ನಾಳೆ ಗಾಂಧಿ ಜಯಂತಿ- ನಿಮ್ಮೂರಲ್ಲಿದೆಯಾ ಗಾಂಧಿ ಪ್ರತಿಮೆ, ಗಾಂಧಿ ವೃತ್ತ?

ಶಾಂತಿದೂತ ಗಾಂಧಿ ಜಗತ್ತಿನ ಬೆಳಕು. ಗಾಂಧಿ ಪರಿಚಯಿಸಿ,ಪ್ರತಿಪಾದಿಸಿದ ಸತ್ಯ, ಅಹಿಂಸೆ ಎಂದೆಂದೂ ಪ್ರಸ್ತುತ. ಗಾಂಧಿ ನೆನಪು, ಚಿತ್ರದೊಂದಿಗೆ ಸ್ಮರಣೆಗೆ ಬರುವ ಅವರ ಚಿತ್ರ ಸತ್ಯ, ಶಾಂತಿ,ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಈ ಕಾರಣ, ಮಹತ್ವದ ಕಾರಣಗಳಿಗಾಗಿ ಗಾಂಧೀಜಿಯವರ ವೃತ್ತ- ಮೂರ್ತಿ ಎಲ್ಲೆಡೆ ಕಾಣುವ ಉಪಮೆ.

ಹೊರದೇಶ, ದೇಶ, ರಾಜ್ಯ,ಜಿಲ್ಲೆ, ತಾಲೂಕು,ಗ್ರಾ.ಪಂ. ಮಟ್ಟದ ವರೆಗೆ ಕಾಣುವ ಗಾಂಧಿ ಚಿತ್ರ, ಮೂರ್ತಿ, ವೃತ್ತ ಸಿದ್ಧಾಪುರದಲ್ಲೆಲ್ಲೂ ಕಾಣದಿರುವುದು ಈಗ ಚರ್ಚೆಯ ವಿಷಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಗಾಂಧೀಜಿಯವರ ನೆನಪಿಗಾಗಿ ಕಾರವಾರದ ಗಾಂಧಿಮಾರ್ಗದಲ್ಲಿ, ನಗರದ ವೃತ್ತವೊಂದರಲ್ಲಿ ಗಾಂಧೀಜಿ ಮೂರ್ತಿ ಸ್ಥಾಪಿಸಲಾಗಿದೆ.

1936 ರಲ್ಲಿ ಜಿಲ್ಲೆಗೆ ಬಂದಿದ್ದ ಮಹಾತ್ಮಗಾಂಧೀಜಿಯವರ ಅಹಿಂಸೆ ಪ್ರತಿಪಾದನೆಯ ಶಿರಸಿ ಮಾರಿಕಾಂಬಾ ದೇವಾಲಯದ ಭೇಟಿ, ಅಲ್ಲಿಯ ಕೋಣನ ಬಲಿಗೆ ವಿರೋಧ ವ್ಯಕ್ತಪಡಿಸಿ ಪ್ರಾಣಿವಧೆ ನಿಲ್ಲಿಸಿದ ಮಹಾತ್ಮ ಈಗಲೂ ಶಿರಸಿ ಗಾಡಿಬಿಡ್ಕಿಯಲ್ಲಿ ಅಜರಾಮರ.

ಇದೇ ಮಹಾತ್ಮ ಅಸ್ಪೃಶ್ಯತೆ,ಬಾಲವಿದವೆಯರ ಕೇಶಮಂಡನ ಆಚರಣೆ ವಿರೋಧಿಸಿ ಸಿದ್ಧಾಪುರಕ್ಕೆ ಭೇಟಿ ನೀಡಿದ್ದರು ಎಂದು ಚಾರಿತ್ರಿಕ ದಾಖಲೆಗಳು ಸ್ಫಷ್ಟಪಡಿಸುತ್ತವೆ. ಆದರೆ ಈ ನೆನಪಿಗೆ ಸಿದ್ಧಾಪುರದಲ್ಲಿ ಗಾಂಧಿ ಪ್ರತಿಮೆಯಾಗಲಿ, ಗಾಂಧಿ ವೃತ್ತವಾಗಲಿ ಇಲ್ಲ. ಸಿದ್ಧಾಪುರ ಅಶೋಕ ರಸ್ತೆಯ ಮನೆಯೊಂದಕ್ಕೆ ಮಹಾತ್ಮಗಾಂಧಿ ಭೇಟಿ ನೀಡಿ ಅಲ್ಲಿ ಮಹಾದೇವಿ ತಾಯಿ ಯವರನ್ನು ಭೇಟಿ ಮಾಡಿದ್ದ ಗಾಂಧೀಜಿ ನೆನಪಿಗೆ ರಾಧಾಕೃಷ್ಣ ಹೆಗಡೆ ತಮ್ಮ ಮನೆಯನ್ನು ಹಿಂದಿನಂತೆಯೇ ಉಳಿಸಿಕೊಂಡಿದ್ದಾರೆ. ಅವರೇ ಹೇಳುವ ಪ್ರಕಾರ ಬಹುಹಿಂದೆ ಅವರ ಮನೆಗೆ ಬರುತಿದ್ದ ಪತ್ರಗಳೆಲ್ಲಾ ಗಾಂಧಿವೃತ್ತ ಎನ್ನುವ ವಿಳಾಸದಿಂದ ಬರುತಿದ್ದವಂತೆ ಆದರೆ ಈಗ ಗಾಂಧಿ ನೆನಪಿಸುವವರೇ ಇಲ್ಲ.

ಕೆಲವು ವರ್ಷಗಳ ಕೆಳಗೆ ಇಲ್ಲಿಯ ನಿವೃತ್ತ ನೌಕರರು ಸಿದ್ಧಾಪುರದ ಈಗಿನ ಪಟ್ಟಣ ಪಂಚಾಯತ್ ವೃತ್ತಕ್ಕೆ ಗಾಂಧಿವೃತ್ತ ಎಂದು ನಾಮಕರಣ ಮಾಡಲು ಒತ್ತಾಯಿಸಿದ್ದರು. ಈ ಬಗ್ಗೆ ಪ.ಪಂ. ಗೆ ಮನವಿಯೊಂದನ್ನೂ ನೀಡಿದ್ದರು. ಆದರೆ ಈ ಬೇಡಿಕೆ ಈವರೆಗೆ ಈಡೇರಿಲ್ಲ. ಸಿದ್ಧಾಪುರದಲ್ಲಿ ಗಾಂಧಿ ವೃತ್ತ, ಗಾಂಧಿ ಪ್ರತಿಮೆಗಳಿಲ್ಲದ ಬಗ್ಗೆ ವಿಷಾದಿಸಿರುವ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮತ್ತು ಕಾರ್ಮಿಕ ಮುಖಂಡೆ ಯುಮುನಾ ಗಾಂವ್ಕರ್ ಜನಾಭಿಪ್ರಾಯ, ಗಾಂಧಿ ಮಹತ್ವಕ್ಕೆ ಮನ್ನಣೆ ನೀಡಿ ಅವರ ಹೆಸರಿನ ವೃತ್ತ, ಪ್ರತಿಮೆ ನಿರ್ಮಾಣಮಾಡಬೇಕು ಎಂದು ಸ್ಥಳಿಯ ಆಡಳಿತವನ್ನು ಆಗ್ರಹಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *