ಸತತ ಮೂರು ಬಾರಿ ವಿಜಯದ ಮಾಲೆ ಧರಿಸಿದ ರಾಮಕೃಷ್ಣ ನಾಯ್ಕ

ರಾಮಕೃಷ್ಣ ನಾಯ್ಕ ಕಾಂಗ್ರೆಸ್ ಇಂಟೆಕ್ ಘಟಕದ ತಾಲೂಕಾ ಅಧ್ಯಕ್ಷರು, ಕೃಷಿಕರು.

ಸಿದ್ಧಾಪುರಕ್ಯಾದಗಿ ಪಂಚಾಯತ್ ನ ಕೃಷಿಕರಾಗಿದ್ದ ನಾಯ್ಕ ಕಳೆದ ಮೂರು ಅವಧಿಗಳ ಹಿಂದೆ ಕ್ಯಾದಗಿ ಗುಬ್ಬಗೋಡು ವಾರ್ಡನಿಂದ ಗ್ರಾಮ ಪಂಚಾಯತ್ ಪ್ರವೇಶಿಸುತ್ತಾರೆ. ನಂತರ ಇದೇ ಕ್ಷೇತ್ರದಿಂದ ಇವರ ಪತ್ನಿ ಗ್ರಾ.ಪಂ. ಸದಸ್ಯರಾಗುತ್ತಾರೆ.ನಂತರ ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದೇ ವಾರ್ಡ್ ನಿಂದ ರಾಮಕೃಷ್ಣ ನಾಯ್ಕ ಶಿರೂರು ಆಯ್ಕೆಯಾಗುತ್ತಾರೆ. ಸಿದ್ಧಾಪುರ ದೊಡ್ಮನೆ ಜಿ.ಪಂ. ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೇ ಪ್ರಸಿದ್ಧ ಆದರೆ ಈ ಬಾರಿ ಈ ಕ್ಷೇತ್ರದಲ್ಲಿ ಬಿ.ಜೆ.ಪಿ. ಬೆಂಬಲಿಗರು,ಪಕ್ಷೇತರರು ಆಯ್ಕೆಯಾಗಿ ವಾತಾವರಣ ಬದಲಾಗಿದೆ. ಈ ಕ್ಷೇತ್ರದ ಜಿ.ಪಂ. ಸದಸ್ಯರಾಗಿ ಈಗ ರಾಜ್ಯ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿರುವ ವಿ.ಎನ್. ನಾಯ್ಕ ಶಿಷ್ಯರಲ್ಲಿ ಈ ರಾಮಕೃಷ್ಣ ನಾಯ್ಕ ಪ್ರಮುಖರು.

ಕಾಂಗ್ರೆಸ್ ನ ಬಣ ರಾಜಕಾರಣದಲ್ಲಿ ಈ ಬಾರಿ ಹೊಡೆತತಿಂದಿರುವ ಕ್ಷೇತ್ರಗಳಲ್ಲಿ ದೊಡ್ಮನೆ ಜಿ.ಪಂ.ಕ್ಷೇತ್ರ ಪ್ರಮುಖ. ಈ ಕ್ಷೇತ್ರದಲ್ಲಿ ವಿ.ಎನ್.ನಾಯ್ಕ ನೇತೃತ್ವದ ತಾಲೂಕಾ ಕಾಂಗ್ರೆಸ್ ಬಣಕ್ಕೆ ಎದುರಾಗಿ ಬಿ.ಜೆ.ಪಿ. ಹಾಗೂ ಬಿ.ಜೆ.ಪಿ. ಬೆಂಬಲಿತ ಕಾಂಗ್ರೆಸ್ ಬಂಡಾಯ ಬಣದ ಬೆಂಬಲಿಗರು ಕೆಲಸಮಾಡಿ ಕಾಂಗ್ರೆಸ್ ಬೆಂಬಲಿಗರ ಪ್ರಮಾಣ ತಗ್ಗಿಸುವ ಪ್ರಯತ್ನ ನಡೆದಿತ್ತು. ಈ ಪ್ರಯತ್ನದ ಭಾಗವಾಗಿ ವಿ.ಎನ್.ನಾಯ್ಕ ಬೆಂಬಲಿಗರನ್ನು ಸೋಲಿಸುವ ಆಟದ ಹಿನ್ನೆಲೆಯಲ್ಲಿ ದೊಡ್ಮನೆ ಜಿ.ಪಂ. ಕ್ಷೇತ್ರ ಕಳೆದುಕೊಂಡಿದ್ದೇ ಹೆಚ್ಚು. ಈ ವಾತಾವರಣದಲ್ಲಿ ಸರಳತೆ, ಜನಪರತೆಗಳಿಂದ ಆಯ್ಕೆಯಾದ ಕಾಂಗ್ರೆಸ್ ಎ ಬಣದ ಪ್ರಮುಖ ನಾಯಕರಲ್ಲಿ ರಾಮಕೃಷ್ಣ ನಾಯ್ಕ ಒಬ್ಬರು.

ರಾಮಕೃಷ್ಣ ನಾಯ್ಕ ಕಳೆದ ಎರಡು ದಶಕಗಳಿಂದ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಕೆಲಸಮಾಡುತ್ತಾ, ಜನಪ್ರತಿನಿಧಿತ್ವವನ್ನೂ ನಿಭಾಯಿಸುತ್ತಾ ತಾಲೂಕಾ ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ. ಈ ಭಾಗದ ಮುಖಂಡರು ತಾ.ಪಂ.ಸದಸ್ಯರು ಸೇರಿದ ಪ್ರಮುಖ ನಾಯಕರ ಸಹಾಯ,ಸಹಕಾರದಿಂದ ನಿರಂತರ ಜನಪ್ರತಿನಿಧಿಯಾಗುತ್ತಾ ತಮ್ಮ ಕ್ಷೇತ್ರ ಪಂಚಾಯತ್ ಮಟ್ಟದಲ್ಲಿ ಜನಪ್ರೀಯರಾಗಿದ್ದಾರೆ. ಜನಮಾನಸಕ್ಕೆ ಸ್ಫಂದಿಸುವ ಇವರ ನಾಯಕತ್ವ ಕ್ಯಾದಗಿ ಗ್ರಾಮ ಪಂಚಾಯತ್ ಗೆ ದೊರೆತರೆ ಒಳ್ಳೆದೆನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *