ವಾ… ವ್ ಏಕಾಂಗಿಯಾಗಿ ಹೊರಡು……

ಮನಸೇ ನನ್ನ ಮನಸೇ……..ಅಪ್ಪ ಸಣ್ಣವ ಇರುವಾಗ ಒಂದು ದಿನ ಕೂರಿಸಿ ಹೇಳಿದರು ” ಕಾಲಹರಣ ಮಾಡಬೇಡ, ಕ್ಷಣ ಕ್ಷಣವೂ ಸಾವಿಗೆ ಹತ್ತಿರ ಆಗುತ್ತ ಇರುತ್ತೇವೆ “. ಆ ಮಾತು ನನ್ನ ಎಷ್ಟು ಆಳಕ್ಕೆ ಇಳಿದಿದೆ ಎಂದರೆ ಆವತ್ತಿನಿಂದ ನಾ ಎಲ್ಲೂ ನಿಂತಿಲ್ಲ. ಪಾದರಸ ತರ ಇರಬೇಕು ಅಂತ ಸಹಮತ ಸ್ನೇಹಿತರ ಜತೆ ಆಗಾಗ ಹೇಳುತ್ತಾ ಇರುವೆ.

ನಿಜ ಹಾಗೆ ಬದುಕುವುದು ನನಗೆ ಇಷ್ಟ..ಅದು ನನ್ನ ಜೀವನ ಕ್ರಮವೇ ಆಗಿದೆ. ಮನಸು ಜಂಗಮ ಆಗಿಸುತ್ತಾ ಬದುಕಿನ ಚಕ್ರ ತಿರುಗುತ್ತಿದೆ. ಓದು..ಬರಹ..ರಾಜಕೀಯ.. ಪತ್ರಿಕಾ ರಂಗ… ನಾಟಕ.. ಕೃಷಿ…ಮಾತು…ಹೀಗೆ. ಎಲ್ಲವೂ ಪ್ರೀತಿ ಸುತ್ತಾ ಇದೆ.ಎಷ್ಟೋ ಬಾರಿ ನಡೆಯುವ ಹಾದಿ ಸವಾಲಿನದೆ ಆಗಿರುತ್ತೆ, ಹೆದರಿಕೆ ಎಂಬ ಪದ ನನ್ನಿಂದ ಬಹಳ ದೂರ ಇದೆ. ಪಟ್ಟು ಹಾಕಿ ಸ್ಪರ್ಧೆ ಮಾಡುವುದು ನನಗೆ ಇಷ್ಟ. ಅಪ್ಪ ನನಗೆ ಸುಳ್ಳಿನ ವಂಚನೆ ಕಲಿಸಿಲ್ಲ. ಅದೇ ಕಾರಣಕೆ ಗೋಸುಂಬೆತನ ಹತ್ತಿರ ಸುಳಿದಿಲ್ಲ. ಒಂದು ನಿಲುವಿನ ಪರ ನಿಂತರೆ ಅಲ್ಲಿ ಗಟ್ಟಿ ನಿಲ್ಲುವ ಸ್ವಭಾವ ಬಂದಿದೆ. ಇಬ್ಬಂದಿತನದ ಚಮಚಗಿರಿ ರೂಢಿಸಿಕೊಳ್ಳದ ಕಾರಣ ಮನಸು ನಿಷ್ಠುರವಾಗಿ ಯೋಚನೆ ಮಾಡುತ್ತದೆ. ಇದೇ ಕಾರಣಕ್ಕೆ ನ್ಯಾಯ ಪ್ರಜ್ಞೆ ತಳಹದಿಯಲ್ಲಿ ಆಲೋಚನೆ ರೂಪುಗೊಳ್ಳುತ್ತವೆ.

ಆದರೆ ಇದು ಕಷ್ಟದ ಹಾದಿ. ಆದರೆ ತುಂಬಾ ದೊಡ್ಡ ಮಹತ್ವಾಕಾಂಕ್ಷೆ ಇಲ್ಲದೆ ಸಾಗಿರುವ ಬದುಕಿನ ಈ ಹಾದಿ ನನ್ನನ್ನು ಸಾಧನೆಯ ಮೆಟ್ಟಿಲು ಏರಿಸಿದೆ. ಇವೆಲ್ಲವಕ್ಕೂ ಕಾರಣ ಈ ಮನಸು. ನನ್ನ ಮನಸ್ಸಿನ ರಚನಾ ಕ್ರಮ ಮತ್ತು ಅದು ಸದಾ ಉತ್ಸಾಹ ದ ಚಿಲುಮೆಯಾಗಿ ಹರಿಯುವ ರೀತಿಯೇ ಜೀವ ಚೈತನ್ಯ. ಅದೆಷ್ಟು ಬಾರಿ ಒಂಟಿಯಾಗಿದೆ ಈ ಮನಸು.

ಅಕ್ಕನ ಮಗಳು ಭವ್ಯ ತೀರಿ ಹೋದಾಗ, ಎಸ್ ಎಸ್ ಎಲ್ ಸಿ. ಪರೀಕ್ಷೆ ಫೇಲ್ ಆದಾಗ, ಅಪರಾಧಿ ಆಗಿ ಅಧಿಕಾರಿ ಮುಂದೆ ನಿಂತಾಗ, ಅವಳು ಎಲ್ ಬಿ ಕಾಲೇಜಿನ ಮೈದಾನದಲ್ಲಿ ಪ್ರೇಮ ನಿರಾಕರಿಸಿ ಗಳಗಳನೆ ಅತ್ತಾಗ, ಮುಂದೆ ಪ್ರೇಮಿಸಿದ ಹುಡುಗಿ ಹೊರಟು ಹೋದಾಗ. ಮಿತ್ರರೇ ಶತ್ರುಗಳಾದಾಗ, ವಂಚನೆಗೆ ಒಳಗಾದಾಗ…..

ಹೀಗೆ ಹೀಗೆ ನೂರಾರು ಬಾರಿ. ಶೂನ್ಯ ಮಾತ್ರ ಎದುರಿದ್ದು ಕತ್ತಲು ಸುರಿದಾಗ ಅಕ್ಷರಶಃ ಒಂಟಿಯಾಗಿರುವೆ. ತಬ್ಬಲಿತನದಲ್ಲಿ ಮನಸು ನೋವುಂಡು ಬಿಕ್ಕಿದೆ. ಆದರೆ….. ಒಮ್ಮೆಯೂ ಸಾಕು ಅಂದಿಲ್ಲ. ಹೌದು ಮನಸೇ ತಾನೇ ಹೇಳೋದು ಸಾಕು ಬದುಕು ಅಂತ. ದೇಹದೊಳಗಿನ ಜೀವ ಹಾರಿ ಹೋಗಿ ಸತ್ತು ಬಿಟ್ಟರೆ ಸುಖವಿದೆ ಎಂದು ವಾದ ಮಾಡಿ ಗೆಲ್ಲುವುದು ಮನಸೇ ತಾನೆ?

ಹಾಗೆ ನಾವು ನೆಗೆಟಿವ್ ಯೋಚನೆಗಳಿಗೆ ಸೋತಾಗಲೇ ಕೊರಳಿಗೆ ಹಗ್ಗ, ನಿದ್ದೆಮಾತ್ರೆ, ವಿಷದ ಬಾಟಲು ಇನ್ನೂ ಏನೇನೋ ದಾರಿ ತೆರೆಯುವುದು. ಆತ್ಮಹತ್ಯೆ ಬಗ್ಗೆ ಯೋಚಿಸುವುದು. ಖಾಲಿತನವನ್ನು ತುಂಬಲು ಆಗದ ಮನಸು ಮಾತ್ರ ಹಾಗೆ ಯೋಚಿಸತ್ತೆ. ಅದೊಂದು ಸರಣಿ ನೆಗೆಟಿವ್ ಆಲೋಚನೆಯ ಅಂತಿಮ ಆಘಾತ. ನಿಜ… ಎಷ್ಟೋ ಬಾರಿ ಮನಸು ಆಯಾಸ ಆಗುತ್ತದೆ. ಅದರಲ್ಲೂ ಅತಿ ಕ್ರಿಯಾಶೀಲವಾಗಿ ಜಂಗಮ ಆಗಿಸಿಕೊಂಡ ಮನಸುಗಳಂತೂ ಕೆಲವೊಮ್ಮೆ ತುಂಬಾ ಹಠ ಮಾಡುತ್ತವೆ. ಒಂದು ದೊಡ್ಡ space ಸೃಷ್ಟಿಯಾಗಿ ಜಿಜ್ಞಾಸೆಗಳ ಒಡ್ಡೋಲಗ. ಏನೂ ಯೋಚಿಸದೇ ವಾಸ್ತವದ ಜತೆ ಒಂದಿಷ್ಟು ಕಾಲ ಇದ್ದು ಬಿಡುವುದು ನಾವು ಕಲಿತಿಲ್ಲ. ಮನಸ್ಸಿಗೂ ಅದನ್ನೂ ಕಲಿಸಿಲ್ಲ. ಹಾಗೆ ಮನಸು ನಿಧಾನ ಆದಾಗ ಕೊಂಚ ಮುನಿಸಿಕೊಂಡಾಗ ಅದನ್ನು ನಿರ್ವಹಣೆ ಮಾಡುವ ಕಲೆಯೇ ಒಂದು ಸವಾಲಿನದು. ಪಾಸಿಟಿವ್ ಆಲೋಚನೆ ಮಾಡುವುದು ಆಮೇಲೆ ನೆಗೆಟಿವ್ ಆಲೋಚನೆ ನಮ್ಮನ್ನು ಬಂಧಿಸದ ಹಾಗೆ ಎಚ್ಚರವಿಟ್ಟು ನಿರ್ವಾತದಿಂದ ಮುಂದಕ್ಕೆ ಸಾಗುವ ಕ್ಷಣ ಇದೆಯಲ್ಲ ಅಲ್ಲಿ ನಾವು ಮಾತ್ರ ಇರುತ್ತೇವೆ. ಒಂಟಿಯಾಗಿ. ನಮ್ಮ ಅಧಿಕಾರ ಹೆಸರು ದುಡ್ಡು ಆಸ್ತಿ ಯಾವುದೂ ಇರುವುದಿಲ್ಲ. ಏಕಾಂಗಿಯಾಗಿ ನಿರ್ವಾತವನ್ನು ದಾಟುವುದನ್ನ ಮನಸಿಗೆ ಕಲಿಸಿಬಿಟ್ಟರೇ…..

.ವಾಹ್….ಗೆದ್ದು ಬಿಡುತ್ತೇವೆ. ನಮ್ಮೊಳಗೆ ನಾವು. ಅಲ್ಲಿ ನಮ್ಮನ್ನು ಬೆನ್ನು ತಟ್ಟುವವರು ಯಾರೂ ಇರಲ್ಲ. ನಮಗೆ ನಾವೇ. ಆ ಗೆದ್ದ ಸಂತಸ ಒಳಗೆ ಉಳಿದರೆ ಕೆಟ್ಟ ಕಾಲ ಎನ್ನುವ ಯಾವ ಕಾಲವೂ ನಮ್ಮನ್ನು ನಮ್ಮೊಳಗೆ ಸೋಲಿಸದು. ನಾನು ಎಷ್ಟೋ ಬಾರಿ ಏಕಾಂಗಿ ಆಗಿರುವೆ. ಒಂಟಿ ಆಗಿಲ್ಲ. ಈಚೆಯ ತಿಂಗಳಲ್ಲಿಯೇ ಅಧಿಕಾರ ಮುಗಿದಾಗ, ಮೀಸಲಾತಿ ವಂಚಿತ ಆದಾಗ ದುಃಖ ಆಗಿದೆ. ಕೆಲವೊಮ್ಮೆ ನನ್ನದೇ ಆದ ಒಳ ಲೋಕದ ಕಾರಣಕ್ಕೂ ನೋವಾಗಿದೆ. 2020 ರಲ್ಲಿ ತುಂಬಾ ಆತ್ಮೀಯರು ಅಗಲುತ್ತಾ ಇದ್ದಾರೆ. ಸವಾಲು ಸದಾ ಕಾಲ ಜತೆ ಇದೆ. ಅದು ನನ್ನ ಬಿಟ್ಟು ಹೋಗಲ್ಲ. ಈಗಲೂ ಕೇಳುತ್ತಾರೆ ಆಪ್ತರು… ಮುಂದೇನು…?

ನನ್ನ ಉತ್ತರ “ನಿರ್ಧರಿಸಿಲ್ಲ”. ನಿಜ… ನಿರ್ಧಾರಕ್ಕೆ ಬಾರದ ಸಮಯ ಇರುತ್ತದಲ್ಲ ಅದೇ ನನ್ನೊಳಗಿನ ಅನುಸಂಧಾನದ ಸಮಯ. ನನ್ನೊಳಗೆ ಅಲ್ಲ ಪ್ರತಿಯೊಬ್ಬರ ಒಳಗೆ. ಏಕಾಂಗಿಯಾಗಿ ಇರಬೇಕಾದ ಮತ್ತು ಹೊರಡಬೇಕಾದ ಹೊತ್ತು ಅದು. ಇಂತಹ ಹೊತ್ತಿನಲ್ಲಿ ನಾನು ಗಿರೀಶ್ ಹಂದಲಗಿ ಬರೆದು ನಾದ ಹಾಡಿರುವ, ಪ್ರಶಾಂತ ಸಾಗರ ಮತ್ತು ಗೆಳೆಯರು ಛಾಯಾಗ್ರಹಣ ಮತ್ತು ಸಂಕಲಿಸಿರುವ ಅನಿಕೇತನ ಸಂಸ್ಥೆ ಬಿಡುಗಡೆ ಮಾಡಿರುವ ಈ ಹಾಡು ಕೇಳಿಸಿಕೊಳ್ಳುವೆ…..ಮನಸಿಗೆ ಏನೋ ಹಿತ…. ನಾಳೆಯ ನೋಟ ತೆರೆದುಕೊಳ್ಳುತ್ತದೆ.ಹಾಡೇ ಹಾದಿಯ ತೆರೆಯಿತು ಎಂಬುವ ಹಾಗೆ…….

..ಜಿ. ಟಿ ಸತ್ಯನಾರಾಯಣ ಕರೂರು. https://www.facebook.com/100023623211213/videos/787006215430145/

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *