ಸಿದ್ದಾಪುರದಲ್ಲೂ ಭೂಕಂಪ!

ಶಿವಮೊಗ್ಗದ ಸ್ಫೋಟದ ದಿನ ಅಂದರೆ……

ಗುರುವಾರ ರಾತ್ರಿ ಸರಿಸುಮಾರು 10ರಿಂದ 10.30 ರ ಅವಧಿಯಲ್ಲಿ ಭೂಕಂಪನವಾದ ಅನುಭವದ ಬಗ್ಗೆ ಅನೇಕರು ಮಾತನಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ಭೂಕಂಪನವಾದ ಅನುಭವದ ಬಗ್ಗೆ ಅನೇಕ ಕಡೆ ಚರ್ಚೆ ಯಾಗಿದೆ. ಅಂದು ಕೊಂಡ್ಲಿ ಹಾಳದಕಟ್ಟಾ ಭಾಗದಲ್ಲಿ ಮನೆಯೊಂದರ ಬಾಗಿಲು ಸಿಥಿಲವಾದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗಿದೆ. ಆದರೆ ಶಿವಮೊಗ್ಗದಿಂದ ನೂರಾರು ಕಿ.ಮಿ. ದೂರದ ಸಿದ್ಧಾಪುರ ಬೇಡ್ಕಣಿ ಗ್ರಾಮ ಪಂಚಾಯತ್ ದೊಂಬೆಕೈ ಹೊಸಳ್ಳಿಯಲ್ಲಿ ವಿಷ್ಣು ನಾಯ್ಕರ ಮನೆ ಗೋಡೆಗಳು ಸೀಳುಬಿಟ್ಟಿರುವ ಬಗ್ಗೆ ಅಂದೇ ಆದ ಘಟನೆ ಈಗ ಬಹುಚರ್ಚಿತ ವಿಷಯವಾಗಿದೆ.

ಹೊಸಳ್ಳಿಯ ವಿಷ್ಣು ನಾಯ್ಕ ಗುರುವಾರ ಸಿದ್ಧಾಪುರದಿಂದ ಮೈಸೂರಿಗೆ ಹೊರಟಿದ್ದ ಅವರ ಕುಟುಂಬವನ್ನು ಕಳುಹಿಸಿಕೊಟ್ಟವರು ಆಯಾಸದಿಂದ ಮನೆಗೆ ಬಂದು ಮಲಗುತ್ತಾರೆ. ಅವರು ಬಂದು ಮಲಗಿದ ಕೆಲವು ಸಮಯದ ನಂತರ ಅಂದರೆ ಹತ್ತು ಗಂಟೆಯ ನಂತರ ಶಬ್ಧವಾದರೂ ಪರೀಕ್ಷಿಸದೆ ನಿದ್ರೆ ಹೋಗುತ್ತಾರೆ. ಮುಂಜಾನೆ ಎಂದಿನಂತೆ ಎದ್ದವರಿಗೆ ಆಶ್ಚರ್ಯ ಅವರ ಮನೆಯ 4 ಗೋಡೆಗಳು ಬಿರುಕುಬಿಟ್ಟಿವೆ. ಇದನ್ನು ಸ್ಥಳೀಯ ಗ್ರಾಮ ಲೆಕ್ಕಿಗರಿಗೆ ಅಲ್ಲಿಯ ಜನಪ್ರತಿನಿಧಿಗಳು ತಿಳಿಸುತ್ತಾರೆ. ತಾಲೂಕಾ ಆಡಳಿತ ಗಮನಿಸದ ಈ ಘಟನೆಯ ಬಗ್ಗೆ ಸ್ಥಳಿಯರು, ಬಾಧಿತರು ವಾಸ್ತವವನ್ನು ವಿವರಿಸುತ್ತಾರೆ.

ಮನೆಯ ಗೋಡೆಗಳು ಬಿರುಕುಬಿಟ್ಟು ಶಿಥಿಲವಾಗಿರುವುದು ಸತ್ಯ ಅದಾಗಿದ್ದು ಶಿವಮೊಗ್ಗ ಸ್ಫೋಟದ ದಿನ ಎನ್ನುವುದು ಕಾಕತಾಳೀಯವಾದರೂ ವಾಸ್ತವ. ಈ ಬಗ್ಗೆ ವಿಚಾರಣೆ ತನಿಖೆಯಾಗಿ ಸತ್ಯ ಶೋಧನೆ ಯಾಗಬೇಕಿದೆ. ಶಿವಮೊಗ್ಗದ ಜಿಲಿಟನ್ ಸ್ಫೋಟ 170 ಕಿ.ಮೀ ವರೆಗೆ ಲಘು ಪರಿಣಾಮ ಮಾಡಿರುವ ಬಗ್ಗೆ ಮಾಧ್ಯಮಗಳು ತಜ್ಞರ ಅಭಿಪ್ರಾಯ ಪ್ರಕಟಿಸಿವೆ. ಈ ತಜ್ಞರ ಅಭಿಪ್ರಾಯ ನಂಬುವುದಾದರೆ….. ಸಿದ್ದಾಪುರ ತಾಲೂಕಿನ ಜನ ಶಬ್ಧವಾಯಿತು, ಮನೆ ಶಿಥಿಲವಾಯಿತು ಎನ್ನುವುದು ಸತ್ಯ. ಜಿಲ್ಲಾಡಳಿತ ಶಿರಸಿ-ಸಿದ್ದಾಪುರ ಪ್ರದೇಶಗಳಲ್ಲಿ ಪಾತ್ರೆಗಳು ನೆಲಕ್ಕುರುಳಿದ, ಗೋಡೆಗಳು ಶಿಥಿಲವಾದ, ಗುಂಡುಹೊಡೆದಂಥ ಶಬ್ಧ ಕೇಳಿದ ಜನರ ಅಭಿಪ್ರಾಯಗಳನ್ನು, ಅನುಭವಗಳನ್ನು ನಿರ್ಲಕ್ಷಿಸಬಾರದಲ್ಲವೆ?

ಹೊಸಳ್ಳಿಯಲ್ಲಿ ನೂತನವಾಗಿ ಗ್ರಾ.ಪಂ. ಸದಸ್ಯರಾಗಿರುವ ಗೋವಿಂದ ನಾಯ್ಕ ವಿಷ್ಣುನಾಯ್ಕರ ಮನೆಯ ಶಿಥಿಲವಾದ ಗೋಡೆಗಳ ಬಗ್ಗೆ ತಾಲೂಕಾ ಆಡಳಿತದ ಗಮನ ಸೆಳೆದಿದ್ದಾರೆ. ಬಾಧಿತ ವಿಷ್ಣುನಾಯ್ಕ ಈ ಬಗ್ಗೆ ಅರ್ಜಿ ನೀಡುವ ಯೋಚನೆಯಲ್ಲಿದ್ದಾರೆ. ನೆರೆಯ ತಾಳಗುಪ್ಪ, ಅವರಗುಪ್ಪಾ ಸೇರಿದಂತೆ ಮಲೆನಾಡಿನಾದ್ಯಂತ ಕೇಳಿಬಂದ ಸ್ಫೋಟದ ಶಬ್ಧ ಈಗಿನ ಆಡಳಿತ ಪಕ್ಷದ ಮಲೆನಾಡಿನ ಪ್ರಮುಖರ ಹಣದ ಮೂಲದ ದುರಂತ ಎನ್ನುವ ಚರ್ಚೆ ಕೂಡಾ ನಡೆಯುತ್ತಿದೆ. ದೇಶ ರಕ್ಷಿಸುವ ಸೋಗಿನಲ್ಲಿ ಮತಾಂಧರು ದೇಶ ನಾಶ ಮಾಡುತಿದ್ದಾರೆ ಎನ್ನುವ ಆರೋಪಕ್ಕೆ ಕೂಡಾ ಈ ವಿದ್ಯಮಾನ ಸಾಕ್ಷಿಯಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *