![](https://i0.wp.com/samajamukhi.net/wp-content/uploads/2020/10/IMG-20201001-WA0004.jpg?resize=250%2C320&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ವೃತ್ತಿಯಿಂದ ಜವಾನರಾಗಿ ಪ್ರವೃತ್ತಿಯಿಂದ ಸಾಹಿತಿ, ಯಕ್ಷಗಾನ ಪ್ರಸಾದನ ಕಲಾವಿದರಾಗಿ ಹೆಸರುಮಾಡಿದ್ದ ಸಿದ್ಧಾಪುರ ಹಾರ್ಸಿಕಟ್ಟಾದ ವಿಶ್ವನಾಥ ಶೇಟ್ ಇಂದು ನಿಧನರಾಗಿದ್ದಾರೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದರೂ ತಮ್ಮ ಹವ್ಯಾಸ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಶೇಟ್ ಇಂದು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.
![](https://i0.wp.com/samajamukhi.net/wp-content/uploads/2020/10/IMG-20201001-WA0011.jpg?resize=458%2C733&ssl=1)
ಕೊಂಕಣಿಯಲ್ಲಿ ಶ್ರೀರಾಮಚರಿತ ರಚಿಸಿದ್ದ ವಿಶ್ವನಾಥ್ ಶೇಟ್ ಯಕ್ಷಗಾನ ಪಾತ್ರಧಾರಿ, ಪ್ರಸಾದನ ಕಲಾವಿದ, ಸಾಹಿತಿಯಾಗಿ ಪ್ರಸಿದ್ಧರಾಗಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಶಸ್ತಿ-ಪುರಸ್ಕಾರಕ್ಕೆ ಬಾಜನರಾಗಿದ್ದ ವಿಶ್ವನಾಥ್ ಶೇಟ್ ತೀರಾ ಬಡತನದ ಕಾರಣಕ್ಕೆ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ಜವಾನರಾಗಿ ದುಡಿದು ಸೇವಾವಧಿಯಲ್ಲಿ ನಿವೃತ್ತರಾದ ನಂತರ ಕೂಡಾ ಸಾಹಿತ್ಯ ರಚನೆಯಲ್ಲಿ ಕಾಯಾವಾಚಾ ಮನಸಾ ದುಡಿದಿದ್ದರು. ಇವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.
![](https://i0.wp.com/samajamukhi.net/wp-content/uploads/2020/10/IMG-20201001-WA0004.jpg?resize=226%2C289&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)