ಸತತ ಮೂರು ಬಾರಿ ವಿಜಯದ ಮಾಲೆ ಧರಿಸಿದ ರಾಮಕೃಷ್ಣ ನಾಯ್ಕ

ರಾಮಕೃಷ್ಣ ನಾಯ್ಕ ಕಾಂಗ್ರೆಸ್ ಇಂಟೆಕ್ ಘಟಕದ ತಾಲೂಕಾ ಅಧ್ಯಕ್ಷರು, ಕೃಷಿಕರು.

ಸಿದ್ಧಾಪುರಕ್ಯಾದಗಿ ಪಂಚಾಯತ್ ನ ಕೃಷಿಕರಾಗಿದ್ದ ನಾಯ್ಕ ಕಳೆದ ಮೂರು ಅವಧಿಗಳ ಹಿಂದೆ ಕ್ಯಾದಗಿ ಗುಬ್ಬಗೋಡು ವಾರ್ಡನಿಂದ ಗ್ರಾಮ ಪಂಚಾಯತ್ ಪ್ರವೇಶಿಸುತ್ತಾರೆ. ನಂತರ ಇದೇ ಕ್ಷೇತ್ರದಿಂದ ಇವರ ಪತ್ನಿ ಗ್ರಾ.ಪಂ. ಸದಸ್ಯರಾಗುತ್ತಾರೆ.ನಂತರ ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದೇ ವಾರ್ಡ್ ನಿಂದ ರಾಮಕೃಷ್ಣ ನಾಯ್ಕ ಶಿರೂರು ಆಯ್ಕೆಯಾಗುತ್ತಾರೆ. ಸಿದ್ಧಾಪುರ ದೊಡ್ಮನೆ ಜಿ.ಪಂ. ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೇ ಪ್ರಸಿದ್ಧ ಆದರೆ ಈ ಬಾರಿ ಈ ಕ್ಷೇತ್ರದಲ್ಲಿ ಬಿ.ಜೆ.ಪಿ. ಬೆಂಬಲಿಗರು,ಪಕ್ಷೇತರರು ಆಯ್ಕೆಯಾಗಿ ವಾತಾವರಣ ಬದಲಾಗಿದೆ. ಈ ಕ್ಷೇತ್ರದ ಜಿ.ಪಂ. ಸದಸ್ಯರಾಗಿ ಈಗ ರಾಜ್ಯ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿರುವ ವಿ.ಎನ್. ನಾಯ್ಕ ಶಿಷ್ಯರಲ್ಲಿ ಈ ರಾಮಕೃಷ್ಣ ನಾಯ್ಕ ಪ್ರಮುಖರು.

ಕಾಂಗ್ರೆಸ್ ನ ಬಣ ರಾಜಕಾರಣದಲ್ಲಿ ಈ ಬಾರಿ ಹೊಡೆತತಿಂದಿರುವ ಕ್ಷೇತ್ರಗಳಲ್ಲಿ ದೊಡ್ಮನೆ ಜಿ.ಪಂ.ಕ್ಷೇತ್ರ ಪ್ರಮುಖ. ಈ ಕ್ಷೇತ್ರದಲ್ಲಿ ವಿ.ಎನ್.ನಾಯ್ಕ ನೇತೃತ್ವದ ತಾಲೂಕಾ ಕಾಂಗ್ರೆಸ್ ಬಣಕ್ಕೆ ಎದುರಾಗಿ ಬಿ.ಜೆ.ಪಿ. ಹಾಗೂ ಬಿ.ಜೆ.ಪಿ. ಬೆಂಬಲಿತ ಕಾಂಗ್ರೆಸ್ ಬಂಡಾಯ ಬಣದ ಬೆಂಬಲಿಗರು ಕೆಲಸಮಾಡಿ ಕಾಂಗ್ರೆಸ್ ಬೆಂಬಲಿಗರ ಪ್ರಮಾಣ ತಗ್ಗಿಸುವ ಪ್ರಯತ್ನ ನಡೆದಿತ್ತು. ಈ ಪ್ರಯತ್ನದ ಭಾಗವಾಗಿ ವಿ.ಎನ್.ನಾಯ್ಕ ಬೆಂಬಲಿಗರನ್ನು ಸೋಲಿಸುವ ಆಟದ ಹಿನ್ನೆಲೆಯಲ್ಲಿ ದೊಡ್ಮನೆ ಜಿ.ಪಂ. ಕ್ಷೇತ್ರ ಕಳೆದುಕೊಂಡಿದ್ದೇ ಹೆಚ್ಚು. ಈ ವಾತಾವರಣದಲ್ಲಿ ಸರಳತೆ, ಜನಪರತೆಗಳಿಂದ ಆಯ್ಕೆಯಾದ ಕಾಂಗ್ರೆಸ್ ಎ ಬಣದ ಪ್ರಮುಖ ನಾಯಕರಲ್ಲಿ ರಾಮಕೃಷ್ಣ ನಾಯ್ಕ ಒಬ್ಬರು.

ರಾಮಕೃಷ್ಣ ನಾಯ್ಕ ಕಳೆದ ಎರಡು ದಶಕಗಳಿಂದ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಕೆಲಸಮಾಡುತ್ತಾ, ಜನಪ್ರತಿನಿಧಿತ್ವವನ್ನೂ ನಿಭಾಯಿಸುತ್ತಾ ತಾಲೂಕಾ ಕಾಂಗ್ರೆಸ್ ನ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತಿದ್ದಾರೆ. ಈ ಭಾಗದ ಮುಖಂಡರು ತಾ.ಪಂ.ಸದಸ್ಯರು ಸೇರಿದ ಪ್ರಮುಖ ನಾಯಕರ ಸಹಾಯ,ಸಹಕಾರದಿಂದ ನಿರಂತರ ಜನಪ್ರತಿನಿಧಿಯಾಗುತ್ತಾ ತಮ್ಮ ಕ್ಷೇತ್ರ ಪಂಚಾಯತ್ ಮಟ್ಟದಲ್ಲಿ ಜನಪ್ರೀಯರಾಗಿದ್ದಾರೆ. ಜನಮಾನಸಕ್ಕೆ ಸ್ಫಂದಿಸುವ ಇವರ ನಾಯಕತ್ವ ಕ್ಯಾದಗಿ ಗ್ರಾಮ ಪಂಚಾಯತ್ ಗೆ ದೊರೆತರೆ ಒಳ್ಳೆದೆನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *