

ಇಂದು ಬೆಳಿಗ್ಗೆ ಜಾರ್ಕಂಡ್ ಹಜಾರಿಭಾಗ ಬರಿ ಸೇನಾ ವಸತಿಗೃಹದಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಸಿದ್ಧಾಪುರ ತಾಲೂಕಿನ ಹಂಗಾರಕಂಟದ ಸಂದೀಪ ನಾರಾಯಣ ನಾಯ್ಕ ತನ್ನ ಜೀವನದ ಕೊನೆಯ ಮಾತುಗಳನ್ನು ಇದೇ 29 ರಂದು ವಿವಾಹವಾಗಲಿದ್ದ ತನ್ನ ಭಾವಿ ಪತ್ನಿಯೊಂದಿಗೆ ಆಡಿದ್ದ ಎನ್ನುವ ಅಂಶ ಈಗ ಬಹಿರಂಗವಾಗಿದೆ.

ಸಂದೀಪ್ ಬೆಳಗಾವಿ, ರಾಂಚಿಗಳ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಈ ವೈದ್ಯಕೀಯ ಕಾರಣದ ಮೇಲೆ 41 ದಿವಸಗಳ ರಜೆ ಪಡೆದಿದ್ದ ಸಂದೀಪ ನಾಯ್ಕ ಈ ಅವಧಿಯಲ್ಲಿ ಏಫ್ರಿಲ್ 29 ರಂದು ವಿವಾಹವಾಗುವ ತಯಾರಿ ಮಾಡಿಕೊಂಡಿದ್ದ. ಶಿರಸಿ-ಸಿದ್ಧಾಪುರ ಗಡಿಯ ಹೆಗ್ಗರಣಿ ಗೋಳಗೋಡಿನ ಯುವತಿಯೊಂದಿಗೆ ನಿಶ್ಚಿತಾರ್ಥಮಾಡಿಕೊಂಡಿದ್ದ ಈ ಯೋಧ ಏಫ್ರಿಲ್ 5 ರಿಂದ ಮೇ13 ರ ಅವಧಿಯ ರಜಾ ಅವಧಿ ಪೂರೈಸಿ 14 ರಿಂದ ಸೇವೆ ಮುಂದುವರಿಸಲಿದ್ದ.
ಈ ಮಧ್ಯೆ ತಾನು ವಿವಾಹವಾಗಲಿರುವ ಹುಡುಗಿಯೊಂದಿಗೆ ಮಾತನಾಡುತಿದ್ದ ಸಂದೀಪ ಇಂದು ಕೂಡಾ ಮುಂಜಾನೆ 8.30 ಅವಧಿಯಲ್ಲಿ ಮೊಬೈಲ್ ಮೂಲಕ ಮಾತನಾಡಿ ನಾನು ರಜೆಗೆ ಬರುತಿದ್ದೇನಿ. ನನ್ನ ಆರೋಗ್ಯವೂ ಚೆನ್ನಾಗಿದೆ. ನೀನು ಕೂಡಾ ಆರೋಗ್ಯದಿಂದಿದ್ದು ಬದುಕಿನುದ್ದಕ್ಕೂ ಸಂತೋಷದಿಂದಿರಬೇಕು! ಎಂದು ಶುಭಕೋರಿ, ಉಭಯ ಕುಶಲೋಪರಿಯ ನಂತರ ಮಾತು ಮುಗಿಸಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
