ಅನ್ಯರ ಕಾರು ಪಡೆದು ಬಂದಿದ್ದ ಎರಡು ಜೋಡಿಗಳ ಅಂತ್ಯ,ಸಿದ್ಧಾಪುರ ಕೋಡ್ನಮನೆಯಲ್ಲಿ ನಡೆದ ದುರ್ಘಟನೆ

ಹುಬ್ಬಳ್ಳಿ ಕೇಶವಾಪುರದ ಕಾರ್ ವಾಶ್ ಕೇಂದ್ರದಲ್ಲಿ ಕೆಲಸಮಾಡುತಿದ್ದ ನಿಶ್ಚಲ ಹಿರೇಮಠ ಬುಧವಾರ ಸಿದ್ಧಾಪುರ ತಾಲೂಕಿನ ಉಂಚಳ್ಳಿಗೆ ತನ್ನ ಮಾಲಿಕರ ಕಾರ್ ಪಡೆದು ತನ್ನ ಸ್ನೇಹಿತ ಮತ್ತು ಇಬ್ಬರು ಹುಡುಗಿಯರೊಂದಿಗೆ ಪ್ರವಾಸಕ್ಕೆಂದು ಬರುತ್ತಾರೆ. ಪ್ರವಾಸ ಮುಗಿಸಿ ಹುಬ್ಬಳ್ಳಿ ಸೇರಿಕೊಂಡಿದ್ದರೆ ಇಂದು ಅವರು ಸುದ್ದಿಯಾಗುತ್ತಿರಲಿಲ್ಲ. ಆದರೆ ಪ್ರವಾಸಕ್ಕೆ ಬಂದಿದ್ದ ಈ ಎರಡು ಯುವಜೋಡಿ ಸಿದ್ಧಾಪುರ ತಾಲೂಕಿನ ಕೊಡ್ನಮನೆ ಎನ್ನುವ ಶಿರಸಿಗೆ ಸಮೀಪದ ಗ್ರಾಮದ ಅಘನಾಶಿನಿಗೆ ಕಾರಿನೊಂದಿಗೆ ಬೀಳುವಂಥ ಅವಗಢ ನಡೆದು ಹೋಗುತ್ತದೆ. ಬುಧವಾರ ರಾತ್ರಿ ನಡೆದ ಈ ದುರ್ಘಟನೆ ಸುದ್ದಿಯಾದದ್ದು ಗುರುವಾರದ ಇಂದಿನ ಮಧ್ಯಾಹ್ನ.

ಈ ಸುದ್ದಿ ತಿಳಿದ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ತುಂಬಿ ಹರಿಯುತ್ತಿರುವ ಅಘನಾಶಿನಿ ನದಿಗೆ ಬಿದ್ದಿದ್ದ ಕಾರನ್ನು ಪತ್ತೆ ಹಚ್ಚಿ ಅದರಲ್ಲಿದ್ದ ಮೂರು ಶವಗಳನ್ನು ಹೊರತೆಗೆದಿದ್ದಾರೆ. ಒಟ್ಟೂ ನಾಲ್ಕು ಜನರಲ್ಲಿ ಒಂದು ಶವ ನದಿಯಲ್ಲಿ ಕೊಚ್ಚಿಹೋಗಿದೆ ಎನ್ನಲಾಗುತ್ತಿದೆ.

ಅಕ್ಷತಾ,ಸುಷ್ಮಿತಾ ಹುಬ್ಬಳ್ಳಿಯವರಾಗಿದ್ದು ಹುಬ್ಬಳ್ಳಿಯ ನಿಶ್ಚಲ ಹಿರೇಮಠರೊಂದಿಗೆ ಬೆಂಗಳೂರಿನ ಮೂಲದ ಹುಬ್ಬಳ್ಳಿ ವಿದ್ಯಾರ್ಥಿ ರೋನಿತ ಸೇರಿ ಈ ನಾಲ್ವರು ಉಂಚಳ್ಳಿಯಿಂದ ಹುಬ್ಬಳ್ಳಿಗೆ ಮರಳುವ ಮಾರ್ಗಮಧ್ಯೆ ಈ ದುರ್ಘಟನೆ ನಡೆದಿದೆ. ಇವರಲ್ಲಿ ಮೂವರ ಶವಗಳು ದೊರೆತಿದ್ದು ಒಬ್ಬ ಹುಡುಗಿಯ ಶವ ನೀರಿನಲ್ಲಿ ಕೊಚ್ಚಿಹೋಗಿರಬಹುದೆಂದು ಊಹಿಸಲಾಗಿದೆ. ಈ ಜೋಡಿಗಳಿಗೆ ಪ್ರವಾಸಕ್ಕೆ ತನ್ನ ಕಾರು ಕೊಟ್ಟಿದ್ದ ಹುಬ್ಬಳ್ಳಿ ಕೇಶವಾಪುರದ ಕಾರ್ ವಾಶ್ ಕೇಂದ್ರದ ಮಾಲಿಕ ಮಹಾವೀರ್ ದೇವಕ್ಕಿ. ಈ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *