a school teacher,s story-ಮಾರುತಿ ಪ್ರತಾಪ-

https://www.youtube.com/watch?v=TL8xT2FlaMQ&t=240s

ನಾವೆಲ್ಲಾ ಅಪಾರ ಕನಸುಗಳೊಂದಿಗೆ ಕಾಲೇಜು ಸೇರಿ, ಹಾಸ್ಟೇಲ್ ಕೂಡಿಕೊಂಡ ಸಂದರ್ಭವದು. ಒಂದು ರವಿವಾರದ ದಿನ ವಾರದ ಸ್ವಚ್ಛತೆ ನಡೆಯುತಿದ್ದ ಸಂದರ್ಭದಲ್ಲಿ ಒಂದು ಮಾರಾಮಾರಿಯೇ ನಡೆದು ಹೋಯಿತು. ನಮ್ಮ ಸ್ನೇಹಿತ ಅಂದಿನ ಹಿರಿಯ ಸಂಗಾತಿ ರಾಜೇಶ್ ಎನ್ನುವ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಮುಖ ಮೂತಿ ನೋಡದೆ ಇಕ್ಕಿ ಬಿಟ್ಟಿದ್ದ. ಆತ ಭಯದಿಂದ ನಡುಗುತ್ತಾ ಮಾರುತಿಯನ್ನು ಹುಡುಕುತಿದ್ದಾಗ ಮಾರಿತಿ ಥೇಟ್ ಈಗಿನ ದುನಿಯಾ ವಿಜಯ್ ರೀತಿ ಕೆಂಗಣ್ಣಿನಿಂದ ನೋಡುತ್ತಾ ನಾನು ಮಾಡಿದ್ದು ತಪ್ಪಾ? ಎಂದು ಮೌನವಾಗೇ ಪ್ರಶ್ನಿಸುತಿದ್ದ.
ಬಹುಶ: ನಮ್ಮ ಅವಧಿಯಲ್ಲಿ ಹೊಸ ವಿದ್ಯಾರ್ಥಿಯೊಬ್ಬ ಹಿರಿಯ ವಿದ್ಯಾರ್ಥಿಗೆ ಒದೆ ಕೊಟ್ಟದ್ದು ಅದೇ ಮೊದಲು ನಂತರ ಮಾರುತಿ ಮಿ.ಬ್ರೇವ್ ಎನಿಸಿಕೊಂಡ.

ಈ ಪ್ರಕರಣವಾಗಿ ಆರೋ, ಹತ್ತಹನ್ಹೆರಡು ತಿಂಗಳು ಕಳೆದಿರಬೇಕು. ಗ್ಯಾಸ್ ಕಾಲೇಜಿನ ವಾರ್ಷಿಕೋತ್ಸವ, ಯುವಜನೋತ್ಸವ, ಯೂಥ್ ಫೆಸ್ಟಿವಲ್ ಥರದ ಕಾರ್ಯಕ್ರಮ, ನಮ್ಮ ಕ್ರೀಯಾಶೀಲತೆ, ಮನೋರಂಜನಾ ಕಾರ್ಯಕ್ರಮಗಳಿಂದ ಅಸೂಯೆ ಪಟ್ಟಿದ್ದ ಸ್ಥಳಿಯ ವಿದ್ಯಾರ್ಥಿಗಳ ತಂಡ ನಮ್ಮನ್ನು ಹೀಯಾಳಿಸಿ ಅವಮಾನ ಮಾಡಲು ಹವಣಿಸಿತ್ತು. ಇದು ರಗಳೆ, ಗಲಾಟೆಯಾಗಿ ಕೊನೆಗೆ ರಾತ್ರಿ ವೇಳೆ ಆ ಪುಂಡರ ಗುಂಪು ನಮ್ಮ ವಸತಿ ನಿಲಯಕ್ಕೆ ಕುಡಿದು ಬಂದು ಖ್ಯಾತೆ ತೆಗೆದಾಗ ಜಗಳವಾಗಿ ನಮ್ಮ ಸಮಯಪ್ರಜ್ಞೆಯಿಂದಾಗಿ ಆ ಪುಂಡರ ತಂಡ ಪೊಲೀಸ್ ವಶವಾಯಿತು.

ಈ ಜಗಳದ ಅವಧಿಯಲ್ಲಿ ಮಾರುತಿಗೆ ಬಿದ್ದ ಒಂದು ಏಟಿನಿಂದಾಗಿ ಅವನ ಕಿವಿಯ ಪೊರೆ ಹರಿದು ಕಿವಿಗೆ ಹಾನಿಯಾಗಿತ್ತು. ಒಂದು ಕಿವಿಕೇಳದ ಮಾರುತಿಯನ್ನು ನಾನೇ ಶಿರಸಿ ಆಸ್ಫತ್ರೆಗೆ ಒಯ್ದು ನಮ್ಮ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದು ಮಾರುತಿಯ ಬನವಾಸಿಗೆ ಕಳುಹಿಸಿಕೊಟ್ಟಿದ್ದೆ. ಇಲ್ಲೆಲ್ಲೂ ಧೃತಿಗೆಡದ ಮಾರುತಿ ನಂತರ ಟಿ.ಸಿ.ಎಚ್. ಓದಿ ಮತ್ತೆ ಪದವಿಗಾಗಿ ನಮ್ಮ ಹಾಸ್ಟೇಲ್ ಸೇರಿಕೊಂಡಿದ್ದಾಗ ಆತ ನಮ್ಮ ಜೂನಿಯರ್! ಆಗಿದ್ದ ಆದರೆ ಬುದ್ಧನಂತೆ ಉಪದೇಶಿಸುವ ಎಳೆಪ್ರಬುದ್ಧನಾಗಿದ್ದ.

ಇದಕ್ಕಿಂತ ಮೊದಲು ನಿರೀಕ್ಷಿಸಿ ದಷ್ಟು ಪರೀಕ್ಷೆ ಸರಿಯಾಗಿ ಬರೆಯದ ತಪ್ಪಿಗೆ ಶಿಕ್ಷಣವನ್ನೇ ಬಿಡುತ್ತೇನೆಂದು ಪರೀಕ್ಷೆ ಬಿಟ್ಟು ಊರಿಗೆ ಹೋಗುವ ತಯಾರಿಸಿ ನಡೆಸಿದ್ದ, ನಂತರ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ಪರೀಕ್ಷೆ ಬರೆದು ನಮ್ಮ ಕ್ಲಾಸಿಗೆ ಎರಡನೇ ರ್ಯಾಂಕ್ ಬಂದಿದ್ದ, ಆ ನಂತರ ಆತ ಶಿಕ್ಷಕರ ತರಬೇತಿಗೆ ತೆರಳಿದ್ದು.

ಇಂಥ ಮಾರುತಿ ಉತ್ತಮ ಮಾರ್ಗದರ್ಶನ, ಅನುಕೂಲ, ಅವಕಾಶ ದೊರೆತಿದ್ದರೆ ಕೇಂದ್ರ ಲೋಕಸೇವಾ ಆಯೋಗ, ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಹಿರಿಯ ಅಧಿಕಾರಿಯಾಗುತಿದ್ದನೇನೋ? ಆದರೆ ಆತ ಅನಿವಾರ್ಯವಾಗಿ ಶಿಕ್ಷಕನಾದ,ಶಿಕ್ಷಣ ಕ್ಷೇತ್ರದಲ್ಲಿ 30-40 ವರ್ಷಗಳ ವರೆಗೆ ಮಾಡುವ ಸೇವೆಯ ಪ್ರಮಾಣದ ಸೇವೆ, ಸಾಧನೆಯನ್ನು ಕಾಲು ಶತಮಾನದಲ್ಲೇ ಮಾಡಿದ. ಈತ ಮಾರುತಿ ಉಪ್ಪಾರ.

ಟೆಂಟ್ ಶಾಲೆ, ಸ್ಕೌಟ್ & ಗೈಡ್ಸ್ ಸೇರಿದಂತೆ ಪ್ರಾಮಾಣಿಕ ಶಿಕ್ಷಕ ಪರಿಶ್ರಮದಿಂದ ಮಾಡುವ ಬದ್ಧತೆಯ ಪ್ರಾಮಾಣಿಕ ಕೆಲಸವನ್ನು ಮಾಡಿರುವ ಮಾರುತಿ ಬನವಾಸಿ ಭಾಗ ಸೇರಿದಂತೆ ತಾಲೂಕು, ಜಿಲ್ಲೆ, ರಾಜ್ಯದಲ್ಲೇ ವಿಭಿನ್ನ ಶಿಕ್ಷಕ ಎನ್ನುವ ಹೆಗ್ಗಳಿಕೆ ಹೋದಿದ್ದಾನೆ. ಈ ಮಾರುತಿ ಉಪ್ಪಾರ ನಮ್ಮ ಸಂದರ್ಶನದಲ್ಲಿ ಮಾತನಾಡಿರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಕೆಲಸ ಮಾಡಿರುವ ಸಾಧಕ. ಅವನ ಬಗ್ಗೆ ಬರೆದದ್ದೂ ಅವನಿರುವ ಗುಣಮಟ್ಟದ ಪ್ರತಿಶತ10 ಕ್ಕಿಂತ ಕಡಿಮೆ ಅಂಶ,ವಿಚಾರ. ಅವನಿಗೆ ಶುಭ- ಕೋರಿ ಅಭಿನಂದಿಸಲು ಈ ಪುಟ್ಟ ಅನುಭವದ ಬರಹ. -ಕನ್ನೇಶ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *