an opinion- ಕೆ. ಎಸ್. ಭಗವಾನ್ -ಚಿಂತನೆಯ ಮೇಲಿನ ದಾಳಿ

Ranganatha Kantanakunte ..ಬರೆಯುತ್ತಾರೆ.

ಪ್ರೊ. ಕೆ.ಎಸ್. ಭಗವಾನ್ ಅವರ ವಿಚಾರ ಮಂಡನೆಯ ವಿಧಾನ ಕುರಿತು ನಮ್ಮಲ್ಲಿ ಅನೇಕರಿಗೆ ಭಿನ್ನಾಭಿಪ್ರಾಯವಿದೆ. ಈ ಕಾರಣಕ್ಕಾಗಿಯೇ ಅವರನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಒಮ್ಮೆ ಅವರು ಕಾರ್ಯಕ್ರಮವೊಂದರಲ್ಲಿ ಆಶಯ ನುಡಿಗಳನ್ನು ಆಡುವಾಗ ಅದನ್ನು ಕೇಳಿಸಿಕೊಳ್ಳಲಾಗದೆ ಗೋಷ್ಠಿ ಯಿಂದಲೇ ಎದ್ದು ಓಡಿ ಬಂದಿದ್ದೆ. ಅದೇ ಮೊದಲು ಅದೇ ಕೊನೆ. ಆದರೆ ಅವರು ಅಭಿಪ್ರಾಯ ಮಂಡಿಸುವ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಯಾರೂ ಕಸಿಯಲಾಗದು. ಯಾವುದೇ ವಿಚಾರಗಳನ್ನು ಮತ್ತೆ ಮತ್ತೆ ಚರ್ಚೆಗೆ ಗುರಿ ಪಡಿಸದೇ ಇದ್ದರೆ ಯಾವುದೇ ವಿಚಾರಗಳು ಬೆಳೆಯುವುದಿಲ್ಲ.

ಇಡೀ ಭಾರತೀಯ ತತ್ವಶಾಸ್ತ್ರ ಬೆಳೆದಿರುವುದೇ ಇಂತಹ ಪರಸ್ಪರ ಚರ್ಚೆ ವಾಗ್ವಾದಗಳಿಂದಲೇ ಆಗಿದೆ. ಎಷ್ಟೋ ಸಂದರ್ಭದಲ್ಲಿ ಅತ್ಯಂತ ತೀವ್ರವಾದ ಚರ್ಚೆಗಳು ನಡೆದಿವೆ. ವಚನಗಳಲ್ಲಿಯೇ ವೈದಿಕ ಸಾಹಿತ್ಯದ ವಿರುದ್ಧ, ಗೋವಿಂದನ ವಿರುದ್ಧ ಖಡ್ಗ ಜಳಪಿಸಿರುವುದನ್ನು ನೋಡಬಹುದು. ಆ ಪರಂಪರೆ ಇಂದಿಗೂ ಮುಂದುವರಿದಿದೆ. ಇದೇ ಪುರೋಹಿತಶಾಹಿಗಳನ್ನು ಕಣ್ಣು ಕುಕ್ಕುತ್ತಿರುವುದು.ಈ ಹಿನ್ನೆಲೆಯಲ್ಲಿ ನೋಡಿದರೆ ಭಗವಾನ್ ಅವರು ಈಗಾಗಲೇ ವೈದಿಕ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಸಂಗತಿಗಳನ್ನು ಹೆಕ್ಕಿ ತಂದು ಓದುಗರ ಮುಂದಿಡುತ್ತಿದ್ದಾರೆ. ಅವು ಹೊಸ ವಿಚಾರಗಳೇನೂ ಅಲ್ಲ. ಅದಕ್ಕಿಂತ ಹೆಚ್ಚು ತೀಕ್ಶ್ಣವಾಗಿ ಕುವೆಂಪು ಮತ್ತು ಅಂಬೇಡ್ಕರ್ ಅವರು ವೈದಿಕಶಾಹಿಯನ್ನು ಪ್ರಶ್ನಿಸಿದ್ದಾರೆ. ಹಾಗಾಗಿ ಭಗವಾನ್ ಅವರು ಮಂಡಿಸುವ ವಿಚಾರವನ್ನು ಬೇಕಿದ್ದವರು ಒಪ್ಪಬಹುದು; ಉಳಿದವರು ಉದಾಸೀನ ಮಾಡಬಹುದು. ಅದನ್ನು ಬಿಟ್ಟು ಅವರನ್ನು ಗುರಿಯಾಗಿಸಿ ದಾಳಿ ಮಾಡುವುದು ಕ್ರೂರ ಮತ್ತು ಅಮಾನವೀಯ ನಡೆ.

ಇದು ಖಂಡನಾರ್ಹ. ಆದರೆ ಇವರ ಮೇಲಿನ ದಾಳಿಯನ್ನು ಕೆಲವು ವಾಹಿನಿಗಳು ‘ಹಿಂದೂ ವಿರೋಧಿಗೆ ಮಂಗಳಾರತಿ’ ಎಂದು ಸಂಭ್ರಮಿಸುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ದಾಳಿಯನ್ನು ವೈಭವೀಕರಿಸಿರುವ ವಿಕೃತ ಸುದ್ದಿಗಳು ಹರಿದಾಡುತ್ತಿವೆ. ಇದು ನಿಜಕ್ಕೂ ದುರಂತ ಸಂಗತಿ. ಅಂದರೆ ಇದು ವಿಚಾರವಾದದ ವಿರುದ್ದ ಸಂಘಟಿತ ದಾಳಿಯನ್ನು ನಡೆಸುವುದರ ಭಾಗವಾಗಿ ಈ ದಾಳಿ ನಡೆದಿರುವುದು ಸ್ಪಷ್ಟ ವಾಗುತ್ತದೆ. ಭಗವಾನ್ ಅವರು ಇಲ್ಲಿ ಕೇವಲ ನೆಪ ಅಷ್ಟೆ. ಅವರನ್ನು ನೆಪವಾಗಿಸಿಕೊಂಡು ಇಡೀ ಕನ್ನಡದ ವೈಚಾರಿಕ ಪರಂಪರೆಯ ಮೇಲೆ ದಾಳಿ ಮಾಡಲಾಗುತ್ತಿದೆ. ಅಪಪ್ರಚಾರದ ಮೂಲಕ ಕನ್ನಡದ ಆರೋಗ್ಯಕರ ವಿಚಾರ ಪರಂಪರೆಯ ಮೇಲೆ ಜನರನ್ನು ಎತ್ತಿಕಟ್ಟಲಾಗುತ್ತಿದೆ. ಹಾಗೆ ಎತ್ತಿಕಟ್ಟಿರುವುದರ ಭಾಗವಾಗಿಯೇ ಈ ದಾಳಿ ನಡೆದಿದೆ. ಪುರೋಹಿತಶಾಹಿಗಳ ವಿಕೃತ ರಾಜಕಾರಣಕ್ಕೆ ಆಯಾ ಕ್ಶೇತ್ರಕ್ಕೆ ಒಬ್ಬೊಬ್ಬ ಶತ್ರುಗಳನ್ನು ಸೃಸ್ಟಿ ಸಿಕೊಂಡಂತೆ ಕನ್ನಡದ ವೈಚಾರಿಕತೆಯ ಮೇಲಿನ ವಿಕೃತ ದಾಳಿಗಳಿಗೆ ಭಗವಾನ್ ಅವರನ್ನು ನೆಪ ಮಾಡಿಕೊಳ್ಳಲಾಗಿದೆಯಷ್ಟೆ. ಹಾಗಾಗಿ ಅವರು ಇಡೀ ವಚನಕಾರರು, ಕುವೆಂಪು ಮತ್ತು ಇತರ ವಿಚಾರಪರಂಪರೆಯ ಪ್ರತಿನಿಧಿಯಾಗಿ ದಾಳಿಗೆ ಒಳಗಾಗಿದ್ದಾರೆ. ಇದನ್ನು ಕನ್ನಡದ ಬರೆಹಗಾರ ಸಮುದಾಯ ಒಕ್ಕೊರಲಿನಿಂದ ಹಿಮ್ಮೆಟ್ಟಿಸಬೇಕಾಗಿದೆ. ಇಲ್ಲದೆಹೋದರೆ ಈ ನೆಲದ ದಮನಿತ ಸಮುದಾಯಗಳನ್ನು ಮತ್ತೊಂದು ಸಹಸ್ರಮಾನಗಳ ಕಾಲ ಹಿಂದಕ್ಕೆ ತುಳಿದುಬಿಡುತ್ತಾರೆ.

ಪುರೋಹಿತಶಾಹಿಗೆ ಮೌಢ್ಯವೇ ನಿಯಂತ್ರಣದ ಸಾಧನ. ದಮನಿತ ಸಮುದಾಯಗಳಿಗೆ ವೈಚಾರಿಕತೆಯೇ ಬಿಡುಗಡೆಯ ದಾರಿದೀಪ. ದಾರಿದೀಪಗಳನ್ನು ಉಳಿಸಿಕೊಳ್ಳಲು ಎಲ್ಲರೂ ಈ ದಾಳಿಯನ್ನು ವಿರೋಧಿಸಬೇಕಿದೆ.

-ರಂಗನಾಥ ಕಂಟನಕುಂಟೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *