ತಹಸಿಲ್ಧಾರ ಮಧ್ಯಸ್ಥಿತಿಕೆಯಲ್ಲಿ ವಿವಾದ ಬಗೆಹರಿಸಲು ಗಡುವು ನೀಡಿದ ನಂತರ ಕಾಲೇಜಿಗೆ ಬೀಗಜಡಿಯುವ ನಿರ್ಧಾರ ಕೈ ಬಿಟ್ಟ ಪ್ರತಿಭಟನಾಕಾರರು

ಸಿದ್ಧಾಪುರ ತಾಲೂಕಿನ ಬಿಳಗಿಯಲ್ಲಿರುವ ಜ್ಞಾನಸಾಗರ ಪದವಿಪೂರ್ವ ಕಾಲೇಜಿಗೆ ಬೀಗ ಜಡಿಯುವ ಉದ್ದೇಶದಿಂದ ಹಿಂದೆ ಸರಿದಿರುವ ಪ್ರತಿಭಟನಾಕಾರರು ತಹಸಿಲ್ಧಾರರ ಮಧ್ಯಸ್ಥಿತಿಕೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಇಲ್ಲಿಯ ವಿವಾದ ಇತ್ಯರ್ಥಪಡಿಸಿ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ.

ಬಿಳಗಿಯ ಜ್ಞಾನಸಾಗರ ಪದವಿಪೂರ್ವಕಾಲೇಜು ಚೌಡೇಶ್ವರಿ ಎಸ್.ಸಿ.ಎಸ್.ಟಿ.ಸಂಸ್ಥೆ ಯ ಹೆಸರಿನಲ್ಲಿ ನಡೆಯುತ್ತಿದೆ. ಈ ಕಾಲೇಜು ಪ್ರಾರಂಭವಾದ 1994 ರ ನಂತರ ಈವರೆಗೆ ಎರಡುಬಾರಿ ಆಡಳಿತ ಮಂಡಳಿ ಬದಲಾಗಿದೆ. ಅನುದಾನ ರಹಿತ ಸಮಯದಲ್ಲಿ ಶ್ರಮವಹಿಸಿದ್ದ ಕಾಲೇಜು ಆಡಳಿತ ಸಮೀತಿ ರದ್ದು ಮಾಡಿ, ಅಲ್ಲಿಯ ಪ್ರಾರಂಭಿಕ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಉಪನ್ಯಾಸಕರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಸ್ಥಳಿಯರನ್ನು ವಿಶ್ವಾಸಕ್ಕೆ ಪಡೆಯದೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ತೊಂದರೆಯನ್ನು ಆಡಳಿತಮಂಡಳಿ ಅಧ್ಯಕ್ಷರು, ಸದಸ್ಯರ ಉಪಸ್ಥಿತಿಯಲ್ಲಿ ಇತ್ಯರ್ಥ ಪಡಿಸಬೇಕು. ಈ ಕಾಲೇಜಿನ ಅಭಿವೃದ್ಧಿಗೆ ದುಡಿದ ಉಪನ್ಯಾಸಕ ಗಣೇಶ್ ನಾಯ್ಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಲು ಇಂದು ಪ್ರತಿಭಟನೆ ನಡೆಸಿದ ಕಾಲೇಜಿನ ಹಿತರಕ್ಷಣಾ ಸಮೀತಿ ಮತ್ತು ಹಳೆಯ ವಿದ್ಯಾರ್ಥಿಗಳ ಬಳಗ ಕಾಲೇಜಿಗೆ ಬೀಗ ಜಡಿದು ಲಾಕ್ ಔಟ್ ಮಾಡಲು ನಿರ್ಧರಿಸಿತ್ತು. ಆದರೆ ಈ ಪ್ರತಿಭಟನೆ, ಶಾಂತಿ-ಸುವ್ಯವಸ್ಥೆ ರಕ್ಷಣೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಿದ್ಧಾಪುರ ತಹಸಿಲ್ಧಾರರು ಪ್ರತಿಭಟನಾ ನಿರತರ ಮನವಿ ಪಡೆದು ಅವರ ಬೇಡಿಕೆಯಾದ ಆಡಳಿತ ಮಂಡಳಿ ಜೊತೆಗಿನ ಮೂಖಾಮುಖಿ ಚರ್ಚೆಗೆ ಈ ತಿಂಗಳ 25 ರ ವರೆಗೆ ಗಡುವು ನೀಡಿದ ಮೇಲೆ ಕಾಲೇಜಿಗೆ ಬೀಗ ಹಾಕುವ ನಿರ್ಧಾರದಿಂದ ಹಿಂದೆ ಸರಿದರು.

ಈ ಸಮಯದಲ್ಲಿ ಆಡಳಿತ ಮಂಡಳಿ ಪರವಾಗಿ ವಿಡಿಯೋ ಮಾಡಿ ನೇರ ಪ್ರಸಾರ ಮಾಡುತಿದ್ದ ವ್ಯಕ್ತಿಯೊಬ್ಬ ಪ್ರತಿಭಟನಾಕಾರರ ವಿರೋಧಕ್ಕೆ ತುತ್ತಾದ ಪ್ರಸಂಗವೂ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ ಚೌಡೇಶ್ವರಿ ಎಸ್,ಸಿ. ಎಸ್.ಟಿ. ಆಡಳಿತ ಸಮೀತಿ ಸರ್ಕಾರದ ಕಾನೂನು, ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಸ್ಥಳಿಯರು, ಸಂಸ್ಥಾಪಕ ಉಪನ್ಯಾಸಕ ವೃಂದಕ್ಕೆ ಕಿರುಕುಳ ಕೊಡುವುದರಿಂದ ಸಂಸ್ಥೆಯನ್ನು ಸರ್ಕಾರದ ವಶಕ್ಕೆ ಪಡೆದು ಈಗಿನ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಇದೇ ಸಮಯದಲ್ಲಿ ಮಾತನಾಡಿದ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಆಡಳಿತ ಮಂಡಳಿಯ ಅವ್ಯವಸ್ಥೆ, ದೌರ್ಜನ್ಯ ಅಂಧಾದರ್ಬಾರ್ ಮಿತಿಮೀರಿದೆ. ಈ ಬಗ್ಗೆ ವಿಚಾರಿಸಲು ಕರೆಮಾಡಿದರೆ ಪೊಲೀಸ್ ಅಧಿಕಾರಿಗಳಿಂದ ಪರಿಶಿಷ್ಟರ ದೌರ್ಜನ್ಯದ ಕಾನೂನಿನಡಿ ಬಂಧಿಸುವ ಧಮಕಿ ಹಾಕುತ್ತಾರೆ. ಇಂಥ ಅಧ್ಯಕ್ಷರು, ಆಡಳಿತಮಂಡಳಿ ಗಣೇಶ್ ನಾಯ್ಕರನ್ನು ನಡೆಸಿಕೊಂಡಿರುವ ರೀತಿ ಸರಿಇಲ್ಲ, ಈ ಬಗ್ಗೆ ಈ ತಿಂಗಳ ಅಂತ್ಯದೊಳಗೆ ತಹಸಿಲ್ಧಾರರ ಮಧ್ಯಸ್ಥಿಕೆಯಲ್ಲಿ ವಿವಾದ ಇತ್ಯರ್ಥವಾಗದಿದ್ದರೆ ಇಲ್ಲಿಯ ಆಡಳಿತ ಮಂಡಳಿ ಪರಿಣಾಮ ಕೆಟ್ಟದಾಗುವ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಡಳಿತ ಸಮೀತಿಯ ಪರವಾಗಿ ವಿವರಣೆ ನೀಡಿದ ಪ್ರಾಂಶುಪಾಲರು ಪೋರ್ಜರಿ ದಾಖಲೆ ಸೃಷ್ಟಿಸಿ, ಉಪನ್ಯಾಸಕರಾಗಿದ್ದಾರೆ. ಅವರ ವಿವರಣೆ ಅಕ್ರಮ ಆಡಳಿತ ಸಮೀತಿ ಪರವಾಗಿರುತ್ತದೆ ಎಂದು ವಿರೋಧಿಸಿದ ಪ್ರತಿಭಟನಾಕಾರರು ಕಳೆದ ಕೆಲವು ವರ್ಷಗಳಿಂದ ಸ್ಥಳಿಯರು,ಹಳೆಯ ವಿದ್ಯಾರ್ಥಿಗಳು, ಕಾಲೇಜು ಹಿತರಕ್ಷಣಾ ಸಮೀತಿ ಚರ್ಚೆಗೆ ಕರೆದರೆ ಆಡಳಿತ ಸಮೀತಿ ಬರುತ್ತಿಲ್ಲ. ಇಂಥ ಅವ್ಯವಸ್ಥೆಗಳ ಕಾಲೇಜು ಆಡಳಿತ ಸಮೀತಿ ಮಾನ್ಯತೆ ರದ್ದು ಮಾಡಿ ಈ ಆಡಳಿತ ಸಮೀತಿಯಿಂದ ನೊಂದ ಅನೇಕರಿಗೆ ನ್ಯಾಯ ಒದಗಿಸಿ ಈ ಪ.ಪೂ. ಮಹಾವಿದ್ಯಾಲಯವನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಲಾಯಿತು.

ಕಾಲೇಜಿನಸ್ಥಾಪನೆ ಧ್ಯೇಯ ಉದ್ದೇಶಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸ್ಥಳೀಯರು, ಕಾಲೇಜಿನ ಸಿಬ್ಬಂದಿಗಳಿಗೂ ವಿರೋಧವಿದೆ. ಈ ಬಗ್ಗೆ ನಿಯೋಗ ಒಯ್ದು ಬಸವರಾಜ್ ಹೊರಟ್ಟಿಯವರ ಗಮನ ಸೆಳೆಯುತ್ತೇವೆ. ಕಾನೂನು, ರೂಢಿ ಸ್ಥಳಿಯರ ಹಿತಾಸಕ್ತಿಗೆ ವಿರುದ್ಧವಾಗಿ ಇಲ್ಲಿ ನಡೆಯುತ್ತಿರುವ ಅನಪೇಕ್ಷಿತ ವಿದ್ಯಮಾನ ನಿಲ್ಲಬೇಕು, ಕೆಲಸದಿಂದ ವಜಾಮಾಡಿದ ಗಣೇಶ್ ನಾಯ್ಕರನ್ನು ಮರಳಿ ಸೇವೆಗೆ ನೇಮಿಸಿಕೊಳ್ಳಬೇಕು. ಇದಾಗದಿದ್ದರೆ ಶಾಸಕರು, ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ ಸರ್ಕಾರ ಆಡಳಿತ ಮಂಡಳಿ ರದ್ದುಮಾಡಿ ಕಾಲೇಜನ್ನು ಸರ್ಕಾರದ ನಿರ್ವಹಣೆಗೆ ನೀಡಬೇಕು

-ಬಿ.ಆರ್. ನಾಯ್ಕ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *