a school teacher,s story-ಮಾರುತಿ ಪ್ರತಾಪ-

https://www.youtube.com/watch?v=TL8xT2FlaMQ&t=240s

ನಾವೆಲ್ಲಾ ಅಪಾರ ಕನಸುಗಳೊಂದಿಗೆ ಕಾಲೇಜು ಸೇರಿ, ಹಾಸ್ಟೇಲ್ ಕೂಡಿಕೊಂಡ ಸಂದರ್ಭವದು. ಒಂದು ರವಿವಾರದ ದಿನ ವಾರದ ಸ್ವಚ್ಛತೆ ನಡೆಯುತಿದ್ದ ಸಂದರ್ಭದಲ್ಲಿ ಒಂದು ಮಾರಾಮಾರಿಯೇ ನಡೆದು ಹೋಯಿತು. ನಮ್ಮ ಸ್ನೇಹಿತ ಅಂದಿನ ಹಿರಿಯ ಸಂಗಾತಿ ರಾಜೇಶ್ ಎನ್ನುವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಮುಖ ಮೂತಿ ನೋಡದೆ ಇಕ್ಕಿ ಬಿಟ್ಟಿದ್ದ. ಆತ ಭಯದಿಂದ ನಡುಗುತ್ತಾ ಮಾರುತಿಯನ್ನು ಹುಡುಕುತಿದ್ದಾಗ ಮಾರಿತಿ ಥೇಟ್ ಈಗಿನ ದುನಿಯಾ ವಿಜಯ್ ರೀತಿ ಕೆಂಗಣ್ಣಿನಿಂದ ನೋಡುತ್ತಾ ನಾನು ಮಾಡಿದ್ದು ತಪ್ಪಾ? ಎಂದು ಮೌನವಾಗೇ ಪ್ರಶ್ನಿಸುತಿದ್ದ.
ಬಹುಶ: ನಮ್ಮ ಅವಧಿಯಲ್ಲಿ ಹೊಸ ವಿದ್ಯಾರ್ಥಿಯೊಬ್ಬ ಹಿರಿಯ ವಿದ್ಯಾರ್ಥಿಗೆ ಒದೆ ಕೊಟ್ಟದ್ದು ಅದೇ ಮೊದಲು ನಂತರ ಮಾರುತಿ ಮಿ.ಬ್ರೇವ್ ಎನಿಸಿಕೊಂಡ.

ಈ ಪ್ರಕರಣವಾಗಿ ಆರೋ, ಹತ್ತಹನ್ಹೆರಡು ತಿಂಗಳು ಕಳೆದಿರಬೇಕು. ಗ್ಯಾಸ್ ಕಾಲೇಜಿನ ವಾರ್ಷಿಕೋತ್ಸವ, ಯುವಜನೋತ್ಸವ, ಯೂಥ್ ಫೆಸ್ಟಿವಲ್ ಥರದ ಕಾರ್ಯಕ್ರಮ, ನಮ್ಮ ಕ್ರೀಯಾಶೀಲತೆ, ಮನೋರಂಜನಾ ಕಾರ್ಯಕ್ರಮಗಳಿಂದ ಅಸೂಯೆ ಪಟ್ಟಿದ್ದ ಸ್ಥಳಿಯ ವಿದ್ಯಾರ್ಥಿಗಳ ತಂಡ ನಮ್ಮನ್ನು ಹೀಯಾಳಿಸಿ ಅವಮಾನ ಮಾಡಲು ಹವಣಿಸಿತ್ತು. ಇದು ರಗಳೆ, ಗಲಾಟೆಯಾಗಿ ಕೊನೆಗೆ ರಾತ್ರಿ ವೇಳೆ ಆ ಪುಂಡರ ಗುಂಪು ನಮ್ಮ ವಸತಿ ನಿಲಯಕ್ಕೆ ಕುಡಿದು ಬಂದು ಖ್ಯಾತೆ ತೆಗೆದಾಗ ಜಗಳವಾಗಿ ನಮ್ಮ ಸಮಯಪ್ರಜ್ಞೆಯಿಂದಾಗಿ ಆ ಪುಂಡರ ತಂಡ ಪೊಲೀಸ್ ವಶವಾಯಿತು.

ಈ ಜಗಳದ ಅವಧಿಯಲ್ಲಿ ಮಾರುತಿಗೆ ಬಿದ್ದ ಒಂದು ಏಟಿನಿಂದಾಗಿ ಅವನ ಕಿವಿಯ ಪೊರೆ ಹರಿದು ಕಿವಿಗೆ ಹಾನಿಯಾಗಿತ್ತು. ಒಂದು ಕಿವಿಕೇಳದ ಮಾರುತಿಯನ್ನು ನಾನೇ ಶಿರಸಿ ಆಸ್ಫತ್ರೆಗೆ ಒಯ್ದು ನಮ್ಮ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದು ಮಾರುತಿಯ ಬನವಾಸಿಗೆ ಕಳುಹಿಸಿಕೊಟ್ಟಿದ್ದೆ. ಇಲ್ಲೆಲ್ಲೂ ಧೃತಿಗೆಡದ ಮಾರುತಿ ನಂತರ ಟಿ.ಸಿ.ಎಚ್. ಓದಿ ಮತ್ತೆ ಪದವಿಗಾಗಿ ನಮ್ಮ ಹಾಸ್ಟೇಲ್ ಸೇರಿಕೊಂಡಿದ್ದಾಗ ಆತ ನಮ್ಮ ಜೂನಿಯರ್! ಆಗಿದ್ದ ಆದರೆ ಬುದ್ಧನಂತೆ ಉಪದೇಶಿಸುವ ಎಳೆಪ್ರಬುದ್ಧನಾಗಿದ್ದ.

ಇದಕ್ಕಿಂತ ಮೊದಲು ನಿರೀಕ್ಷಿಸಿ ದಷ್ಟು ಪರೀಕ್ಷೆ ಸರಿಯಾಗಿ ಬರೆಯದ ತಪ್ಪಿಗೆ ಶಿಕ್ಷಣವನ್ನೇ ಬಿಡುತ್ತೇನೆಂದು ಪರೀಕ್ಷೆ ಬಿಟ್ಟು ಊರಿಗೆ ಹೋಗುವ ತಯಾರಿಸಿ ನಡೆಸಿದ್ದ, ನಂತರ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ಪರೀಕ್ಷೆ ಬರೆದು ನಮ್ಮ ಕ್ಲಾಸಿಗೆ ಎರಡನೇ ರ್ಯಾಂಕ್ ಬಂದಿದ್ದ, ಆ ನಂತರ ಆತ ಶಿಕ್ಷಕರ ತರಬೇತಿಗೆ ತೆರಳಿದ್ದು.

ಇಂಥ ಮಾರುತಿ ಉತ್ತಮ ಮಾರ್ಗದರ್ಶನ, ಅನುಕೂಲ, ಅವಕಾಶ ದೊರೆತಿದ್ದರೆ ಕೇಂದ್ರ ಲೋಕಸೇವಾ ಆಯೋಗ, ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಹಿರಿಯ ಅಧಿಕಾರಿಯಾಗುತಿದ್ದನೇನೋ? ಆದರೆ ಆತ ಅನಿವಾರ್ಯವಾಗಿ ಶಿಕ್ಷಕನಾದ,ಶಿಕ್ಷಣ ಕ್ಷೇತ್ರದಲ್ಲಿ 30-40 ವರ್ಷಗಳ ವರೆಗೆ ಮಾಡುವ ಸೇವೆಯ ಪ್ರಮಾಣದ ಸೇವೆ, ಸಾಧನೆಯನ್ನು ಕಾಲು ಶತಮಾನದಲ್ಲೇ ಮಾಡಿದ. ಈತ ಮಾರುತಿ ಉಪ್ಪಾರ.

ಟೆಂಟ್ ಶಾಲೆ, ಸ್ಕೌಟ್ & ಗೈಡ್ಸ್ ಸೇರಿದಂತೆ ಪ್ರಾಮಾಣಿಕ ಶಿಕ್ಷಕ ಪರಿಶ್ರಮದಿಂದ ಮಾಡುವ ಬದ್ಧತೆಯ ಪ್ರಾಮಾಣಿಕ ಕೆಲಸವನ್ನು ಮಾಡಿರುವ ಮಾರುತಿ ಬನವಾಸಿ ಭಾಗ ಸೇರಿದಂತೆ ತಾಲೂಕು, ಜಿಲ್ಲೆ, ರಾಜ್ಯದಲ್ಲೇ ವಿಭಿನ್ನ ಶಿಕ್ಷಕ ಎನ್ನುವ ಹೆಗ್ಗಳಿಕೆ ಹೋದಿದ್ದಾನೆ. ಈ ಮಾರುತಿ ಉಪ್ಪಾರ ನಮ್ಮ ಸಂದರ್ಶನದಲ್ಲಿ ಮಾತನಾಡಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಕೆಲಸ ಮಾಡಿರುವ ಸಾಧಕ. ಅವನ ಬಗ್ಗೆ ಬರೆದದ್ದೂ ಅವನಿರುವ ಗುಣಮಟ್ಟದ ಪ್ರತಿಶತ10 ಕ್ಕಿಂತ ಕಡಿಮೆ ಅಂಶ,ವಿಚಾರ. ಅವನಿಗೆ ಶುಭ- ಕೋರಿ ಅಭಿನಂದಿಸಲು ಈ ಪುಟ್ಟ ಅನುಭವದ ಬರಹ. -ಕನ್ನೇಶ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *