ವ್ಯಕ್ತಿ ಪರಿಚಯ- ಬಿ.ವಿ.ನಾಯಕ…..01-

(ಪ್ರಖಾಂಡ ಪಾಂಡಿತ್ಯದ ಪ್ರಖರ ಜ್ಞಾನಿಯ “ಜಯವಾಗಲಿ” ವಾಣಿಯ ಸುತ್ತ.‌)

ಅದೊಂದೆ ಒಂದು ಅಭ್ಯಾಸ ತಮ್ಮಿಂದ ದೂರ ಇದ್ದಿದ್ದರೆ, ನನ್ನ ಜಿಲ್ಲೆ ಭಾರತದ ನಕಾಶೆಯಲ್ಲಿ ಧ್ರುವ ನಕ್ಷತ್ರದಂತೆ ಮಿನುಗುವ ಅವಕಾಶದಿಂದ ವಂಚಿತವಾಗುತ್ತಿರಲಿಲ್ಲ…ಅದನ್ನು ಸಾಧಿಸುವ ವಿದ್ಯೆ ಜ್ಞಾನ, ಆಶಯ, ತುಡಿತಗಳು ಮೇಳೈಸಿದ ಏಕೈಕ ವ್ಯಕ್ತಿ ನೀವಾಗಿದ್ದಿರಿ..ನನ್ನ ಜಿಲ್ಲೆಯ ಕನಸಿಗೆ ಬಣ್ಣ ಹಚ್ಚಲು ಜನ ತಮ್ಮನ್ನು ಆಯ್ಕೆ ಮಾಡಿದ್ದರು..ನೀವೇನು ಮಾಡಿಬಿಟ್ಟಿರಿ? ಕೇಳೋಣವೆಂದರೆ ಇಂದು ನೀವಿಲ್ಲ ..ನಮ್ಮ ಆತ್ಮದ ಕೂಗಾದರು ನಿಮಗೆ ಕೇಳಿಸದೆ.

ಬಿ.ವಿ.ಹೌದು ಇದು. ಭಾರತದ ರಾಜಕಾರಣದಲ್ಲಿ ಅತಿ ಬುದ್ಧಿವಂತನೆಂದು ಸ್ವತಃ ಇಂದಿರಾಗಾಂಧಿಯೆ ಕೈ ಬೀಸಿ.ಹತ್ತಿರಕ್ಕೆ ಕರೆದಾಗ, ಚಟಕ್ಕೆ ಬದುಕನ್ನೆ ಅರ್ಪಿಸಿಬಿಟ್ಟ ಪರಮಜ್ಞಾನಿಯ ಕಥೆ.. ಅವರು ಬಿ.ವಿ.ನಾಯಕ.ನನ್ನ ಜಿಲ್ಲೆಯ ರಾಜಕಾರಣ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ದಿನಕರದೇಸಾಯಿಯಂತಹ ಪ್ರಖರ ವಾಗ್ಮಿಗಳ ಕೈಯಲ್ಲಿ ಅರಳಲೇ ಇಲ್ಲ.. ಅರಳಿಸುವ ಶಕ್ತಿ ಇದಿದ್ದು ಬಿ.ವಿ.ನಾಯಕರಿಗೆ ಮಾತ್ರ..ಆದರೆ ವಿಧಿಯಾಟ ನೋಡಿ.ಕರ್ನಾಟಕದ ಪ್ರಪ್ರಥಮ ಡಿ.ಸಿ ಘಾಟಿ ವೆಂಕಣ್ಣ ನಾಯಕರ ಮಗ ಬಿ.ವಿ ನಾಯಕ ಆ ಕಾಲದಲ್ಲಿಯೆ ಲಂಡನನಲ್ಲಿ ಸಹಕಾರಕ್ಷೇತ್ರದ( ಕೋ-ಆಪರೆಟಿವ್ ಸೆಕ್ಟರ) ಬಗ್ಗೆ ಓದಿ ಭಾರತಕ್ಕೆ ಬಂದಿದ್ದರು..ಒಂದಿಷ್ಟು ವರ್ಷ ರಾಯಚೂರಿನಲ್ಲಿ ಕೆಲಸ ಮಾಡಿದ್ದರಂತೆ.. 1971ರಿಂದ1976ರವರೆಗೆ ಉತ್ತರಕನ್ನಡ ಜಿಲ್ಲೆಯ ಎಂ.ಪಿ ಯಾಗಿದ್ದರು..ಅವರ ಭೌದ್ಧಿಕತೆಯನ್ನು ಗುರುತಿಸಿದ ಇಂದಿರಾ ಗಾಂಧಿರವರು ಹತ್ತಿರಕ್ಕೆ ಕರೆದು ನಾಳೆ ಭಾರತದ ಸಹಕಾರಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಬನ್ನಿರೆಂದಾಗ..ಖುಷಿಯಿಂದಲೆ ಹೊರಟರು..ಮಧ್ಯ ದಾರಿಯಲ್ಲಿ ವಿ.ಸಿ ಶುಕ್ಲನೆಂಬ ಪೆಡಂಭೂತ ಸಿಗದೆ ಹೋಗಿದ್ದರೆ, ಮುಂದೆ ಬಿ.ವಿ.ನಾಯಕ ಮಾತಾಡುತ್ತಿದ್ದರು..

.ಶುಕ್ಲನ ದುರಾಸೆ ಬಿ.ವಿ ನಾಯಕನೆಂಬ ಜ್ಞಾನಿಯ ರಾಜಕಾರಣದ ಬದುಕನ್ನೆ ಸರ್ವನಾಶ ಮಾಡಿಬಿಟ್ಟಿತ್ತು.. ಅಂದು ಅವರು ಗುಂಡು ಪಾರ್ಟಿ ಮಾಡಿದ್ದರಂತೆ ಅದು ಏನು ಹಾಕಿ ಕೊಟ್ಟರೊ ಬಿ.ವಿ.ನಾಯಕ ಕುಡಿದು ಮಲಗಿದವರು ಎಳಲೇ ಇಲ್ಲ… ಅತ್ತ ನಿರೀಕ್ಷೆ ಹುಸಿಯಾಗಿ ಇಂದಿರಾ ಆ ಖಾತೆಯನ್ನು ಬೇರೆಯವರಿಗೆ ಕೊಟ್ಟು ಬಿಟ್ಟರಂತೆ…ಶುಕ್ಲ ಮಾಡಿದ ದ್ರೋಹಕ್ಕೆ ಮಲಗಿದ್ದು ಬಿ.ವೀ ನಾಯಕ ಅಲ್ಲ..ಬದಲಾಗಿ ಉತ್ತರಕನ್ನಡ ಜಿಲ್ಲೆಯ ಚೈತನ್ಯದ ಭವಿಷ್ಯವೆ ಮಲಗಿಬಿಟ್ಟಿತ್ತು…ಮತ್ತೆ ಮೇಲೇಳಲೆ ಇಲ್ಲ.. ಈ ಜಿಲ್ಲೆ..

ಆಮೇಲೆ ನಿಷ್ಪ್ರಯೋಜಕ ರಾಜಕಾರಣಿಗಳ ತವರಾಯಿತು ಬೊಗಳೆ ಬಿಡುವವರೆ ರಾಜಕಾರಣದಲ್ಲಿ ರಾರಾಜಿಸಿದರು… ಮೈಛಳಿ ಬಿಟ್ಟು ಬಿ.ವಿ ಕೂಡ ಫೀಲ್ಡಿಗೆ ಬರಲೇ ಇಲ್ಲ…ಪರಿಶುದ್ಧ ಪ್ರಾಮಾಣಿಕತೆ, ಅತಿ ಒಳ್ಳೆಯತನಗಳು ವ್ಯಕ್ತಿಯನ್ನು ಯಾವ ಪರಿ ಹಿಂಸಿಸಿ ಬಿಡುತ್ತದೆ ಎಂಬುದಕ್ಕೆ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ..ಅವರೊಬ್ಬ ರಾಜಕಾರಣದ ಗ್ರಾಮರ್ ಆಗಿದ್ದರು ಪ್ರಾಮಾಣಿಕ ರಾಜಕಾರಣದ ರೂವಾರಿ,.ಕೈ ಮುಷ್ಠಿ ಬಿಗಿದು ಭಾಷಣಕ್ಕೆ ನಿಂತರೆ ಕರಲೊ ದುನಿಯಾ ಮುಷ್ಠಿ ಮೆ ಎಂಬಂತೆ, ಇಡಿ ವಿಶ್ವದ ಭೌಗೋಳಿಕ , ಸಾಮಾಜಿಕ, ಆರ್ಥಿಕ, ರಾಜಕಿಯ ವ್ಯವಸ್ಥೆಯ ಬಗ್ಗೆ ಮಾತಾಡುವ ಜ್ನಾನ ಅವರಿಗಿತ್ತು..

ಉತ್ತರ ಕನ್ನಡ ಗುಡ್ಡಗಾಡು ಜಿಲ್ಲೆ, ತೋಟಗಾರಿಕಾ ಜಿಲ್ಲೆಯಾಗಬೇಕೆಂದು ಅವರು ಕನಸಿ ದ್ದರು.. ಅವರೊಬ್ಬ ಪತ್ರಕರ್ತರಾಗಿ ಜಯವಾಗಲಿ ಎಂದು ಸಂಭೋದಿಸುತ್ತಾ ಪರಿಶುದ್ಧ ಜೀವನ ನಡೆಸಿದ್ದರು..ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ ಯಕ್ಷಗಾನ, ವೈಚಾರಿಕತೆ, ಲೈಂಗಿಕ ಶಿಕ್ಷಣ ಹೀಗೆ ಆ ಮನುಷ್ಯ ಮಾತಾಡದ ವಸ್ತು ವಿಷಯಗಳೇ ಇಲ್ಲ..ಆಡು ಮುಟ್ಟದ ಸೊಪ್ಪಿಲ್ಲ..ಬಿ.ವಿ.ನಾಯಕ ತಿಳಿಯದ ವಿಚಾರಗಳಿಲ್ಲ..ಅಷ್ಟೊಂದು. ಭೌಧಿಕ ಶಿಖರದ ಕಿರೀಟದಂತಿದ್ದರು ಬಿ.ವಿ…

ಬಿ ವಿ.ನಾಯಕ ಮಾತಾಡುತ್ತಾರೆ ಎಂದರೆ, ಬರೆಯುತ್ತಾರೆ ಎಂದರೆ ಆ ಪತ್ರಿಕೆಗಳು ದಾವಣಗೇರಿಯ ಬೆಣ್ಣೆ ದೋಸೆಯಂತೆ ಖರ್ಚಾಗಿ ಬಿಡುತ್ತಿದ್ದವು…ಬಿ.ವಿ ನಾಯಕರ ಕನಸಿನ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಮುಂದೆ ಎಂದಾದರೂ ಬರೆಯುವೆ…ಭಾರತದ ಐದು ಸಾವಿರ ವರ್ಷಗಳ ಇತಿಹಾಸವನ್ನು ನಿಖರ ದಾಖಲೆ ದಿನಾಂಕಗಳೊಂದಿಗೆ ಹೇಳುತ್ತಿದ್ದರು..ಅವರೊಬ್ಬ ಐನ್ ಸ್ಟೈನರಂತ ಪಂಡಿತರಾಗಿದ್ದರು ಆ ಮೆದುಳು ನೆನಪುಗಳ ಕಣಜವಾಗಿತ್ತು… ಬಿ.ವಿ ನಾಯಕರಂತ ರಾಜಕಾರಣಿಯನ್ನು ಭಾರತದ.ರಾಜಕಾರಣದಲ್ಲಿಯೆ ನಾನು ಯಾರನ್ನು ನೋಡಿಲ್ಲ…ಅವರ ಬಗ್ಗೆ ಬರೆಯಲು ತುಂಬಾ ವಿಷಯವಿದೆ.. ಬರೆಯಲು ನನಗೆ ವಿಷಾಧವಿದೆ..

..ರಾಜು ನಾಯಕ..ಬಿಸಲಕೊಪ್ಪ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *