ಕಾಲ ಮರೆತ ಹೊಸಗುಂದದ ಚರಿತ್ರೆ ನೆನಪಿಸಿದ ಗುರು-ಶಿಷ್ಯರ ಸಂಬಂಧ!

ಇತಿಹಾಸದ ಭೂಗರ್ಭದಲ್ಲಿ ಅದೆಷ್ಟು ದಾಖಲೆಗಳು ಹುದುಗಿ ಕೂತಿವೆಯೋ?

ಬನವಾಸಿ, ಬಿಳಗಿ, ಗೇರುಸೊಪ್ಪಾ, ಸದಾಶಿವಗಢ, ಮಿರ್ಜಾನ್,ಕಾಕನೂರು ಕೋಟೆ ಹೀಗೆ ಗೋವಾ ತುದಿಯಿಂದ ತಮಿಳುನಾಡಿನ ವರೆಗೆ…. ಅದೆಷ್ಟು ಪ್ರದೇಶಗಳನ್ನು ನೋಡಿಲ್ಲ.ಗೋವಾ ಗಡಿಯ ಮಾರ್ಕೆಪೂಣಂ ಜಾತ್ರೆಯ ವಿಶಿಷ್ಟ ದೇವಸ್ಥಾನದಿಂದ ಪ್ರಾರಂಭಿಸಿ ಬೇಲೂರು, ಹಳೆಬೀಡು, ಹಂಪಿ ಹೈದರಾಬಾದಿನ ಕೆಲವು ಪ್ರದೇಶಗಳು, ಹುಬ್ಬಳ್ಳಿ ದೆಹಲಿಯ ಸಮಾಧಿಗಳು! ಎಷ್ಟೊಂದು ಸತ್ಯ, ಚರಿತ್ರೆ ಹುದುಗಿದ ಪ್ರದೇಶಗಳನ್ನು ಸಂದರ್ಶಿಸಿಲ್ಲ. ಇಲ್ಲೆಲ್ಲಾ ಸಕಾರಣ, ನಿಗದಿತ ಸಮಯ ಮಿತಿಯಲ್ಲಿ ಅಡ್ಡಾಡಿ ಬಂದ ನಮಗೆ ಇದೇ ಶಿವಮೊಗ್ಗ -ಜೋಗ ರಸ್ತೆಯ ಅನಂತಪುರದ ಒಳಗೆ ಇಂಥದ್ದೊಂದು ಪ್ರದೇಶವಿದೆ ಎನ್ನುವ ಅಂದಾಜೂ ಇದ್ದಿರಲಿಲ್ಲ. ಕಿರಿಯ ಸ್ನೇಹಿತನಂಥ ರಾಜ್ ಗುರು ಇದೇ ತಿಂಗಳು ಮೂರ್ನಾಲ್ಕು ಪ್ರದೇಶಗಳಿಗೆ ಕರೆದಾಗ ಒಂದೆರಡು ಬಾರಿ ಹೋಗಿ ಬಂದಿದ್ದೆ. ಈ ಬಾರಿ ಗುರು ತುಸು ಹೆಚ್ಚೇ ಒತ್ತಾಯಿಸಿದ್ದ ಅವನ ಒರಾತ ಒಂದೇ ಹೊಸಗುಂದಕ್ಕೆ ಒಮ್ಮೆ ಬನ್ನಿ.

ಗುಂಜಗೋಡಿನ ಪ್ರವೀಣಾ ದಂಪತಿಗಳೊಂದಿಗೆ ನಮಗೆಂದೇ ಗುರು ವ್ಯವಸ್ಥೆ ಮಾಡಿದ್ದ ಬೆಂಗಳೂರಿನ ಕ್ವಾಲೀಸ್ ಕಾರ್ನಲ್ಲಿ ಸಿದ್ಧಾಪುರದಿಂದ ಬೆಳಿಗ್ಗೆ ಹೊರಟಾಗ ಸಾಗರ ದಾಟಿ, ಅನಂತಪುರಕ್ಕಿಂತ ಹಿಂದೆ 1-2 ಕಿ.ಮೀ ಒಳರಸ್ತೆಯಲ್ಲಿ ಹೊಸಗುಂದಕ್ಕೆ ಇಳಿದಾಗ ಹೊಸ ಲೋಕವೊಂದರ ಅನಾವರಣವಾದಂತಾಯಿತು. ಸ್ವಿಂಮ್ಮಿಂಗ್ಪೂಲ್ ಮಾದರಿಯ ಪುಷ್ಕರಣೆ, ಅದಕ್ಕೆ ತಾಗಿಕೊಂಡತ್ತಿದ್ದ ಶಿಲಾಶಾಸನಗಳು, ಅಲ್ಲಿಯ ಉಮಾಮಹೇಶ್ವರ ದೇವಸ್ಥಾನ, ಗೋಶಾಲೆ ಈ ಪ್ರದೇಶಕ್ಕೆ ತಾಕಿಕೊಂಡಂತಿರುವ 600 ಎಕರೆಗಳ ದೇವರಕಾಡು. ಈ ಪ್ರದೇಶದ ಜಲ. ಮರ, ವನ,ಜನ ನಮಗೆ ಹೇಳೀಮಾಡಿಸಿದಂತಿದ್ದ ಪ್ರದೇಶವದು.

ಶಿಷ್ಯ ಗುರು ಇದೇ ಪ್ರದೇಶದಲ್ಲಿ ವಿವಾಹವಾಗಲು ನಿಶ್ಚಯಿಸಿರುವುದು,ತನ್ನ ಮೊದಲ ನಿರ್ಮಾಣದ ಚಲನಚಿತ್ರವೊಂದರ ಚತ್ರೀಕರಣ ನಡೆಯುತ್ತಿರುವುದು ಇವುಗಳೊಂದಿಗೆ ಈ ಹೊಸಗುಂದದ ವೈಶಿಷ್ಟ್ಯದ ಕಾರಣಕ್ಕೆ ಗುರು ನಮ್ಮನ್ನು ಅಲ್ಲಿ ಬರಮಾಡಿಕೊಂಡಿದ್ದು.

ಈ ಹಿಂದೆ ಹೊಸಗುಂದ ಶಾಸನ ಎಂದು ಓದಿದ್ದು ನೆನಪಿತ್ತಷ್ಟೆ. ಡಾ,ಜ್ನಾನೇಶ್ ಹಿಂದೆ ಬಾರಂಗಿಯ ಅರಸರಿಗೂ ಹೊಸಗುಂದದ ದೊರೆಗಳಿಗೂ ಆಗಿದ್ದ ಯುದ್ಧಕ್ಕೆ ಸಂಬಂಧಿಸಿದ್ದ ಶಾಸನವೊಂದು ತಮ್ಮೂರು ಕೊಡಕಣಿಯಲ್ಲಿ ಇರುವುದಾಗಿ ಅಲ್ಲೇ ತಿಳಿಸಿದರು.

ಹೀಗೆ ಶಿಷ್ಯ ಗುರುವಿನ ಮೇಲ್ ಉಸ್ತುವಾರಿಯ ಸಿನೆಮಾ ಚಿತ್ರೀಕರಣದೊಂದಿಗೆ ಹೊಸಗುಂದದ ಶಾಂತರಸರು ಆಳಿ, ರಾಜ್ಯ, ದೇವಸ್ಥಾನ, ಕೋಟೆ, ಕಾಡು ಕಟ್ಟಿ ಬೆಳೆ ಸಿದ ಪ್ರದೇಶ ನವೀಕರಣಗೊಂಡದ್ದನ್ನು ನೋಡಿ ಖುಷಿ ಪಟ್ಟೆವು. ನಾರಾಯಣ ಶಾಸ್ತ್ರಿ ಎನ್ನುವವರು ಸುಮಾರು 800 ವರ್ಷಗಳ ಹಿಂದಿನ ವೈಭವದ ಹೊಸಗುಂದವನ್ನು 1970 ರ ನಂತರ ಸರ್ಕಾರ, ಸಾರ್ವಜನಿಕರು ಮರುಶೋಧಿಸಿದ್ದನ್ನು ಚರಿತ್ರೆಗೆ ಅಪಚಾರವಾಗದಂತೆ ಅಭಿವೃದ್ಧಿ ಪಡಿಸಿರುವ ರೀತಿ ಹಿಡಿಸಿತು.

ನಮ್ಮ ನೆಲದ ಹೊಸಗುಂದ ರಾಜರು ಮೆರೆದು ಮರೆತುಹೋಗಿದ್ದ ಸ್ಥಳವೊಂದು ಐವತ್ತು ವರ್ಷಗಳ ಹಿಂದೆ ಪತ್ತೆಯಾಗಿ, ಈಗ ನವೀಕರಣಗೊಂಡಿರುವುದು, ಒಂದೇ ಪ್ರದೇಶದಲ್ಲಿ ಗೋಶಾಲೆ, ದೇವರಕಾಡು, ಧಾರ್ಮಿಕ, ಐತಿಹಾಸಿಕ ಮಹತ್ವಗಳೆಲ್ಲಾ ಮೇಳೈಸಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ನಮ್ಮಲ್ಲೂ ಅಭಿಮಾನ ಮೂಡಿಸಿತು. ಇವೆಲ್ಲವನ್ನೂ ಪ್ರೀತಿಯಿಂದ ತೋರಿಸಿ, ಸಂಬ್ರಮಿಸಿದ ಗುರು ನಮಗೆ ಹೊಸಗುಂದವೆಂಬ ನೂತನ ಪ್ರವಾಸಿಕ್ಷೇತ್ರ ಪರಿಚಯಿಸಿದ. ಈ ಸಾಧ್ಯತೆಯ ಹಿಂದಿನ ಕಾರಣ, ಪ್ರೀತಿ- ಅಭಿಮಾನಗಳನ್ನು ಕೇವಲ ಗುರುಶಿಷ್ಯನ ಸಂಬಂಧಕ್ಕೆ ಮಿತಿಗೊಳಿಸಬಾರದಲ್ಲವೆ? ಹೊಸಗುಂದದ ಪರಿಚಯ, ವಿವರ, ಅಲ್ಲಿನ ವೈಶಿಷ್ಟ್ಯಗಳನ್ನು ನೀವು samaajamukhi ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *