ಪವಾಡ ಬಯಲಿನಲ್ಲಿ ವಿಜ್ಞಾನದ ಬೆಳಕು ಮತ್ತು ಪ್ರೀತಿಯ ಸನ್ಮಾನ…

ನಿನ್ನೆ ತುಮರಿಯ ಗೋಪಾಲ ಗೌಡ ರಂಗಮಂದಿರ ತುಂಬಿ ತುಳುಕಿತು.

ಒಂದಿಷ್ಟು ಕೌತುಕ..ಮುಂದೇನು ಎಂಬ ಕುತೂಹಲ…ಕಣ್ಣೆದುರೇ ನಡೆದದ್ದು ಸತ್ಯ ಎಂದು ಅಂದುಕೊಳ್ಳುವ ಹೊತ್ತಿಗೆ ಅದರ ವಿರುದ್ಧವಾಗಿ ನಂಬಿದ್ದು ಸುಳ್ಳು ಎಂದು ತರ್ಕಬದ್ಧವಾಗಿ ಬಿಡಿಸುವ ಕ್ರಮ….ನೆರೆದವರ ಚಪ್ಪಾಳೆ.. ಮೆಚ್ಚುಗೆ. ಸಹಮತ ವೇದಿಕೆ ತುಮರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ ಹುಲಿಕಲ್ ನಟರಾಜ್ ಪವಾಡ ಬಯಲು ಮಾಡಿ 3 ಗಂಟೆ ಕಾಲ ಜನರನ್ನು ಹಿಡಿದಿಟ್ಟಿತು.. ಪ್ರಶ್ನೆಯಾಗಿ ಕಾಡಿತು…ಉತ್ತರವಾಗಿ ಹೊಳೆಯಿತು. ಸತ್ಯ ಎಂದು ಒಪ್ಪಿಕೊಳ್ಳುವಂತೆ ವಿಜ್ಞಾನ ಬೆಳಕು ನೆರೆದವರನ್ನು ಆವರಿಸಿತು. ಹೊಸ ತಲೆಮಾರಿನ ಯುವ ಜನತೆ ಸ್ವತಃ ತಾವೇ ಪಾಲ್ಗೊಂಡು ಸತ್ಯದ ಜತೆ ಪವಾದವನ್ನು ಎದುರು ಮಾಡಿದರು.

ತಾರ್ಕಿಕವಾಗಿ ಯೋಚನೆ, ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಎದೆಗಾರಿಕೆ ಎಲ್ಲವನ್ನು ನಟರಾಜ್ ಸರ್ ತಮ್ಮ ಮೊನಚಾದ ಭಾಷೆಯಲ್ಲಿ ವಿವರಿಸಿದರು.ಇದಕ್ಕೂ ಮುನ್ನ ನಡೆದದ್ದು ಸನ್ಮಾನ. ವಯಕ್ತಿಕವಾಗಿ ನಾನು ಮತ್ತು ಪ್ರಸನ್ನ ಕೆರೆಕೈ ವಿರುದ್ಧ ಸಿದ್ದಾಂತ ಮತ್ತು ರಾಜಕೀಯ ಹಾದಿಯಲ್ಲಿ ಇರುವವರು. ತುಮರಿ ಸೇತುವೆ ಹೋರಾಟ ರೂವಾರಿ ಆಗಿ ದ್ವೀಪದ ದ್ವನಿಯಾಗಿದ್ದು ಈಗ ಇತಿಹಾಸ. ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಈಚೆ ವರ್ಷದಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ರಾಜ್ಯದ ಯೋಜನಾ ಆಯೋಗದ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ. ಪಾಲಿಸಿ ಮೇಕಿಂಗ್ ನಲ್ಲಿ ಮಹತ್ವದ ಕೆಲಸ ನಿರ್ವಹಿಸುವ ಆಯೋಗದಲ್ಲಿ ನಮ್ಮ ನೆಲದ ಕೆರೆಕೈ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸುವ ಪ್ರಸ್ತಾಪ ಸಹಮತ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದೆ. ನಿನ್ನೆ ನೆಲದ ನಾಗರಿಕ ಸನ್ಮಾನವನ್ನು ಪ್ರಸನ್ನ ಕೆರೆಕೈ ಗೆ ಸಲ್ಲಿಸಲಾಯಿತು. ಅವರು ಹೆಚ್ಚಿನದನ್ನು ಸಾಧಿಸಲಿ ಎಂಬ ಹಾರೈಕೆ ನಮ್ಮೆಲ್ಲರದೂ…

ನೆಲದ ವಿಚಾರ ಬಂದಾಗ ಪಕ್ಷ, ಜಾತಿ, ಸಿದ್ಧಾಂತ, ವೈಯಕ್ತಿಕ ಭಿನ್ನಾಭಿಪ್ರಾಯ ಎಲ್ಲವನ್ನು ಮೀರುವೆವು ಎಂಬುದು ಸಹಮತ ಆಶಯ ದ್ವನಿಸಿದೆ.ತುಮರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ವಿದ್ಯಾರ್ಥಿಗಳು ಮತ್ತು ಜನ ಮೆಚ್ಚಿದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತ ಇರುವ ವನಜಾಕ್ಷಿ ಯವರು ಮತ್ತು sslc ಮತ್ತು puc ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶುಭ ಕೊರಲಾಯಿತು.

ತಾ ಪಂ ಸದಸ್ಯೆ ಸವಿತಾ ದೇವರಾಜ್ ನಮ್ಮ ಜತೆಗೆ ಇದ್ದರುಹಾರೈಸಿದ ನಿಮಗೆ. ಹುಲಿಕಲ್ ಜತೆಯಾಗಿ ಪ್ರಾಯಾಸ ಪಟ್ಟು ಲಾಂಚ್ ದಾಟಿಸಿ ಸಹಮತಕ್ಕೆ ಜತೆಯಾದ ಗೆಳೆಯ ಪರಮೇಶ್ ಕರೂರು, ವಿಟಿ ಸ್ವಾಮಿ, ಮತ್ತು ಸತ್ಯನಾರಾಯಣ ಖಂಡಿಕಾ, ಅ ನ ಚಂದ್ರಶೇಖರ್ ಗೆ ವಿಶೇಷ ಕೃತಜ್ಞತೆಗಳು. ಹಾಗೂ ಕಾರ್ಯಕ್ರಮ ಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು…ನಿಮ್ಮ ಪ್ರೀತಿ ಸಹಮತ ಮೇಲೆ ಹೀಗೆ ಇರಲಿ. ಆ ಬಲದಲ್ಲಿ ನಾವು ಜನಮುಖಿ ಆಗಿ ಹಣತೆ ಹಚ್ಚುತ್ತೇವೆ…

ಜಿ. ಟಿ ವಿಥ್ ಸಹಮತ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *