ಕೂಡ್ಲ ಕೃಷ್ಣನ ಕತೆ .. ಕಳ್ಳನೊಬ್ಬನ ಮಾನವೀಯ ಮುಖ…

…..ಕೆಲವೊಂದು ವಿಚಾರಗಳು ದಾಖಲಾಗದೆ ಐತಿಹ್ಯದ ರೂಪದಲ್ಲಿ ಚಲಾವಣೆಯಲ್ಲಿ ಉಳಿದು ಬಿಡುತ್ತವೆ.. ಆ ವ್ಯಕ್ತಿಯ.ಬಗ್ಗೆ ಯಾರೆಂದರೆ ಯಾರು ಕೂಡ ಸೂಕ್ತ ಮಾಹಿತಿ ನೀಡಿಲ್ಲ. ನನ್ನ ತಂದೆಯವರು ಹೇಳಿದ ವಿಷಯವನ್ನು ಕೇಳಿದ ನಾನು ನೆನಪಿನಲ್ಲಿ ಇದ್ದಷ್ಟನ್ನು ಮುಕ್ತವಾಗಿಸಿ ಬಿಡುತ್ತೇನೆ…ಕೂಡ್ಲ ಇದು ಹೊನ್ನಾವರ ತಾಲೂ ಕಿನ ಶರಾವತಿ ನದಿಯ ಉಪನದಿ ಗುಂಡಬಾಳ ನದಿ ದಂಡೆಯ ಮೇಲಿರುವ ಚಿಕ್ಕ ಹಳ್ಳಿ ನನ್ನ ತಂದೆಯ ಹುಟ್ಟೂ ರು ನನ್ನ ಅಜ್ಜ ಕೃಷ್ಣ ನಾಯ್ಕ ವಲಸೆ ಬಂದು ಗೂಡುಕಟ್ಟಿದ ಊರು..

ನನ್ನ ದೊಡ್ಡಪ್ಪ ಯಕ್ಷಗಾನ ಕ್ಷೇತ್ರದ ಮಹಾನ್ ಅರ್ಥದಾರಿ ನಾರಾಯಣ ನಾಯ್ಕರು ಬಾಳಿದ ಊರು..ಇದೆ ಊರು ಮಹಾನ ಕಳ್ಳ ಕೂಡ್ಲ ಕೃಷ್ಣನ ಮಾನವವೀಯ ಕಳ್ಳತನಗಳ ಕಥೆಯ ಕಣಜ..ಅಂತಹವರು ತುಂಬಾ ವಿರಳ, ಕಳ್ಳತನವನ್ನೆ ಕಸುಬಾಗಿಸಿಕೊಂಡ ವ್ಯಕ್ತಿ ಜನೋಪಕಾರಿಯಾಗಿ ದಂತಕಥೆಯಾದ..ಘಟನೆ ಇದು.. ಇದೆ ಕೂಡ್ಲ ಗ್ರಾಮದ ಗ್ರಾಮವಕ್ಕಲಿಗ ಮನೆತನದಲ್ಲಿ ನನ್ನಪ್ಪನಿಗಿಂತ 25 ವರ್ಷ ದೊಡ್ಡವನಾಗಿ ಹುಟ್ಟಿದವನು. ..(..ಆ ಕುಟುಂಬ ಈಗಲು ಅಲ್ಲಿ ಇದೆ… )..ಈ ಕೂಡ್ಲಕೃಷ್ಣ. ಚಿಕ್ಕ ವಯಸ್ಸಿನಿಂದಲೆ ಕಳ್ಳತನ ಶುರುಹಚ್ಚಿಕೊಂಡು ದೊಡ್ಡ ಕಳ್ಳನಾಗಿ, ಕಳ್ಳತನ ಮಾಡಿದ ಹಣವನ್ನೆಲ್ಲ ನಿರ್ಗತಿಕರಿಗೆ ದಾನ ಮಾಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು, ದುರಂತ ಬಾಳುಬಾಳಿದ ವ್ಯತಿರಿಕ್ತ ವ್ಯಕ್ತಿಯಾಗಿ, ಉತ್ತರ ಕನ್ನಡ ಜಿಲ್ಲೆಯ.ಕರವಾಳಿಭಾಗದಲ್ಲಿ ದಂತಕಥೆಯಾಗಿ ಮರೆಯಾದವನು ಕೂಡ್ಲ ಕೃಷ್ಣ..ಆಡುಭಾಷೆಯಲ್ಲಿ ಅವನನ್ನು ಕೂಡ್ಲ ಕುಟ್ನ ಅಂತ ನೆನಪಿಸಿಕೊಳ್ಳುತ್ತಾರೆ..

. ಅವನ ಬಗ್ಗೆ ಅವನ ಕಳ್ಳತನಗಳ ಬಗ್ಗೆ ಅನೇಕ ಐತಿಹ್ಯಗಳಿವೆ..ತಾನು ಶ್ರೀಮಂತರ ಮನೆಯಲ್ಲಿ ಕಳ್ಳತನ ಮಾಡಿ ತಂದ ಹಣ ಬಂಗಾರವನ್ನು ಊಟಕ್ಕೆ ಗತಿಯೇ ಇಲ್ಲದ ಬಡವರಿಗೆ ಹಂಚಿಬಿಡುತ್ತಿದ್ದನಂತೆ… ಚಾಲೆಂಜ್ ಹಾಕಿ ಕಾಯುತ್ತಾ ಕುಳಿತವರ ಮನೆಯನ್ನು ಚಾಣಾಕ್ಷತನದಲ್ಲಿ ಕದ್ದು ಭೇಷ್ ಎನಿಸಿಕೊಂಡು ಮಾರನೆದಿನ ಅವರ ಹಣಬಂಗಾರವನ್ನು ಅವರಿಗೆ ಕೊಟ್ಟಾಗ ಊರಿಗೆ ಊರೆ ಕೂಡ್ಲ ಕುಟ್ನನ ಬಗ್ಗೆ ಮಾತಾಡಿಕೊಂಡಿತ್ತಂತೆ…ಯಕ್ಷಗಾನ ನೋಡುತ್ತಾ ಕುಳಿತ ವ್ಯಕ್ತಿ ಸದ್ದಿಲ್ಲದೆ ದೂರದ ಸಿದ್ಧಾಪುರದಲ್ಲಿ ಕಳ್ಳತನ ಮಾಡಿ ಬಂದು ಬೆಳಗಿನಜಾವ ಯಕ್ಷಗಾನ ಮೇಳದವರಿಗೆ ದುಡ್ಡು ಕೊಟ್ಟನಂತೆ… ಮುದುಕಿಯೊಬ್ಬಳು ಹಸಿವೆಯಿಂದ ಅವನ ಎದುರು ಹೊಟ್ಟೆ ಬಡಿದುಕೊಂಡಾಗ ನನ್ನ ಎದುರು ಹೊಟ್ಟೆ ಬಡಿದುಕೊಳ್ಳಬೇಡ ಮೇಲಿನದಾರಿಯ ದೊಡ್ಡ ಗೇರು ಮರದ ಬುಡದಲ್ಲಿ ಹೋಗಿ ಬಡಿದದು ಕೊ ಎಂದನಂತೆ.ಈ ಬೆರಕಿ ಮುದುಕಿ ಗೇರು ಮರದ ಬುಡದಲ್ಲಿ ಅಗೆದ ಹೊಸಮಣ್ಣು ಸರಿಸಿದಾಗ ಸಾಕಷ್ಟು ಬಂಗಾರವನ್ನು ಆತ ಕಳ್ಳತನ ಮಾಡಿ ಹೂತಿಟ್ಟಿದ್ದು ಸಿಕ್ಕಿತಂತೆ..(ಆ ಕುಟುಂಬ ಶ್ರೀಮಂತರಾಗಿ ಇಂದು ಅದೆ ಗ್ರಾಮದಲ್ಲಿ ಇದ್ದಾರೆ) ಆತ ಕಳ್ಳತನ ಮಾಡುವುದು ಕೇವಲ ಹವ್ಯಾಸಕ್ಕಾಗಿ ಮಾತ್ರವಂತೆ..ಕದ್ದು ತಂದು ಬೇರೆ ಬೇರೆ ನಿರ್ಗತಿಕರಿಗೆ ಹಂಚಿಬಿಡುತ್ತಿದ್ದನಂತೆ..ಅನೇಕ ಬಡವರ ಮನೆಯ ಹೆಣ್ಣು ಮಕ್ಕಳ ಮದುವೆಗೆ ಹಣ ನೀಡಿದ್ದನಂತೆ…ಅಂತ ಕೂಡ್ಲ ಕುಟ್ನ ಈಗ ನಾನಿರುವ ಬಿಸಲಕೊಪ್ಪಕ್ಕೆ ಒಮ್ಮೆ ಕಳ್ಳತನಕ್ಕೆ ಬಂದು ಸೋತು ಹೋದನಂತೆ..

ಬಿಸಲಕೊಪ್ಪದ ಪ್ರತಿಷ್ಠಿತ ಭಟ್ಟರ ಮನೆ ಕುಟುಂಬ ಆ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶ್ರೀಮಂತ ಕುಟುಂಬಗಳಲ್ಲೊಂದು ಅವರ ಮನೆ ಕಳ್ಳತನ ಮಾಡಲು ಬಂದ ಕುಟ್ನ ಮೂರು ದಿನ ಅವರ ಮನೆಯ ಮಾಳಿಗೆಯ ಮೇಲೆ ಉಳಿದವನು ಕೊನೆಗೆ ನಾನು ಕಳ್ಳತನಕ್ಕೆ ಬಂದೆ ಆದರೆ ನನ್ನಿಂದ ನಿಮ್ಮ ಮನೆ ಕಳ್ಳತನ ಮಾಡಲು ಆಗಲಿಲ್ಲ. …ಸ್ವಲ್ಪ ಹಾಲು ಕೊಡಿ ಎಂದು ಕುಡಿದು ಇನ್ನಾರಿಂದಲೂ ನಿಮ್ಮ ಮನೆ ಕಳ್ಳತನ ಮಾಡಲು ಸಾಧ್ಯವಿಲ್ಲ ಎಂದು ಆಶೀರ್ವಾದವಿತ್ತು ಹೋದನಂತೆ..( ಅವನು ಹಾಲು ಕುಡಿದ ಮನೆಯ ಕಳ್ಳತನ ಮಾಡುತ್ತಿರಲಿಲ್ಲವಂತೆ ಅಷ್ಟು ನಿಯತ್ತು ಇತ್ತ.. ಇಗಿನ ಉಂಡ ಮನೆಯ ಗಳ ಎಣಿಸುವವರಿಗೆ )ಒಮ್ಮೆ ಅವನ ಹಿಂದೆ ಪೋಲಿಸರು ಬಿದ್ದರಂತೆ ಮನೆಯ ಮೇಲ್ಚಾವಣಿ ಏರಿ ಉದ್ದಕಾವಿನ ಛತ್ರಿ(ಆಗ ಉದ್ದ ಮರದ ಕಾವಿನ ಛತ್ರಿಗಳೆ ಬಳಕೆಯಲ್ಲಿದ್ದವು) ಹಿಡಿದು ಕೆಳಗೆ ಹಾರಿ ತಪ್ಪಿಸಿಕೊಂಡನಂತೆ…. ಪ್ಯಾರಾಚ್ಯೂಟ್ ಬಳಕೆ ಮಾಡಿದಂತೆ….ಮುಂದೆ ಗದ್ದೆ ಬಯಲೊಂದರಲ್ಲಿ ಅವನನ್ನು ಪೋಲಿಸರು ಹಿಡಿದು ಮೈತುಂಬಾ ಹಗ್ಗ ಸುತ್ತಿ ಎತ್ತಿಕೊಂಡು ಹೋಗಿ ಜೈಲಿಗೆ ಹಾಕಿದರಂತೆ..ಆತ ಅಲ್ಲಿಯೆ ತೀರಿಕೊಂಡನಾ ಬಿಡುಗಡೆಯಾಗಿತ್ತಾ ಯಾವ ಸುಳಿವು ನನಗೆ ಸಿಗಲಿಲ್ಲ….ಅವನ ಬಗ್ಗೆ ತುಂಬಾ ಕಥೆಗಳಿವೆ ದೂರದ ಅಂಕೋಲಾದ ಮಿತ್ರ ವಿನೋದ ನಾಯಕ ವಂದಿಗೆ ಅವರ ತಂದೆ ಗಾಂಧಿ ಹುಟ್ಟಿದ ಪೋರಬಂದರಿನಲ್ಲಿ ನೌಕರಿ ಮಾಡಿದ್ದವರು,,..ಅವರು ಈ ಕೂಡ್ಲ ಕೃಷ್ಣನ ಒಂದಷ್ಟು ಕಥೆಗಳನ್ನು ನನಗೆ ಹೇಳಿದ್ದರು. ಹಾಗೆ ಕಳ್ಳತನ ಮಾಡುವ ಕುಟ್ನ ಕಳ್ಳತನ ಮಾಡುವ ಮನಸ್ಸಿನವನಲ್ಲವಂತೆ . ಅವರ ಮನೆಯಲ್ಲಿಯ ಯಾವುದೊ ದೈವಿ ಶಕ್ತಿ ಆತನ ಮೈ ಯಲ್ಲಿ ಬೆರೆತು ಆತನನ್ನು ಕಳ್ಳನನ್ನಾಗಿ ಮಾಡಿಸುತ್ತಿತಂತೆ…ಆತ ಕಳ್ಳತನಕ್ಕೆ ಹೋದಲ್ಲಿ ಸಿಕ್ಕಿಬೀಳುತ್ತಿರಲಿಲ್ಲವಂತೆ…. ಉಹಾಪೋಹದ ಆಧಾರದಲ್ಲಿ ಆತನನ್ನು ಬಂಧಿಸಿದ ಪೋಲಿಸರು ಜೈಲಿಗೆ ಹಾಕಿಬಿಟ್ಟರಂತೆ…ಆತ ಕೊಲೆ ಸುಲಿಗೆ ಮಾಡುವ ಕಳ್ಳನಲ್ಲ..ಈ ಕಥೆಗಳು ಸತ್ಯ ಆದರೆ ಸಾಕ್ಷಾಧಾ ರಗಳ ಕೊರತೆಯಿಂದ .ಇಲ್ಲಿಗೆ ಮುಗಿಸುವೆ…

-ರಾಜು ನಾಯಕ…

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *