

ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿ ಯಲ್ಲಾಪುರದ ಮಾಜಿ ಪತ್ರಕರ್ತ ನಾ.ಸು.ಭರತನಳ್ಳಿ ಇಂದು ನಿಧನರಾಗಿದ್ದಾರೆ. ಜಿಲ್ಲೆಯ ಹಿರಿಯ ಪತ್ರಕರ್ತರಾಗಿ,ಸಾಹಿತಿಯಾಗಿ ಸಿದ್ಧಾಪುರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಸೇರಿದಂತೆ ಅನೇಕ ಗೌರವ, ಮನ್ನಣೆಗಳಿಗೆ ಅವರು ಪಾತ್ರರಾಗಿದ್ದರು.

ಯಲ್ಲಾಪುರದ ಗ್ರಾಮೀಣ ಸಾಂಪ್ರದಾಯಿಕ ಹವ್ಯಕ ಕುಟುಂಬದ ನಾ.ಸು.ಭರತನಳ್ಳಿ ಕುಟುಂಬದ ಕೆಲವರು ಸೇರಿದಂತೆ ಅನೇಕರು ಪತ್ರಕರ್ತರು,ಬರಹಗಾರರಾಗಲು ನಾ.ಸು.ಪ್ರೇರಣೆಯಾಗಿದ್ದರು. ಅವರ ನಿಧನಕ್ಕೆ ಜಿಲ್ಲಾ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ, ಹಿರಿಯ ಸಾಹಿತಿ ವಿಷ್ಣು ನಾಯಕ, ಸಿದ್ಧಾಪುರ ತಾಲೂಕಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕನ್ನೇಶ್ ಕೋಲಶಿರ್ಸಿ, ಹಳಿಯಾಳ ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ವಾಸರೆ, ಟಿ.ಎಸ್.ಎಸ್. ಮಾಜಿ ನಿರ್ಧೇಶಕ ಆರ್.ಆರ್. ಹೆಗಡೆ, ಪ್ರಾಂಶುಪಾಲ ಎಂ.ಕೆ.ನಾಯ್ಕ, ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಕಾರ್ಯದರ್ಶಿ ಬೀರಣ್ಣ ನಾಯ್ಕ ಮೊಗಟಾ, ಸಾಹಿತಿಗಳಾದ ತಮ್ಮಣ್ಣ ಬೀಗಾರ್, ಜಿ.ಜಿ. ಹೆಗಡೆ, ಪಿ.ಆರ್.ನಾಯ್ಕ ಕುಮಟಾ, ರತ್ನಾಕರ ನರಮುಂಡಿಗೆ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
