ಕೆ. ಆರ್. ಪ್ರಕಾಶ್ ನಿಧನ

ಪತ್ರಕರ್ತ, ರಂಗಕಲಾವಿದ,ರಂಗನಿರ್ಧೇಶಕರಾಗಿ ಈಗಿನ ರಾಜ್ಯ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಶಿರಸಿಯ ಕೆ.ಆರ್. ಪ್ರಕಾಶ್ ಅಲ್ಫಕಾಲಿಕ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ನಿಸರ್ಗ ರಂಗ ಮಿತ್ರ ಪ್ರಕಾಶ್ ಗೆ ನುಡಿ ನಮನ______________________ ಕೆ ಆರ್ ಪ್ರಕಾಶ್ ಅಂದ್ರೆ ಕ್ರಿಯಾಶೀಲತೆ, ಸುಮ್ಮನೆ ಕುಳಿತ ಆಸಾಮಿ ಅಲ್ಲ.ನದಿ ದಡದಲ್ಲಿ, ಪ್ರಪಾತದಲ್ಲಿ, ಕೆರೆಯ ಅಂಚಿನಲ್ಲಿ, ಮರದ ನೆರಳಲ್ಲಿ, ಸಮುದ್ರ ತೀರದಲ್ಲಿ ನಾಟಕ ಮಾಡುವ ಹುಚ್ಚು. ಈ ಕಾರಣಕ್ಕಾಗಿ ಸಂಘಟನಾತ್ಮಕ ಅನುಭವ ಪಡೆದವನು. ಬೀದಿ ನಾಟಕ ಮಾಡುತ್ತಾ ಉತ್ತರ ಕನ್ನಡದ ಕರಾವಳಿ, ವನವಾಸಿ ಕೇರಿ, ಪೇಟೆ ಹಳ್ಳಿಗಳಲ್ಲಿ ಮೂರು ದಶಕಗಳಿಂದ ದವನು. ಹಕ್ಕಿಮನೆ ಸುರೇಶ, ಬಾಳೆ ಗದ್ದೆ ಶ್ರೀನಿವಾಸ, ರಾಮಕೃಷ್ಣ ಶಾಸ್ತ್ರೀ, ನರಸಿಂಹ ದೀಕ್ಷಿತ ಕಳವೆ ನಾವೆಲ್ಲ ಸೇರಿ ಯುವಜನ ಮೇಳ, ನಾಟಕ ಎಂದು ಸುತ್ತಾಟ. ಸಂಸದರು, ಶಾಸಕರು, ಸಹಕಾರಿ ಧುರೀಣ ರು ಸೇರಿದಂತೆ ಹಲವರನ್ನು.ಬಣ್ಣ ಹಚ್ಚಿ ಸಿ ನಾಟಕಕ್ಕೆ ಕರೆದವನು. ಪ್ರಕಾಶ್ ಜೊತೆಗೆ ಜೋರು ಚರ್ಚೆ, ವಾದ, ಜಗಳ ಯಾವತ್ತೂ ಇದ್ದದ್ದೇ. ಮುಂಗೋಪಿ, ಮನಸಿಗೆ ಬಂದಿದ್ದು ಮುಲಾಜಿಲ್ಲದೆ ಮಾತಾಡು ವ ವ್ಯಕ್ತಿ .ನಿನ್ನೆ ಸಂಜೆ ಘಟ್ಟಿ ಕೈ ಗೇ ಹೋಗಿದ್ದಾಗ ಸುರೇಶ್ ಹಕ್ಕೀಮನೆ, ದೀಕ್ಷಿತ ಮತ್ತು ನಾನು ಈ ಪ್ರಕಾಶನ ಕತೆಯನ್ನು ಸಹೋದರಿ ಮಾನಸ ಎದುರು ಹೇಳಿಕೊಂಡು ನಕ್ಕಿದ್ದೇವೆ, ನೊಂದು ವಿಷಾದ ವ್ಯಕ್ತಪಡಿಸಿ ಮನೆಗೆ ಮರಳಿದೆವು.. ಅದೇ ಕೊನೆ ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿದ್ದ ಪ್ರಕಾಶ್ ರಾತ್ರಿ ಇಹಲೋಕ ತ್ಯಜಿಸಿದ್ದರು.ರಂಗ ಚಟುವಟಿಕೆಯನ್ನು ಹಳ್ಳಿಯ ಮೂಲೆಗೆ ಒಯ್ದು ಒಂದು ಕ್ರಿಯಾಶೀಲ ಬದುಕು ನಡೆಸಿದ ಪ್ರಕಾಶ್ ಇನ್ನಿಲ್ಲ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.ಕಾಲನ ರಂಗ ಪರದೆ ತೆರೆದಿದೆ, ಒಡನಾಡಿ ಗಳಿಗೆ ನೋವು ಉಳಿದಿದೆ.

-ಶಿವಾನಂದ ಕಳವೆ

#ಕೆಆರ್ಪ್ರಕಾಶ್ ರಿಗೆ #ರಂಗನಮನಗಳು.

ಶಿರಸಿಯ ರಂಗನಟ, ನಿರ್ದೇಶಕ ಕೆ.ಆರ್.ಪ್ರಕಾಶ ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾದರು.
ಕೆ.ಆರ್.ಪ್ರಕಾಶ ಪ್ರಸ್ತುತ ಕರ್ನಾಟಕ ನಾಟಕ ಅಕಾಡಮಿ ಯ ಸದಸ್ಯರಾಗಿದ್ದರು.
ತುಂಬ ಚಿಕ್ಕ ಪ್ರಾಯದಲ್ಲೇ ರಂಗಭೂಮಿಯ ಗೀಳು ಹತ್ತಿಸಿಕೊಂಡಿದ್ದ ಪ್ರಕಾಶ ಉತ್ತಮ ನಟರಾಗಿದ್ದರು.‌ಅವರದೇ ಆದ ವಿಶಿಷ್ಡ ಶೈಲಿಯಲ್ಲಿ ನಾಟಕಗಳನ್ನ ಕಟ್ಟುತ್ತಿದ್ದರು. ಮುಖ್ಯವಾಗಿ ಹಳ್ಳಿಗಳ ತಂಡಗಳ ಜೊತೆ ನಾಟಕವಾಡುತ್ತ ಶಿರಸಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ರಂಗಾಸಕ್ತಿ ಬೆಳೆಯಲು ಕಾರಣರಾಗಿದ್ದರು.
‘ಪ್ರಕೃತಿ ರಂಗಭೂಮಿ’ ಯಲ್ಲಿ ಹಲವಾರು ಸಾಹಸಗಳನ್ನ ಮಾಡಿದ ಪ್ರಕಾಶ್ ನಿಸರ್ಗ ಮತ್ತು ರಂಗಭೂಮಿಗಳು ಲೀನವಾಗಬಹುದಾದ ಸಾಧ್ಯತೆಗಳ ಕುರಿತು ಯೋಚಿಸುತ್ತಿದ್ದರು. ಹಾಗೆಯೇ ಸಮುದ್ರ ದಡದಲ್ಲಿ, ಜಲಪಾತದೆದುರು, ಪ್ರಪಾತದಲ್ಲಿ ಹೀಗೆ ಹಲವಾರು ಪ್ರಯೋಗಗಳನ್ನು ಮಾಡಿದ್ದರು. ಮತ್ತಿಘಟ್ಟದ ಗೆಳೆಯರೊಡನೆ ಅವರು ಮಾಡಿದ ಪ್ರಯೋಗಗಳು ಅನೇಕ.
ಪ್ರಕಾಶ್ ಹೆಸರಲ್ಲಿ ಪ್ರಶಸ್ತಿಯೂ ಕೊಡಮಾಡಲ್ಪಡುತ್ತಿತ್ತು. ರಂಗಭೂಮಿಯ ಅನೇಕ ಹಿರಿಯರು ಪ್ರಶಸ್ತಿ ಸ್ವೀಕರಿಸಿದ್ದರು.
ಶಿರಸಿಯ ‘ರಂಗಸಂಗ’ ಕ್ಕಾಗಿಯೂ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದರು.
ಇನ್ನೂ ಹಲವು ವರ್ಷ ರಂಗಕಾಯಕ ಮಾಡಬಹುದಾಗಿದ್ದ ಪ್ರಕಾಶ್ ಅನಾರೋಗ್ಯ ದಿಂದ ಹಠಾತ್ ನಿರ್ಗಮಿಸದ್ದಾರೆ.
ಅವರಿಗೆ ನಮನಗಳು.
‘ಚಿಂತನ ರಂಗ ಅಧ್ಯಯನ ಕೇಂದ್ರ’ ಮತ್ತು ‘ ಚಿಂತನ ಉತ್ತರ ಕನ್ನಡ’, ಕೆ. ಆರ್ ಪ್ರಕಾಶ್ ರಿಗೆ ಗೌರವಗಳನ್ನು ಸಲ್ಲಿಸುತ್ತವೆ.. ( ಕಿರಣ್ ಭಟ್ ಹೊನ್ನಾವರ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *