

ದೆಹಲಿಯ ರೈತ ಹೋರಾಟದಲ್ಲಿ ಸಿದ್ದಾಪುರದ ಏಕೈಕ ಯುವ ಕೃಷಿಕ ಭಾಗಿಯಾಗಿ ಸುದ್ದಿಯಾಗಿದ್ದಾರೆ. ಹರಿಯಾಣ, ಪಂಜಾಬ್ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಿದ್ದಾಪುರದಿಂದ ಯುವ ಕೃಷಿಕ ಪಾಂಡುರಂಗ ಗಣಪತಿ ನಾಯ್ಕ ಹಳದೋಟ ,ಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಪಾಂಡುರಂಗ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ,ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಶಿರಸಿಯ ರಾಘು ನಾಯ್ಕ, ಕಲಕರಡಿಯ ಸಂತೋಷ್, ಮತ್ತು ಮೌಲಾಲಿ ಜೊತೆಗೂಡಿ ಗಾಜಿಯಾಬಾದ್, ಟಿಕ್ರಿ, ಸಿಂಘು ಬಾರ್ಡರ್ ಗಳಲ್ಲಿ ಫೆಬ್ರುವರಿ 4,5,6 ರಂದು ಪ್ರತಿಭಟನೆ ನಡೆಸಿ ವಾಪಸ್ ಊರಿಗೆ ಮರಳಿದ್ದಾರೆ.
ರೈತರ ಸಮಸ್ಯೆ,ರೈತ ಹೋರಾಟ ಯಾವುದೋ ಒಂದೆರಡು ರಾಜ್ಯಗಳ ಸಮಸ್ಯೆ ಅಲ್ಲ ದೇಶದ ಸಮಸ್ಯೆ ದೇಶದ ರೈತರು ಎಲ್ಲರೂ ಕೂಡಿ ಇದನ್ನು ಬೆಂಬಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಿಂದ ದೆಹಲಿಗೆ ಹೋಗಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲೆಯ 50 ಕ್ಕೂ ಹೆಚ್ಚು ಜನರಲ್ಲಿ ಪಾಂಡುರಂಗ ನಾಯ್ಕ ಒಬ್ಬರಾಗಿದ್ದು ಸಿದ್ಧಾಪುರದಿಂದ ತೆರಳಿದ ಏಕೈಕ ಕೃಷಿಕ ಇವರಾಗಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
