ಟಿಪ್ಪು ಜಯಂತಿ ಕುರಿತ ಹೇಳಿಕೆ: ಅನಂತ್ ಕುಮಾರ್ ಹೆಗಡೆ, ಸಿಟಿ ರವಿ ವಿರುದ್ಧದ ದೂರು ಪರಿಗಣಿಸಲು ಹೈಕೋರ್ಟ್ ನಿರ್ದೇಶನ

ಬಿಜೆ‍ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಸಂಸದ ಅನಂತಕುಮಾರ ಹೆಗಡೆ ವಿರುದ್ಧದ ಖಾಸಗಿ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

high court of karnataka

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಸ್ವೀಕರಿಸದ ಅರ್ಜಿಗಳ ವಿವರ
ತಾಲೂಕ: ಸಿದ್ದಾಪುರ ಗ್ರಾಮ: ನೇರಗೋಡ

ಅ,ನಂ. ಇಲಾಖೆಯ ಹೆಸರು ಸ್ವೀಕರಿಸಿದ ಅರ್ಜಿಗಳ ಸಂಖ್ಯೆ ಷರಾ
1 ತಹಶೀಲ್ದಾರ ಕಛೇರಿ ಸಿದ್ದಾಪುರ
ಪಿಂಚಣಿ ಮತ್ತು 6 ಮಂಜೂರಿ ಆದೇಶ ನೀಡಿ ವೀಲೆವಾರಿಗೋಳಿಸಿದೆ
ಭೂ ಸುಧಾರಣೆ 2 (ಪರಿಶೀಲನಾ ಹಂತದಲ್ಲಿರುತ್ತದೆ)
ಭೂಮಿ (ಪಟ್ಟಾ) 1 ‘’
ಖಾತೆ ಬದಲಾವಣೆ 1
ನ್ಯಾಯಾಲಯ 1
ಆಧಾರ ಕಾರ್ಡ 1
2 ತೋಟಗಾರಿಕೆ ಇಲಾಖೆ 1
3 ಭೂದಾಖಲೆ ಇಲಾಖೆ 2
4 ಗ್ರಾಮ ಪಂಚಾಯತ ದೊಡ್ಮನೆ 43
5 ಅರಣ್ಯ ಇಲಾಖೆ 6
6 ಸಮಾಜ ಕಲ್ಯಾಣ ಇಲಾಖೆ 1
7 ಚಿಕ್ಕ ನೀರಾವರಿ ಇಲಾಖೆ 5
8 ಹೆಸ್ಕಾಂ ಇಲಾಖೆ 4
9 ಪಂ.ಇ.ರಾ. ಇಲಾಖೆ 13
10 ಬಿ ಎಸ್ ಎನ್ ಎಲ್ 3
11 ಆಹಾರ 1
ಅಂತೂ 91

ಶ್ರೀ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಸೇವೆ ಸಂಪನ್ನ
ಸಿದ್ಧಾಪುರ ತಾಲೂಕಿನ ಇಟಗಿ ಗ್ರಾಮದ ಹೊನ್ನೆಘಟಗಿಯಲ್ಲಿ ಶ್ರೀ ಚೌಡೇಶ್ವರೀ ದೇವಿಯ ಶಾರ್ವರೀ ಸಂವತ್ಸರದ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಸಹಾ ವಿವಿಧ ಧರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ಹಾಗೂ ಯಕ್ಷಗಾನ ಸೇವೆಯು ಇಟಗಿಯ ಆಗಮಿಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.

ನಂತರ ಜಾಗರಣೆಯ ನಿಮಿತ್ತವಾಗಿ ಕಲಾಭಾಸ್ಕರ (ರಿ.) ಇಟಗಿ ಯಿಂ ದ ಹೆಮ್ಮನಬೈಲ್ ಲಕ್ಷ್ಮೀನಾರಾಯಣ ಯಕ್ಷಗಾನ ಮಂಡಳಿಯವರ ಸಹಕಾರದೊಂದಿಗೆ ಕವಿ ಪೆರ್ಡೂರ ರಾಮ ವಿರಚಿತ ಶಶಿಪ್ರಭಾ ಪರಿಣಯ ಹಾಗೂ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಶಿವಭಕ್ತ ವೀರಮಣಿ ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರದರ್ಶನಗಳು ನಡೆದವು.

ಭಾಗವತರಾಗಿ ಸುರೇಶ ಶೆಟ್ಟಿ ಶಂಕರನಾರಾಯಣ, ರಾಮಚಂದ್ರ ನಾಯ್ಕ ಹೆಮ್ಮನ್‍ಬೈಲು ತಮ್ಮ ಸುಶ್ರಾವ್ಯ ಕಂಠದಿಂದ ಮಿಂಚಿದರು. ಮದ್ದಳೆವಾದನದಲ್ಲಿ ಗುಡ್ಡೆದಿಂಬ ಮಂಜುನಾಥ ರಾವ್, ಶರತ್ ಹೆಗಡೆ ಜಾನಕೈ ಹಾಗೂ ಚಂಡೆಯ ನಿನಾದದಲ್ಲಿ ಕೆ.ಎನ್.ಭಾರ್ಗವ ಸಾಗರ, ಕೆರೆಕೈ ಗಣೇಶ ಭಟ್ಟ ಉತ್ತಮ ಸಾಥ್ ಒದಗಿಸಿದರು. ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಮಾರ್ತಾಂಡತೇಜನಾಗಿ, ಲೋಕೇಶ ಗೌಡ ಗುಣವಂತೆ ಉತ್ತಮವಾಗಿ ಅಭಿನಯಿಸಿದರು.

ರಾಣಿ ಶಶಿಪ್ರಭೆಯಾಗಿ ಇಟಗಿ ಮಹಾಬಲೇಶ್ವರ, ಮಂತ್ರಿಣಿ ಭ್ರಮರಕುಂತಳೆಯಾಗಿ ಸದಾಶಿವ ಭಟ್ಟ ಯಲ್ಲಾಪುರ, ಸೇನಾ ಕಮಲಗಂಧಿಯಾಗಿ ನಾಗಪತಿ ಹೆಗಡೆ ಕೊಪ್ಪ ಮನೋಜ್ಞವಾಗಿ ಹಾವ ಭಾವ ಲಾಸ್ಯಗಳಿಂದ ಪ್ರದರ್ಶನಗಳಿಗೆ ಕಳೆಗಟ್ಟಿದರು. ವನಪಾಲಕಿ ಅಜ್ಜಿಯ ಪಾತ್ರದಲ್ಲಿ ಮುರೂರು ರಮೇಶ ಭಂಡಾರಿ ಹಾಸ್ಯದ ಹೊನಲನ್ನು ಹರಿಸಿದರು.

ಕಿರಾತನಾಗಿ ಹುಣಸೆಮಕ್ಕಿ ಸಂತೋಷ ಹೆಗಡೆ, ರಾಕ್ಷಸ ಘೋರರೂಪಿಯಾಗಿ ನಾಗೇಂದ್ರ ಭಟ್ಟ ಹಾಗೂ ಮಾಂಡವ್ಯಮುರ್ತಿ ಯಾಗಿ ವಿ.ಎನ್.ಹೆಗಡೆ ಬೊಗರಿ ಅದ್ಭುತ ಕಲಾಲೋಕವನ್ನೆ ತೆರೆದಿಟ್ಟರು. ಶ್ರೀಕಾಂತ ಹಗ್ಗೋಡು (ವೀರಮಣಿ) ವೆಂಕಟೇಶ ಹೆಗಡೆ ಬೊಗರಿಮಕ್ಕಿ (ಹನುಮಂತ), ಕಬ್ಬಗಾರ್ ಕೆರಿಯ ನಾಯ್ಕ (ಈಶ್ವರ), ಸಂತೋಷ ಹೆಗಡೆ (ರುಕ್ಮಾಂಗ), ಗಣಪತಿ ಗೌಡ ಕಲ್ಮನೆ (ಶುಭಾಂಗ) ಹಾಗೂ ಮಂಜುನಾಥ ರಾಮ ಭಟ್ಟ (ಶತ್ರಘ್ನ) ಮುಂತಾದವರು ರಾಮಾಶ್ವಮೇಧದ ಈ ಕತೆ ಶಿವಭಕ್ತ ವೀರಮಣಿಯನ್ನು ಶ್ರಮ ಸಾರ್ಥಕತೆಯನ್ನು ಹೊಂದಿದರು. ಸಹಕರಿಸಿದ ಎಲ್ಲರಿಗೂ ಚೌಡೇಶ್ವರಿ ಸೇವಾ ಸಮಿತಿಯ ಪರವಾಗಿ ಅಧ್ಯಕ್ಷ ಮಂಜು ಹಾಲ ಚೆನ್ನಯ್ಯ ಹಾಗೂ ಕಾರ್ಯದರ್ಶಿ ರವಿ ಕನ್ನ ಚೆನ್ನಯ್ಯ ಕೃತಜ್ಞತೆಯನ್ನು ಸಮರ್ಪಿಸಿದರು.

ಬೆಂಗಳೂರು: ಬಿಜೆ‍ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಸಂಸದ ಅನಂತಕುಮಾರ ಹೆಗಡೆ ವಿರುದ್ಧದ ಖಾಸಗಿ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

2017ರಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಖಾಸಗಿ ದೂರನ್ನು ಬೆಂಗಳೂರಿನ 10ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿತ್ತು. 

ಆಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಹೆಗಡೆ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ‘‍ತನಿಖೆ ಪೂರ್ಣಗೊಂಡ ನಂತರವೇ ಈ ಪ್ರಶ್ನೆ ಉದ್ಭವಿಸುತ್ತದೆ. ಸಿಆರ್‌ಪಿಸಿ 196 (1) ಮತ್ತು (1–ಎ) ಸೆಕ್ಷನ್‌ ಅನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಆದೇಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಂಗೀಕರಿಸಿದೆ’ ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

‘ಈ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಕಾನೂನಿನ ಪ್ರಕಾರ ಹೊಸ ದೂರನ್ನು ಪರಿಗಣಿಸುವಂತೆ’ ತಿಳಿಸಿದೆ. ‘ಸಿ.ಟಿ. ರವಿ ಮತ್ತು ಅನಂತಕುಮಾರ ಹೆಗಡೆ ಅವರ ಟ್ವೀಟ್‌ಗಳು ಧರ್ಮಗಳ ನಡುವೆ ದ್ವೇಷ ಹೆಚ್ಚಿಸುತ್ತವೆ’ ಎಂದು ಆರೋಪಿಸಿ ಉದ್ಯಮಿ ಆಲಂ ಪಾಷಾ ದೂರು ದಾಖಲಿಸಿದ್ದರು. ನ್ಯಾಯಾಲಯ 2017ರ ನವೆಂಬರ್ 4 ರಂದು ದೂರನ್ನು ವಜಾಗೊಳಿಸಿತ್ತು. ಟಿಪ್ಪು ಜಯಂತಿ ಆಚರಣೆಗಳ ಮೇಲೆ ಎರಡು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡುವುದು ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿತ್ತು. (kpc)
 

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *