

ರಾಜ್ಯ ಕಂಡ ಶ್ರೇಷ್ಠ ರಾಜನೀತಿಜ್ಞ ರಾಮಕೃಷ್ಣ ಹೆಗಡೆ ತಮ್ಮ ಹುಟ್ಟೂರು ಸಿದ್ಧಾಪುರ,ಉತ್ತರ ಕನ್ನಡ ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದೇ ಹೆಸರಿನ ಸರಳಾತಿಸರಳ ವ್ಯಕ್ತಿಯೊಬ್ಬರು ಸದ್ದಿಲ್ಲದೆ ಕೃಷಿ-ಉದ್ಯಮ, ಸಹಕಾರಿ ಕ್ಷೇತ್ರಗಳ ದೃವತಾರೆಯಾಗಿದ್ದಾರೆ. ಸಿದ್ಧಾಪುರ ಅಳಗೋಡಿನ ರಾಮಕೃಷ್ಣ ಹೆಗಡೆ ಕಲಿತದ್ದು ಅರ್ಥಶಾಸ್ತ್ರದ ಸ್ನಾತಕೋತ್ತರ ಪದವಿ. ನಂತರ ನೇರ ಅಡಿಕೆತೋಟಕ್ಕೆ ಬಂದವರು ಕೃಷಿ ಮಾಡುತ್ತಾ ಸ್ಥಳಿಯ ಗ್ರಾ.ಪಂ. ಸದಸ್ಯರಾಗುತ್ತಾರೆ. ಈ ನಡುವೆ ಅವರನ್ನು ವೆನಿಲ್ಲಾ ಕೈ ಬೀಸಿ ಕರೆಯುತ್ತದೆ. ವೆನಿಲ್ಲಾದ ಅನಿವಾರ್ಯತೆಯಲ್ಲಿ ರಾಮಕೃಷ್ಣ ಹೆಗಡೆ,ರಾಘವೇಂದ್ರ ಶಾಸ್ತ್ರಿ ಸ್ನೇಹಿತರ ತಂಡ ಹುಟ್ಟುಹಾಕಿದ ಸಂಘ ಸಂಸ್ಥೆಗಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.

ಗ್ರಾಮದಿಂದ ವಿಶ್ವಮಟ್ಟದವರೆಗೆ ಯೋಚಿಸುತ್ತಾ,ಯೋಜಿಸುತ್ತಾ ಸುದ್ದಿಯಾಗದೆ ಕೆಲಸ ಮಾಡುತಿದ್ದ ಈ ತಂಡದ ಪ್ರಮುಖ ರಾಮಕೃಷ್ಣ ಹೆಗಡೆ ಈ ವರ್ಷ ಜಿಲ್ಲೆಯ ಪ್ರತಿಷ್ಠಿತ ಟಿ.ಎಸ್.ಎಸ್. ನ ನಿರ್ಧೇಶಕರೂ ಆಗುತ್ತಾರೆ. ಹೀಗೆ ಗ್ರಾಮೀಣ ಭಾರತದ ಸುಶಿಕ್ಷಿತ ರಾಮಕೃಷ್ಣ ಹೆಗಡೆ ರೈತರಾಗಿ, ರೈತರ ಸಹಕಾರಿ, ಖಾಸಗಿ ಸಂಸ್ಥೆಗಳ ಒಡೆಯರೂ, ಆಡಳಿತ ಮಂಡಳಿ ಸದಸ್ಯರೂ ಆಗಿ ಈಗಲೂ ಸರಳವಾಗೇ ಬದುಕುತಿದ್ದಾರೆ. ಇವರ ಸಹಜತೆ, ಸರಳತೆ, ಸಾಧನೆಗಳ ಪಕ್ಷಿನೋಟ ಇಲ್ಲಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
