ಮಿಲಾಗ್ರೀಸ್ ಸಿಬ್ಬಂದಿ ಸಾವು,ಕೊಲೆಯೆ?

ಸೆಂಟ್ ಮಿಲಾಗ್ರೀಸ್ ಬ್ಯಾಂಕಿನ ಶಿರಸಿ ಶಾಖೆಯ ಸಿಬ್ಬಂದಿ ಎ.ಎನ್. ಅಭಿಷೇಕ್ ಕೊಲೆಯಾದರೆ? ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.

ಕಳೆದ ಎರಡು ತಿಂಗಳ ಹಿಂದೆ ಶಿರಸಿ ಸೇಂಟ್ ಮಿಲಾಗ್ರೀಸ್ ಶಾಖೆ ಸೇರಿದ್ದ ಅಭಿಷೇಕ್ ಈ ತಿಂಗಳ 2ನೇ ತಾರೀಖಿನ ಗಾಂಧಿಜಯಂತಿ ರಜೆ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರು, ಸಹನೌಕರರೊಂದಿಗೆ ದಬ್ಬೆಫಾಲ್ಸ್ ಪ್ರವಾಸಕ್ಕೆ ಹೋಗಿದ್ದವ ರು ಹೆಣವಾಗಿ ಮರಳಿದ್ದಾರೆ.

ಶಿರಸಿಯ ಪ್ರತಿಷ್ಠಿತ ಭಾಶಿ ಬಿ.ಟಿ.ನಾಯ್ಕರ ಕುಟುಂಬದ ಕುಡಿಯಾಗಿದ್ದ ಅಭಿಷೇಕ್ ಹೆಸ್ಕಾಂ ಉದ್ಯೋಗಿ ಅಶೋಕ ನಾಯ್ಕರ ದ್ವಿತಿಯ ಪುತ್ರ. ಸ್ನೇಹಿತರು, ಸಂಗಡಿಗರೊಂದಿಗೆ ಶಿರಸಿ ದಬ್ಬೆ ಫಾಲ್ಸ್ ಗೆ ಪಿಕನಿಕ್ ಗೆ ಹೋಗಿದ್ದ ಅಭಿಷೇಕ್ ಸಾವಿನ ಸುದ್ದಿ ತಿಳಿಯುತ್ತಲೇ ಗಾಬರಿಯಾದ ಕುಟುಂಬ ತಾಂತ್ರಿಕ ಪೊಲೀಸ್ ದೂರೊಂದನ್ನು ನೀಡಿ ಅಂತಿಮ ವಿಧಿ ಪೂರೈಸಿದೆ.

ವಿಚಿತ್ರವೆಂದರೆ… ಈ ಶವ ದಬ್ಬೆ ಫಾಲ್ಸ್ ನ ನೀರಿನಲ್ಲಿ ಬಿದ್ದು ಅಥವಾ ನೀರಿನಿಂದ ಮೃತರಾದ ಪ್ರಕರಣವಾಗಿದ್ದರೆ ಹೊಟ್ಟೆಯಲ್ಲಿ ನೀರು ತುಂಬಿರಬೇಕಿತ್ತು. ಆದರೆ ಅವರ ಕುಟುಂಬ ವರ್ಗ, ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಈ ದೇಹದಲ್ಲಿ ನೀರು ತುಂಬಿರಲಿಲ್ಲ! ವ್ಯಕ್ತಿ ನೀರುಕುಡಿಯುವ ಮೊದಲೇ ಸಾವನ್ನಪ್ಪಿರುವ ಸಂಶಯ,ಅನುಮಾನಗಳನ್ನು ಗೃಹಿಸದ ಕುಟುಂಬ ವರ್ಗ ಪೊಸ್ಟ್ ಮಾರಟಮ್ ಗೆ ಮುಂದಾಗದಿರುವ ತಪ್ಪು ನಡೆದಿದೆ. ಅನುಮಾನಕ್ಕೆಡೆಯಾಗುವಂತಿದ್ದ ಈ ಸಾವಿನ ಶವದ ಪೋಸ್ಟ್ ಮಾರ್ಟಮ್ ನಡೆದಿದ್ದರೆ ಇಂಥ ಸಂಶಯ, ಅನುಮಾನಗಳಿಗೆ ದಾಖಲೆ ಸಿಗಬಹುದಿತ್ತೇನೋ? ಆದರೆ ಗಡಿಬಿಡಿ, ತರಾತುರಿ ಮುಂದಾಲೋಚನೆ,ಅನುಮಾನಗಳಿಗೆ ಎಡೆ ಮಾಡದೆ ಶವ ಸಂಸ್ಕಾರ ಮಾಡಿರುವುದರಿಂದ ಈ ಸಾವಿನ ರಹಸ್ಯ ಬಯಲಾಗುವುದು ಕಷ್ಟ.

ಆದರೆ….. ಪ್ರವಾಸಕ್ಕೆ ತೆರಳಿದ್ದ ಉದ್ಯೋಗಿಗಳು ಅಭಿಷೇಕ್ ನ ಸ್ನೇಹಿತರು, ಅವರ ಸಂಪರ್ಕದ ವ್ಯಕ್ತಿಗಳ ವಿಚಾರಣೆ ಹಾಗೂ ಮೊಬೈಲ್ ಸಂಖ್ಯೆ, ಸಂಪರ್ಕ, ಮೃತರ ಸಂಬಂಧ-ಸಂಪರ್ಕ ಇತಿಹಾಸಗಳನ್ನು ಭೇದಿಸುವುದರಿಂದ ಈ ಅಸಹಜ ಸಾವಿನ ನಿಜ ಕಾರಣ ತಿಳಿಯಬಹುದೇನೋ? ಶಿರಸಿಯ ನಾರಾಯಣಗುರುನಗರದ ಯುವಕನ ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗೌರವಾನ್ವಿತ ಭಾಷಿ ಬಿ.ಟಿ. ನಾಯ್ಕರ ಕುಟುಂಬ ಮಾತ್ರ ಈ ಪ್ರಕರಣದಿಂದ ದುಖ:ತಪ್ತವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *