ಎಸ್. ಬಂಗಾರಪ್ಪ ವಿರಳ ಛಲದಂಕಮಲ್ಲ

ಕಲರ್ ಪುಲ್ ರಾಜಕಾರಣ, ಧೈರ್ಯ ಮತ್ತು ದರ್ಪಕ್ಕೆ ಎಸ್ ಬಂಗಾರಪ್ಪಸಾಕ್ಷಿ .ಹಾಗೊಂದು ವೇಳೆ ಅವರಿಗೆ ಸಹನೆ ಒಲಿದಿದ್ದರೆ ನೊ ಡೌಟ್ ಅವರು ಕರ್ನಾಟಕ ಗಡಿಗೋಡೆಯನ್ನು ಒಡೆದು ದೇಶದ ಮೂಂಚೂಣಿ ರಾಜಕಿಯ ನಾಯಕರಾಗಿರುತ್ತಿದ್ದರು.. ಆದರೆ ರಾಜಕಾರಣದಲ್ಲಿ ಇರಬೇಕಾದ ಸಹನೆಯೆ ಅವರಿಗಿರಲಿಲ್ಲ..ನಾ ಹೇಳುತ್ತಿರುವುದು ಎಸ್ ಬಂಗಾರಪ್ಪನವರ ಬಗ್ಗೆ, ನೀವೇನೆ ತಿಳಿದುಕೊಳ್ಳಿ ಎಸ್, ಬಂಗಾರಪ್ಪ ಅತ್ಯಂತ ಸಾಮಾಜಿಕ ಕಳಕಳಿಯ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ… ಅವರು ಹುಟ್ಟಿದ್ದು ಇದೇ ಸೊರಬ ತಾಲುಕಿನ ಕೂಬಟೂ ರಿನಲ್ಲಿ, ಅತ್ಯಂತ ಕನಿಷ್ಠ ಸೌಲಭ್ಯಗಳಿರುವ ಹಳ್ಳಿಯ ಕಡುಬಡತನದ ಕುಟುಂಬದ ಎಲೆ ಮರೆಯ ಕಾಯಿ ಇವರು….

ಮೈಸೂರಿನಲ್ಲಿ ಬಿ.ಎ.ಆನರ್ಸ.ಓದಿದ ಮೇಲೆ ಎಲ್.ಎಲ್.ಬಿ. ಮುಗಿಸಿ ಸಮಾಜವಾದ ಸಿದ್ಧಾಂತಕ್ಕೆ ಮನಸೋತವರು..ಆಗೆಲ್ಲ ಶಿವಮೊಗ್ಗವೆಂದರೆ ಕರ್ನಾಟಕದ ಚಿಂತಕರ ಚಾವಡಿ ಅಂತ ಹೆಸರಿತ್ತು. ರಾಮಮನೋಹರಲೋಹಿಯಾರವರ ಸಮಾಜವಾದಿ ಸಿದ್ಧಾಂತ ರಂಗೇರುವ ಘಳಿಗೆ, ಇಲ್ಲಿ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಹೋರಾಟದ ಮೂಂಚೂಣಿಯಲ್ಲಿ ನಿಂತಾಗ, ಈ ಬಂಗಾರಪ್ಫ, ಕಾಗೋಡು ತಿಮ್ಮಪ್ಪ ಕೋಣಂದೂರು ಲಿಂಗಪ್ಪರಂತಹ ಅನೇಕ ಯುವ ಚಿಂತಕರು ಅವರ ಜೊತೆಗೂಡಿ ಹೊಸ ವೈಚಾರಿಕ ಕ್ರಾಂತಿಗೆ ವೇದಿಕೆಯಾಗಿ ಬಿಟ್ಟರು..ಎಸ್.ಬಂಗಾರಪ್ಪನವರು 1967ರಲ್ಲಿ ಸಮಾಜವಾದಿ ಸಿದ್ಧಾಂತದ ಆಕರ್ಷಣೆಯೊಂದಿಗೆ ರಾಜಕಾರಣದ ಪರೀಕ್ಷೆಯಲ್ಲಿ ಪಾಸಾ ಗಿದ್ದರು…ಸೊರಬದಲ್ಲಿ ಗೆದ್ದು ವಿಧಾನ ಸಭೆ ಪ್ರವೇಶ ಮಾಡಿದ್ದರು.ಅದೆಂತಾ ಆಕ್ರೋಶ ಆವೇಶವಿತ್ತೆಂದರೆ, ಅವರ ಘನ ಗಾಂಭೀರ್ಯದ ಎದುರು ನಿಲ್ಲುವುದೆ ಸಾಮಾನ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ಬಂಗಾರಪ್ಪ ಮಾತಾಡುವಾಗ ವಿಧಾನ ಸಭೆ ಪಿನ್ ಡ್ರಾಪ್ ಸೈಲೆನ್ಸ ಆಗುವಷ್ಟು ಉತ್ತಮ ವಾಗ್ಮೀಯತೆ ಅವರಿಗಿತ್ತು..

ಹುಟ್ಟು ಬಡತನ ಶೋಷಣೆಯ ಜೀವನ, ಶಿಕ್ಷಣಕ್ಕಾಗಿ ಕೆಳವರ್ಗದವರ ಪರಿಶ್ರಮ, ದೇವಾಲಯಗಳಲ್ಲಿ ಜಾತಿ ಆಧರಿತ ಬಹಿಷ್ಕಾರ ಬಂಗಾರಪ್ಪರನ್ನು ವೈಚಾರಿಕತೆಗಿಂತ ಕ್ರಾಂತಿಕಾರಿ ವಿಚಾರಧಾರೆಯತ್ತ ಎಳೆದೊಯ್ದ ಘಳಿಗೆ ಅದು…ತನ್ನೊಡಲ ತುಂಬಾ, ಶೋಷಿತ ಸಮಾಜದ ಧ್ವನಿಯನ್ನು ತುಂಬಿಕೊಂಡ ಬಂಗಾರಪ್ಪ ತಮ್ಮ ಸಿಡುಕು ಅಸಹನೆಯಿಂದ ರಾಜಕಾರಣದಲ್ಲಿ ಪ್ರಜ್ವಲಿಸುವ ಸೂರ್ಯನಂತೆ ಬೆಳಗಿಬಿಟ್ಟರು..ಯಾರೆಂದರೆ ಯಾರಿಗೂ ಕ್ಯಾರೆ ಎನ್ನದ ಮನಸ್ಥಿತಿಗೆ ಅವರು ಅನುಭವಿಸಿದ ಶೋಷಣಾ ನೀತಿಗಳೆ ಕಾರಣವಾಗಿತ್ತು..ಅವರು ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ, ಅತಿ ಉತ್ತಮ ವಾಗ್ಮೀ, ಸಾಹಿತ್ಯ , ಕಲೆ ಸಂಗೀತ ಪ್ರೇಮಿ,.ಅವರು ಸಂಗೀತದಲ್ಲಿ ಆಸಕ್ತರಾದಾಗ ಇರುವ ಸಹನೆ ರಾಜಕಾರಣದಲ್ಲಿ ಇರಬೇಕಿತ್ತು….ಅವರೊಬ್ಬ ಭಾರತಿಯ ಬಹು ಎತ್ತರದ ರಾಜಕಾರಣಿಯಾಗಿರುತ್ತಿದ್ದರು….

ಆದರೆ ಆವರ ಸಿಡುಕು ,ದರ್ಪ, ಅವರ ವ್ಯಕ್ತಿತ್ವದ ಪ್ರಕಾಶನಕ್ಕೆ ಅಡ್ಡಗಾಲಾಗಿದ್ದು ಅವರಿಗೆ ತಿಳಿಯಲಿಲ್ಲ್ಲ.ಕರ್ನಾಟಕದ ರಾಜಕಾರಣದ ಮಜಲುಗಳನ್ನು ಅವರು ಬದಲಿಸಿದಷ್ಟು ಲೀಲಾಜಾಲವಾಗಿ ಯಾರಿಂದಲು ಬದಲಿಸಲು ಸಾಧ್ಯವಾಗಿಲ್ಲ….ಭಾರತದ ಉಕ್ಕಿನ ಮಹಿಳೆ ಇಂದಿರಾಗಾಂಧಿಗೆ ಕಪ್ಪು ಬಾವುಟ ತೋರಿಸಿ ದಿಕ್ಕರಿಸಿದ ಅವರು ಅದೇ ಇಂದಿರಾಗಾಂಧಿಯಿಂದ ಕೆಪಿಸಿಸಿ ಅಧ್ಯಕ್ಷರೆಂದು ಘೋಷಿಸಿಕೊಂಡು ಬಂದ ಧೀರ ವ್ಯಕ್ತಿತ್ವ….ಅವರೇನು ಸಾಮಾನ್ಯರೇ, ಗುಡುಗುವ ರಭಸಕ್ಕೆ ಭಾರತವೆ ಅಲ್ಲಾಡುವಂತೆ ಮಾಡುವ ಒಂಟಿಸಲಗ,… ಇಟ್ಟೆ ಹೆಜ್ದೆಗಳೆಲ್ಲ ಹೆಗ್ಗುರುತು…ಅಂತೂ ಮುಖ್ಯಮಂತ್ರಿಯಾಗಿಯೆ ಬಿಟ್ಟರು,.ಆಮೇಲಿನ ರಾಜಕಿಯ ಪರ್ವ ಕೂತೂಹಲಕಾರಿ, ಆಶ್ರಯ, ಅಕ್ಷ ಯ, ಆರಾಧನಾ, ಶಶ್ರೂಷ,, ವಿಶ್ವ, ಕೃಪಾಂಕ, ಉಚಿತ ವಿದ್ಯುತ್, ಏಕಲವ್ಯ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕನ್ನಡ ಪ್ರಾಧಿಕಾರ ರಚನೆ, ಬ್ಯಾಟ್ಮಿಂಟನ್ ಅಶೋಸಿಯೇಶನ್, ಹೀಗೆ ನವಯುಗದ ಅಭಿವೃದ್ಧಿಯ ನವ ಹೆಜ್ಜೆಗಳು ಅವರ ಸಾಮಾಜಿಕ ಜನಪರ ನಿಲುವಿಗೆ ಸಾಕ್ಷಿ ಒದಗಿಸುತ್ತವೆ…‌‌‌ಕ್ರಾಂತಿರಂಗ ಕಟ್ಟಿ ಕಾಂಗ್ರೆಸ್ಸೇತರ ಸರಕಾರ.ರಚನೆಯಲ್ಲಿ ಬಂಗಾರಪ್ಪನವರದ್ದು ಸಿಂಹ ಪಾಲು, ಉಪಮುಖ್ಯಮಂತ್ರಿ ಹುದ್ದೆಯನ್ನು ತಿರಸ್ಕರಿಸಿ ರಾಜಕಾರಣದ ದಿಕ್ಕನ್ನೆ ಬದಲಾಯಿಸಿದ ಛಲಗಾರ….. ಆದೇ ಸೇಡಿಗೆ ಭಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಚುನಾವಣೆಗೆ ಸ್ಪರ್ಧಿಸಿದಾಗ ಆನಾಮಧೇಯ ಸಿದ್ದು ನ್ಯಾಮೆಗೌಡರನ್ನು ಪ್ರತಿಯಾಳಾಗಿ ನಿಲ್ಲಿಸಿ ಗೆಲ್ಲಿಸಿಕೊಂ ಡು ಬಂದ ರಾಜಕೇಸರಿ……ಪಕ್ಷಾಂತರದ ಪರ್ವದಲ್ಲಿ ನಂಬರ್ 1 ಇವರೆ….ಎಂ ಎಲ್ ಎಗಳ ಸೃಷ್ಟಿಸುವ ಫ್ಯಾಕ್ಟರಿ, ಅವರೇನೇ ಆದರೂ ಅವರಲ್ಲಿರುವ ಸಾಮಾಜಿಕ ಕಳಕಳಿ ಮಾತ್ರ ನಿತ್ಯಗೋಚರ…ಬಂಗಾರಪ್ಪನವರ ಮಾವನ ಮನೆ ನನ್ನೂರಿನ ಸಮೀಪದ ಮಳಲಗಾಂವ, ನಾವು ಪಿ.ಯೂ.ಸಿ ವಿದ್ಯಾರ್ಥಿಯಾಗಿರುವಾಗಲೆ ಅವರೊಂದಿಗೆ ಮಾತಾಡಿದ ನೆನಪು ಹಸಿರಾಗಿದೆ… ಬಂಗಾರಪ್ಪರ.ಕೃಪೆಯಿಲ್ಲದೆ ಉತ್ತರ ಕನ್ನಡದ ರಾಜಕಾರಣ ಸಂಪೂರ್ಣವಾಗುತ್ತಿರಲಿಲ್ಲ….ಅವರೊಂದು ಶಕ್ತಿ, ಅವರ ಹೆಸರೆ ಶಕ್ತಿಯಾದಂತೆ ಬದುಕಿದ್ದರು …ಆದರೆ ಅವರ ಕುಟುಂಬದ ವಿರೋಧಭಾಸ ನಡೆಯಿಂದ ಬಂಗಾರಪ್ಪ ಅಕ್ಷರಶಃ ನಲುಗಿಹೋದರು ಅದೇ ನೋವಿನಲ್ಲಿ ಯಾತ್ರೆ ಮುಗಿಸಿಬಿಟ್ಟರು… ಧೀರೋದ್ಧಾತ ನಾಯಕನ ಜೀವನ ಕೊನೆಗಾಲದಲ್ಲಿ ಸ್ವ ಕುಟುಂಬದ ವಿಲಕ್ಷಣೆ ನಡೆಯಿಂದ ನಲುಗಿ ನರಳಿ ಯಾತ್ರೆ ಮುಗಿಸಿತ್ತು..ಅದೊಂದು ವಿಷಾಧ ಗೀತೆಯಂತೆ…

-.‌‌‌ರಾಜು ನಾಯಕ, ಬಿಸಲಕೊಪ್ಪ….

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *