ಗ್ರಾ.ಪಂ. ಚುನಾವಣೆ ಗೆಲ್ಲಬೇಕಾದವರು

ಎರಡನೇ ಹಂತದ ನಾಳೆಯ ಗ್ರಾ.ಪಂ. ಚುನಾವಣೆ ಮುಗಿದರೆ ರಾಜ್ಯದಲ್ಲಿ ಮತ್ತೆ ಕನಿಷ್ಟ 5 ವರ್ಷ ಗ್ರಾ.ಪಂ. ಚುನಾವಣೆ ಇಲ್ಲ. ಈ ವರ್ಷದ ಚುನಾವಣೆ ವಿಶೇಶವೆಂದರೆ….. ಕೆಲವು ಹೊಸಮುಖಗಳು ಚುನಾವಣೆ ಎದುರಿಸಿದ್ದು ಮತ್ತು ಅದೇ ಕೆಲವು ಹಳೆ ತಲೆಗಳು ಚುನಾವಣಾ ಕಣದಲ್ಲಿರುವುದು.

ರಾಜ್ಯ, ಜಿಲ್ಲೆ, ತಾಲೂಕು ಮಟ್ಟಗಳಲ್ಲಿ ಈ ಚುನಾವಣೆ ನಡೆದು ಗ್ರಾಮೀಣ ಜನರು ಈ ವರ್ಷ ತಮ್ಮ ಹೊಸಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತಿದ್ದಾರೆ. ಸಿದ್ಧಾಪುರದಲ್ಲಿ ಚುನಾವಣೆಯ ತುರುಸು ತಾರಕಕ್ಕೇರಿದ್ದು ಬಿ.ಜೆ.ಪಿ.ಯಲ್ಲಿ ಬಿ.ಜೆ.ಪಿ. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವಿನ ಮೊದಲ ಬಲಾಬಲ ಪರೀಕ್ಷೆ ಎನ್ನಲಾಗುತ್ತಿದೆ.

ಈಗ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಕೆ.ಜಿ.ನಾಯ್ಕ ಬಣ ಸಿದ್ಧಾಪುರ ತಾಲೂಕಿನಾದ್ಯಂತ ಹೆಚ್ಚು ಜನರನ್ನು ಕಣಕ್ಕಿಳಿಸಿದ್ದಾರೆ. ಇವರ ಬಣದ ಕಾರ್ಯಕರ್ತರ ವಿರುದ್ಧ ಶಾಸಕ ವಿಶ್ವೇಶ್ವರ ಹೆಗಡೆ ಕೆಲವು ಸ್ವಜಾತಿಯವರು, ಈಗ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಬಂಡಾಯ ಮತ್ತು ಅಧೀಕೃತ ಬಿ.ಜೆ.ಪಿ. ಸೇರ್ಪಡೆಯಾದವರಿಗೆ ಧನ ಸಹಾಯ ಮಾಡಿ ಬಲಾಬಲ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ಬಿ.ಜೆ.ಪಿ. ಬಣ ಹೋರಾಟದ ಎದುರು ಕಾಂಗ್ರೆಸ್ ಕಾರ್ಯಕರ್ತರು ಸೆಣಸುತಿದ್ದು ಕಾಂಗ್ರೆಸ್ ನಲ್ಲಿ ಕೂಡಾ ವಸಂತನಾಯ್ಕ ಬಣ ಮತ್ತು ದೇಶಪಾಂಡೆ ಪರವಾಗಿರುವ ಬಿ.ಜೆ.ಪಿ. ಬಣ ತಯಾರಾಗಿರುವ ವರ್ತಮಾನವಿದೆ.

ವಸಂತನಾಯ್ಕರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಜವಾಬ್ಧಾರಿ ನಿರ್ವಹಿಸಿರುವ ವಿ.ಎನ್. ನಾಯ್ಕ ಮತ್ತು ಕೆಲವರು ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಮತ್ತು ಸುಷ್ಮಾ ರಾಜ್ ಗೋಪಾಲರೆಡ್ಡಿ ನೀಡಿರುವ ತಲಾ ಐದು ಸಾವಿರ ರೂಪಾಯಿಗಳನ್ನು ಅಭ್ಯರ್ಥಿಗಳಿಗೆ ತಲುಪಿಸಿರುವ ವರ್ತಮಾನವಿದೆ.

ಬಿ.ಜೆ.ಪಿ. ಯಲ್ಲಿ ಕೆ.ಜಿ.ನಾಯ್ಕರ ನೇತೃತ್ವದ ಬಣ ತಮ್ಮ ಅಭ್ಯರ್ಥಿಗಳಿಗೆ ತಲಾ 10-15 ಸಾವಿರ ತಲುಪಿಸಿದ್ದರೆ, ಶಾಸಕರು, ಸಂಸದರ ಅಭ್ಯರ್ಥಿಗಳು ಅವರ ನೇರ ಸಂಪರ್ಕದ ಹುರಿಯಾಳುಗಳಿಗೆ ತಲಾ 25 ಸಾವಿರ ಚುನಾವಣಾ ವೆಚ್ಚ ಬಂದಿರುವ ವರ್ತಮಾನವಿದೆ. ಇಂಥ ಜಿದ್ದಾಜಿದ್ದಿನ ಸ್ಫರ್ಧೆಯಲ್ಲಿ ಈಗಿನ ಜಿ.ಪಂ. ಸದಸ್ಯ, ಬಿ.ಜೆ.ಪಿ. ತಾಲೂಕಾಧ್ಯಕ್ಷ ನಾಗರಾಜ್ ನಾಯ್ಕ ಬೇಡ್ಕಣಿ ಯುವಕರು, ಉತ್ತಮ ಅಭ್ಯರ್ಥಿಗಳ

ನ್ನು ಹಾಕಿರುವುದರಿಂದ ಬಿ.ಜೆ.ಪಿ. ಬೆಂಬಲಿತರೇ 20 ಗ್ರಾಮ ಪಂಚಾಯತ್ ಗಳಲ್ಲಿ ಗೆದ್ದು ಅಧಿಕಾರ ಹಿಡಿಯಲಿದ್ದಾರೆ ಎಂದರೆ,

ಜಿ.ಪಂ. ಮಾಜಿ ಸದಸ್ಯ ವಿ.ಎನ್. ನಾಯ್ಕ ಬಿ.ಜೆ.ಪಿ. ಅಂತ:ಕಲಹ, ಜೆ.ಡಿ.ಎಸ್. ನಿಷ್ಕ್ರೀಯತೆ ನಡುವೆ ಕಾಂಗ್ರೆಸ್ ಬೆಂಬಲಿಗರು ಆಯ್ಕೆಯಾಗಲಿದ್ದು 20 ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತರೇ ಅಧಿಕಾರ ಹಿಡಿಯಲಿದ್ದಾರೆ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಶಿರಸಿ ಕೊಪ್ಪದ ಅರುಣ ನಾಯ್ಕ ಕೊಪ್ಪ, ಬಿದ್ರಕಾನಿನ ರಾಮಚಂಧ್ರ ನಾಯ್ಕ ಸದೇಗುಡ್ಡೆ, ಕೋಲಶಿರ್ಸಿಯ ಬಾಲಕೃಷ್ಣ ನಾಯ್ಕ, ಗೋಪಾಲ ನಾಯ್ಕ, ಬೇಡ್ಕಣಿಯ ಪದ್ಮಪ್ರೀಯಾ ನಾಯ್ಕ, ವೀರಭದ್ರ ನಾಯ್ಕ ಮಳಲವಳ್ಳಿ, ಕೆ.ಟಿ. ನಾಯ್ಕ ಹೆಗ್ಗೇರಿ ಮತ್ತು ಎಸ್.ಆರ್. ನಾಯ್ಕ, ಹೆಗ್ಗರಣಿಯ ಶೇಖರ್ ನಾಯ್ಕ, ಬಿಕ್ಕಳಸೆಯ ಅಣ್ಣಪ್ಪ ನಾಯ್ಕ, ಶಿರಳಗಿಯ ಅಣ್ಣಪ್ಪ ನಾಯ್ಕ, ಬಿಳಗಿಯ ಸುವರ್ಣ ನಾಯ್ಕ, ಇಟಗಿಯ ಮಹಾಬಲೇಶ್ವರ ಭಟ್, ದೊಡ್ಮನೆಯ ಸುಬ್ರಾಯ ಹೆಗಡೆ ಗೋಳಗೋಡಿನ ಗಂಗಾಧರ ನಾಯ್ಕ ಸೇರಿದ ಕೆಲವರು ಆಯ್ಕೆಯಾದರೆ ಉತ್ತಮ ಎನ್ನುವ ಸಾರ್ವಜನಿಕ ಅಭಿಪ್ರಾಯವಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *