ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರಿಂದ ಸುರಕ್ಷತಾ ನಿಯಮ ಉಲ್ಲಂಘನೆ: ಅಪಾಯದಲ್ಲಿ ಪ್ರವಾಸಿಗರು!

ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ

Nearly 10,000 tourists are gathering along the Kali for watersports during weekends

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯಲ್ಲಿ ನಡೆಸುವ ವಾಟರ್ ಸ್ಪೋರ್ಟ್ಸ್ ಗಳಲ್ಲಿ ಆಯೋಜಕರು ಮತ್ತು ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ದಾಂಡೇಲಿಯ ಪ್ರವಾಸಿ ಸ್ಥಳದಲ್ಲಿ ಆಯೋಜಕರು ರಿವರ್ ರಾಪ್ಟಿಂಗ್ ನಡೆಸುವ ವೇಳೆ ಪ್ರವಾಸಿಗರಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿಲ್ಲ,  ವಾರಾಂತ್ಯದಲ್ಲಿ ಸುಮಾರು 10 ಸಾವಿರ ಪ್ರವಾಸಿಗರು ಬರುತ್ತಾರೆ.

ಆದರೆ ಇಲ್ಲಿ ಆಯೋಜಕರು ಪ್ರವಾಸಿಗರಿಗೆ ಅಗತ್ಯವಾದ ಲೈಫ್ ಜಾಕೆಟ್ ಕೊಡುತ್ತಿಲ್ಲ, ಕಳೆದ ಭಾನುವಾರ, ಜನಸಂದಣಿಯ ತೆಪ್ಪದ ಚಿತ್ರದಲ್ಲಿ  ಹಲವರು ಲೈಫ್ ಜಾಕೆಟ್ ಧರಿಸದಿರುವ ಫೋಟೋ ವೈರಲ್ ಆಗಿದೆ.

ಕಾಳಿ ನದಿ ಜಲಾನಯನ ಪ್ರದೇಶದ ಹೆಚ್ಚಿನ ಭಾಗವು ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ, ಅನೇಕ ನಿರ್ವಾಹಕರು ಯಾವುದೇ ಪರಿಣಿತ ತರಬೇತುದಾರರಿಲ್ಲದೇ ಮತ್ತು  ಅಪಘಾತದ ಸಂದರ್ಭದಲ್ಲಿ ಯಾವುದೇ ಬ್ಯಾಕ್-ಅಪ್ ಯೋಜನೆಯಿಲ್ಲದೆ ರಾಫ್ಟಿಂಗ್ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.

ನಾಲ್ಕು ವರ್ಷದ ಹಿಂದೆ ರಿವರ್ ರ್ಯಾಪ್ಟಿಂಗ್ ನಲ್ಲಿ ಕೂರ್ಗ್ ನಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ.  ಆಗಿನಿಂದ ಅಲ್ಲಿ ರಿವರ್ ರ್ಯಾಪ್ಟಿಂಗ್ ನಿಷೇಧಿಸಲಾಗಿದೆ ಎಂದು  ಸ್ಪೋರ್ಟ್‌ಗಳಿಗಾಗಿ ಸರ್ಕಾರಿ ಟೆಂಡರ್ ತೆಗೆದುಕೊಂಡ ಟೂರ್ ಆಪರೇಟರ್ ಒಬ್ಬರು ತಿಳಿಸಿದ್ದಾರೆ.

ಅನೇಕ ಹೊಸ ನಿರ್ವಾಹಕರು ಸ್ಥಳೀಯ ಆಡಳಿತದಿಂದ ವಾಟರ್‌ ಸ್ಪೋರ್ಟ್ ಹೆಸರಿನಲ್ಲಿ ರಾಫ್ಟಿಂಗ್‌ಗೆ ಅನುಮತಿ ಪಡೆಯುತ್ತಿದ್ದಾರೆ. “ಆದರೆ ರಿವರ್ ರಾಫ್ಟಿಂಗ್ ಹೆಚ್ಚಿನ ಅಪಾಯದ ಜಲಾನಯನ ಪ್ರದೇಶವಾಗಿದೆ ಮತ್ತು ಪರಿಣತಿ ಮತ್ತು ತರಬೇತಿ ಪಡೆದ ಮಾನವಶಕ್ತಿಯ ಅಗತ್ಯವಿರುತ್ತದೆ, ಲೈಫ್ ಜಾಕೆಟ್ ಇಲ್ಲದೇ ಪ್ರವಾಸಿಗರನ್ನು ಕಳುಹಿಸುತ್ತಿರುವುದು ಅತಿ ಹೆಚ್ಚಿನ ಅಪಾಯವಾಗಿದೆ ಎಂದು ಮತ್ತೊಬ್ಬ ನಿರ್ವಾಹಕ ಹೇಳಿದ್ದಾರೆ.

ಅಧಿಕೃತ ಟೆಂಡರ್‌ಗಳೊಂದಿಗೆ ವಾಟರ್‌ ಸ್ಪೋರ್ಟ್ಸ್ ಗಳನ್ನು ನಡೆಸುವವರು ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಹಣವನ್ನು ಪಾವತಿಸುತ್ತಾರೆ.  ಆದರೆ ಈಗ ನಡೆಸುತ್ತಿರುವ ಇಬ್ಬರು ಹೊಸ ಆಪರೇಟರ್ಸ್ ಸರ್ಕಾರಕ್ಕೆ ಹಣ ನೀಡುತ್ತಿಲ್ಲ,  ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಲಾಗುತ್ತದೆ, ಆದರೆ ಸರ್ಕಾರವು ಅಂತಹ ಆಪರೇಟರ್ ಗಳಿಂದ ಏನನ್ನೂ ಪಡೆಯುವುದಿಲ್ಲ.

ಕಾಳಿ ನದಿಯಲ್ಲಿನ ಎಲ್ಲಾ ಜಲಾನಯನ ಪ್ರದೇಶಗಳ ಕ್ರೀಡೆಗಳನ್ನು  ಸರ್ಕಾರ ಕಾನೂನುಬದ್ಧಗೊಳಿಸಬೇಕು ಮತ್ತು ಮನರಂಜನಾ ಪ್ರವಾಸಗಳು ದುರಂತಗಳಾಗಿ ಬದಲಾಗದಂತೆ ನೋಡಿಕೊಳ್ಳಲು ನಿಯಮಗಳನ್ನು ರೂಪಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಗಣೇಶಗುಡಿ ಪ್ರವಾಸಿ ಸ್ಥಳದ ಮಾಲೀಕರೊಬ್ಬರು ಒತ್ತಾಯಿಸಿದ್ದಾರೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *