ಹೊರನಾಡ ಕನ್ನಡ ಕುಟುಂಬ

ಕನೆಟಿಕಟ್ ಕುರಿತ ಬಹಗಳಲ್ಲಿ ಇದನ್ನ ಎರಡನೇಯದಾಗಿ ಪೋಸ್ಟ್ ಮಾಡುವ ಯೋಚನೆ ಮಾಡಿದ್ದೆ. ಆದರೆ ಇಂದು ರಾಜ್ಯೋತ್ಸವವಾದ ಕಾರಣ ಇದನ್ನೇ ಮೊದಲು ಹಾಕುತ್ತಾ ಇದ್ದೇನೆ.

ಕರ್ನಾಟಕದ ಹೊರಗೆ ಇದುವರೆಗೂ ನಾನು ಸುಮಾರು ಆರು ವರ್ಷಗಳನ್ನ ಕಳೆದಿದ್ದೇನೆ. ನಾವು ಊರ ಹೊರಗಾಗಲೀ ಅಥವಾ ನಾಡ ಹೊರಗಾಗಲೀ ಇದ್ದಾಗ ಅತೀ ಹೆಚ್ಚು ನಮ್ಮನ್ನ ಕಾಡುವುದು ನಮ್ಮ ಭಾಷೆ. ಅದರಲ್ಲೂ ಹೊಸದಾಗಿ ಹೋದಾಗ ಒಂದು ರೀತಿಯ ಅನಾಥ ಪ್ರಜ್ಞೆ ನಮ್ಮನ್ನ ಕಾಡುತ್ತದೆ. ಹೀಗಿರುವಾಗ ನಮ್ಮ ನುಡಿ ಕೇಳಿದಾಗ ಆಗುವ ಸಂತೋಷವೇ ಬೇರೆ. ಕನ್ನಡವನ್ನು, ಅದರಲ್ಲೂ ಹವಿಗನ್ನಡವನ್ನೋ ಅಥವಾ ಸಿದ್ದಾಪುರದ ಸ್ಥಳೀಯ ಕನ್ನಡವನ್ನೋ ಕೇಳಿದಾಗ ನನಗೆ ಸ್ವರ್ಗ ಸಿಕ್ಕಷ್ಟೇ ಖುಷಿಯಾಗುತ್ತದೆ.

ಮುಂಬೈಯಲ್ಲಿ ದಕ್ಷಿಣ ಕನ್ನಡಿಗರನ್ನ ಬಿಟ್ಟಿರೆ, ಉಳಿದೆಡೆ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ತಮ್ಮ ಛಾಪನ್ನ ಮೂಡಿಸಿದ್ದು. ತಮ್ಮ ಅಸ್ಮಿತೆಯನ್ನ ಉಳಿಸಿಕೊಂಡು ಒಂದು ಸಮುದಾಯವಾಗಿ ರೂಪುಗೊಂಡಿದ್ದು ಕಡಿಮೆ. ಹೊರದೇಶಗಳಲ್ಲೂ ಮಲಯಾಳಿಗಳಿಗೆ, ತೆಲುಗರಿಗೆ, ಗುಜರಾತಿ ತಮಿಳು ಪಂಜಾಬಿಗಳಿಗೆ ಹೋಲಿಸಿದರೆ ಸಂಖ್ಯಾತ್ಮಕವಾಗಿ ನಾವಲ್ಲಿ ಬಹಳ ಚಿಕ್ಕವರು (ಸ್ವಲ್ಪ ಮಟ್ಟಿಗೆ ಕೊಲ್ಲಿ ದೇಶಗಳು ಇದಕ್ಕೆ ಅಪವಾದ). ಆದರೂ ಅನೇಕ ಕನ್ನಡ ಕನ್ನಡಿಗರ ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಿವೆ.

ನಾಡಿನ ಹೊರಗಿದ್ದಾಗ ಕಾರಣಾಂತರಗಳಿಂದ ಅಲ್ಲಿನ ಸ್ಥಳೀಯ ಕನ್ನಡ ಕೂಟಗಳಲ್ಲಿ ಕೆಲಸ ಮಾಡೋ ಕಿಂಚಿತ್ ಅವಕಾಶವೂ ಸಿಕ್ಕಿರಲಿಲ್ಲ. ಆ ಬೇಸರವನ್ನು ನೀಗಿಸಿದ್ದು ಕನೆಟಿಕಟ್. ಅಲ್ಲಿನ ‘ಹೊಯ್ಸಳ ಕನ್ನಡ ಕೂಟ’ವು ಬಹಳ ಆಪ್ತವಾಗಿತ್ತು, ಕನಿಷ್ಟ ಒಂದು ದಿನವಾದರೂ ಚೂರು ಕೆಲಸ ಮಾಡೋ ಅವಕಾಶ ಸಿಕ್ಕಿತ್ತು.

ಇದು ಚಿಕ್ಕ ರಾಜ್ಯವಾದ ಕಾರಣ ಇಡೀ ರಾಜ್ಯಕ್ಕೆ ಇಲ್ಲಿರುವುದು ಒಂದೇ ಕನ್ನಡ ಕೂಟ. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಕೂಟಗಳಲ್ಲಿ ಒಂದು. ಈ ರಾಜ್ಯದಲ್ಲಿ ನೆಲೆಸಿರುವ ನಮ್ಮೂರ ಅಕ್ಕನ ಮೂಲಕ ಮೊದಲ ಬಾರಿಗೆ ಕೂಟದ ಸಂಪರ್ಕವಾಯಿತು. ಯುಗಾದಿಯ ಸಂಭ್ರಮಕ್ಕೆ ಅತಿಥಿಯಾಗಿ ಬಂದವರು ಪ್ರವೀಣ್ ಗೋಡ್ಕಿಂಡಿ. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿತ್ತು. ಸುಮಾರು ೫೦೦ ರ ಮೇಲೆ ಜನರಾಗಿದ್ದರೂ ಹೊಸಬರನ್ನ ಥಟ್ಟನೆ ಗುರುತಿಸಿ ಪರಿಚಯ ಮಾಡಿಕೊಂಡ ಕೂಟದ ನಾಯಕತ್ವದ ನಡೆ ಬಹಳ ಇಷ್ಟವಾಗಿತ್ತು.‌ ಒಂಥರಾ ಮನೆಗೆ ಹೊಸದಾಗಿ ಬಂದ ಅತಿಥಿಗಳ ಸ್ವಾಗತಿಸುವ ಹಾಗೇ. ಅಲ್ಲಿದ್ದಷ್ಟು ಕಾಲವು ಒಂದೂ ಕಾರ್ಯಕ್ರಮ ತಪ್ಪದಂತೆ ಹೋಗಲು ಕಾರಣವೂ ಕನ್ನಡ ಕೂಟದ ಪದಾಧಿಕಾರಿಗಳೇ.

ಕನ್ನಡಿಗರನ್ನ ಸಾಂಸ್ಕೃತಿಕವಾಗಿ ಒಂದಾಗಿಡಲು ಮತ್ತು ಪರಸ್ಪರ ಬೆರೆಯಲು ಯುಗಾದಿ, ದಸರಾ/ದೀಪಾವಳಿ, ಹೇಮಂತಗಾನ, ಪಿಕ್‌ನಿಕ್ ಮುಂತಾದ ಕಾರ್ಯಕ್ರಮಗಳನ್ನ ಆಯೋಜಿಸುತ್ತಾರೆ. ಕರ್ನಾಟಕದ ವಿವಿಧ ಪ್ರದೇಶ, ಸಮುದಾಯ, ಉಪಭಾಷೆಗಳಿಂದ ಬಂದ ಜನರು ಕೇವಲ ಕನ್ನಡದ ಹೆಸರಿನಲ್ಲಿ ಒಂದುಗೂಡುತ್ತಾರೆ. ಅಲ್ಲೇ ನೆಲೆ ನಿಲ್ಲುವ ಮುಂದಿನ ಪೀಳಿಗೆ ಕನ್ನಡತನದಿಂದ ದೂರ ಸರಿಯದಿರಲು ವಾರಾಂತ್ಯದ ಕನ್ನಡ ತರಗತಿಗಳ ನಡೆಸುತ್ತಾರೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ನಾಳೆ ನೀವು ಕನೆಟಿಕಟ್ಟಿಗೆ ಹೋದರೆ ನೀವಾಗೆ ಅವರ ಸಂಪರ್ಕಿಸಲು ಕಾಯೋಲ್ಲ. ಅವರೇ ನಿಮ್ಮನ್ನ ಹುಡುಕಿ ಕರೆಮಾಡಿ ಏನಾದರೂ ಸಹಾಯ ಬೇಕೇ ಎಂದು ಕೇಳುತ್ತಾರೆ. ನಾವು ನಮ್ಮ ನಾಡ ಹೊರಗಿದ್ದಾಗ ಇರಬೇಕಾಗಿದ್ದು ಕೂಡಾ ಹೀಗೆಯೇ. ಕನ್ನಡಿಗರೆಲ್ಲ ಒಂದು ಕುಟುಂಬವಾಗಿ.

  • ಪಟದಲ್ಲಿರುವುದು ಇಲ್ಲಿನ ಕನ್ನಡ ಕೂಟದ ಸಾಂಸ್ಕೃತಿಕ ಕಾರ್ಯಕ್ರಮದ ಒಂದು ದೃಷ್ಯ.

ನಾನುನೋಡಿದಸ್ಟೇಟುಗಳು #ಕನೆಟಿಕಟ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *