Condolance-ಅಗಲಿದ ಗೌರವಾನ್ವಿತರಿಗೆ ಗಣ್ಯರ ನಮನ

ಇಂದು ನಿಧನರಾದ ಸಹಕಾರಿ ಧುರೀಣ ಷಣ್ಮುಖ ಗೌಡರ್ ಮತ್ತು ರವಿವಾರ ಕೊನೆ ಉಸಿರೆಳೆದ ಮುದ್ರಕ ರಾಮಚಂಧ್ರ ಹೆಗಡೆಯವರಿಗೆ
ಜಿಲ್ಲೆಯ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ರವಿವಾರ ಹೃದಯಾಘಾತದಿಂದ ನಿಧನರಾದ ರಾಘವೆಂದ್ರಮುದ್ರ ಣಾಲಯದ
ಮಾಲಿಕ ರಾಮಚಂದ್ರ ಹೆಗಡೆವರಿಗೆ ಟಿ.ಎಂ.ಎಸ್. ಅಧ್ಯಕ್ಷ ಮತ್ತು ನಿವೃತ್ತ ಶಿಕ್ಷಕ ಜಿ.ಜಿ. ಹೆಗಡೆ ಅಂತಿಮ ನಮನ
ಸಲ್ಲಿಸಿದ್ದರೆ, ಇಂದು ಅಲ್ಫಕಾಲಿಕ ಅನಾರೋಗ್ಯದಿಂದ ನಿಧನರಾದ ಕಾಂಗ್ರೆಸ್ ಮುಖಂಡ ಷಣ್ಮುಖ ಗೌಡರಿಗೆ ಅನೇಕ ಪ್ರಮುಖರು ಅಂತಿಮ ನಮನ ಸಲ್ಲಿಸಿದ್ದಾರೆ.


https://www.youtube.com/watch?v=2-9LXILPatQ&t=77s

ಮರೆಯಾದ ಒಳ್ಳೆಯ ಮನುಷ್ಯ- ಉತ್ತರ ಕನ್ನಡ ಸಹಕಾರಿ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ರಾಜ್ಯ ಅಫೆಕ್ಸ್ ಬ್ಯಾಂಕ್ ನಲ್ಲಿ ಕಳೆದ ಹತ್ತು ವರ್ಷ ಗಳಿಂದ ಸೇವಾ ಮನೋಭಾವದಿಂದ ದುಡಿದ ಅಜಾತಶತ್ರು ಷಣ್ಮುಖ ಗೌಡರ್ ನನ್ನ ಸ್ನೇಹಿತರಾಗಿದ್ದ ಅವರು ಜಿಲ್ಲೆಯ ಸಾಮಾಜಿಕ,ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು. ಅವರ ಸಾವಿನಿಂದ ನಾವೆಲ್ಲಾ ಒಬ್ಬ ಅಪ್ಪಟಮನುಷ್ಯನನ್ನು ಕಳೆದುಕೊಂಡ ನೋವಿನಲ್ಲಿದ್ದೇವೆ. ಜಿಲ್ಲೆ, ಸಮಾಜ ಕಳೆದುಕೊಂಡ ಒಳ್ಳೆಯ ಮನುಷ್ಯನ ಅಗಲಿಕೆಯ ಶೂನ್ಯ,ಅವರ ಕುಟುಂಬದ ನೋವು ಕಡಿಮೆಯಾಗಿ ಅವರಿಗೂ ಸದ್ಘತಿ ದೊರೆಯಲಿ. -ಶಿವರಾಮ್ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವರು,ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು.

ಸಹಕಾರಿ ರತ್ನ ಕಣ್ಮರೆ-

ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳು, ಜಿಲ್ಲಾ ಮಧ್ಯವರ್ತಿ ಬ್ಯಾಂಕ್, ರಾಜ್ಯ ಅಫೆಕ್ಸ್ ಬ್ಯಾಂಕ್ ಜೊತೆಗೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳ ಜೊತೆಗೆ ಅನೇಕರನ್ನು ಬೆಳೆಸಿ ಹಲವು ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ದುಡಿದಿದ್ದ ಷಣ್ಮುಖ ಗೌಡರ್ ನಿರಂತರ ಸೇವೆಯ ಸಮಾಜಮುಖಿಯಾಗಿದ್ದರು.ಅವರ ಕುಟುಂಬಕ್ಕೆ ಅವರ ವಿದಾಯದ ನೋವನ್ನು ನೀಗಿ ದುಖ: ಕಳೆಯುವ ಶಕ್ತಿ ಅವರ ಹಿತೈಶಿಗಳು,ಆಪ್ತರಿಂದ ಸಾಧ್ಯವಾಗಲಿ,ಅವರ ಸಜ್ಜನಿಕೆಗೆ ನಮ್ಮ ಅಂತಿಮ ನಮನ – ಭೀಮಣ್ಣ ನಾಯ್ಕ,ಉದ್ಯಮಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು (ಉ.ಕ.)

ಆದರ್ಶ ಬದುಕು ಮಾದರಿ- ಷಣ್ಮುಖ ಗೌಡರ್ ಕಳೆದ 4 ದಶಕಗಳಿಂದ ಸಾಮಾಜಿಕ ಬದುಕಿನಲ್ಲಿದ್ದವರು. ಕಳೆದ 25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡವರು. ಗ್ರಾಮೀಣ ಪ್ರದೇಶದ ಗ್ರಾ.ಪಂ. ಮಟ್ಟದಿಂದ ರಾಜ್ಯಮಟ್ಟದವರೆಗೆ ಎಲ್ಲ ಸಮಾಜದವರೊಂದಿಗೆ, ಎಲ್ಲರೊಂದಿಗೆ ಅನ್ಯೋನ್ಯವಾಗಿರುತಿದ್ದ ಗೌಡರ್ ಸರಳತೆ, ಆದರ್ಶ ಬದುಕು ಹೊಸಪೀಳಿಗೆಗೆ ಮಾದರಿ. ಅವರು ಇನ್ನಷ್ಟು ವರ್ಷ ಬದುಕಿ ಬಾಳಿದ್ದರೆ ಸಮಾಜಕ್ಕೆ ಒಳ್ಳೆಯದಾಗುತಿತ್ತು. ಅವರ ಅನುಪಸ್ಥಿತಿ ಸಮಾಜಕ್ಕೆ ಕೊರತೆ.

– ಆರ್.ಎಂ.ಹೆಗಡೆ ಬಾಳೇಸರ, ಅಧ್ಯಕ್ಷರು ಟಿ.ಎಂ.ಎಸ್.

ಮಹಮದ್ ರಿಂದ ಕಂಬನಿ- ಸಿದ್ದಾಪುರ:21
ಹಿರಿಯ ರಾಜಕಾರಣಿ,ಸಹಕಾರಿ ಜನಾನುರಾಗಿಯಾಗಿದ್ದ ಎಸ್.ಬಿ.ಗೌಡರ್ ಕಲ್ಲೂರ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಆಘಾತವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ಸೆಲ್‍ನ ಮಾಜೀ ಅಧ್ಯಕ್ಷರಾದ ಮೆಹಬೂಬಅಲಿ ಅಹಮ್ಮದ್ ಬಾಬಾಜಾನ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ರಿಯಾಜ್ ಹೊಸೂರು ಕಂಬನಿ ಮಿಡಿದಿದ್ದಾರೆ.

ಮೇರು ವ್ಯಕ್ತಿತ್ವದ ಗೌಡರ್ ಮಾದರಿ ವ್ಯಕ್ತಿ-

ಸಿದ್ಧಾಪುರ ತಾಲೂಕಿನ ಮಣ್ಣಿನ ಮಗನಾಗಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದ ಮೇರು ವ್ಯಕ್ತಿತ್ವದವರಾಗಿದ್ದ ಷಣ್ಮುಖ ಗೌಡರ್ ಹಣ-ಅಧಿಕಾರದ ಆಸೆಗೆ ಬಿದ್ದವರಲ್ಲ, ಇವನಮ್ಮವ.. ಇವನಮ್ಮವ ಎನ್ನುವ ಶರಣರ ಉಕ್ತಿಯಂತೆ ಎಲ್ಲಾ ಜಾತಿ-ಜನವರ್ಗ ಪ್ರೀತಿಸುತಿದ್ದ ಅವರು ಇಡೀ ಸಮಾಜವನ್ನೇ ಕುಟುಂಬ ಎಂದು ಭಾವಿಸಿದ್ದರು. ತಾಲೂಕು-ಜಿಲ್ಲೆಯ ಸಮಗ್ರ ಚಿತ್ರಣ ಅರಿತಿದ್ದ ಗೌಡರ್ ತಾಲೂಕಿನ ಸಾಮಾಜಿಕ-ಸಹಕಾರಿ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸಿದ್ದರು. ಅವರ ನಿಧನದಿಂದಾದ ಹಾನಿ ಅವರ ಕುಟುಂಬಕ್ಕಾದ ನೋವು ಶಮನಮಾಡುವ ಶಕ್ತಿಯನ್ನು ಭಗವಂತ ಎಲ್ಲರಿಗೂ ನೀಡಲಿ.- ಪರಮೇಶ್ವರ ಕಾನಳ್ಳಿಮಠ, ಅಧ್ಯಕ್ಷರು ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆ,ಸಿದ್ಧಾಪುರ.

ರಾಮಚಂದ್ರ ಹೆಗಡೆ ಸಾವಿಗೆ ಶೋಕ-

ಸಿದ್ದಾಪುರ 21: ಮುದ್ರಣ ಕಾರ್ಯದಲ್ಲಿ ತನ್ನ ಕೌಶಲ್ಯವನ್ನು ಹೊಂದಿದ ರಾಘವೇಂದ್ರ ಮುದ್ರಣಾಲಯದ ಮಾಲಿಕ ರಾಮಚಂದ್ರ ವಿ ಹೆಗಡೆಯವರು ನಿನ್ನೆ ನಿಧನರಾಗಿದ್ದು ಅವರ ಪ್ರಯುಕ್ತ ಸಿದ್ದಾಪುರ ಟಿ. ಎಂ. ಎಸ್. ಅಧ್ಯಕ್ಷ ಆರ್. ಎಂ.ಹೆಗಡೆ ಬಾಳೆಸರ ಹಾಗೂ ಲಯನ್ಸ್ ಜಿಲ್ಲಾ ಚೇರ್ಮನ್ ಜಿ. ಜಿ.ಹೆಗಡೆ ಬಾಳಗೋಡ ಅವರು ತಮ್ಮ ತೀವ್ರ ಶೋಕವನ್ನು ವ್ಯಕ್ತ ಪಡಿಸಿದ್ದಾರೆ.
ಅವರು ತನ್ನ ಸ್ವ ಸಾಮರ್ಥ್ಯದಿಂದ ಜೀವನವನ್ನು ರೂಪಿಸಿಕೊಂಡು ಅನೇಕರಿಗೆ ಉದ್ಯೋಗಾವಕಾಶ ವನ್ನು ಕಲ್ಪಿಸಿದ ಉದ್ಯಮಿಯಾಗಿ ದ್ದರು.ಅವರ ಸಜ್ಜನಿಕೆ ,ಸ್ನೇಹಪರ ವ್ಯಕ್ತಿತ್ವ ಅನುಕರಣೀಯ ಎಂದು ಬಣ್ಣಿಸಿದ್ದಾರೆ.

       

.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *