ಪವಾಡ ಬಯಲಿನಲ್ಲಿ ವಿಜ್ಞಾನದ ಬೆಳಕು ಮತ್ತು ಪ್ರೀತಿಯ ಸನ್ಮಾನ…

ನಿನ್ನೆ ತುಮರಿಯ ಗೋಪಾಲ ಗೌಡ ರಂಗಮಂದಿರ ತುಂಬಿ ತುಳುಕಿತು.

ಒಂದಿಷ್ಟು ಕೌತುಕ..ಮುಂದೇನು ಎಂಬ ಕುತೂಹಲ…ಕಣ್ಣೆದುರೇ ನಡೆದದ್ದು ಸತ್ಯ ಎಂದು ಅಂದುಕೊಳ್ಳುವ ಹೊತ್ತಿಗೆ ಅದರ ವಿರುದ್ಧವಾಗಿ ನಂಬಿದ್ದು ಸುಳ್ಳು ಎಂದು ತರ್ಕಬದ್ಧವಾಗಿ ಬಿಡಿಸುವ ಕ್ರಮ….ನೆರೆದವರ ಚಪ್ಪಾಳೆ.. ಮೆಚ್ಚುಗೆ. ಸಹಮತ ವೇದಿಕೆ ತುಮರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ ಹುಲಿಕಲ್ ನಟರಾಜ್ ಪವಾಡ ಬಯಲು ಮಾಡಿ 3 ಗಂಟೆ ಕಾಲ ಜನರನ್ನು ಹಿಡಿದಿಟ್ಟಿತು.. ಪ್ರಶ್ನೆಯಾಗಿ ಕಾಡಿತು…ಉತ್ತರವಾಗಿ ಹೊಳೆಯಿತು. ಸತ್ಯ ಎಂದು ಒಪ್ಪಿಕೊಳ್ಳುವಂತೆ ವಿಜ್ಞಾನ ಬೆಳಕು ನೆರೆದವರನ್ನು ಆವರಿಸಿತು. ಹೊಸ ತಲೆಮಾರಿನ ಯುವ ಜನತೆ ಸ್ವತಃ ತಾವೇ ಪಾಲ್ಗೊಂಡು ಸತ್ಯದ ಜತೆ ಪವಾದವನ್ನು ಎದುರು ಮಾಡಿದರು.

ತಾರ್ಕಿಕವಾಗಿ ಯೋಚನೆ, ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಎದೆಗಾರಿಕೆ ಎಲ್ಲವನ್ನು ನಟರಾಜ್ ಸರ್ ತಮ್ಮ ಮೊನಚಾದ ಭಾಷೆಯಲ್ಲಿ ವಿವರಿಸಿದರು.ಇದಕ್ಕೂ ಮುನ್ನ ನಡೆದದ್ದು ಸನ್ಮಾನ. ವಯಕ್ತಿಕವಾಗಿ ನಾನು ಮತ್ತು ಪ್ರಸನ್ನ ಕೆರೆಕೈ ವಿರುದ್ಧ ಸಿದ್ದಾಂತ ಮತ್ತು ರಾಜಕೀಯ ಹಾದಿಯಲ್ಲಿ ಇರುವವರು. ತುಮರಿ ಸೇತುವೆ ಹೋರಾಟ ರೂವಾರಿ ಆಗಿ ದ್ವೀಪದ ದ್ವನಿಯಾಗಿದ್ದು ಈಗ ಇತಿಹಾಸ. ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಈಚೆ ವರ್ಷದಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ರಾಜ್ಯದ ಯೋಜನಾ ಆಯೋಗದ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ. ಪಾಲಿಸಿ ಮೇಕಿಂಗ್ ನಲ್ಲಿ ಮಹತ್ವದ ಕೆಲಸ ನಿರ್ವಹಿಸುವ ಆಯೋಗದಲ್ಲಿ ನಮ್ಮ ನೆಲದ ಕೆರೆಕೈ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸುವ ಪ್ರಸ್ತಾಪ ಸಹಮತ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದೆ. ನಿನ್ನೆ ನೆಲದ ನಾಗರಿಕ ಸನ್ಮಾನವನ್ನು ಪ್ರಸನ್ನ ಕೆರೆಕೈ ಗೆ ಸಲ್ಲಿಸಲಾಯಿತು. ಅವರು ಹೆಚ್ಚಿನದನ್ನು ಸಾಧಿಸಲಿ ಎಂಬ ಹಾರೈಕೆ ನಮ್ಮೆಲ್ಲರದೂ…

ನೆಲದ ವಿಚಾರ ಬಂದಾಗ ಪಕ್ಷ, ಜಾತಿ, ಸಿದ್ಧಾಂತ, ವೈಯಕ್ತಿಕ ಭಿನ್ನಾಭಿಪ್ರಾಯ ಎಲ್ಲವನ್ನು ಮೀರುವೆವು ಎಂಬುದು ಸಹಮತ ಆಶಯ ದ್ವನಿಸಿದೆ.ತುಮರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ವಿದ್ಯಾರ್ಥಿಗಳು ಮತ್ತು ಜನ ಮೆಚ್ಚಿದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತ ಇರುವ ವನಜಾಕ್ಷಿ ಯವರು ಮತ್ತು sslc ಮತ್ತು puc ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶುಭ ಕೊರಲಾಯಿತು.

ತಾ ಪಂ ಸದಸ್ಯೆ ಸವಿತಾ ದೇವರಾಜ್ ನಮ್ಮ ಜತೆಗೆ ಇದ್ದರುಹಾರೈಸಿದ ನಿಮಗೆ. ಹುಲಿಕಲ್ ಜತೆಯಾಗಿ ಪ್ರಾಯಾಸ ಪಟ್ಟು ಲಾಂಚ್ ದಾಟಿಸಿ ಸಹಮತಕ್ಕೆ ಜತೆಯಾದ ಗೆಳೆಯ ಪರಮೇಶ್ ಕರೂರು, ವಿಟಿ ಸ್ವಾಮಿ, ಮತ್ತು ಸತ್ಯನಾರಾಯಣ ಖಂಡಿಕಾ, ಅ ನ ಚಂದ್ರಶೇಖರ್ ಗೆ ವಿಶೇಷ ಕೃತಜ್ಞತೆಗಳು. ಹಾಗೂ ಕಾರ್ಯಕ್ರಮ ಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು…ನಿಮ್ಮ ಪ್ರೀತಿ ಸಹಮತ ಮೇಲೆ ಹೀಗೆ ಇರಲಿ. ಆ ಬಲದಲ್ಲಿ ನಾವು ಜನಮುಖಿ ಆಗಿ ಹಣತೆ ಹಚ್ಚುತ್ತೇವೆ…

ಜಿ. ಟಿ ವಿಥ್ ಸಹಮತ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *