no shivaji- ಶಿವಾಜಿ ಬೇಡ, ಸದಾಶಿವರಾಯ ನಾಯಕ ಬೇಕು

ಸದಾಶಿವಗಡ ಕೋಟೆಯ ನಿರ್ಮಾತೃ ” ಸೋದೆಸದಾಶಿವರಾಯ”

———————————ಕಾರವಾರದ ಸದಾಶಿವಗಡ ಐತಿಹಾಸಿಕ ಪ್ರದೇಶ,ಕಾರವಾರಕ್ಕೆ ಸಾವಿರಾರು ವರ್ಷದ ಸ್ಪಷ್ಟ ಚಾರಿತ್ರಿಕ ಹಿನ್ನೆಲೆ ಇದ್ದರೂ,೧೬ ನೇ ಶತಮಾನದಿಂದ ಈ ಪ್ರದೇಶಕ್ಕೆ ಹೆಚ್ಚಿನ ಮಹತ್ವ ಬಂದಿತ್ತು,ಕಾರಣ ಐರೋಪ್ಯರ ಆಗಮನ,ಬ್ರಿಟಿಷರು,ಪೋರ್ಚುಗೀಸರು ಈ ಪ್ರದೇಶವನ್ನು ತಮ್ಮ ಅನುಕೂಲತೆಗೆ ತಕ್ಕ ಹಾಗೆ ಬಳಸಿ ಇದನ್ನು ತಮ್ಮ ವ್ಯಾಪಾರಿ ಕೇಂದ್ರವನ್ನಾಗಿಸಿಕೊಂಡಿದ್ದರು,ಆ ಸಂದರ್ಭದಲ್ಲಿ ಉತ್ತರ ಕನ್ನಡಜಿಲ್ಲೆಯ ಪ್ರಮುಖ ಆಳರಸರಾಗಿದ್ದವರು ಸೋದೆಯ ಅರಸರು,ಕಾರವಾರ ಕೂಡಾ ಇವರ ಹಿಡಿತದಲ್ಲೇ ಇತ್ತು,೧೭ ನೇ ಶತಮಾನದ ಮಧ್ಯಭಾಗದಲ್ಲಿ ಸೋದೆಯ ಅರಸನಾಗಿದ್ದ ಸದಾಶಿವರಾಯನು ಬ್ರಿಟಿಷರನ್ನು ಹೇಗಾದರೂ ಮಾಡಿ ಮಟ್ಟ ಹಾಕಲೇಬೇಕೆಂದು ಕಾರವಾರದಿಂದ ಅವರನ್ನು ಓಡಿಸಲೇಬೇಕೆಂದು ತೀರ್ಮಾನಿಸಿ ಅಲ್ಲಿ ಒಂದು ಕೋಟೆಯನ್ನು ಕಟ್ಟಿಸುತ್ತಾನೆ,(ನಂತರ ಅದನ್ನು ಸೋದೆಯ ಬಸವಲಿಂಗರಾಯ ಬಲಿಷ್ಠಪಡಿಸಿದ) ಅದುವೇ ಸದಾಶಿವಗಡ ಕೋಟೆ,ಸಾಮಾನ್ಯವಾಗಿ ಗಡ ಎಂದರೆ ಕೋಟೆ ಅಂತಲೇ ಅರ್ಥ,ಸದಾಶಿವಗಡ ಎಂದರೆ ಸದಾಶಿವರಾಯನ ಕೋಟೆ ಎಂದೇ ಅರ್ಥ,

ಈ ವಿಷಯಕ್ಕೆ ಸಾಕಷ್ಟು ಆಧಾರಗಳಿವೆ,ಅಲ್ಲದೆ ಬ್ರಿಟಿಷರನ್ನು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ಸೋಲಿಸಿದ್ದೂ ಇದೇ ಸೋದೆ ಸದಾಶಿವರಾಯ! ಆದರೆ ಈ ಕೀರ್ತಿ ಒಲಿದದ್ದು ಮಾತ್ರ ಹೈದರಲಿಗೆ!!! ಕಾರವಾರದಲ್ಲಿ ಹದಿನೇಳನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ವಿಜಯದಾಖಲಿಸಿದ್ದು ನಮ್ಮ ಹೆಮ್ಮೆಯ ಸೋದೆ ಸದಾಶಿವರಾಯ,ಆ ಹಿನ್ನೆಲೆಯಲ್ಲಿಯೇ ಪ್ರತಿವರ್ಷ ಸದಾಶಿವಗಡದಲ್ಲಿ ” ವಿಜಯದಿವಸ” ವನ್ನೂ ಆಚರಿಸುತ್ತಿದ್ದಾರೆ,ಇಷ್ಟೆಲ್ಲ ಇರುವಾಗ ಈಗ ಸದಾಶಿವರಾಯನ ಕೋಟೆ ಶಿವಾಜಿಯ ಕೋಟೆ ಎಂದು ಸುಮ್ಮಸುಮ್ಮನೆ ಬಿಂಬಿಸುತ್ತಾ ಅಲ್ಲಿ ಶಿವಾಜಿಯವರ ಪುತ್ಥಳಿಯನ್ನು ನಿರ್ಮಿಸಲು ಮುಂದಾಗಿರುವುದು ತುಂಬಾ ಬೇಸರದ ಸಂಗತಿ,ಇತಿಹಾಸದ ತಿಳಿವಳಿಕೆ ಯಾಕೆ ಬೇಕೆಂದರೆ ಅಭಿಮಾನಕ್ಕೋಸ್ಕರ,ತನ್ಮೂಲಕ ಅಭಿವೃದ್ಧಿಯ ಆಶಯಕ್ಕೋಸ್ಕರ,ಅದೇ ಅಭಿಮಾನ ಅವಾಂತರಕ್ಕೆ ಕಾರಣವಾಗಬಾರದು,ಒಂದು ವೇಳೆ ಸದಾಶಿವಗಡದ ಕೋಟೆಯಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪನೆಯಾದರೆ ಮುಂದಿನ ತಲೆಮಾರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ,ನಮಗೆ ಶಿವಾಜಿಯ ಮೇಲೂ ಆತ ಹಿಂದೂ ಧರ್ಮದ ರಕ್ಷಣೆಗೆ ಮಾಡಿದ ಕಾರ್ಯದ ಮೇಲೂ ಅಪಾರ ಅಭಿಮಾನವಿದೆ,ಹಾಗಂತ ನಮ್ಮ‌ನೆಲದ ಹೆಮ್ಮೆಯ ಅರಸರ ಸಾಧನೆಯನ್ನು ಅಲ್ಲಗಳೆಯಲಾದೀತೇ? ಅದು ಸಮಂಜಸವಲ್ಲ,ಶಿವಾಜಿಯ ಮೂರ್ತಿಯನ್ನು ಈ ಸ್ಥಳದ ಬದಲಿಗೆ ಬೇರೆ ಸ್ಥಳದಲ್ಲಿ ಸ್ಥಾಪಿಸಿ,ಈ ಸ್ಥಳದಲ್ಲಿ ಸೋದೆ ಸದಾಶಿವರಾಯನ ಮೂರ್ತಿಯನ್ನು ಸ್ಥಾಪಿಸಿ, ಆಗ ಅವರ ಪರಿಶ್ರಮಕ್ಕೊಂದು ಬೆಲೆ ಪ್ರಾಪ್ತಿಯಾಗುತ್ತದೆ, ಕಳೆದ ೪ ವರ್ಷದಿಂದ ನಾವು ಮನವಿಕೊಡುತ್ತಿದ್ದೇವೆ,ಕೇಳಿಕೊಳ್ಳುತ್ತಿದ್ದೇವೆ,ಶಿರಸಿಯ ಸ್ಥಾಪಕ ಸೋದೆ ರಾಮಚಂದ್ರ ನಾಯಕ,ಹೀಗಾಗಿ ಈ ಸಂಗತಿ ಮುಂದಿನ ಯುವ ತಲೆಮಾರಿಗೆ ತಿಳಿದಿರಬೇಕೆಂದರೆ ದಯವಿಟ್ಟು ಶಿರಸಿಯಲ್ಲಿ ಆತನದೊಂದು ಪುತ್ಥಳಿ ಸ್ಥಾಪಿಸಿ ಅಥವಾ ಯಾವುದಾದರೂ ಸರ್ಕಲ್ ಗಾದರೂ ಆತನ ಹೆಸರಿಡಿ ಎಂದು….ಯಾರಿಗೂ ಕಿವಿಯೇ ಕೇಳುತ್ತಿಲ್ಲ ನಾನೇನುಮಾಡಲಿ….ಎಲ್ಲವನ್ನೂ ರಾಜಕೀಯ ಲಾಭದ ನೆಲೆಯಲ್ಲೇ ದಯವಿಟ್ಟು ನೋಡಬೇಡಿ,ಸಾಂಸ್ಕೃತಿಕವಾಗಿ ಚಿಂತಿಸಿ,ಚರಿತ್ರೆಯ ಅದ್ಭುತ ಸಂಗತಿಗಳನ್ನು ಚಿರಂತನಗೊಳಿಸಿ

-ಲಕ್ಷ್ಮೀಶ್ ಹೆಗಡೆ, ಸೋಂದಾ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *