಟಿದ್ದಾರೆ. ಈಗಲೂ ಹೊಸ ಹುಡುಗನಂಥ ಉತ್ಸಾಹದ ಕಾಗೋಡು ಅಜ್ಜ ಎಲ್ಲರಿಗೂ ಮಾದರಿ. ನೂರಾರು ವರ್ಷ ಉಳಿಯಬಹುದಾದ ಕೆಲಸ, ಅಭಿವೃದ್ಧಿ, ಸಾಧನೆ ಮಾಡಿರುವ ಕಾಗೋಡು ತಿಮ್ಮಪ್ಪ ನೂರಾರು ವರ್ಷ ಬದುಕಿ ಬಾಳುವಂತಾಗಲಿ ಎನ್ನುವ ಶುಭ ಹಾರೈ ಕೆಗಳೊಂದಿಗೆ ಅವರಿಗೆ ಸಮಾಜಮುಖಿಯ ಹುಟ್ಟುಹಬ್ಬದ ಶುಭಾಶಯ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Pak ಸೇನಾಧಿಕಾರಿಗಳು ಸೇರಿ 40 ಸೈನಿಕರು, 100ಕ್ಕೂ ಹೆಚ್ಚು ಉಗ್ರರ ಹತ್ಯೆ: Operation Sindoor ಬಗ್ಗೆ ಭಾರತದ DGMO ಕ್ಷಣ ಕ್ಷಣದ ಮಾಹಿತಿ!

ಹತ್ಯೆಯಾದ ಭಯೋತ್ಪಾದಕರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ನಂತಹ ಕುಖ್ಯಾತ ಭಯೋತ್ಪಾದಕರು ಸೇರಿದ್ದಾರೆ ಎಂದು ಡಿಜಿಎಂಒ ತಿಳಿಸಿದ್ದಾರೆ. ನವದೆಹಲಿ:...

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ ಅಂಥದ್ದೇ ಸಂಭವನೀಯ ದುರಂತದಿಂದ ಸಿದ್ಧಾಪುರ ಬಚಾವಾಗಿದೆ. ಸಿದ್ಧಾಪುರದಿಂದ ಸಾಗರ ಗ್ರಾಮೀಣ ಭಾಗದ ಮೂಲಕ ಹೊನ್ನಾಳಿಗೆ ತೆರಳುವ ಖಾಸಗಿ ಬಸ್‌ ಎಂದಿನಂತೆ ಇಂದು ಕೂಡಾ ಮಧ್ಯಾನ್ಹ ೨.೩೦ ರ ಸುಮಾರಿಗೆ...

Recommended For You

About the Author: Kanneshwar Naik

Leave a Reply

Your email address will not be published. Required fields are marked *