ಕೂರ್ಮಗಡ ಐಲ್ಯಾಂಡ್ – ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ – 27 ದೋಣಿಗಳಿಗೆ ಮಾತ್ರ ಅನುಮತಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕೂರ್ಮಗಡ ನರಸಿಂಹ ದೇವರ ಜಾತ್ರಾ ಮಹೋತ್ಸವವು ಜನವರಿ 28 ರಂದು ನಡೆಯಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ, ಸರ್ಕಾರದ ನಿಯಮಾವಳಿ ಪ್ರಕಾರ ಈ ಜಾತ್ರೆ ನೆರವೇರಲಿದೆ.ಸಮುದ್ರ ಮಧ್ಯವಿರುವ ನಡುಗಡ್ಡೆಗೆ ತೆರಳಲು 18 ಟ್ರಾಲ್ ದೋಣಿಗಳು ಹಾಗೂ 9 ಪರ್ಸಿಯನ್ ದೋಣಿಗಳ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಷರತ್ತು ಬದ್ಧವಾಗಿ ಎಲ್ಲರಿಗೂ ಅನುಮತಿ ನೀಡಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ದೋಣಿಗಳು ಮರು ಪ್ರಯಾಣ ಮಾಡಬೇಕಿದೆ.ಕೂರ್ಮಗಡ ಜಾತ್ರೆಯು ಕಾರವಾರ ಸುತ್ತಮುತ್ತಲಿನ ಮೀನುಗಾರರಿಗೆ ವಿಶೇಷವಾಗಿದೆ. ಸಮುದ್ರದ ಮಧ್ಯೆ ಇರುವ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಧ್ಯಾಹ್ನ ವಾಪಸಾಗುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ. ಹಾಗಾಗಿ, ಬೈತಖೋಲ್ ಬಂದರಿನಿಂದ ತೆರಳುವ ದೋಣಿಗಳಿಗೆ ಬುಧವಾರವೇ ತಳಿರು ತೋರಣಗಳಿಂದ ಅಲಂಕರಿಸಿ ಸಿದ್ಧತೆ ಮಾಡಿಕೊಂಡರು.

ಕೂರ್ಮಗಡ ನರಸಿಂಹ ಜಾತ್ರೆಯೆಂದರೆ… ಕಾರವಾರ ಮತ್ತು ಹೊರಗಿನ ಜನರ ಆಕರ್ಷಣೆಯ ಕೇಂದ್ರ. ಕಾರವಾರದಿಂದ20 ಕಿ.ಮೀ. ದೂರದ ಈ ಕೂರ್ಮಗಡದಲ್ಲಿ ನರಸಿಂಹ ದೇವರ ವಾಸಸ್ಥಾನ ಎನ್ನುವ ನಂಬಿಕೆ ಈ ಜನರದ್ದು. ಕಾರವಾರದ ಕೋಡಬಾಗಿನ ಮೇತ್ರಿ ಕುಟುಂಬ ಹಾಗೂ ಅಲ್ಲಿಯ ಮೀನುಗಾರರು ಮತ್ತು ಕೊಮಾರಪಂಥ ಸಮೂದಾಯ ಈ ನರಸಿಂಹ ದೇವರನ್ನು ತಮ್ಮ ಕುಟುಂಬದ ದೇವರೆಂದು ಆರಾಧಿಸುತ್ತಾರೆ. ದೇವರ ವಸ್ತು- ಬಂಗಾರ ಇತ್ಯಾದಿ ಇಲ್ಲಿಯ ದೇವಸ್ಥಾನ ಮತ್ತು ಕುಳಾಯಿಗಳ ಮನೆಯಲ್ಲಿರುತ್ತದೆ. ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಕುರ್ಮಗಡದಲ್ಲಿ ದೇವರ ಆರಾಧನೆ-ಪೂಜೆ ನಡೆಸಿ ಹಿಂದಿರುಗುವ ಕುಳಾಯಿಗಳು ದೇವರ ಪಲ್ಲಕ್ಕಿ ಒಯ್ದು ಸಾಯಂಕಾಲ ಮರಳಿ ತರುತ್ತಾರೆ. ನಂತರ ಕೋಡಿಬಾಗ ಸಾಯಿಕಟ್ಟಾದ ನರಸಿಂಹ ದೇವಸ್ಥಾನದಲ್ಲಿ ಸಂಜೆಯ ಜಾತ್ರೆ ನಡೆಸುತ್ತಾರೆ. ಪ್ರತಿವರ್ಷ ಜಲಸಾಹಸ, ಟ್ರ್ಯಾಕಿಂಗ್ ಜೊತೆಗೆ ದ್ವೀಪದಲ್ಲಿ ಪಿಕ್ ನಿಕ್ ಮಾದರಿಯ ಜಾತ್ರೆ ನಡೆಸುವ ಸ್ಥಳಿಯರೊಂದಿಗೆ ಪ್ರವಾಸಿಗಳು ಕೂಡಾ ಈ ಜಾತ್ರೆಯಲ್ಲಿ ದೋಣಿ-ಬೋಟುಗಳ ವಿಹಾರ ಮಾಡುತ್ತಾರೆ. ಬಹಳ ಹಿಂದಿನಿಂದ ವಿಶಿಷ್ಟ ಆಚರಣೆಯಾಗಿ ಬಂದ ಈ ಕೂರ್ಮಗಡ ಜಾತ್ರೆ ಕಳೆದ ವರ್ಷದ ಅವಗಡ ದಿಂದ ಜನರಲ್ಲಿ ಭಯ-ಭೀತಿಯನ್ನೂ ಹುಟ್ಟಿಸುವಂತಾಗಿದೆ. ಜಾತ್ರೆಯ ಅಂಗವಾಗಿ ನಡೆಯುತಿದ್ದ ಬಹಳಷ್ಟು ಆಚರಣೆಗಳು ಕರೋನಾ ಮತ್ತು ಜಿಲ್ಲಾಡಳಿತದ ಬಿಗುಕ್ರಮದಿಂದ ಸರಳವಾಗಿ, ಜಾಗೃತೆಯಿಂದ ನಡೆಯುವಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *