ರಿಂಗಿನಾಟ…..ಬ್ರೆಕ್ಟ್ ಕತೆಗೆ ಸೌಗಂಧ ತುಂಬಿದ ಹುಲಿಮನೆ ರಂಗತಂಡ

ಕೃಷಿ ಮತ್ತು ರೈತನ ಸಮಸ್ಯೆ ಈ ಕಾಲದ್ದಲ್ಲ. ನೀಷೆ, ಬ್ರೆಕ್ಟ್ ಕುವೆಂಪು, ಬೇಂದ್ರೆ ಎಲ್ಲಾ ಕಾಲಗಳಲ್ಲೂ ಬಹಳಷ್ಟು ಜನರು ವ್ಯವಸಾಯ, ಕೃಷಿಕನ ಬದುಕಿನ ಬವಣೆಯನ್ನೇ ಚಿತ್ರಿಸಿದ್ದಾರೆ..

ಬ್ರೆಕ್ಟ್ ನ ಕಕೇಶಿಯನ್ ಚಾಕ್ ಸರ್ಕಲ್ ಆ ಕಾಲದ ಬಹುಪ್ರಸಿದ್ಧ ಸಂವಾದ ಕೂಟ. ಆ ಕೂಟದಲ್ಲಿ ಬದುಕಿನ ಬವಣೆ, ರೈತನ ಸಂಕಷ್ಟ, ರಾಷ್ಟ್ರದ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿದ್ಯಮಾನಗಳೇ ಚರ್ಚೆಗೊಳಪಟ್ಟಿವೆ. ಇಂಥ ಕತೆಯೊಂದನ್ನು ಕನ್ನಡಕ್ಕೆ ಭಾಷಾಂತರಿಸಿ ರಾಜ್ಯದಲ್ಲಿ ಅನೇಕ ಪ್ರಯೋಗಗಳಾಗಿವೆ. ಈಗ ರಂಗಕರ್ಮಿ ಶ್ರೀಪಾದ ಭಟ್ ಮಾರ್ಗದರ್ಶನದಲ್ಲಿ ಇದೇ ರಿಂಗಿನಾಟ ರಂಗಸೌಂಗಧದ ವಾರ್ಷಿಕ ತಿರುಗಾಟದ ರಂಗಪ್ರಸ್ತುತಿಯಾಗಿ ತಯಾರಾಗಿದೆ.

ರಂಗಸೌಗಂಧದ ಗಣಪತಿ ಹೆಗಡೆ ಹುಲಿಮನೆ ನಿರ್ದೇಶಿರುವ ಬ್ರೆಕ್ಟ್ ನ ನಾಟಕದ ಈ ರಂಗಪ್ರಸ್ತುತಿ ಕಳೆದ ವಾರ ಸಿದ್ಧಾಪುರದ ಶಂಕರಮಠ ಸಭಾಂಗಣದಲ್ಲಿ ಮೊದಲ ಪ್ರಯೋಗವಾಗಿ ಗಮನ ಸೆಳೆಯಿತು. ರೈತರು ತಮ್ಮ ಸಮಸ್ಯೆಗೆ ಪರಿಹಾರ ಸೂಚಿಸುವ ಕತೆಯನ್ನು ಚರ್ಚಿಸುತ್ತಾ ನಾಟಕ ರಾಜಪುತ್ರನ ವಿಷಯಕ್ಕೆ ಧುಮುಕುತ್ತದೆ. ಅಲ್ಲಿ ರಾಜಪುತ್ರನನ್ನು ರಕ್ಷಿಸುವ ಮಹಿಳೆಯೊಬ್ಬಳು ಆ ಮಗುವಿನ ವಾರಸುಧಾರಳಾಗುವ ನ್ಯಾಯಾಧೀಶನ ತೀರ್ಪೆ ಊಳುವವನನ್ನೇ ಒಡೆಯನನ್ನಾಗಿಸುತ್ತದೆ. ಈ ಕತೆಯ ರಂಗಕಥೆ, ನಿರೂಪಣೆ ಎಲ್ಲವೂ ಒಂದೇ ತಾಸಿನ ಅವಧಿಯಲ್ಲಿ ಮುಗಿದರೂ ಕತೆ ಪ್ರೇಕ್ಷಕನನ್ನು ಹಿಡಿದಿಡುವುದು, ಅಲ್ಲಿಯ ಸಂಭಾಷಣೆ, ನಾಟಕದ ಪೂರಕ ಅಂಶಗಳ ಅಚ್ಚುಕಟ್ಟಾದ ಜೋಡಣೆ ಎಲ್ಲವೂ ನಾಟಕೀಯ ಎನಿಸದೆ ರಂಗಪ್ರಯೋಗವಾಗಿ ಯಶಸ್ವಿಯಾಗುವುದು ಶ್ರೀಪಾದ ಭಟ್, ಗಣಪತಿಹುಲಿಮನೆ ಇವರೊಂದಿಗಿನ ನಟರ ಸಹಕಾರದಿಂದ. ನಾಗಪತಿ ಹೆಗಡೆ, ಪ್ರವೀಣಾ ಮತ್ತು ಗಣಪತಿ ಗುಂಜಗೋಡು ಸೇರಿದ ಎಲ್ಲಾ ನಟರ ಅಭಿನಯ ನಾಟಕದ ಪರಿಣಾಮ ಹೆಚ್ಚಿಸಿದೆ.

https://www.youtube.com/channel/UCTvZUkLGbidUHKd8BHTMJbg/videos

ಪೂರ್ಣಚಂದ್ರ ಹೆಗಡೆ, ರಾಮ ಅಂಕೋಲೇಕರ್, ಜಯರಾಮಭಟ್ ಹೆಗ್ಗಾರಳ್ಳಿ ಎಲ್ಲರೂ ಅಭಿನಯದಿಂದ ಗಮನಸೆಳೆಯುವವರೇ ಈ ತಿರುಗಾಟದ ರಂಗಪ್ರಸಂಗ ವಿಭಿನ್ನ ಭಾಷೆ, ಪ್ರಾದೇಶಿಕ ವೈಶಿಷ್ಟ್ಯಗಳಿಂದ ಹೆಚ್ಚು ಆಪ್ತವೆನಿಸುವಂತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *