ಪ್ರೀತಿಯೆಂದರೆ… ನಿರುತ್ತರ !

ಸಾಕಿಯ ನಿರುತ್ತರ…..

ಕವಿತೆಯ ಬೆನ್ನು ಬಿದ್ದಿರುವೆ. ಬೆಳಿಗ್ಗೆಯೇ ಹೊಸ ಕವನಸಂಕಲನ ಸಿಕ್ಕಿತು. ಗುಕ್ಕನೆ ಓದಿದೆ.. ಓದಿಸಿಕೊಂಡು ಹೋಯ್ತು. ಕೆಲ ಸಾಲುಗಳು ಕಾಡುತ್ತಾ ಹೇಳಿದವು. ಹೇಳುತ್ತಾ ಕಾಡಿದವು.

ಸಾಕಿ
ಪ್ರೀತಿಯೆಂದರೆ
ಗುಟ್ಟಾಗಿ ಗುಣಗುವುದಲ್ಲ
ಸುಟ್ಟ ರೊಟ್ಟಿಯಂತಾಗುವುದು

ಎನ್ನುತ್ತ ಕವಿ ಕೆ. ಬಿ. ವೀರಲಿಂಗನ ಗೌಡ್ರ ತಮ್ಮ ಎದೆಯ ಭಾವವನ್ನ ಸಾಕಿ ಜತೆಗೆ ಹಂಚಿದ್ದಾರೆ. ಮೂಲತಃ ಬಾದಾಮಿ ತಾಲೂಕಿನವರಾದ ಗೌಡ್ರರವರು ಮಲೆನಾಡಿನ ಶಿರಸಿ-ಸಿದ್ದಾಪುರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಯಲ್ಲಿ ಇದ್ದಾರೆ. ಅಕ್ಷರ ಆಲಯದಲ್ಲಿ ಇರುವ ಮೇಸ್ಟ್ರು ಅರಿವಿನ ದಾರಿಯ ಪಯಣವನ್ನ ಕವಿತೆ ಆಗಿಸಿದ್ದಾರೆ. ತಮ್ಮ ತವಕ ತಲ್ಲಣಗಳನ್ನು ಸಣ್ಣ ಸಣ್ಣ ಸಾಲುಗಳಲಿ ಹಿಡಿದಿಡುವ ಅವರ ಕುಶಲತೆ, ಭಾಷೆ, ಕವಿತೆ ದ್ವನಿಸುವ ಧಾಟಿ, ಅದಕ್ಕೆ ಇರುವ ಸಮತೆಯ ಆಶಾವಾದದ ದಿಕ್ಕು ಗಟ್ಟಿ ಆಗಿಸಿದೆ. ಕೋರಿಕೆಗಳು ಎನ್ನುವ ತಲೆಬರಹದ ಕವಿತೆಯಲ್ಲಿ

ಸಾಕಿ
ಶವಪೆಟ್ಟಿಗೆಗಳು
ಮತಪೆಟ್ಟಿಗೆಗಳಾಗದಿರಲಿ

ಸಾಕಿ
ಸೈನಿಕರು ಗಡಿಯಲ್ಲಿರಲಿ
ಚುನಾವಣೆ ಸರಕಾಗದಿರಲಿ

ಸಾಕಿ
ಪಾರಿವಾಳಗಳೆಂದೂ
ಸರಳುಗಳ ಹಿಂದೆ ನಿಲ್ಲದಿರಲಿ

ಎಂಬ ಸಾಲುಗಳಲ್ಲಿ ಒಳಿತಿನ ಆಶಾವಾದ ಅಡಗಿದೆ.

ಸಾಕಿ
ಸತ್ಯ ಗೊತ್ತಿದ್ದೂ
ಮಿಥ್ಯವನ್ನೇ ಅಪ್ಪಿಕೊಂಡರೆ
ಅಪ್ಪನ ನಡೆಯನ್ನೂ ಒಪ್ಪಲಾರೆ

ಸಾಕಿ
ಅವ್ವ ಅಪ್ಪನ ಪರ ನಿಂತರೆ
ಅಕ್ಕ ಅಲ್ಲಮರ ಬಯಲಲಿ
ಬಯಲಾಗಿ ಲಯವಾಗಿಬಿಡುವೆ

ಎನ್ನುವ ಕವಿಯ ನಿಲುವುಗಳಲ್ಲಿ ಸ್ಪಷ್ಟತೆ ಇದೆ.

ಸಾಕಿ
ಚಾಡಿ
ಸಾಕ್ಷಿಕರಿಸಿದಾಗಲೇ
ಸತ್ಯ ಲೋಕವಿರೋಧಿಯಾಗಿದೆ

ಸಾಕಿ
ಬಯಲಲ್ಲಿ
ತೂಗುವ ತಕ್ಕಡಿಯೊಂದಿದೆ
ಅಲ್ಲಿ ಒಲವಿಗಷ್ಟೇ ಗೆಲುವು ಸಿಗಲಿದೆ

ಹೀಗೆ ಕುಮಾರಗೌಡ ವೀರಲಿಂಗನಗೌಡ್ರ ತಮ್ಮ ಕವಿತೆಗಳ ಮೂಲಕ ಒಳಿತಿನ ತಾತ್ವಿಕತೆ ಕಟ್ಟಿಕೊಡುತ್ತ ಹೋಗುತ್ತಾರೆ.ಮೇಲ್ನೋಟಕ್ಕೆ ಸರಳ ಎನ್ನಿಸುವ ಕವಿತೆಗಳು ಆಳವನ್ನು ತಟ್ಟುತ್ತವೆ. ಕಾಡುತ್ತವೆ. ಆಪ್ತಆಗುತ್ತವೆ.

ಗೌಡರು ನನ್ನ fb ಗೆಳೆಯರು. ನಾವಿನ್ನೂ ಭೇಟಿ ಆಗಿಲ್ಲ. ಕವಿತೆ ನಮ್ಮನ್ನು ಬೆಸೆದಿದೆ. ನಿರುತ್ತರ ಬೇಕು ಅಂದಾಗ ಪ್ರೀತಿಯಿಂದ ಕಳಿಸಿಕೊಟ್ಟಿದ್ದಾರೆ. ಪ್ರೀತಿಯನ್ನು ಪ್ರೀತಿಯಿಂದ ಮಾತ್ರ ಭರಿಸಬಹುದು. ಪ್ರೀತಿಯ ಮೇಸ್ಟ್ರು ,’ನಿರುತ್ತರ’ ಉತ್ತರವೂ ಹೌದು ಓದುಗನ ಒಳಗೆ ಎಂಬ ಮಾತನ್ನು ಧಾಖಲಿಸಿ ಅವರಿಗೆ ಶುಭ ಕೋರುವೆ.

ಸಾಕಿ
ಕವಿತೆಗಳೇ ಹೀಗೆ
ನಸುನಗುವ ಹಸುಗೂಸಂತೆ
ಚಿವುಟಬೇಕೆನ್ನುವ ಕೆನ್ನೆಯಂತೆ

ಸಾಕಿ
ಕವಿತೆಗಳೇ ಹೀಗೆ
ಮೆತ್ತಿದ ಮಣ್ಣಿನಂತೆ
ಬತ್ತಿದ ಕಣ್ಣೀರಂತೆ

ಸಾಕಿ
ಕವಿತೆಗಳೇ ಹೀಗೆ
ಮಾಯದ ಗಾಯದಂತೆ
ಗಾಯಗೊಳಿಸಿದವನ ಎದೆಗೊದ್ದಂತೆ….

ಧನ್ಯವಾದಗಳು ಸರ್…
– ಜಿ. ಟಿ ಸತ್ಯನಾರಾಯಣ ಕರೂರು. https://m.youtube.com/watch?v=FhQhEvEAFyo

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *