

ಇಂದು ಸಿದ್ಧಾಪುರದಲ್ಲಿ ಎರಡು ಸಾವುಗಳು ಸಂಭವಿಸಿದ್ದು ಅವುಗಳಲ್ಲಿ ತಂಡಾಗುಂಡಿ ಪಂಚಾಯತ್ ನ ಮಹಿಳೆಯ ಸಾವು ಕರೋನಾ ಸಾವುಗಳ ಪಟ್ಟಿ ಸೇರಿದ್ದರೂ ವಾಸ್ತವದಲ್ಲಿ ಆ 56 ವರ್ಷದ ಮಹಿಳೆ ಕ್ಯಾನ್ಸರ್ ರೋಗಿಯಾಗಿದ್ದರು.


ಈ ಮಹಿಳೆಯ ಸಾವಿನೊಂದಿಗೆ ಸಿದ್ಧಾಪುರದಲ್ಲಿ ಈ ವರೆಗೆ ಮೂರು ಕರೋನಾ ಸಾವುಗಳಾದಂತಾಗಿದೆ. 300 ಜನ ಕರೋನಾ ಸೋಂಕಿತರಲ್ಲಿ ಈಗ ಚಿಕಿತ್ಸೆಯಲ್ಲಿರುವವರೂ ಸೇರಿ ಪ್ರತಿಶತ 90 ಕ್ಕಿಂತ ಹೆಚ್ಚು ಜನ ಗುಣಮುಖರಾದಂತಾಗಿದೆ.
ಷಣ್ಮುಖ ಮಡಿವಾಳ ಇನ್ನಿಲ್ಲ-
ತಾಲೂಕಿನ ಹೊಸಳ್ಳಿ ಮೂಲದ ಸಿದ್ಧಾಪುರ ನಗರದ ನಿವಾಸಿ, ಜೀವವಿಮಾ ಪ್ರತಿನಿಧಿ ಷಣ್ಮುಖ ಮಡಿವಾಳ ಸೋಮುವಾರ ತಡರಾತ್ರಿ ನಿಧನರಾಗಿದ್ದಾರೆ. ವಿಪರೀತ ಮಧುಮೇಹದ ಕಾರಣ ಹೃದಯಾಘಾತ ಉಂಟಾಗಿದ್ದು ಕಳೆದ ವಾರ ಮಧುಮೇಹದ ಚಿಕಿತ್ಸೆಗಾಗಿ ಮಣಿಪಾಲ ತೆರಳಿದ್ದವರು ನಿನ್ನೆಯಷ್ಟೇ ಮನೆಗೆ ಮರಳಿದ್ದರು.
ರಾತ್ರಿ ಊಟದ ನಂತರ ವಿಪರೀತ ಬೆವರಿದಂತಾಗಿದ್ದ ಷಣ್ಮುಖ ಅರೆಕ್ಷಣದಲ್ಲಿ ಅಸುನೀಗಿದರು. ಪಿಗ್ಮಿ ಸಂಗ್ರಹಕಾರರು, ಕಲ್ಲುಮಾರಾಟಗಾರರು, ಜೀವವಿಮೆ ಪ್ರತಿನಿಧಿಯಾಗಿ ಜನಾನುರಾಗಿಯಾಗಿದ್ದ ಷಣ್ಮುಖ ಮಡಿವಾಳ ನಿಧನಕ್ಕೆ ಅವರ ಆತ್ಮೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
