ನಾಟ್ಯ ವಿನಾಯಕನಿಗೆ ಸಂಕಷ್ಟ ಹರ ರಥ ಸಮರ್ಪಣೆ,ಸಂಗೀತ ಅಭ್ಯಾಸ ಬೈಟಕ್ ಪ್ರಾರಂಭ

ಸಿದ್ದಾಪುರ: ತಾಲೂಕಿನ ಇಟಗಿ ಕಲಗದ್ದೆಯ ಯಕ್ಷಗಾನ ಶ್ರೀ ನಾಟ್ಯ ವಿನಾಯಕ
ದೇವರಿಗೆ ಸಂಕಷ್ಟ ಹರ ರಥ ಸಮರ್ಪಣಾ ಸಮಾರಂಭ ಧಾರ್ಮಿಕ ವಿಧಿ
ವಿಧಾನಗಳ ಮೂಲಕ ಸೋಮವಾರ ಜರುಗಿತು.
ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು
ಇನ್ನು ಮುಂದೆ ಪ್ರತೀ ಸಂಕಷ್ಟಿಗೆ ಸಂಕಷ್ಟ ಹರ ರಥೋತ್ಸವ ನಡೆಯಲಿರುವ
ಶ್ರೀದೇವರ ನೂತನ ರಥ ಎಳೆಯುವ ಮೂಲಕ ಭಗವಂತನಿಗೆ ಅರ್ಪಣೆ
ಮಾಡಿದರು. ಬಳಿಕ ಮಾತನಾಡಿದ ಅವರು,

ಭಾರತೀಯ ಸಂಪ್ರದಾಯಗಳನ್ನು
ಉಳಿಸಿ ಬೆಳಸಿಕೊಂಡು ಹೋಗಬೇಕು. ಅದರಲ್ಲಿ ಸಾಧನೆ ಮಾಡಬೇಕು. ಕಲಗದ್ದೆ
ಅನೇಕ ಕಾರಣಕ್ಕೆ ಗಮನ ಸೆಳೆಯುತ್ತಿದೆ ಎಂದು ಹೇಳಿದರು.
ಸಾಮಾಜಿಕ ಮುಖಂಡ ಡಾ. ಶಶಿಭೂಷ ಹೆಗಡೆ ದೊಡ್ಮನೆ, ದೇವತಾ
ಕಾರ್ಯಗಳನ್ನು ಹೆಚ್ಚೆಚ್ಚು ನಡೆಸುವ ಮೂಲಕ ಇದೊಂದು ಯಾತ್ರಾ
ಸ್ಥಳವಾಗಿದೆ ಎಂದರು. ದೇವಾಲಯದ ಪೂಜಾ ವಿಧಾನ ಪುಸ್ತಕದ
ಸಮರ್ಪಣೆಯನ್ನು ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ಪುಟ್ಟನಮನೆ
ಪರಮೇಶ್ವರ ಭಟ್ಟ ನಡೆಸಿಕೊಟ್ಟರು.

ಧಾರವಾಡ ಹಾಲು ಒಕ್ಕೂಟ ನಿರ್ದೇಶಕ
ಸುರೇಶ್ಚಂದ್ರ ಹೆಗಡೆ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಹೆಗಡೆ
ಬಾಳೇಗದ್ದೆ, ರಥ ನಿರ್ಮಾಣ ಮಾಡಿದ ಡಿ.ಡಿ.ಶೇಟ್ ಕುಮಟಾ, ವಿದ್ವಾನ್ ಕೃಷ್ಣ
ಭಟ್ಟ ಅಡವಿತೋಟ, ಅಗ್ಗೆರೆ ಮಹೇಶ ಭಟ್ಟ ಸೇರಿದಂತೆ ಇತರರು
ಪಾಲ್ಗೊಂಡರು.

ದೇವಾಲಯದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ, ರಷ್ಮಿ
ಹೆಗಡೆ ದಂಪತಿಗಳು ಯಜಮಾನತ್ವ ವಹಿಸಿದ್ದರು. ವಿವಿಧ ಧಾರ್ಮಿಕ
ಕಾರ್ಯಕ್ರಮಗಳು ಗೋಕರ್ಣ ಹಾಗೂ ಸ್ಥಳೀಯ ವೈದಿಕರ ನೇತೃತ್ವದಲ್ಲಿ
ನಡೆಯಿತು.

ಸುಷಿರ ಸಂಗೀತ ಪರಿವಾರ, ಸಂಸ್ಕೃ ತಿ ಸಂಪದ ಸಾಂಸ್ಕೃತಿಕ ಸಂಘಟನೆಗಳಿಂದ
ಸಂಗೀತ ಅಭ್ಯಾಸ ಬೈಟಕ್ ಪ್ರಾರಂಭ
ಸಿದ್ದಾಪುರ. ಸಾಂಸ್ಕೃ ತಿಕ ಚಟುವಟಿಕೆಗಳ ಕೇಂದ್ರವಾಗಿರುವ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಸಂಗೀತ ಅಭ್ಯಾಸ ಬೈಟಕ್ ಎನ್ನುವ ಹೊಸಕಾರ್ಯಕ್ರಮವೊಂದು ರವಿವಾರ ಪ್ರಾರಂಭಗೊಂಡಿತು. ಸುಷಿರ ಸಂಗೀತ ಪರಿವಾರ ಭುವನಗಿರಿ, ಮತ್ತು ಸಂಸ್ಕೃತಿ ಸಂಪದ ಈ ಎರಡು ಸಂಘಟನೆಗಳ ಸಹಯೋಗದಲ್ಲಿ ಈ ವಿನೂತನ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದು ಸಂಗೀತ ಅಭಿರುಚಿ ನಿರಂತರಗೊಳಿಸಲು ಈ ಕಾರ್ಯಕ್ರಮ ರೂಪಗೊಂಡಿದೆ. ಮುಂದೆ ವಾರಕ್ಕೊಮ್ಮೆ ಏರ್ಪಡಿಸಲಾಗುವ ಈ ಕಾರ್ಯಕ್ರಮದ ಮೊದಲ ಪ್ರಯೋಗ ರವೀಂದ್ರ ಹೆಗಡೆ ಇಳಿಮನೆ (ಬೆಂಗಳೂರು) ಇವರ ಶಾಸ್ತ್ರೀಯ ಸಂಗೀತದೊಂದಿಗೆ ಪ್ರಾರಂಭಗೊಂಡಿತು.

ಕಾರ್ಯಕ್ರಮವನ್ನು ರಾಗ ಮಾರವಾ ದಿಂದ ಪ್ರಾರಂಭಿಸಿ, ರಾಗ ದೇಸ್ ಹಾಗೂ ಭಜನ್ ಗಳೊಂದಿಗೆ ಮುಂದುವರಿಸಿ ರಾಗ ಬೈರವಿಯಲ್ಲಿ ಸಂಪನ್ನಗೊಳಿಸಲಾಯಿತು. ಬಾಜರೆ ಮುರಳಿಯ ಬಾಜೆ ಭಜನ್ ಗೆ ಪಂ.ರವೀಂದ್ರ ಹೆಗಡೆ ಯವರೊಂದಿಗೆ ಪಂ. ಪ್ರಕಾಶ ಹೆಗಡೆ ಕಲ್ಲಾರೆಮನೆಯವರ ಕೊಳಲು ಸೇರಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು. ಡಾ. ಸಮೀರ ಬಾದ್ರಿಯವರ ಹಾರ್ಮೋನಿಯಂ ಸಾತ್ ಹಾಗೂ ನಿತಿನ್ ಹೆಗಡೆ ಕಲಗದ್ದೆ, ಶಶಾಂಕ ಹೆಗಡೆ ಹಿತ್ತಲಕೈ ತಬಲಾಸಾತ್ ನೀಡಿದರು. ಕರೋನಾ ಹಿನ್ನೆಲೆಯಲ್ಲಿ ಅತಿಕಡಿಮೆ ಪ್ರೇಕ್ಷಕರು ಮಾಸ್ಕ ಧರಿಸಿ ಸಾಮಾಜಿಕ ಅಂತರದೊಂದಿಗೆ ಪಾಲ್ಗೊಂಡಿದ್ದರು. ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಟಿ.ಜಿ.ಹೆಗಡೆ ಸ್ವಾಗತಿಸಿ, ವಂದಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *