mahendra thaar spl- ಮಹೇಂದ್ರಾ ಥಾರ್-2020 ರ ಮೊದಲ ವಾಹನ ಮಾರಾಟವಾಗಿದ್ದು ಬರೊಬ್ಬರಿ 1.11 ಕೋಟಿ ರೂ.ಗೆ, ವಿಶೇಷತೆ ಏನು ಗೊತ್ತೇ?

ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. 

First Mahindra Thar 2020 auctioned at Rs 1.11 crore; why is it so special?

ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. 

ಇದೇನು ಈ ವಾಹನದಲ್ಲಿ ಅಂತಹ ವೈಶಿಷ್ಟ್ಯತೆ ಏನಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

 ಮಹೇಂದ್ರ &ಮಹೇಂದ್ರ ಸಂಸ್ಥೆ  ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ 1.1 ಕೋಟಿ ಥಾರ್ 2020 ಯ ಮೊದಲ ಯುನಿಟ್ ನ್ನು ಆನ್ ಲೈನ್ ಹರಾಜಿಗಿಡಲಾಗಿತ್ತು.  ದೇಶಾದ್ಯಂತ 550 ಲೊಕೇಷನ್ ಗಳಿಂದ 5,500 ಎಂಟ್ರಿಗಳು ಬಂದಿತ್ತು. 

ಮೂಲ ಬೆಲೆ 25 ಲಕ್ಷಕ್ಕಿಂತ 4 ಪಟ್ಟು ಹೆಚ್ಚಿನ ಅಂದರೆ 1.11 ಕೋಟಿ ರೂಪಾಯಿಗಳಿಗೆ ದೆಹಲಿಯ ಆಕಾಶ್ ಮೈಂಡಾ ಎಂಬುವವರು ಬಿಡ್ ಮಾಡಿ ಮೊದಲ ಮಹೇಂದ್ರ ಥಾರ್ ವಾಹನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಡಿ ಬಿಡ್ಡಿಂಗ್ ನ ಆದಾಯವನ್ನು ಕೋವಿಡ್-19 ಪರಿಹಾರ ಕಾರ್ಯಕ್ರಮಗಳಿಗೆ ಬಳಕೆ ಮಾಡಲು ಸ್ವೀಕರಿಸುವುದಕ್ಕೆ ಆಕಾಶ್ ಸ್ವದೇಶ್ ಫೌಂಡೇಷನ್ ನ್ನು ಆಯ್ಕೆ ಮಾಡಿದ್ದಾರೆ ಎಂದು ಮಹೇಂದ್ರ ಸಂಸ್ಥೆ ತಿಳಿಸಿದೆ. 

ಒಟ್ಟಾರೆ ಭಾಗಿಯಾಗಿದ್ದ ಬಿಡ್ಡರ್ ಗಳ ಪೈಕಿ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು 37 ಬಿಡ್ಡರ್ ಗಳು ಬಿಡ್ ಮಾಡಿದ್ದರು. ನಾಲ್ವರು 1 ಕೋಟಿಗೂ ಮೀರಿ ಬಿಡ್ ಮಾಡಿದ್ದರು. ಒಟ್ಟಾರೆ ಅತಿ ಹೆಚ್ಚು ಬಿಡ್ ಮಾಡಿದ ಬಿಡ್ಡರ್ ಗಳ ಒಟ್ಟಾರೆ ಮೊತ್ತ 35.70 ಕೋಟಿ ರೂಪಾಯಿಯಾಗಿದೆ. 

ಸೆ.19 ರಂದು ಆನ್ ಲೈನ್ ನೋಂದಣಿ ಪ್ರಾರಂಭವಾಗಿ ಸೆ.24 ರಂದು ಹರಾಜು ಪ್ರಕ್ರಿಯೆ ಪ್ರಾರಂಭವಾಗಿ ಸೆ.29 ರಂದು ಮುಕ್ತಾಯಗೊಂಡಿತ್ತು. ಬಿಡ್ಡರ್ ಗಳ ಪೈಕಿ ಚಿಕ್ಕಮಗಳೂರಿನ ವಿಶ್ವನಾಥ್ ಎಂಬುವವರೂ ಒಬ್ಬರಾಗಿದ್ದರು ಎಂಬುದು ವಿಶೇಷ. 

ಹರಾಜು ಪ್ರಕ್ರಿಯೆಯ ವಿಜೇತರಿಗೆ ಥಾರ್ ಆವೃತ್ತಿಗೆ ಸಂಬಂಧಿಸಿದಂತೆ ಒಂದಷ್ಟು ವಿಶೇಷ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಹರಾಜುಗೊಂಡಿರುವ ಥಾರ್ ಕಾರನ್ನು ಥಾರ್ #1 ಬ್ಯಾಡ್ಜ್ ನೊಂದಿಗೆ ಅಲಂಕರಿಸಲಾಗುತ್ತದೆ ಈ ಮೂಲಕ ಕಾರಿನ ಮಾಲಿಕರು ಥಾರ್ ನ್ನು ಖರೀದಿಸಿದ ಮೊದಲ ವ್ಯಕ್ತಿ ಎಂಬುದನ್ನು ಸೂಚಿಸಲಾಗುತ್ತದೆ. ಅಷ್ಟೇ ಅಲ್ಲದೇ ಮಾಲಿಕರ ಹೆಸರಿನ ಮೊದಲ ಅಕ್ಷರಗಳನ್ನು ಥಾರ್ #1 ಬ್ಯಾಡ್ಜ್ ನೊಂದಿಗೆ ಹಾಕಲಾಗುತ್ತದೆ.  (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *