

ಯಕ್ಷಗಾನದ ಶಕಪುರುಷ ಕೆರೆಮನೆ ಶಿವರಾಮ ಹೆಗಡೆಯವರ ಜೊತೆ ಪಾತ್ರ ಮಾಡುತ್ತಿದ್ದ ,ಹಿರಿಯ ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ ಮಣ್ಣಿಗೆ ತಮ್ಮ94ನೇ ವಯಸ್ಸಿನ ಲ್ಲಿ ಮಿದುಳು ಆಘಾತದಿಂದ ಇಂದು ಸಂಜೆ ಇಹಲೋಕ ತ್ಯಜಿಸಿದ್ದಾರೆ….

ಕೆರೆಮನೆಯ ಮೂರು ತಲೆಮಾರಿನ ಕಲಾವಿದರ ಜೊತೆ ಅಭಿನಯಿಸಿದ ಇವರು ಕೆರೆಮನೆ ಮೇಳದಿಂದ ಕಲಾಸೇವೆ ಆರಂಭಿಸಿ, ಅಲ್ಲಿಂದಲೇ ನಿವೃತ್ತಿ ಪಡೆದಿದ್ದರು.ಶಿವರಾಮ ಹೆಗಡೆಯವರ ಜರಾಸಂಧ ಇವರ ಭೀಮನ ಜೋಡಿ ಪ್ರಸಿದ್ಧ ವಾಗಿತ್ತು..
ಭೀಮ,ಧರ್ಮ ರಾಯ,ಕಿರಾತ,ಮೊದಲಾದ ಇವರ ಪಾತ್ರಗಳು ಪ್ರಸಿದ್ಧ ವಾಗಿದ್ದವು….3 ಗಂಡು,ಮತ್ತು ಮಗಳನ್ನು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ನಿನ್ನೆ ಅವರ ಮೊಮ್ಮಗನ ಹುಟ್ಟು ಹಬ್ಬದ ಅಂಗವಾಗಿ ಯಕ್ಷಗಾನ ವಿತ್ತು ಅದನ್ನು ನೋಡಿದ ಅವರಿಗೆ ರಾತ್ರಿಯ ಆರೋಗ್ಯ ಕೆಟ್ಟಿತ್ತು .. ಇವರ ಸಾವಿಗೆ ಕೆರೆಮನೆ ಶಿವಾನಂದ ಹೆಗಡೆ,ಬಳ್ಕೂರ ಕೃಷ್ಣಯಾಜಿ,ಸಪ್ತ ಕದ ಜಿ.ಎಸ್ ಹೆಗಡೆ ಮೊದಲಾದವರು ತೀವ್ರ ಸಂತಾಪ ವ್ಯಕ್ತ ಮಾಡಿದ್ದಾರೆ.ಇಳಿವಯಸ್ಸಿನಲ್ಲಿ ದೇವಾಲಯವೊಂದರಲ್ಲಿ ಅರ್ಚಕರಾಗಿ ಕೆಲಸಮಾಡಿದ್ದ ಇವರು ವಿನಯಶೀಲ,ಸದ್ಗುಣಿ ಕಲಾವಿದರಾಗಿದ್ದರು(ಫೋಟೋ:ಷಣ್ಮುಖ ಕೃಪೆ)


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
