Today, s spl- ಹೊರಟ್ಟಿ ಗರಂ, ಕಿಲಾರ್ ಬಸ್ ಪುನರಾರಂಭ, ನಾಳೆ ಕಾರ್ಯಕ್ರಮ

ಸಿದ್ದಾಪುರ ಹಾರ್ಸಿಕಟ್ಟಾ, ಹಾಲ್ಕಣಿ ಶಿರಸಿ ಮಾರ್ಗವಾಗಿ ಬಸ್ ಸಂಚಾರ ಪುನರಾರಂಭ ವಾದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಸಿದ್ದಾಪುರ ತಾಲೂಕಿನ ಕಿಲಾರದಲ್ಲಿ ಬಸ್ ಗೆ ಪೂಜೆ ಮಾಡುವುದರ ಮೂಲಕ ಸ್ವಾಗತಿಸಿದರು.
ಕೋವಿಡ್ 19 ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಈದೀಗ ಪುನರಾರಂಭ ಗೊಂಡಿದೆ. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬರೋಬ್ಬರಿ ೧೦ ಕೀ ಮೀ ನಡೆದುಕೊಂಡು ಹೋಗಿ ಬಸ್ ಹಿಡಿದು ಶಾಲಾ ಕಾಲೇಜು ಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಿಂದ ಬೇಸತ್ತ ಸಾರ್ವಜನಿಕರು ಹಲವುಬಾರಿ ಸಾರಿಗೆ ಅಧೀಕಾರಿಗಳಿಗೆ ಮನವಿ ಸಲ್ಲಿಸಿದರು. ಕೋವಿಡ್ ಕಾರಣವೊಡ್ಡಿ ಬಸ್ ಸಂಚಾರ ಸಧ್ಯಕ್ಕೆ ಕಷ್ಟಸಾಧ್ಯ ಮುಂದಿನ ದಿನಗಳಲ್ಲಿ ಖಂಡಿತ ಸಾರಿಗೆ ಸಂಚಾರ ಆರಂಭ ಮಾಡುತ್ತೇವೆ ಎಂದು ಅಧೀಕಾರಿಗಳು ಹೇಳಿದ್ದರು.
ಕಳೆದ ಒಂದು ವಾರದ ಹಿಂದೆ ಮತ್ತೆ ಸಾರಿಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ಸಾರ್ವಜನಿಕರು ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಾರಿಗೆ ಸಂಸ್ಥೆ ಅಧೀಕಾರಿಗಳು ಮುಂಜಾನೆ ಸಿದ್ದಾಪುರ ಹಾರ್ಸಿಕಟ್ಟಾ ಕಾನಸೂರು ಮಾರ್ಗ ವಾಗಿ ಶಿರಸಿಗೆ ಹಾಗೂ ಸಾಯಂಕಾಲ ಶಿರಸಿ ಕಾನಸೂರು ಹಾರ್ಸಿಕಟ್ಟಾ ಮಾರ್ಗ ವಾಗಿ ಸಿದ್ದಾಪುರಕ್ಕೆ ಸಾರಿಗೆ ಸಂಚಾರ ವನ್ನು ಪುನರಾರಂಭ ಗೊಳಿಸಿದ್ದಾರೆ. ತಮ್ಮೂರಿಗೆ ಸಾರಿಗೆ ಸಂಚಾರ ಆರಂಭ ವಾದ ಹಿನ್ನೆಲೆಯಲ್ಲಿ ಬಸ್ ಗೆ ಪೂಜೆ ಸಲ್ಲಿಸಿ ಸಾರ್ವಜನಿಕರು ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಕಿಲಾರ ಹಕ್ಲಮನೆ ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಿದ್ದಾಪುರ
ತಾಲೂಕಿನ ಹೆಗ್ಗರಣಿ-ಉಂಚಳ್ಳಿ ಸಮೀಪದ ಚಾರೆ ಶ್ರೀ ವಿರೂಪಾಕ್ಷ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾ.11 ಹಾಗೂ 12ರಂದು ಅವನಿಚಾರೋತ್ಸವ-2021 ನಡೆಯಲಿದೆ.
ಮಾ.11ರಂದು ಮಹಾಶಿವರಾತ್ರಿ ಅಂಗವಾಗಿ ಸೂರ್ಯೋದಯದಿಂದ ಮರುದಿನ ಸೂರ್ಯೋದಯದ ಪರ್ಯಂತ ಅಖಂಡ ರುದ್ರ ಪಠಣ, ಅಭಿಷೇಕ, ಅರ್ಚನೆ, ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನೆ.
ಮಾ.12ರಂದು ಬೆಳಗ್ಗೆ ಮಹಾರುದ್ರ ಹವನ ಹಾಗೂ ಸಂತರ್ಪಣೆ ಮಧ್ಯಾಹ್ನ 3ರಿಂದ ಋತ್ವಿಜರಿಂದ ಆಶೀರ್ವಚನ ನಡೆಯಲಿದೆ.

ಕಲಾಪ ಆರಂಭದಲ್ಲೇ ಸಭಾಪತಿ ಗರಂ, ಕೋರಂ ಕೊರತೆ ಹಿನ್ನೆಲೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಆಡಳಿತ ಪಕ್ಷದ ಮುಖ್ಯ ಸಚೇತಕರು, ಸಚಿವರು ಹಾಗೂ ಸದಸ್ಯರು ಅನುಪಸ್ಥಿತಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಗರಂ ಆಗಿ, ವಿಧಾನ ಪರಿಷತ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

Basavaraj Horatti,

ಬೆಂಗಳೂರು: ಆಡಳಿತ ಪಕ್ಷದ ಮುಖ್ಯ ಸಚೇತಕರು, ಸಚಿವರು ಹಾಗೂ ಸದಸ್ಯರು ಅನುಪಸ್ಥಿತಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಗರಂ ಆಗಿ, ವಿಧಾನ ಪರಿಷತ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಭೋಜನ ವಿರಾಮದ ಬಳಿಕ ಕಲಾಪ ಸೇರುತ್ತಿದ್ದಂತೆ ಆಡಳಿತ ಹಾಗೂ ಪ್ರತಿ ಪಕ್ಷ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಎಲ್ಲಾ ಪಕ್ಷದ ಸಚೇತಕರು ಅನುಪಸ್ಥಿತರಿದ್ದರು. ಸಚಿವರೂ ಇರದ ಹಿನ್ನೆಲೆ ಬಜೆಟ್ ಮೇಲಿನ ಚರ್ಚೆಗೆ ವೀಕ್ಷಕರ ಕೊರತೆ ಕಾಡಿತು. ಹಲವು ಸದಸ್ಯರು ಸೋಮವಾರಕ್ಕೆ ಮುಂದೂಡುವಂತೆ ಒತ್ತಾಯಿಸಿದರು. ಸಭಾಪತಿಗಳು ಹತ್ತು ನಿಮಿಷ ಮುಂದೂಡಬೇಕು ಇಲ್ಲವೇ ಸೋಮವಾರಕ್ಕೆ ಮುಂದೂಡಬೇಕು. ಎರಡೇ ಆಯ್ಕೆ ಇರುವುದು ಎಂದಾಗ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಅವರು ಕಾರಣ ನೀಡಿ ಕಲಾಪ ಮುಂದೂಡಿ ಎಂದು ಮನವಿ ಮಾಡಿದರು. 

ಅಷ್ಟರಲ್ಲೇ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆಗಮಿಸಿ ಎಲ್ಲಾ ಸದಸ್ಯರಿಗೂ ಕರೆ ಮಾಡಿದ್ದೇನೆ, ಬರುತ್ತಿದ್ದಾರೆ ಎಂದು ವಿವರಿಸಿದರು. ಪ್ರತಿಪಕ್ಷ ನಾಯಕರು ಸೇರಿದಂತೆ ಬಹುತೇಕ ಸದಸ್ಯರು ಸೋಮವಾರ ಬೆಳಗ್ಗೆ ಕಲಾಪ ಸಮಾವೇಶಗೊಂಡರೆ ಅನುಕೂಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಭಾಪತಿಗಳು ಆಡಳಿತ ಪಕ್ಷದ ಸದಸ್ಯ ರವಿಕುಮಾರ್ ಅಭಿಪ್ರಾಯ ಕೇಳಿದರು.

ವಿಧಾನಸಭೆ ಕಲಾಪ ಸಹ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ನಾಳೆ ಶಿವರಾತ್ರಿ ಇರುವ ಹಿನ್ನೆಲೆ ಬಹುತೇಕ ಸದಸ್ಯರು ತಮ್ಮ ಊರಿಗೆ ತೆರಳಿದ್ದಾರೆ. ಸದಸ್ಯರು ಬರುವುದು ಅನುಮಾನ ಎಂದು ರವಿಕುಮಾರ್ ವಿವರಿಸಿದರು.

ಬಿಎಸಿ ಸಭೆ ನಿರ್ಣಯ ಪ್ರಕಟ
ಮಾರ್ಚ್ 15ರಿಂದ 26ರವರೆಗೆ ಪ್ರತಿನಿತ್ಯ ಕೈಗೊಳ್ಳುವ ಚರ್ಚೆಗಳ ಕುರಿತು ಹಾಗೂ ಬೆಳಗಿನ ಹೊತ್ತು ಪ್ರಶ್ನೋತ್ತರ ಅವಧಿ ಹಾಗೂ ಸಂಜೆಯ ಅವಧಿಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಸುವ ಕುರಿತು ನಿರ್ಧಾರ ಸೇರಿದಂತೆ ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸಭಾಪತಿ ಬಸವರಾಜ್ ಹೊರಟ್ಟಿ ಸದನಕ್ಕೆ ಮಾಹಿತಿ ನೀಡಿದರು.

ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಇಂದು ಸಂಜೆ 4 ಗಂಟೆಯವರೆಗೆ ಕಲಾಪ ನಡೆಸಬೇಕಿತ್ತು. ಆದರೆ ಸದಸ್ಯರ ಕೊರತೆ ಕಾಡಿದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲು ಮನವಿ ಮಾಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ಸಭಾಪತಿ ಬಸವರಾಜ ಹೊರಟ್ಟಿ ವಿಧಾನಪರಿಷತ್ ಕಲಾಪವನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

mirjan port- ಹಳೆ ವೈಭವ ಸಾರುವ ಹೊಸ ಪ್ರವಾಸಿ ತಾಣ ಕುಮಟಾದ ಮಿರ್ಜಾನ ಕೋಟೆ

ಒಂದು ದೇಶದ ವೈಭವವನ್ನು ಆದೇಶದ ಇತಿಹಾಸ ಚರಿತ್ರೆಗಳ ಮೂಲಕ ಅಳೆಯಲಾಗುತ್ತದೆ. ಅವಿಭಜಿತ ಭಾರತ ಬಹುವಿಶಾಲ ರಾಷ್ಟ್ರವಾಗಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೇರಳದಿಂದ ಗೋದಾವರಿ ನದಿ...

ನ್ಯೂಸ್‌ ರೌಂಡ್… ಶಿಕ್ಷಣ ಇಲಾಖೆಗೆ ಶ್ಲಾಘನೆ, ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆ!

ಎತ್ತಿನ ಗಾಡಿ ಏರಿದ ಶಾಸಕ- ರೈತ, ಶಾಸಕ ಭೀಮಣ್ಣ ನಾಯ್ಕ ಸಿದ್ಧಾಪುರ ಪ್ರಥಮ ದರ್ಜೆ ಕಾಲೇಜ್‌ ಜಾನಪದ ಉತ್ಸವಕ್ಕೆ ಎತ್ತಿನ ಗಾಡಿ ಮೂಲಕ ಬಂದು...

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

Latest Posts

mirjan port- ಹಳೆ ವೈಭವ ಸಾರುವ ಹೊಸ ಪ್ರವಾಸಿ ತಾಣ ಕುಮಟಾದ ಮಿರ್ಜಾನ ಕೋಟೆ

ಒಂದು ದೇಶದ ವೈಭವವನ್ನು ಆದೇಶದ ಇತಿಹಾಸ ಚರಿತ್ರೆಗಳ ಮೂಲಕ ಅಳೆಯಲಾಗುತ್ತದೆ. ಅವಿಭಜಿತ ಭಾರತ ಬಹುವಿಶಾಲ ರಾಷ್ಟ್ರವಾಗಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೇರಳದಿಂದ ಗೋದಾವರಿ ನದಿ ತೀರದ ವರೆಗೆ ಕನ್ನಡ ನಾಡೇ ಪಸರಿಸಿತ್ತು ಎಂದು ಹೇಳಲಾಗುತ್ತದೆ. ಆಯಾ ಕಾಲದ ಅರಸರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ನೆರೆ ಹೊರೆಯವರನ್ನು ಮತ್ತಷ್ಟು ಸರಿಸುತ್ತಾ ತಮ್ಮ ವ್ಯಾ ಪ್ತಿಯನ್ನು ವಿಸ್ತರಿಸುತಿದ್ದರು....

Recommended For You

About the Author: Kanneshwar Naik

Leave a Reply

Your email address will not be published. Required fields are marked *