no shivaji- ಶಿವಾಜಿ ಬೇಡ, ಸದಾಶಿವರಾಯ ನಾಯಕ ಬೇಕು

ಸದಾಶಿವಗಡ ಕೋಟೆಯ ನಿರ್ಮಾತೃ ” ಸೋದೆಸದಾಶಿವರಾಯ”

———————————ಕಾರವಾರದ ಸದಾಶಿವಗಡ ಐತಿಹಾಸಿಕ ಪ್ರದೇಶ,ಕಾರವಾರಕ್ಕೆ ಸಾವಿರಾರು ವರ್ಷದ ಸ್ಪಷ್ಟ ಚಾರಿತ್ರಿಕ ಹಿನ್ನೆಲೆ ಇದ್ದರೂ,೧೬ ನೇ ಶತಮಾನದಿಂದ ಈ ಪ್ರದೇಶಕ್ಕೆ ಹೆಚ್ಚಿನ ಮಹತ್ವ ಬಂದಿತ್ತು,ಕಾರಣ ಐರೋಪ್ಯರ ಆಗಮನ,ಬ್ರಿಟಿಷರು,ಪೋರ್ಚುಗೀಸರು ಈ ಪ್ರದೇಶವನ್ನು ತಮ್ಮ ಅನುಕೂಲತೆಗೆ ತಕ್ಕ ಹಾಗೆ ಬಳಸಿ ಇದನ್ನು ತಮ್ಮ ವ್ಯಾಪಾರಿ ಕೇಂದ್ರವನ್ನಾಗಿಸಿಕೊಂಡಿದ್ದರು,ಆ ಸಂದರ್ಭದಲ್ಲಿ ಉತ್ತರ ಕನ್ನಡಜಿಲ್ಲೆಯ ಪ್ರಮುಖ ಆಳರಸರಾಗಿದ್ದವರು ಸೋದೆಯ ಅರಸರು,ಕಾರವಾರ ಕೂಡಾ ಇವರ ಹಿಡಿತದಲ್ಲೇ ಇತ್ತು,೧೭ ನೇ ಶತಮಾನದ ಮಧ್ಯಭಾಗದಲ್ಲಿ ಸೋದೆಯ ಅರಸನಾಗಿದ್ದ ಸದಾಶಿವರಾಯನು ಬ್ರಿಟಿಷರನ್ನು ಹೇಗಾದರೂ ಮಾಡಿ ಮಟ್ಟ ಹಾಕಲೇಬೇಕೆಂದು ಕಾರವಾರದಿಂದ ಅವರನ್ನು ಓಡಿಸಲೇಬೇಕೆಂದು ತೀರ್ಮಾನಿಸಿ ಅಲ್ಲಿ ಒಂದು ಕೋಟೆಯನ್ನು ಕಟ್ಟಿಸುತ್ತಾನೆ,(ನಂತರ ಅದನ್ನು ಸೋದೆಯ ಬಸವಲಿಂಗರಾಯ ಬಲಿಷ್ಠಪಡಿಸಿದ) ಅದುವೇ ಸದಾಶಿವಗಡ ಕೋಟೆ,ಸಾಮಾನ್ಯವಾಗಿ ಗಡ ಎಂದರೆ ಕೋಟೆ ಅಂತಲೇ ಅರ್ಥ,ಸದಾಶಿವಗಡ ಎಂದರೆ ಸದಾಶಿವರಾಯನ ಕೋಟೆ ಎಂದೇ ಅರ್ಥ,

ಈ ವಿಷಯಕ್ಕೆ ಸಾಕಷ್ಟು ಆಧಾರಗಳಿವೆ,ಅಲ್ಲದೆ ಬ್ರಿಟಿಷರನ್ನು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಸೋಲಿಸಿದ್ದೂ ಇದೇ ಸೋದೆ ಸದಾಶಿವರಾಯ! ಆದರೆ ಈ ಕೀರ್ತಿ ಒಲಿದದ್ದು ಮಾತ್ರ ಹೈದರಲಿಗೆ!!! ಕಾರವಾರದಲ್ಲಿ ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ವಿಜಯದಾಖಲಿಸಿದ್ದು ನಮ್ಮ ಹೆಮ್ಮೆಯ ಸೋದೆ ಸದಾಶಿವರಾಯ,ಆ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ಸದಾಶಿವಗಡದಲ್ಲಿ ” ವಿಜಯದಿವಸ” ವನ್ನೂ ಆಚರಿಸುತ್ತಿದ್ದಾರೆ,ಇಷ್ಟೆಲ್ಲ ಇರುವಾಗ ಈಗ ಸದಾಶಿವರಾಯನ ಕೋಟೆ ಶಿವಾಜಿಯ ಕೋಟೆ ಎಂದು ಸುಮ್ಮಸುಮ್ಮನೆ ಬಿಂಬಿಸುತ್ತಾ ಅಲ್ಲಿ ಶಿವಾಜಿಯವರ ಪುತ್ಥಳಿಯನ್ನು ನಿರ್ಮಿಸಲು ಮುಂದಾಗಿರುವುದು ತುಂಬಾ ಬೇಸರದ ಸಂಗತಿ,ಇತಿಹಾಸದ ತಿಳಿವಳಿಕೆ ಯಾಕೆ ಬೇಕೆಂದರೆ ಅಭಿಮಾನಕ್ಕೋಸ್ಕರ,ತನ್ಮೂಲಕ ಅಭಿವೃದ್ಧಿಯ ಆಶಯಕ್ಕೋಸ್ಕರ,ಅದೇ ಅಭಿಮಾನ ಅವಾಂತರಕ್ಕೆ ಕಾರಣವಾಗಬಾರದು,ಒಂದು ವೇಳೆ ಸದಾಶಿವಗಡದ ಕೋಟೆಯಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪನೆಯಾದರೆ ಮುಂದಿನ ತಲೆಮಾರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ,ನಮಗೆ ಶಿವಾಜಿಯ ಮೇಲೂ ಆತ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಕಾರ್ಯದ ಮೇಲೂ ಅಪಾರ ಅಭಿಮಾನವಿದೆ,ಹಾಗಂತ ನಮ್ಮ‌ನೆಲದ ಹೆಮ್ಮೆಯ ಅರಸರ ಸಾಧನೆಯನ್ನು ಅಲ್ಲಗಳೆಯಲಾದೀತೇ? ಅದು ಸಮಂಜಸವಲ್ಲ,ಶಿವಾಜಿಯ ಮೂರ್ತಿಯನ್ನು ಈ ಸ್ಥಳದ ಬದಲಿಗೆ ಬೇರೆ ಸ್ಥಳದಲ್ಲಿ ಸ್ಥಾಪಿಸಿ,ಈ ಸ್ಥಳದಲ್ಲಿ ಸೋದೆ ಸದಾಶಿವರಾಯನ ಮೂರ್ತಿಯನ್ನು ಸ್ಥಾಪಿಸಿ, ಆಗ ಅವರ ಪರಿಶ್ರಮಕ್ಕೊಂದು ಬೆಲೆ ಪ್ರಾಪ್ತಿಯಾಗುತ್ತದೆ, ಕಳೆದ ೪ ವರ್ಷದಿಂದ ನಾವು ಮನವಿಕೊಡುತ್ತಿದ್ದೇವೆ,ಕೇಳಿಕೊಳ್ಳುತ್ತಿದ್ದೇವೆ,ಶಿರಸಿಯ ಸ್ಥಾಪಕ ಸೋದೆ ರಾಮಚಂದ್ರ ನಾಯಕ,ಹೀಗಾಗಿ ಈ ಸಂಗತಿ ಮುಂದಿನ ಯುವ ತಲೆಮಾರಿಗೆ ತಿಳಿದಿರಬೇಕೆಂದರೆ ದಯವಿಟ್ಟು ಶಿರಸಿಯಲ್ಲಿ ಆತನದೊಂದು ಪುತ್ಥಳಿ ಸ್ಥಾಪಿಸಿ ಅಥವಾ ಯಾವುದಾದರೂ ಸರ್ಕಲ್ ಗಾದರೂ ಆತನ ಹೆಸರಿಡಿ ಎಂದು….ಯಾರಿಗೂ ಕಿವಿಯೇ ಕೇಳುತ್ತಿಲ್ಲ ನಾನೇನುಮಾಡಲಿ….ಎಲ್ಲವನ್ನೂ ರಾಜಕೀಯ ಲಾಭದ ನೆಲೆಯಲ್ಲೇ ದಯವಿಟ್ಟು ನೋಡಬೇಡಿ,ಸಾಂಸ್ಕೃತಿಕವಾಗಿ ಚಿಂತಿಸಿ,ಚರಿತ್ರೆಯ ಅದ್ಭುತ ಸಂಗತಿಗಳನ್ನು ಚಿರಂತನಗೊಳಿಸಿ

-ಲಕ್ಷ್ಮೀಶ್ ಹೆಗಡೆ, ಸೋಂದಾ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *