2ಎ ಯಥಾಸ್ಥಿತಿ ಹೋರಾಟ ಪ್ರಾರಂಭವಾಗಿದ್ದೇ ಉತ್ತರ ಕನ್ನಡದಿಂದ….

2 ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ಪ್ರಾರಂಭವಾಗಿದೆ. ಹಿಂದುಳಿದವರು,ಪರಿಶಿಷ್ಟರು ಸೇರಿದ ತಳವರ್ಗಗಳಿಗೆ 1970 ರ ದಶಕದಲ್ಲಿ ಮೀಸಲಾತಿಯನ್ನು ನಿಗದಿಮಾಡಲಾಯಿತು. ಈ ಮೀಸಲಾತಿ ನಿಗದಿ ಮೊದಲು ರಾಜ್ಯದಲ್ಲಿ ಕೆಲವು ಆಯೋಗಗಳಾಗಿ ನೀಡಿದ ವರದಿಗಳನ್ನು ತಿರಸ್ಕರಿಸಿದ್ದ ಚರಿತ್ರೆಯ ಹಿನ್ನೆಲೆಯಲ್ಲಿ ರಾಜ್ಯ ದೇಶದಲ್ಲಿ ಮೀಸಲಾತಿಯ ವಿರೋಧಿ ಮನೋಭಾವವನ್ನು ಗುರುತಿಸಬಹುದಾಗಿದೆ.

ಈಗಲೂ ಕೂಡಾ ಪ್ರಭುತ್ವದ ಪರಿವಾರದ ಪ್ರಚೋದನೆಯಿಂದ ಎಲ್ಲರೂ ಮೀಸಲಾತಿ ಕೇಳಿ ನಂತರ ಮೀಸಲಾತಿಯ ಮಹತ್ವವನ್ನು ತಗ್ಗಿಸುವ ಹಿನ್ನೆಲೆಯಲ್ಲಿ ವ್ಯವಸ್ಥಿತ ತಂತ್ರ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಪ್ರವಾಹಕ್ಕೆ ಎದುರಾಗಿ ನಿಂತು 2ಎ ಮೀಸಲಾತಿಯನ್ನು ಈಗಿನ ಸ್ಥಿತಿಯಲ್ಲೇ ಮುಂದುವರಿಸಬೇಕೆಂದು ಜನಹೋರಾಟವೊಂದು ನಡೆಯುತ್ತಿದೆ. ಈ ಹೋರಾಟಕ್ಕಾಗಿ ಸಂಘಟಿತವಾಗಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತರಕ್ಷಣಾ ಸಂಘ ಇದೇ ತಿಂಗಳ 14 ರಂದು ಬೆಂಗಳೂರು ಗಾಂಧಿಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದೆ. ಇಂದು ಕೂಡಾ ಬೆಂಗಳೂರು ಮೌರ್ಯ ವೃತ್ತದಲ್ಲಿ ಈ ಸಂಘದ ನೇತೃತ್ವದಲ್ಲಿ ಸಭೆ ನಡೆದಿದೆ.

ಈ 2ಎ ಯಥಾಸ್ಥಿತಿ ಮುಂದುವರಿಕೆ ಬೇಡಿಕೆ ಉತ್ತರ ಕನ್ನಡ ಜಿಲ್ಲೆಯಿಂದ ಸಂಘಟನೆಯ ರೂಪ ಪಡೆದಿದ್ದು ಮೊಟ್ಟ ಮೊದಲು ಬೃಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಭಟ್ಕಳದಲ್ಲಿ ಬೃಹತ್ ಸಮಾವೇಶ ನಡೆದಿತ್ತು. ನಂತರ ಅಂಕೋಲಾ ಮೂಲದ ಕುಮಟಾ ನಿವಾಸಿ ಮಂಜುನಾಥ ನಾಯ್ಕ ನೇತೃತ್ವದಲ್ಲಿ ಕರ್ನಾಟಕ ರಾಜ್ಯಹಿಂದುಳೀದ ವರ್ಗಗಳ ಹಿತರಕ್ಷಣಾ ಸಂಘ ಪ್ರಾರಂಭವಾಗಿದೆ. ಈ ಸಂಘದ ನೇತೃತ್ವದಲ್ಲಿ ಈಗ ಸಮಾವೇಶ ಹಕ್ಕೊತ್ತಾಯಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಸೇರಿದಂತೆ ಅನೇಕರು ಈ ಹೋರಾಟದ ಪರವಾಗಿದ್ದಾರೆ. ಪಂಚಮಸಾಲಿಗಳಿಗೆ ಮೀಸಲಾತಿ, ಮೇಲ್ವರ್ಗದ ಬಡವರಿಗೆ ಮೀಸಲಾತಿ ಹಿನ್ನೆಲೆಯಲ್ಲಿ ಈ 2ಎ ಯಥಾಸ್ಥಿತಿ ಹೋರಾಟ ಮಹತ್ವ ಪಡೆದುಕೊಂಡಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಭೀಮನ ಗದೆಗೆ ಮೂರು ಚೂರಾದ ಬಿ.ಜೆ.ಪಿ.! part-01-

ಜಾತಿ,ಸಂಘ,ಪರಿವಾರಗಳ ಬೆಂಬಲದಿಂದ ಬಿ.ಜೆ.ಪಿ.ಯಲ್ಲಿ ಪ್ರಶ್ನಾತೀತ ನಾಯಕರೆಂಬಂತೆ ಪ್ರತಿಷ್ಠಾಪಿತರಾಗಿರುವ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ತವರು ನೆಲ ಉತ್ತರ ಕನ್ನಡದಲ್ಲಿ ಹೆಜ್ಜೆ ಹೆಜ್ಜೆಗೂ...

ರಾಜ್ಯದ ಕೆಲವು ಭಾಗಗಳನ್ನು ದ್ವೇಷದ ಪ್ರಯೋಗಾಲಯಗಳನ್ನಾಗಿ ಮಾಡುತ್ತಿದೆ BJP-RSS: ಪ್ರಿಯಾಂಕ್ ಖರ್ಗೆ

ಬಿಜೆಪಿ ಹಾಗೂ ಆರ್’ಎಸ್ಎಸ್ ಕರಾವಳಿ ಕರ್ನಾಟಕ, ಮಲೆನಾಡು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳನ್ನು ದ್ವೇಷದ ಪ್ರಯೋಗಾಲಯಗಳನ್ನಾಗಿ ಪರಿವರ್ತಿಸುತ್ತಿವೆ. ಪ್ರಿಯಾಂಕ್ ಖರ್ಗೆ...

mirjan port- ಹಳೆ ವೈಭವ ಸಾರುವ ಹೊಸ ಪ್ರವಾಸಿ ತಾಣ ಕುಮಟಾದ ಮಿರ್ಜಾನ ಕೋಟೆ

ಒಂದು ದೇಶದ ವೈಭವವನ್ನು ಆದೇಶದ ಇತಿಹಾಸ ಚರಿತ್ರೆಗಳ ಮೂಲಕ ಅಳೆಯಲಾಗುತ್ತದೆ. ಅವಿಭಜಿತ ಭಾರತ ಬಹುವಿಶಾಲ ರಾಷ್ಟ್ರವಾಗಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೇರಳದಿಂದ ಗೋದಾವರಿ ನದಿ...

ನ್ಯೂಸ್‌ ರೌಂಡ್… ಶಿಕ್ಷಣ ಇಲಾಖೆಗೆ ಶ್ಲಾಘನೆ, ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆ!

ಎತ್ತಿನ ಗಾಡಿ ಏರಿದ ಶಾಸಕ- ರೈತ, ಶಾಸಕ ಭೀಮಣ್ಣ ನಾಯ್ಕ ಸಿದ್ಧಾಪುರ ಪ್ರಥಮ ದರ್ಜೆ ಕಾಲೇಜ್‌ ಜಾನಪದ ಉತ್ಸವಕ್ಕೆ ಎತ್ತಿನ ಗಾಡಿ ಮೂಲಕ ಬಂದು...

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

Latest Posts

ಭೀಮನ ಗದೆಗೆ ಮೂರು ಚೂರಾದ ಬಿ.ಜೆ.ಪಿ.! part-01-

ಜಾತಿ,ಸಂಘ,ಪರಿವಾರಗಳ ಬೆಂಬಲದಿಂದ ಬಿ.ಜೆ.ಪಿ.ಯಲ್ಲಿ ಪ್ರಶ್ನಾತೀತ ನಾಯಕರೆಂಬಂತೆ ಪ್ರತಿಷ್ಠಾಪಿತರಾಗಿರುವ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ತವರು ನೆಲ ಉತ್ತರ ಕನ್ನಡದಲ್ಲಿ ಹೆಜ್ಜೆ ಹೆಜ್ಜೆಗೂ ವಿರೋಧ ವ್ಯಕ್ತವಾಗುತ್ತಿದೆ. ಯಾವ ಶ್ರಮವೂ ಇಲ್ಲದೆ ಎ.ಬಿ.ವಿ.ಪಿ.ಯಿಂದ ಬಿ.ಜೆ.ಪಿ.ಗೆ ಎಂಟ್ರಿ ಹೊಡೆದಿದ್ದ ಕಾಗೇರಿ ವಿಶ್ವೇಶ್ವರ ಹೆಗಡೆ ಕಾಗ್ರೆಸ್‌ ವಿಫಲತೆ, ಕಾಂಗ್ರೆಸ್‌ ನ ವೈದಿಕ ಮನುವಾದಿಗಳ ಅಂದರ್‌ ಕಿ ಮಚ್ಚುವಾಳ್ಳಿತನಗಳಿಂದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *