ಕಲೆ,ಜಾತ್ರೆ, ನಿವೃತ್ತಿ ಇತ್ಯಾದಿ….

ಸಿದ್ದಾಪುರ,
ಗ್ರಾಮೀಣ ಕಲೆಯಾಗಿರುವ ಕಬಡ್ಡಿ ಆಟ ಇಂದು ಮರೆಯಾಗುತ್ತಿದೆ. ಅದರಂತೆ ಹಲವು ಸಸ್ಯ ಪ್ರಬೇಧ ಗಳಿಂದ ಕೂಡಿರುವ ಮಾವಿನಗುಂಡಿ ಸಮೀಪದ ಕತ್ತಲೇಕಾನು ಇಂದು ನಶಿಸುತ್ತಿದೆ. ಇವರೆಡನ್ನು ಉಳಿಸಿ ಬೆಳೆಸುವುದು ನಮ್ಮ ಕೈಲಿದೆ. ಯುವ ಸಮೂಹ ಉತ್ತಮ ಕಾರ್ಯಚಟುವಟಿಕೆ ನಡೆಸುವ ಮೂಲಕ ಗ್ರಾಮೀಣ ಸೊಗಡಿನ ಕಲೆಯನ್ನು ಬೆಂಬಲಿಸುತ್ತಿರುವುದು ಶ್ಲಾಘನೀಯ ಎಂದು ಆರ್‍ಎಫ್‍ಓ ಶಿವಾನಂದ ನಿಂಗಾಣಿ ಹೇಳಿದರು.
ತಾಲೂಕಿನ ಹಲಸಗಾರ ಬಸ್ ನಿಲ್ದಾಣದ ಸಮೀಪ ಭೂತೇಶ್ವರ ಗೆಳೆಯರ ಬಳಗ ಹಲಸಗಾರ ಆಶ್ರಯದಲ್ಲಿ ಗುರುವಾರ ನಡೆದ ಎರಡನೇ ವರ್ಷದ ಮ್ಯಾಟ್ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.


ಕೃಷಿಕ ಮಹಾಬಲೇಶ್ವರ ಕೆ.ನಾಯ್ಕ ಕಬ್ಬಿನಸರ ಅಧ್ಯಕ್ಷತೆವಹಿಸಿದ್ದರು. ತಾಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್, ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೀಮಾ ಎಂ.ಹೆಗಡೆ ಕಲ್ಮನೆ, ವರದರಾಜ ಸ್ವಾಮೀಜಿ ತರಳಿ, ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ, ಸದಸ್ಯ ಅನಂತ ಹೆಗಡೆ ಹೊಸಗದ್ದೆ, ಸಿದ್ದಾರ್ಥ ಗೌಡರ್ ಮುಠ್ಠಳ್ಳಿ,ಜಿಪಂ ಮಾಜಿ ಸದಸ್ಯ ಎಸ್.ಆರ್.ಹೆಗಡೆ ಕುಂಬಾರಕುಳಿ, ಸತೀಶ ನಾಯ್ಕ ತರಳಿ(ಹಲಸಗಾರ), ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಶ್ರೀಧರ ಎಂ.ಭಟ್ಟ ಮಾಣಿಕ್ನಮನೆ, ಅಶೋಕ ಎಂ.ನಾಯ್ಕ ಹಳಿಯಾಳ, ರಾಮಚಂದ್ರ ನಾಯ್ಕ ಕಬ್ಬಿನಸರ, ಗ್ರಾಪಂ ಉಪಾಧ್ಯಕ್ಷ ಶಾಂತಕುಮಾರ ಪಾಟೀಲ್, ಸೀತಾರಾಮ ಶೆಟ್ಟಿ, ಹನುಮಕ್ಕ ಆರ್.ಭೋವಿ, ಸರೋಜ ಆರ್.ನಾಯ್ಕ, ಗೋಪಾಲಕೃಷ್ಣ ದೇವಾಡಿಗ,ಕಮಲಾಕರ ನಾಯ್ಕ ಹುಬ್ಬಗೈ,ಲಕ್ಷ್ಮಣ ಆರ್.ನಾಯ್ಕ ಇತರರಿದ್ದರು.
ಸುಮಂತ ನಾಯ್ಕ ಹಲಸಗಾರ.ಮಹೇಶ ಕಾರ್ಯಕ್ರಮ ನಿರ್ವಹಿಸಿದರು.
ಪಂದ್ಯಾವಳಿಯಲ್ಲಿ ಹೊಸೂರ ತಂಡ ಪ್ರಥಮ, ಗಾಣಿಕೊಪ್ಪ ತಂಡ ದ್ವಿತೀಯ, ಐಗೋಡ. ತೃತೀಯ ಹಾಗೂ ಹೊಸಳ್ಳಿ ತಂಡ ನಾಲ್ಕನೆ ಸ್ಥಾನ ಪಡೆದುಕೊಂಡಿದೆ.ಪಂದ್ಯಾವಳಿಯಲ್ಲಿ 37ತಂಡಗಳು ಭಾಗವಹಿಸಿದ್ದವು.

“ಸೇವಾ ನಿವೃತ್ತಿ”
ಪ್ರಮಿಳಾ ನಾರಾಯಣ ಹೆಗಡೆ ಇವರು ಕ್ಯಾದಗಿಯ ಬೊಪ್ಪನಕೇರಿಯಲ್ಲಿ 27-02-1961 ರಲ್ಲಿ ನಾರಾಯಣ, ಯಂಕಿ ದಂಪತಿಗಳ ಮಗಳಾಗಿ ಜನಿಸಿದರು.26.07.1885 ರಂದು ಕಿರಿಯ ಪ್ರಾಥಮಿಕ ಶಾಲೆ ಮಾಸ್ತಿ ಹಕ್ಲು ಇಲ್ಲಿ ಸರ್ಕಾರಿ ಸೇವೆ.1992 ರವರೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ.
ನಂತರದಲ್ಲಿ ಗಟ್ಟಿಕೈ, ಶಿರೂರು ಹಾಗೂ ಕೊನೆಯ ಸೇವೆ ಹಿರಿಯ ಪ್ರಾಥಮಿಕ ಶಾಲೆ ಕ್ಯಾದಗಿಯಲ್ಲಿ.

ಒಟ್ಟು 35 ವರ್ಷ, 07 ತಿಂಗಳ ಸುದೀರ್ಘ ಸೇವೆ. ಶ್ರೀಧರ ಭಟ್ ಪತಿ, ಮಕ್ಕಳಾದ ಪ್ರಶಾಂತ, ನಿಶಾಂತ ಇವರೊಂದಿಗೆ ಜೀವನ.ಸೇವಾ ಅವಧಿಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಕ್ಷರ ಹೇಳಿ ಸನ್ನಡತೆಯ ದಾರಿ ತೋರಿ ಎಲ್ಲರ ಪ್ರೀತಿಯ ಅಕ್ಕೋರಾದ ನಿಮ್ಮ ವಿಶ್ರಾಂತಿಯ ಜೀವನ ಸುಖಕರವಾಗಿರಲಿ ಎಂಬ ಹಾರೈಕೆ. ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ ಹಾಗೂ ಪದಾಧಿಕಾರಿಗಳಿಂದ ಸೇವಾ ನಿವೃತ್ತಿ ದಿನವೇ ಶಾಲೆಯಲ್ಲಿ ಗೌರವ ಸಮರ್ಪಣೆ.ಇಂತಹ ಉತ್ತಮ ಯೋಜನೆ ಇಂದು ನಿನ್ನೆಯದಲ್ಲ. ಅಂದು ಎಂ.ಡಿ.ನಾಯ್ಕ ಹಾಗೂ ಕೆ.ಜಿ.ನಾಯ್ಕ ಎಂಬ ಕ್ರಿಯಾಶೀಲ ಶಿಕ್ಷಕರ ಕನಸಿನ ಯೋಜನೆಗೆ ಇಂದು ಸೇವಾನಿವೃತ್ತಿಯ ದಿನವೇ ಸನ್ಮಾನದ ಫಲ. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಡಿ.ಆಯ್.ನಾಯ್ಕ,ಅಧ್ಯಕ್ಷ ಸತೀಶ್.ಹೆಗಡೆ,ಉಪಾಧ್ಯಕ್ಷ ನಾಗರಾಜ.ಮಡಿವಾಳ,ಪ್ರಧಾನ ಕಾರ್ಯದರ್ಶಿ ಗುರುರಾಜ.ನಾಯ್ಕ, ಸದಸ್ಯರಾದ ಜಿ.ಜಿ.ಹೆಗಡೆ, ಸಿ.ಆರ್.ಪಿ.ಪರಶುರಾಮ ನಾಯ್ಕ,ಎಸ್.ಡಿ.ಎಂ.ಸಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉತ್ತರ ಕರ್ನಾಟಕದ ಪ್ರಸಿದ್ಧ ಉಳವಿ ಜಾತ್ರೆ ಈ ವರ್ಷ ಸರಳವಾಗಿ ಮುಗಿದಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *